Get Updates
Get notified of breaking news, exclusive insights, and must-see stories!

Delhi Budget 2023: ದೆಹಲಿ ಬಜೆಟ್ ಮಂಡಿಸದಂತೆ ಎಎಪಿ ಸರ್ಕಾರದ ಮೇಲೆ ಕೇಂದ್ರದ ಒತ್ತಡ: ಕೇಜ್ರಿವಾಲ್ ಆರೋಪ

2023-24ರ ಬಜೆಟ್ ಅನ್ನು ವಿಧಾನಸಭೆಯಲ್ಲಿ ಮಂಡಿಸದಂತೆ ಕೇಂದ್ರ ಸರ್ಕಾರ ಸೋಮವಾರ ಸಂಜೆ ನಗರಾಡಳಿತಕ್ಕೆ ತಿಳಿಸಿದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದರು.

ನವದೆಹಲಿ, ಮಾರ್ಚ್. 21: ದೆಹಲಿಯ ಆಮ್ ಆದ್ಮಿ ಪಕ್ಷ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವಿನ ಇತ್ತೀಚಿನ ಗುದ್ದಾಟದ ಬಳಿಕ ಮೊದಲ ಬಾರಿಗೆ ದೆಹಲಿ ತನ್ನ ಬಜೆಟ್ ದಿನಾಂಕವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೇಂದ್ರದ ನಡೆ "ಗೂಂಡಾಗಿರಿ" ಎಂದು ಟೀಕಿಸಿದ್ದಾರೆ.

ಮಂಗಳವಾರದಂದು ಮಂಡಿನೆಯಾಗಬೇಕಿದ್ದ ಎಎಪಿ ನೇತೃತ್ವದ ದೆಹಲಿ ಸರ್ಕಾರದ ಬಜೆಟ್ ಮಂಡನೆಯನ್ನು ನರೇಂದ್ರ ಮೋದಿ ಸರ್ಕಾರ ತಡೆಹಿಡಿದಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದು, ಎರಡು ಸರ್ಕಾರಗಳ ನಡುವಿನ ಮತ್ತೊಂದು ಸುತ್ತಿನ ಮುಖಾಮುಖಿಗೆ ವೇದಿಕೆ ಸಿದ್ಧವಾಗಿದೆ. ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರ ಕಚೇರಿ ವಿರುದ್ಧ ಆಪ್ ಸರ್ಕಾರ ಗಂಭೀರ ಆರೋಪಗಳನ್ನು ಮಾಡಿದೆ.

Delhi Budget 2023: Arvind Kejriwal said Modi Government Put Hold on AAP Budget

ಹಣಕಾಸು ಸಚಿವ ಕೈಲಾಶ್ ಗೆಹ್ಲೋಟ್ ಅವರು ಸೋಮವಾರ ತಡರಾತ್ರಿಯ ಹೇಳಿಕೆಯಲ್ಲಿ ಮುಖ್ಯ ಕಾರ್ಯದರ್ಶಿ ಅವರು ಮಾರ್ಚ್ 17 ರಂದು ಗೃಹ ಸಚಿವಾಲಯದಿಂದ (ಎಂಎಚ್‌ಎ) ಆದೇಶಗಳನ್ನು ಸ್ವೀಕರಿಸಿದ್ದಾರೆ. ಆದರೆ ಅದನ್ನು ಮೂರು ದಿನಗಳ ಕಾಲ ನಮಗೆ ತಿಳಿಸಲಾಗಿಲ್ಲ. ಮುಖ್ಯ ಕಾರ್ಯದರ್ಶಿ ಕಡತವನ್ನು "ಮರೆಮಾಚಿದ್ದಾರೆ" ಎಂದು ಆರೋಪಿಸಿದ್ದಾರೆ.

"ಮಂಗಳವಾರದಂದು ಬಜೆಟ್ ಮಂಡನೆಯಾಗುವುದಿಲ್ಲ ಎಂದು ತಿಳಿದರೆ ನೀವು ಆಶ್ಚರ್ಯ ಪಡುವಿರಿ. ಭಾರತದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸರ್ಕಾರ ನಮಗೆ ಬಜೆಟ್ ಮಂಡಿಸಲು ಅವಕಾಶ ನೀಡಿಲ್ಲ. ನಾಳೆ ಯಾವುದೇ ಬಜೆಟ್ ಮಂಡನೆ ಇರುವುದಿಲ್ಲ. ದೆಹಲಿಯ ಬಜೆಟ್ ನಾಳೆ ಬೆಳಗ್ಗೆ ಮಂಡನೆಯಾಗಬೇಕಿತ್ತು, ಆದರೆ ಕೇಂದ್ರ ಸರ್ಕಾರ ನಮ್ಮ ಬಜೆಟ್‌ಗೆ ತಡೆ ನೀಡಿದೆ" ಎಂದು ಅರವಿಂದ್ ಕೇಜ್ರಿವಾಲ್ ನ್ಯೂಸ್ 18 ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

