ಕೇರಳದಿಂದ ನಾಗಲ್ಯಾಂಡ್ ವರೆಗೆ ಪೊಲೀಸ್ ಪೇದೆಯ 400 ಕೋಟಿ ಸಾಮ್ರಾಜ್ಯ
ತಿರುವನಂತಪುರಂ, ಜೂನ್ 10: ಕೇರಳದ ಎಂಕೆಆರ್ ಪಿಳ್ಳೈ ನಾಗಲ್ಯಾಂಡ್ ಪೊಲೀಸ್ ಇಲಾಖೆ ಸೇರಿದ್ದು ಓರ್ವ ಪೇದೆಯಾಗಿ. ಆದರೆ ಅವರ ಇವತ್ತಿನ ಉದ್ಯಮ ಸಾಮ್ರಾಜ್ಯದ ಮೌಲ್ಯ ಬರೋಬ್ಬರಿ 400 ಕೋಟಿ. ಪೊಲೀಸ್ ಪೇದೆಯಾಗಿ ಇವತ್ತು ಇಷ್ಟು ದೊಡ್ಡ ಉದ್ಯಮಿಯಾಗಿ ಬೆಳೆದಿದ್ದೇ ಒಂದು ರೋಚಕ ವಂಚನೆಯ ಕಥೆ.
ಪೊಲೀಸ್ ಪೇದೆಯಾಗಿ ಇಲಾಖೆ ಸೇರಿದ ಪಿಳ್ಳೈ ನಿವೃತ್ತಿಯಾಗುವಾಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಗೆ ಏರಿದ್ದರು. ಅದಾದ ನಂತರವೂ ನಾಗಾಲ್ಯಾಂಡ್ ಪೊಲೀಸರ ಸಲಹೆಗಾರರಾಗಿ ಮತ್ತೆ ಸರಕಾರಿ ಹುದ್ದೆ ಅನುಭವಿಸುತ್ತಿದ್ದಾರೆ.

ಅಷ್ಟೇ ಅಲ್ಲ ಶ್ರೀವಿಲಾಸಂ ಗ್ರೂಪ್ ಹೆಸರಿನ ಉದ್ಯಮ ಸಾಮ್ರಾಜ್ಯವನ್ನೂ ಅವರು ಮುನ್ನಡೆಸುತ್ತಿದ್ದಾರೆ. ನಾಗಾಲ್ಯಾಂಡ್ ನಿಂದ ನೋಟುಗಳನ್ನು, ಚಿನ್ನ, ಮತ್ತು ಇತರ ವಸ್ತುಗಳನ್ನು ಕೇರಳಕ್ಕೆ ಸಾಗಣೆ ಮಾಡಿದ ಆರೋಪ ಅವರ ಮೇಲಿದೆ. ಪೊಲೀಸ್ ಟ್ರಕ್ ಗಳ ಭದ್ರತೆಯಲ್ಲಿ ಕಳೆದೊಂದು ದಶಕದಲ್ಲಿ ಅವರು ಈ ರೀತಿ ಸಾಗಣೆ ಮಾಡಿದ್ದಾರೆ ಎನ್ನಲಾಗಿದೆ.
ಅಪನಗದೀಕರಣದ ವೇಳೆ ಪಿಳ್ಳೈ ಸುಮಾರು 50 ಕೋಟಿ ಆಸ್ತಿ ಘೋಷಿಸಿಕೊಂಡಿದ್ದರು. ಆದರೆ ಅವರ ಆಸ್ತಿಗಳ ಮೂಲವನ್ನು ಬೆನ್ನತ್ತುತ್ತಿದ್ದಂತೆ ಒಂದೊಂದಾಗಿ ಹುಳುಕುಗಳು ಹೊರ ಬರುತ್ತಾ ಸಾಗಿದವು. ಕೊನೆಗೆ ಆದಾಯ ತೆರಿಗೆ ಇಲಾಖೆಯವರ ಕಣ್ಣಿಗೆ ಬಿದ್ದಿದ್ದು ಬರೋಬ್ಬರಿ 400 ಕೋಟಿ ಮೌಲ್ಯದ ಆಸ್ತಿ.
ಆತನ ಬೇನಾಮಿ ವ್ಯವಹಾರ ನಡೆಸುತ್ತಿರಬಹುದು ಮತ್ತು ಹಲವು ರಾಜಕಾರಣಿಗಳು ಮತ್ತು ಅಧಿಕಾರಿಗಳ ಬೇನಾಮಿ ಆಸ್ತಿಗೆ ಸೂತ್ರದಾರನಾಗಿರಬಹುದು ಎಂದು ಐಟಿ ಅಧಿಕಾರಿಗಳು ಶಂಕಿಸಿದ್ದಾರೆ.
ಎಂಕೆಆರ್ ಪಿಳ್ಳೈ ಒಡೆತನದ ಶ್ರೀವಿಲಾಸಂ ಗ್ರೂಪ್ ಹಲವು ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದು ಅವರ ಉದ್ಯಮಗಳ ಮೇಲೆ ಕರ್ನಾಟಕ, ನಾಗಾಲ್ಯಾಂಡ್, ಕೇರಳ, ದೆಹಲಿಗಳಲ್ಲಿ ಏಕಕಾಲದಲ್ಲಿ ದಾಳಿ ನಡೆದಿತ್ತು. ಇದರಿಂದ ಅವರ ಉದ್ಯಮ ಸಾಮ್ರಾಜ್ಯ ಎಲ್ಲೆಲ್ಲಾ ಹರಡಿಕೊಂಡಿತ್ತು ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ.
ಟ್ರಕ್ ನಿಂದ ಬಯಲಾಯ್ತು ಸತ್ಯ
ಈತನ ಇಷ್ಟೂ ಕೃತ್ಯಗಳು ಬಯಲಾಗಲು ಕಾರಣವಾಗಿದ್ದು ನಾಗಾಲ್ಯಾಂಡ್ ಪೊಲೀಸರ ಒಂದು ಟ್ರಕ್. ಶುಕ್ರವಾರ ನಾಗಲ್ಯಾಂಡ್ ಪೊಲೀಸರ ಟ್ರಕ್ ಪಂಡಾಲಂ ನಲ್ಲಿರುವ ಪಿಳ್ಳೈ ಮನೆ ಮುಂದೆ ನಿಂತಿತ್ತು. ಅನುಮಾನದಲ್ಲಿ ಪೊಲೀಸರು ಪರಿಶೀಲನೆ ಮಾಡಿದಾಗ ಈ ಎಲ್ಲಾ ವಿಚಾರಗಳೂ ಬಯಲಾಗಿವೆ.
ಇದೀಗ ಪೊಲೀಸರು ಪಿಳ್ಳೈ ಹಾಗೂ ಅವರ ಪುತ್ರರಾದ ಅರುಣ್ ರಾಜ್, ವರುಣ್ ರಾಜ್ರನ್ನು ವಶಕ್ಕೆ ಪಡೆದು ವಿಚಾರಣೆ ನಡರೆಸುತ್ತಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications