ಧೀರೂಭಾಯಿ ಅಂಬಾನಿ ನೆನೆದು ಕಣ್ಣೀರಾದ ಅಮಿತಾಬ್ ಬಚ್ಚನ್
ಮುಂಬೈ, ಡಿಸೆಂಬರ್ 25: 'ರಿಲಯನ್ಸ್ ಫ್ಯಾಮಿಲಿ ಡೇ' ಕಾರ್ಯಕ್ರಮದಲ್ಲಿ ಶನಿವಾರ ಭಾಗಿಯಾದ್ದ ಬಿಗ್ ಬಿ ಅಮಿತಾಬ್ ಬಚ್ಚನ್ ಭಾವುಕರಾಗಿದ್ದರು. ತಮ್ಮ 90ರ ದಶಕದ ದಿವಾಳಿಯ ದಿನಗಳು, ಆಗ ಸಹಾಯವಿತ್ತ ಧೀರೂಭಾಯಿ ಅಂಬಾನಿಯನ್ನು ನೆನೆದು ಬಚ್ಚನ್ ಕಣ್ಣಾಲಿಗಳು ಒದ್ದೆಯಾದವು.
ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತಾಬ್ ಬಚ್ಚನ್, "1990ರಲ್ಲಿ ನಾನು ದಿವಾಳಿಯಾಗಿದ್ದೆ. ನನ್ನ ಬ್ಯಾಂಕ್ ಖಾತೆಯಲ್ಲಿ ಇದ್ದ ಹಣ ಝೀರೋ. ಆಗ ಧೀರೂಭಾಯಿ ಅಂಬಾನಿ ತಮ್ಮ ಪುತ್ರ ಅನಿಲ್ ಅಂಬಾನಿಯನ್ನು ನನ್ನ ಬಳಿಕೆ ಸಹಾಯ ಹಸ್ತ ಚಾಚಲು ಕಳುಹಿಸಿದರು. ನಾನು ಈ ತೊಂದರೆಯಿಂದ ಹೊರಗೆ ಬಂದರೆ ಸಾಕು ಎಂಬುದು ಅವರ ಉದ್ದೇಶವಾಗಿತ್ತು. ನಾನು ಈ ಸಹಾಯವನ್ನು ಅವತ್ತು ನಯವಾಗಿ ತಿರಸ್ಕರಿಸಿದೆ," ಎಂದು ಅಮಿತಾಬ್ ನೆನಪಿಸಿಕೊಂಡರು.

ಆದರೆ, "ದೇವರ ದಯೆಯಿಂದ ಮತ್ತೆ ಕೆಲಸಗಳು ಸಿಗಲು ಆರಂಭಿಸಿದವು. ಇದರಿಂದ ನನ್ನ ಸಾಲಗಳನ್ನು ಮುಗಿಸಲು ಸಾಧ್ಯವಾಯಿತು," ಎಂದು ಬಚ್ಚನ್ ಅವತ್ತಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
"ಇದಾದ ನಂತರ ನಾನು ಅವರ ಮನೆಯಲ್ಲೇ ಕಾರ್ಯಕ್ರಮವೊಂದರಲ್ಲಿ ಅವರನ್ನು ಭೇಟಿಯಾದೆ. ಆಗ ಅವರು ನನ್ನನ್ನು ಕರೆದು ಅವರ ಇಂಡಸ್ಟ್ರಿಯ ಸ್ನೇಹಿತರ ಮುಂದೆ, 'ಈ ಹುಡುಗ ಕುಸಿದಿದ್ದರೂ ತನ್ನ ಸ್ವಂತ ಬಲದ ಮೇಲೆ ಎದ್ದು ನಿಂತಿದ್ದಾನೆ. ನಾನು ಅದಕ್ಕಾಗಿ ಅವರನ್ನು ಪ್ರಶಂಸಿಸುತ್ತೇನೆ,' ಎಂದರು. ಅವರ ಈ ಮಾತುಗಳು ಅವರು ನನಗೆ ನೀಡಬಹುದಾಗಿದ್ದ ಎಲ್ಲಾ ಆಸ್ತಿಗಳಿಗಿಂತ ನನಗೆ ಮೌಲ್ಯಯುತವಾಗಿದ್ದವು," ಎಂದು ಬಚ್ಚನ್ ಹೇಳಿದ್ದಾರೆ.
ಧೀರೂಭಾಯಿ ಜೀವನ ಲಕ್ಷಾಂತರ ಜನರ ಹೃದಯ ತಟ್ಟಿದೆ ಎಂದು ಇದೇ ವೇಳೆ ಅಮಿತಾಬ್ ಬಚ್ಚನ್ ಬಣ್ಣಿಸಿದರು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications