ಬುಲೆಟ್ ಪ್ರೂಫ್ ವಾಹನ ಶಾಪಿಂಗ್ ಮಾಡಿದ ದಾವೂದ್ ಇಬ್ರಾಹಿಂ!
ಬೆಂಗಳೂರು, ಆಗಸ್ಟ್ 25: ಹಲವು ತನಿಖಾ ಸಂಸ್ಥೆಗಳು ಡಾನ್ ದಾವೂದ್ ಇಬ್ರಾಹಿಂ ಹಿಡಿಯಲು ಬೆವರು ಹರಿಸುತ್ತಿದ್ದರೆ, ಅತ ಮಾತ್ರ ಷಾಪಿಂಗ್ ನಲ್ಲಿ ಬಿಜಿಯಾಗಿದ್ದಾನೆ. ಮಜಬೂತಾಗಿರುವ ಬುಲೆಟ್ ಪ್ರೂಫ್ ಕಾರು ಖರೀದಿಸುವಲ್ಲಿ, ಅದರ ಇಂಟೀರಿಯರ್ಸ್ ಬಗ್ಗೆ ಆಲೋಚಿಸುತ್ತಾ ತನ್ನ ಏಜೆಂಟ್ ಜತೆ ಮಾತುಕತೆಯಲ್ಲಿದ್ದಾನೆ.
ಪಾಕಿಸ್ತಾನದಲ್ಲಿರುವ ದಾವೂದ್ ನನ್ನು ಹೆಡೆಮುರಿ ಕಟ್ಟಿ, ಭಾರತಕ್ಕೆ ಕರೆತರುವುದಕ್ಕೆ ಇಲ್ಲಿನ ಸರ್ಕಾರ ಯತ್ನಿಸುತ್ತಿದೆ. ಮತ್ತೊಂದು ಕಡೆ ದಾವೂದ್ ನನ್ನು ಮುಗಿಸೇ ಬಿಡುವ ಪ್ರಯತ್ನದಲ್ಲಿರುವ ಆತನ ವೈರಿಗಳು ಇದ್ದಾರೆ. ಈ ಮಧ್ಯೆ ಅನಾರೋಗ್ಯದಿಂದ ನರಳುತ್ತಿರುವ ಆತನಿಗೆ ಜೀವ ಭಯ ಕಾಡುತ್ತಿದೆ.[ದಾವೂದ್ ಮನೆ ವಿಳಾಸ: 9 ರಲ್ಲಿ 6 ಮಾತ್ರ ಸರಿಯಿದೆ : ಯುಎಸ್]

ತನ್ನ ರಕ್ಷಣೆಗಾಗಿ ಭದ್ರತಾ ವ್ಯವಸ್ಥೆ ಹೆಚ್ಚಿಸಿಕೊಳ್ಳುವುದಕ್ಕೆ ಬುಲೆಟ್ ಪ್ರೂಫ್ ಕಾರು ಖರೀದಿಗೆ ಮುಂದಾಗಿರುವ ಆತ, ಯುಎಇಯಲ್ಲಿರುವ ವ್ಯಕ್ತಿಯೊಬ್ಬನ ಜತೆಗೆ ನಿರಂತರ ಸಂಪರ್ಕದಲ್ಲಿದ್ದಾನೆ. ಮತ್ತು 5 ಬುಲೆಟ್ ಪ್ರೂಫ್ ವಾಹನ ಖರೀದಿಸಿ, ಪಾಕಿಸ್ತಾನಕ್ಕೆ ಕಳುಹಿಸುವಂತೆ ತಿಳಿಸಿದ್ದಾನೆ. ಯುಎಇಯ ಆ ವ್ಯಕ್ತಿಯ ಹೆಸರು ತಾರಿಕ್. ದಾವೂದ್ ಗಾಗಿ ಆತ ಕೆಲಸ ಮಾಡುತ್ತಿದ್ದಾನೆ. ಈ ಖರೀದಿ ವ್ಯವಹಾರ ಇಂಟೆಲಿಜೆನ್ಸ್ ಬ್ಯುರೋಗೆ ಅಕ್ಟೋಬರ್, 2014ರಲ್ಲೇ ಗಮನಕ್ಕೆ ಬಂದಿತ್ತು.
ದಾವೂದ್ ಮೇಲೆ ದಾಳಿ ಆಗಬಹುದು ಎಂದು ಆತನ ಆಪ್ತ ವಲಯ ಅನುಮಾನ ವ್ಯಕ್ತಪಡಿಸಿರುವುದರಿಂದ ಯುಎಇಯಿಂದ ಕಸ್ಟಮ್ ಮೇಡ್ ಬುಲೆಟ್ ಪ್ರೂಫ್ ವಾಹನ ಖರೀದಿಗೆ ನಿರ್ಧರಿಸಲಾಗಿದೆ. ತನಿಖಾ ಸಂಸ್ಥೆಗಳಿಗೆ ದೊರೆತಿರುವ ಮಾಹಿತಿ ಪ್ರಕಾರ, ಖರೀದಿಗೆ ಬೇಕಾದ ಎಲ್ಲ ಕೆಲಸಗಳನ್ನು ತಾರಿಕ್ ಮಾಡಿ ಮುಗಿಸಿದ್ದಾನೆ. ಟೊಯೊಟಾ ಲ್ಯಾಂಡ್ ಕ್ರೂಸರ್ ವಾಹನವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.[ದಾವೂದ್ ಇಬ್ರಾಹಿಂ ಫಿಟ್ ಆಗಿದ್ದಾನೆ: ಛೋಟಾ ಶಕೀಲ್]
ದಾವೂದ್ ಇಬ್ರಾಹಿಂಗೆ ಬೇಕಾದಂತೆ ವಾಹನದ ಮಾರ್ಪಾಡು ಮಾಡಲಾಗಿದ್ದು, ಅತಿ ಶೀಘ್ರದಲ್ಲೇ ಕರಾಚಿಯನ್ನು ತಲುಪಲಿದೆ. ದುಬೈ ಮೂಲದ ತಾರಿಕ್ ಇದೇ ಮೊದಲು ದಾವೂದ್ ಗಾಗಿ ವಾಹನ ಕಳುಹಿಸುತ್ತಿರುವುದೇನಲ್ಲ. 2009ರಲ್ಲೂ ದಾವೂದ್ ಗಾಗಿ ಇದೇ ರೀತಿ ವಾಹನ ಖರೀದಿಸಿ ಕರಾಚಿ ತಲುಪುವಂತೆ ನೋಡಿಕೊಂಡಿದ್ದ ಎಂದು ತನಿಖಾ ಸಂಸ್ಥೆಗಳು ಖಚಿತಪಡಿಸಿವೆ.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications