ಯಾಸ್ ಚಂಡಮಾರುತ : 90 ರೈಲುಗಳ ಸಂಚಾರ ಸ್ಥಗಿತ
ನವದೆಹಲಿ, ಮೇ 25: ಯಾಸ್ ಚಂಡಮಾರುತ ಒಡಿಶಾ ಮತ್ತು ಪಶ್ಚಿಮ ಬಂಗಾಳ ತೀರಗಳನ್ನು ಸಮೀಪಿಸುತ್ತಿದ್ದಂತೆ, ಪೂರ್ವ ಕರಾವಳಿ ರೈಲ್ವೆ ಈ ಮಾರ್ಗದಲ್ಲಿ ಚಲಿಸುವ 90 ರೈಲುಗಳನ್ನು ರದ್ದುಗೊಳಿಸಲಾಗಿದೆ.
ಯಾಸ್ ಚಂಡಮಾರುತ ತೀವ್ರಗೊಳ್ಳುವ ಮೊದಲು ವೇಗವನ್ನು ಪಡೆದುಕೊಳ್ಳುವುದರಿಂದ ಈ ಸಂಜೆಯ ವೇಳೆಗೆ ಇನ್ನೂ 10 ರೈಲುಗಳು ರದ್ದಾಗುವ ಸಾಧ್ಯತೆಯಿದೆ ಎಂದು ಈಸ್ಟ್ ಕೋಸ್ಟ್ ರೈಲ್ವೆಯ ಮುಖ್ಯ ಪ್ರೊ, ಕೌಶಾಲೇಂದ್ರ ಖಡಂಗಾ ಮಾಹಿತಿ ನೀಡಿದ್ದಾರೆ.
ಬಂಗಾಳಕೊಲ್ಲಿಯಲ್ಲಿ ರೂಪುಗೊಂಡ ಯಾಸ್ ಎಂಬ ಚಂಡಮಾರುತ ಒಡಿಶಾ ಮತ್ತು ಪಶ್ಚಿಮ ಬಂಗಾಳ ತೀರಗಳನ್ನು ದಾಟುವ ಮುನ್ನ ಮುಂದಿನ 24 ಗಂಟೆಗಳಲ್ಲಿ ತೀವ್ರವಾಗುವ ಸಾಧ್ಯತೆಯಿದೆ ಎಂದು ಭಾರತದ ಪ್ರಕಾರ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ಕೊಟ್ಟಿದೆ.
ಪ್ರಸ್ತುತ ಯಾಸ್ ಚಂಡಮಾರುತ ಪೂರ್ವ-ಮಧ್ಯ ಬಂಗಾಳಕೊಲ್ಲಿಯ ಮೇಲೆ ಕೇಂದ್ರೀಕೃತವಾಗಿದೆ. ಒಡಿಶಾದ ಪ್ಯಾರಡೀಪ್ನ ಆಗ್ನೇಯಕ್ಕೆ 540 ಕಿ.ಮೀ, ಒಡಿಶಾದ ಬಾಲಸೋರ್ನಿಂದ ಆಗ್ನೇಯಕ್ಕೆ 650 ಕಿ.ಮೀ ಮತ್ತು ಪಶ್ಚಿಮ ಬಂಗಾಳದ ದಿಘಾದ ಆಗ್ನೇಯಕ್ಕೆ 630 ಕಿ.ಮೀ. ವೇಗದಲ್ಲಿ ಗಾಳಿಯಿಂದಿಗೆ ಯಾಸ್ ಚಂಡಮಾರುತ ಮುಂದಿನ 24 ಗಂಟೆಗಳಲ್ಲಿ ತೀವ್ರಗೊಳ್ಳಲಿದೆ.
ಮೇ 26 ರ ಮುಂಜಾನೆ ಉತ್ತರ ಒಡಿಶಾ ಮತ್ತು ಪಶ್ಚಿಮ ಬಂಗಾಳ ತೀರಗಳ ಸಮೀಪವಿರುವ ವಾಯುವ್ಯ ಬಂಗಾಳ ಕೊಲ್ಲಿಗೆ ತಲುಪುತ್ತದೆ.ಯಾಸ್ ಚಂಡಮಾರುತದಿಂದ ಉಂಟಾದ ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶದ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಯಾಸ್ ಚಂಡಮಾರುತದಿಂದ ಉಂಟಾಗುವ ಪರಿಸ್ಥಿತಿಯನ್ನು ಎದುರಿಸಲು ಸಿದ್ಧತೆಗಳ ಭಾಗವಾಗಿ ಭಾರತೀಯ ವಾಯುಪಡೆ (ಐಎಎಫ್) 11 ಸಾರಿಗೆ ವಿಮಾನಗಳು ಮತ್ತು 25 ಹೆಲಿಕಾಪ್ಟರ್ಗಳನ್ನು ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ಕಾರ್ಯಾಚರಣೆಗಳನ್ನು ನಡೆಸಲು ಸಿದ್ಧವಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಬಂಗಾಳಕೊಲ್ಲಿಯಲ್ಲಿ ಬೀಸುತ್ತಿರುವ ಚಂಡಮಾರುತವನ್ನು ನಿಭಾಯಿಸಲು ಐಎಎಫ್ 21 ಟನ್ ಪರಿಹಾರ ಸಾಮಗ್ರಿಗಳು ಮತ್ತು 334 ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್ಡಿಆರ್ಎಫ್) ಯೊಂದಿಗೆ ಸರ್ಕಾರವು ಸರಣಿ ಕ್ರಮಗಳನ್ನು ಕೈಗೊಂಡಿದೆ.

