ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳು: ಆಂಧ್ರದಲ್ಲಿ ಭಾರೀ ಮಳೆ ತಂದ ಅವಾಂತರ

By Madhusoodhan
|
Google Oneindia Kannada News

ವಿಜಯವಾಡ, ಮೇ, 19: ಬಂಗಾಳಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ ಉಂಟಾದ ಚಂಡಮಾರುತ ತಮಿಳುನಾಡಿನಿಂದ ಆಂಧ್ರ ಪ್ರದೇಶದ ಕಡೆ ಸಾಗಿದೆ. ಪರಿಣಾಮ ಆಂಧ್ರಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಇನ್ನು ಎರಡು ಮೂರು ದಿನ ಮುಂದುವರಿಯಲಿದೆ.

ಆಂಧ್ರದ ಕರಾವಳಿ ಪ್ರದೇಶಗಳು, ನೆಲ್ಲೂರು, ರಾಯಲುಸೀಮಾ ಪ್ರದೇಶಗಳು ಹೆಚ್ಚಿನ ಮಳೆ ಪಡೆದುಕೊಂಡಿವೆ. ತಿರುಪತಿಯಲ್ಲೂ ಸಹ ಮಳೆಯಾಗಿದೆ. ಶಹರ್, ಸುಲ್ಲಾರ್ ಪೇಟ್ ಭಾಗಗಳು 15 ಸೆಂಮೀ ಮಳೆ ಪಡೆದುಕೊಂಡಿವೆ. ಆಂಧ್ರದ ಕರಾವಳಿಯ 9 ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ.[ವಾಯುಭಾರ ಕುಸಿತ: ರಾಜ್ಯದಲ್ಲಿ ಮಳೆ ಮುಂದುವರಿಯಲಿದೆ]

rain

ಆಂಧ್ರ ಸರ್ಕಾರ ಚಂಡಮಾರುತ ಭೀತಿ ಮತ್ತು ಪರಿಣಾಮ ಎದುರಿಸಲು ಸಿದ್ಧವಾಗಿದೆ. ಈ ಬಗ್ಗೆ ವಿಶಾಖಪಟ್ಟಣ ಜಿಲ್ಲಾಧಿಕಾರಿ ಎನ್. ಯುವರಾಜ್ ಅಧಿಕಾರಿಗಳ ಸಭೆ ಕರೆದು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. [ಮುಂಗಾರು ಪ್ರವೇಶ ಒಂದು ವಾರ ವಿಳಂಬ]

75 ಕಿಮೀ ವೇಗದಲ್ಲಿ ಮಾರುತಗಳು ಬೀಸುತ್ತಿದ್ದು ಈಗಾಗಲೇ ಆಸ್ತಿ ಪಾಸ್ತಿ ಹಾನಿ ಮಾಡಿವೆ. ಮುಂದಿನ ದಿನಗಳಲ್ಲಿ ಮಳೆ ಆರ್ಭಟ ಮುಂದುವರಿದರೆ ಬರದಿಂದ ತತ್ತರಿಸಿದ್ದ ರಾಜ್ಯ ಇನ್ನಷ್ಟು ಆತಂಕಕ್ಕೆ ಸಿಲುಕುವುದರಲ್ಲಿ ಅನುಮಾನವಿಲ್ಲ.

English summary
Heavy rains lashed parts of Andhra Pradesh on Wednesday as the depression over Bay of Bengal has intensified into a deep depression, the met office said. "The system is likely to continue to move ... off Andhra Pradesh coast and further intensify into a cyclonic storm," a weather bulletin said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X