ನದಿಗಳ ಪರಸ್ಪರ ಸಂಪರ್ಕಕ್ಕೆ ಡಿಪಿಆರ್ ಸಿದ್ಧ: ಯೋಜನೆ ಏನು?

ನವದೆಹಲಿ, ಆಗಸ್ಟ್ 22: ನದಿಗಳ ಪರಸ್ಪರ ಸಂಪರ್ಕಕ್ಕೆ ಡಿಪಿಆರ್ ಸಿದ್ಧಗೊಂಡಿದೆ ಎಂದು ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ತಿಳಿಸಿದ್ದಾರೆ.

ಹಣ ಮುಖ್ಯವಲ್ಲ ಜಲಾಂದೋಲನ , ಸ್ವಚ್ಛಭಾರತ ಅಭಿಯಾನದಡಿ ನೀರನ್ನು ಸಂರಕ್ಷಿಸಲು ಯೋಜನೆ ರೂಪಿಸಲಾಗಿದೆ.

ಸಚಿವಾಲಯವು ಜಲ ಶಕ್ತಿ ಅಭಿಯಾನವನ್ನು ಜಾರಿಗೆ ತರುತ್ತಿದೆ, ನೀರಿನ ಸಂರಕ್ಷಣೆ ಮತ್ತು ನೀರಿನ ಸುರಕ್ಷತೆಗಾಗಿ ಮಿಷನ್ ಮೋಡ್‌ನಲ್ಲಿ ಅಭಿಯಾನ ಕೈಗೊಳ್ಳಲಾಗಿದೆ.

DPR Ready For Interlinking Of Rivers

ಪ್ರತಿ ಮನೆಗೆ ಕುಡಿಯುವ ನೀರನ್ನು ಆದ್ಯತೆಯ ಮೇರೆಗೆ ಮತ್ತು ಸುಸ್ಥಿರ ರೀತಿಯಲ್ಲಿ ಒದಗಿಸಲು, ಗ್ರಾಮೀಣ ಪ್ರದೇಶಗಳಲ್ಲಿ ಮಲವಿಸರ್ಜನೆ ಮುಕ್ತ (ಒಡಿಎಫ್) ಯೋಜನೆಯನ್ನು ಜಾರಿಗೊಳಿಸಿ, ಇದು ಘನ ಮತ್ತು ಆರ್ದ್ರ ತ್ಯಾಜ್ಯ ಮತ್ತು ಒಳಚರಂಡಿ ಸಂಸ್ಕರಣೆ ಮತ್ತು ನದಿಗಳ ಪರಸ್ಪರ ಸಂಪರ್ಕವನ್ನು ಗುರಿಯಾಗಿಸುತ್ತದೆ.
ಸರ್ಕಾರವು ಈಗಾಗಲೇ 31 ಲಿಂಕ್‌ಗಳು ಹಾಗೂ ಡಿಪಿಆರ್‌ನ್ನು ಸಿದ್ಧಪಡಿಸಿದೆ.

ನೀರಿನ ಸಂರಕ್ಷಣೆ ಹಾಗೂ ಮರುಬಳಕೆ ಮಾಡಿದರೆ 2025ರ ಹೊತ್ತಿಗೆ 5 ಟ್ರಿಲಿಯನ್ ಆರ್ಥಿಕತೆ ತಲುಪಬಹುದಾಗಿದೆ.ಪಾಕಿಸ್ತಾನಕ್ಕೆ ನೀರನ್ನು ನಿಲ್ಲಿಸುವುದು ಮತ್ತೊಂದು ಆಧ್ಯತೆಯಾಗಿದೆ. ಸಿಂಧೂ ಜಲ ಒಪ್ಪಂದದ ಆಚೆಗೆ, ಭಾರತದ ನೀರಿನ ಬಹುಪಾಲು ಭಾಗ ಪಾಕಿಸ್ತಾನಕ್ಕೆ ಹೋಗುತ್ತದೆ. ಪಾಕಿಸ್ತಾನಕ್ಕೆ ಹರಿಯುವ ನಮ್ಮ ನೀರಿನ ಪಾಲನ್ನು ನಮ್ಮ ರೈತರು, ಕೈಗಾರಿಕೆಗಳು ಮತ್ತು ಜನರು ಹೇಗೆ ಬಳಸಿಕೊಳ್ಳಬಹುದು ಎಂಬುದರ ಕುರಿತು ಕೆಲಸ ಮಾಡಲು ನಿರ್ಧರಿಸಿದ್ದೇವೆ.

ಹಣವು ಸಮಸ್ಯೆಯಲ್ಲ. ಈಗಾಗಲೇ ವಿವಿಧ ಮೂಲಗಳಿಂದ ಹಣವನ್ನು ಸಂಗ್ರಹಿಸಲು ಸಚಿವಾಲಯವು ಕಾರ್ಪಸ್ ಅನ್ನು ರಚಿಸಿದೆ. ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತ ಅಭಿಯಾನವನ್ನು ಪ್ರಾರಂಭಿಸಿದಾಗ ಮತ್ತು ಜನ ಧನ್ ಬ್ಯಾಂಕ್ ಖಾತೆ ತೆರೆದಾಗ, ಸಾಕಷ್ಟು ಅನುಮಾನಗಳು ಎದ್ದವು.

ಆದರೆ ಈಗ ಪ್ರಧಾನ ಮಂತ್ರಿಯ ದೂರದೃಷ್ಟಿಯ ನಾಯಕತ್ವ ಮತ್ತು ಸಂಕಲ್ಪದಿಂದಾಗಿ ಇದು ಭರ್ಜರಿ ಯಶಸ್ಸನ್ನು ಕಂಡಿದೆ. ಅಂತೆಯೇ, ಅಡ್ಡ-ವಿಭಾಗಗಳ ಸಕ್ರಿಯ ಭಾಗವಹಿಸುವಿಕೆಯಿಂದ ನೀರಿನ ಸಂರಕ್ಷಣೆ ಮತ್ತು ಸುರಕ್ಷತೆಯನ್ನು ಸಾಧಿಸಲಾಗುವುದು ಎಂದು ನನಗೆ ವಿಶ್ವಾಸವಿದೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+