"ಇಂದಿನಿಂದ, ದೆಹಲಿ ಸರ್ಕಾರದ ನೌಕರರು, ವೈದ್ಯರು ಮತ್ತು ಶಿಕ್ಷಕರು ತಮ್ಮ ಸಂಬಳವನ್ನು ಪಡೆಯುವುದಿಲ್ಲ. ಇದು ಔಟ್ ಮತ್ತು ಔಟ್ ಗೂಂಡಾಗಿರಿ. 2023-24ರ ಬಜೆಟ್ ಅನ್ನು ವಿಧಾನಸಭೆಯಲ್ಲಿ ಮಂಡಿಸದಂತೆ ಕೇಂದ್ರ ಸರ್ಕಾರ ಸೋಮವಾರ ಸಂಜೆ ನಗರಾಡಳಿತವನ್ನು ತಿಳಿಸಿದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

Delhi Budget 2023: Arvind Kejriwal said Modi Government Put Hold on AAP Budget

ದೆಹಲಿ ವಿಧಾನಸಭೆಯ ಬಜೆಟ್ ಅಧಿವೇಶನವು ಮಾರ್ಚ್ 17 ರಂದು ಪ್ರಾರಂಭವಾಗಿದೆ. ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಬಂಧನದ ನಂತರ ಕಳೆದ ತಿಂಗಳ ಕೊನೆಯಲ್ಲಿ ಖಾತೆಯನ್ನು ವಹಿಸಿಕೊಂಡ ಕೈಲಾಶ್ ಗೆಹ್ಲೋಟ್ ಅವರು ಬಜೆಟ್ ಅನ್ನು ಮಂಡಿಸಲಿದ್ದರು. ಮಾರ್ಚ್ 10 ರಂದು ಸಾಕಷ್ಟು ಮುಂಚಿತವಾಗಿ ನಿಯಮಿತ ಅಭ್ಯಾಸದ ಪ್ರಕಾರ ಬಜೆಟ್ ಅನ್ನು ಅನುಮೋದನೆಗಾಗಿ ಕಳುಹಿಸಲಾಗಿದೆ ಎಂದು ಗೆಹ್ಲೋಟ್ ಹೇಳಿದ್ದರು.

ಆದರೆ ಗೃಹ ಸಚಿವಾಲಯ "ಕೆಲವು ಕಳವಳಗಳನ್ನು" ವ್ಯಕ್ತಪಡಿಸಿ, ಅನುಮೋದನೆಯನ್ನು ನೀಡಲು ನಿರಾಕರಿಸಿದೆ. ಈ ಬಗ್ಗೆ ಮಾರ್ಚ್ 17 ರಂದು ಪತ್ರದ ಮೂಲಕ ಮುಖ್ಯ ಕಾರ್ಯದರ್ಶಿಗೆ ತಿಳಿಸಿದೆ. ಆದರೆ "ನಿಗೂಢ ಕಾರಣಗಳಿಗಾಗಿ" ಮುಖ್ಯ ಕಾರ್ಯದರ್ಶಿ ಪತ್ರವನ್ನು 3 ದಿನಗಳವರೆಗೆ ಮರೆಮಾಡಿದ್ದಾರೆ. ಪತ್ರದ ಬಗ್ಗೆ ನನಗೆ ಇಂದು (ಸೋಮವಾರ) ಮಧ್ಯಾಹ್ನ 2 ಗಂಟೆಗೆ ತಿಳಿಸಲಾಗಿದೆ ಎಂದು ಕೈಲಾಶ್ ಗೆಹ್ಲೋಟ್ ಹೇಳಿದ್ದಾರೆ.

"ಎಂಎಚ್‌ಎ ಪತ್ರವಿರುವ ಕಡತವನ್ನು ಇಂದು ಸಂಜೆ 6 ಗಂಟೆಗೆ ಅಧಿಕೃತವಾಗಿ ನನಗೆ ನೀಡಲಾಯಿತು. ಅಂದರೆ ದೆಹಲಿ ವಿಧಾನಸಭೆಯಲ್ಲಿ ಬಜೆಟ್ ಮಂಡಿಸುವ ಹಿಂದಿನ ದಿನ. ರಾತ್ರಿ 9 ಗಂಟೆಯೊಳಗೆ ಸರ್ಕಾರವು ಸಚಿವಾಲಯದ ಎಲ್ಲಾ ಅವಲೋಕನಗಳಿಗೂ ಸ್ಪಂದಿಸಿದೆ. ದೆಹಲಿಯ ಬಜೆಟ್ ಅನ್ನು ವಿಳಂಬಗೊಳಿಸುವಲ್ಲಿ ದೆಹಲಿಯ ಮುಖ್ಯ ಕಾರ್ಯದರ್ಶಿ ಮತ್ತು ಹಣಕಾಸು ಕಾರ್ಯದರ್ಶಿಯ ಪಾತ್ರವನ್ನು ತನಿಖೆ ಮಾಡಬೇಕು" ಎಂದು ಕೈಲಾಶ್ ಗೆಹ್ಲೋಟ್ ಆಗ್ರಹಿಸಿದ್ದಾರೆ.

ಇದಾಗಿ ಸ್ವಲ್ಪ ಸಮಯದ ನಂತರ, ಲೆಫ್ಟಿನೆಂಟ್ ಗವರ್ನರ್ ಕಚೇರಿಯ ಹೇಳಿಕೆ ಬಿಡುಗಡೆ ಮಾಡಿದ್ದು, ವಿಕೆ ಸಕ್ಸೇನಾ ಅವರು ಮಾರ್ಚ್ 9 ರಂದು ಕೆಲವು ಅವಲೋಕನಗಳೊಂದಿಗೆ ವಾರ್ಷಿಕ ಹಣಕಾಸು ಹೇಳಿಕೆಯನ್ನು ಅನುಮೋದಿಸಿದ್ದಾರೆ. ಕಡತವನ್ನು ಮುಖ್ಯಮಂತ್ರಿಗೆ ಕಳುಹಿಸಿದ್ದಾರೆ. ನಂತರ ದೆಹಲಿ ಸರ್ಕಾರವು ರಾಷ್ಟ್ರಪತಿಗಳ ಕಡ್ಡಾಯ ಅನುಮೋದನೆಯನ್ನು ಕೋರಿತು. ಹೀಗಾಗಿ ಗೃಹ ಸಚಿವಾಲಯಕ್ಕೆ ಪತ್ರ ಬರೆದು, ಮಾರ್ಚ್ 17 ರಂದು ದೆಹಲಿ ಸರ್ಕಾರಕ್ಕೆ ತನ್ನ ಅವಲೋಕನಗಳನ್ನು ರವಾನಿಸಿತು. ಈಗ ಲೆಫ್ಟಿನೆಂಟ್ ಗವರ್ನರ್ ಕಚೇರಿಯ ಇನ್ನೂ ಮುಖ್ಯಮಂತ್ರಿಗಳು ಫೈಲ್ ಕಳುಹಿಸಲು ಕಾಯುತ್ತಿದೆ" ಎಂದು ಹೇಳಿಕೆ ನೀಡಿದೆ.

ಇತ್ತೀಚೆಗೆ, ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರು ಸಂಪುಟದ ಶಿಫಾರಸಿನ ಬಜೆಟ್ ಅಧಿವೇಶನವನ್ನು ಕರೆಯದೇರ ಪಂಜಾಬ್‌ನಲ್ಲಿ ಎಎಪಿ ನೇತೃತ್ವದ ಸರ್ಕಾರ ತೊಂದರೆ ಎದುರಿಸಿತು. ವಿಷಯ ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತಿದ್ದಂತೆ ರಾಜ್ಯಪಾಲರು ಬಜೆಟ್ ಅಧಿವೇಶನ ಕರೆದಿರುವುದಾಗಿ ಸುಪ್ರೀಂ ಕೋರ್ಟ್ ಗೆ ತಿಳಿಸಿದರು. ಸಚಿವ ಸಂಪುಟದ ನಿರ್ಧಾರಕ್ಕೆ ರಾಜ್ಯಪಾಲರು ಬದ್ಧರಾಗಿರುವುದರಿಂದ ಬಜೆಟ್ ಅಧಿವೇಶನ ಕರೆಯುವ ಬಗ್ಗೆ ಕಾನೂನು ಸಲಹೆ ಪಡೆಯುವ ಸಂದರ್ಭವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+