ಮಾಜಿ ಪ್ರಧಾನಿಗಳನ್ನು ಟ್ವಿಟ್ಟರ್ ನಲ್ಲಿ ಟೀಕಿಸಿದ ವರ್ಮಾ
ಬೆಂಗಳೂರು, ಅಕ್ಟೋಬರ್, 30: ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ವಾ ಅವರು ಮಾಜಿ ಪ್ರಧಾನ ಮಂತ್ರಿಗಳಾದ ಅಟಲ್ ಬಿಹಾರಿ ವಾಜಪೇಯಿ, ಪಿ.ವಿ.ನರಸಿಂಹರಾವ್ ಮತ್ತು ಚಂದ್ರಶೇಖರ್ ಸಿಂಗ್ ವಿರುದ್ಧ ಅಮಾನವೀಯವಾಗಿ ಟೀಕಿಸಿ ಟ್ವೀಟ್ ಮಾಡಿದ್ದಾರೆ.

ಸಂಸತ್ ಭವನದಲ್ಲಿ ಚರ್ಚೆ ಮಾಡುತ್ತಿರುವ ವಾಜಪೇಯಿ, ನರಸಿಂಹರಾವ್, ಚಂದ್ರಶೇಖರ್ ಸಿಂಗ್ ಮತ್ತು ಮುಂದಿನ ಸಾಲಿನಲ್ಲಿ ಕುಳಿತಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಕಪ್ಪು-ಬಿಳುಪಿನ ಛಾಯಾಚಿತ್ರವೊಂದನ್ನು ರಾಮ್ ಗೋಪಾಲ್ ವರ್ಮಾ ಅವರು ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ. ಆ ಚಿತ್ರದ ಕುರಿತು ಟೀಕಾಪ್ರಹಾರ ಮಾಡಿದ್ದಾರೆ.
ಚಿತ್ರದಲ್ಲಿ ಮಾಜಿ ಪ್ರಧಾನಿಗಳು ಹಿಂದಿನ ಸಾಲಿನಲ್ಲಿ ನಡೆಸುತ್ತಿದ್ದು ಅವರನ್ನು ವರ್ಮಾ ಅವರು 'ಬ್ಯಾಕ್ ಬೆಂಚರ್ಸ್ ಎಂದು ಕರೆದು ಹೀಯಾಳಿಸಿದ್ದಾರೆ.
ದೇಶಕ್ಕೆ ಅಪಾರ ಸೇವೆ ಸಲ್ಲಿಸಿದ ಆ ಮೂವರು ಪ್ರಧಾನಿಗಳ ಕುರಿತ ಸ್ವಲ್ಪವೂ ನನಗೆ ಜ್ಞಾನವಿಲ್ಲ ಎಂಬಂತೆ " ಶಾಲೆ ಆಗಲಿ ಸಂಸತ್ತಿನಲ್ಲಾಗಲಿ ಹಿಂದಿನ ಬೆಂಚ್ ನಲ್ಲಿ ಕುಳಿತವರು ಮುಂದಿನವನ್ನು ಹೀಯಾಳಿಸುವುದು ಉಂಟು ಈ ಮೂವರು ಅದೇ ಕೆಲಸವನ್ನೇ ಮಾಡುತ್ತಿರುವಂತೆ ಕಾಣುತ್ತಿದೆ". ಎಂದು ಟ್ವೀಟಿಸಿದ್ದಾರೆ.
Back benchers r always bad whether in school or parliament .Dont know who these 3 r but they look badder than each pic.twitter.com/iJ9GgqKFlM
— Ram Gopal Varma (@RGVzoomin) October 29, 2016
ಇಷ್ಟಕ್ಕೇ ಸುಮ್ಮನಾಗದ ನಮ್ಮ ವಿವಾದಿತ ನಿರ್ದೇಶಕ ವರ್ಮಾ ಅವರು "ಮಹಿಳೆಯರ ಬಗ್ಗೆ ಭಾರತೀಯ ಪುರಷರು ಹೊಂದಿರುವ ಅಗೌರವ ಆ ಚಿತ್ರದಲ್ಲಿ ಎದ್ದು ಕಾಣಿಸುತ್ತಿದೆ. ಹಿಂದಿನ ಸಾಲಿನಲ್ಲಿ ಕುಳಿತಿರುವ ಆ ಮೂವರು ಯಾರು ಎಂದು ಪೊಲೀಸರು ತನಿಖೆ ನಡೆಸಬೇಕು" ಎಂದು ಮಾಜಿ ಪ್ರಧಾನಿಗಳ ಮೇಲೆ ತನಿಖೆಗೆ ಆಗ್ರಹಿಸಿದ್ದಾರೆ.
This pic represents inner psyche of Indian men's disrespect for women ..Police shud investigate who they are pic.twitter.com/NRydI299M4
— Ram Gopal Varma (@RGVzoomin) October 29, 2016
"ನನ್ನ ಅನಿಸಿಕೆ ಪ್ರಕಾರ ಮುಂದೆ ಕುಳಿತಿರುವ ಆ ಮಹಿಳೆ ಬಗ್ಗೆ ಆ ಮೂವರು ವ್ಯಕ್ತಿಗಳು ಬೇಕಂತಲೇ ಮುಂದೆ ಕುಳಿತಿರುವ ಮಹಿಳೆ ಮೇಲೆ ಪೋಲಿ ಜೋಕ್ ಗಳನ್ನು ಹರಿಯಬಿಡುತ್ತಿರುವಂತೆ ಕಾಣುತ್ತಿದೆ" ಎಂದು ಅಸಂಬಂದ್ಧವಾಗಿ ಹೇಳಿಕೆ ಪ್ರಕಟಿಸಿದ್ದಾರೆ.
Whoever these 3 men r am shocked they are cracking dirty jokes about such a classy dignified woman whoever she is pic.twitter.com/sbRJ07vpt7
— Ram Gopal Varma (@RGVzoomin) October 29, 2016
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications