ದೆಹಲಿಯಲ್ಲಿ ಭೂಕಂಪ: ಮನೆಯಿಂದ ಓಡಿ ಹೊರ ಬಂದ ಕೇಂದ್ರ ಸಚಿವ

ಬೆಂಗಳೂರು, ಅಕ್ಟೋಬರ್ 03: ಇಂದು ಮಂಗಳವಾರ ಮಧ್ಯಾಹ್ನ ವೇಳೆ ನವದೆಹಲಿ ಸೇರಿದಂತೆ ಉತ್ತರ ಭಾರತದ ಕೆಲವೆಡೆ ಬಲವಾಗಿ ಭೂಮಿ ಕಂಪಿಸಿದ ಅನುಭವ ಆಗಿದೆ. ಇದರಿಂದ ಮನೆಗಳು ಮತ್ತು ಕಚೇರಿಗಳ ಹೊರಗೆ ಧಾವಿಸಿದರು. ಈ ಪೈಕಿ ಸಾವಿರಾರು ಮನೆಗಳಿಂದ ಹೊರ ಓಡಿ ಬಂದವರ ಪೈಕಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಇದ್ದರು.

ಮಾಂಡವಿಯಾ ಮತ್ತು ಸರ್ಕಾರಿ ಅಧಿಕಾರಿಗಳು ಅವರ ಕಚೇರಿಯಾದ ನಿರ್ಮಾಣ್ ಭವನದ ಹೊರಗೆ ಬಂದು ಆವರಣದಲ್ಲಿ ನಿಂತ ವಿಡಿಯೋ ಹಂಚಿಕೊಂಡಿದ್ದಾರೆ. ಕೆಲವೇ ನಿಮಿಷಗಳ ಮಧ್ಯೆ ನಾಲ್ಕು ಭೂಕಂಪಗಳು ನೇಪಾಳದಲ್ಲಿ ಸಂಭವಿಸಿವೆ 25 ನಿಮಿಷಗಳ ಅಂತರದಲ್ಲಿ 4.6 ಮತ್ತು 6.2 ತೀವ್ರತೆಯ ಎರಡು, 15 ನಿಮಿಷಗಳ ನಂತರ 3.6 ತೀವ್ರತೆಯ ಮೂರನೇ ಒಂದು ಭೂಕಂಪನ ಸಂಭವಿಸಿದೆ. ಈ ವೇಳೆ ಜೋರು ಶಬ್ದ ಸಹ ಕೇಳಿ ಬಂದಿದೆ. ಭೂಮಿ ಕಂಪನಿಸಿದ ತೀವ್ರತೆ ಜನ ಭಯಗೊಂಡಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

Delhi and Uttar Bharat Several Parts Face Earthquake, Mansukh Mandaviya Rushed Outside

ಪ್ರಬಲ ಭೂಕಂಪನದ ಕೇಂದ್ರಬಿಂದು ಉತ್ತರಾಖಂಡದ ಜೋಶಿಮಠದ ಆಗ್ನೇಯಕ್ಕೆ 206 ಕಿಮೀ ಮತ್ತು ಉತ್ತರ ಪ್ರದೇಶ ರಾಜಧಾನಿ ಲಕ್ನೋದಿಂದ 284 ಉತ್ತರದಲ್ಲಿದೆ. ನೇಪಾಳದಲ್ಲಿ ಸರಣಿ ಭೂಕಂಪನವಾದರೂ ಸಹಿತ ಹಾನಿ ಬಗ್ಗೆ ವರದಿ ಆಗಿಲ್ಲ.

ಮನೆಗಳ ಗೋಡೆಯಲ್ಲಿ ಬಿರುಕು

ನೇಪಾಳದ ಬಜಾಂಗ್ ಜಿಲ್ಲೆಯ ಕೆಲವು ಕಟ್ಟಡಗಳಿಗೆ ಗಮನಾರ್ಹ ಹಾನಿ ಉಂಟಾಗಿದೆ. 30 ಸೆಕೆಂಡ್‌ಗಳ ವೀಡಿಯೊದಲ್ಲಿ ಕೆಲವು ಗೋಡೆಗಳು ಮತ್ತು ಇತರ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿವೆ. ಭಾರತದಲ್ಲಿ ಈ ಭೂಕಂಪನದಿಂದ ಯಾವುದೇ ಹಾನಿ, ನಷ್ಟಗಳ ಬಗ್ಗೆ ವರದಿ ಆಗಿಲ್ಲ.

ಉತ್ತರ ಪ್ರದೇಶದ ವಿವಿಧ ಪ್ರದೇಶಗಳಲ್ಲಿ ಹಾಗೂ ಲಕ್ನೋ ಮತ್ತು ಉತ್ತರಾಖಂಡದ ಭಾಗಗಳಲ್ಲಿಯೂ ಭೂಮಿ ಕಂಪಿಸಿದ ಅನುಭವ ಆಗಿದೆ. ನೀವೆಲ್ಲರೂ ಸುರಕ್ಷಿತವಾಗಿರುತ್ತೀರಿ ಎಂದು ನಾವು ಭಾವಿಸುತ್ತೇವೆ. ದಯವಿಟ್ಟು ನಿಮ್ಮ ಕಟ್ಟಡಗಳಿಂದ ಸುರಕ್ಷಿತ ಸ್ಥಳಕ್ಕೆ ಬರಬೇಕು. ಯಾವುದೇ ಭಯ ಬೇಡ, ತುರ್ತು ಸಹಾಯಕ್ಕಾಗಿ 112 ಸಂಖ್ಯೆ ಸಂಪರ್ಕಿಸುವಂತೆ ದೆಹಲಿ ಪೊಲೀಸರು ಮನವಿ ಮಾಡಿದ್ದಾರೆ.

ನೇಪಾಳವು ವಿಶ್ವದ ಅತ್ಯಂತ ಸಕ್ರಿಯವಾದ ಟೆಕ್ಟೋನಿಕ್ ವಲಯವು ಹೌದಾಗಿದೆ. ಹೀಗಾಗಿ ಇಲ್ಲಿನ ಭೂಮಿ ಅತ್ಯಂತ ದುರ್ಬಲ ಎನ್ನಲಾಗಿದೆ. ಏಪ್ರಿಲ್ 2015 ರಲ್ಲಿ 7.8 ತೀವ್ರತೆಯ ಭೂಕಂಪವು 8,000 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+