ಒಡಿಶಾಕ್ಕೆ ಎಚ್ಚರಿಕೆ
ಒಡಿಶಾದ ಪ್ಯಾರಡೀಪ್ ಮತ್ತು ಧಮ್ರಾಗಳಿಗೆ ಎಚ್ಚರಿಕೆ ವಹಿಸಲಾಗಿದೆ. ಹೆಚ್ಚು ಪೀಡಿತ ಜಿಲ್ಲೆಗಳಾದ ಕೇಂದ್ರಪದ, ಜಗತ್ಸಿಂಗ್ಪುರ, ಬಾಲಸೋರ್ ಮತ್ತು ಭದ್ರಾಕ್ ಗಳಿಗೆ ತೀವ್ ಗಾಳಿಯ ಎಚ್ಚರಿಕೆ ನೀಡಲಾಗಿದೆ. ಯಾಸ್ ಚಂಡಮಾರುತದ ಭೂಕುಸಿತದ ಸಮಯದಲ್ಲಿ ಗಾಳಿಯ ವೇಗ 150-160 ಕಿ.ಮೀ ವೇಗದಲ್ಲಿರುತ್ತದೆ.
ಜೊತೆಗೆ ಒಡಿಶಾದ ಪುರಿ, ಕಟಕ್, ಜಜ್ಪುರ್ ಮತ್ತು ಮಯೂರ್ಭಂಜ್ಗಳಲ್ಲಿ ಗಾಳಿಯ ವೇಗವು ಸುಮಾರು 120-130 ಕಿ.ಮೀ ವೇಗದಲ್ಲಿರಬಹುದು.

ಒಡಿಶಾದ ಮೇಲೆ ಪರಿಣಾಮ
ಒಡಿಶಾದ ನಾಲ್ಕು ಕರಾವಳಿ ಜಿಲ್ಲೆಗಳಾದ ಬಾಲಸೋರ್, ಭದ್ರಾಕ್, ಕೇಂದ್ರಪಾರ ಮತ್ತು ಜಗತ್ಸಿಂಗ್ಪುರ - ಯಾಸ್ ಚಂಡಮಾರುತದಿಂದ ಹೆಚ್ಚು ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಐಎಂಡಿ ಮಹಾನಿರ್ದೇಶಕ ಡಾ.ಮೃತುಂಜಯ್ ಮೊಹಾಪಾತ್ರ ಹೇಳಿದರು. 120-165 ಕಿ.ಮೀ ವೇಗದಲ್ಲಿ ಗಾಳಿ ಬೀಸುವುದರ ಹೊರತಾಗಿ, ಒಡಿಶಾದಲ್ಲಿ ಸಹ ಭಾರೀ ಮಳೆಯಾಗುತ್ತದೆ.

ನೀರಿಗಿಳಿಯದಂತೆ ಸೂಚನೆ
ಒಡಿಶಾದ ಪುರಿಯ ಬೀಚ್ನಲ್ಲಿ ಮೀನುಗಾರರಿಗೆ ನೀರಿಗಿಳಿಯದಂತೆ ಸೂಚಿಸಲಾಗಿದೆ. ಕರಾವಳಿ ಜಿಲ್ಲೆಗಳಾದ ಪುರ್ಬಾ ಮತ್ತು ಪಾಸ್ಚಿಮ್ ಮದಿನಿಪುರ, ದಕ್ಷಿಣ ಮತ್ತು ಉತ್ತರ 24 ಪರಗಣಗಳು, ಹೌರಾ ಮತ್ತು ಹೂಗ್ಲಿ ಜೊತೆಗೆ ಹೆಚ್ಚಿನ ಸ್ಥಳಗಳಲ್ಲಿ ಮಧ್ಯಮ ಮಳೆಯಾಗಲಿದೆ. ಮೇ 25 ರಿಂದ ಭಾರೀ ಮಳೆಯಾಗುತ್ತದೆ.

ಮೇ 26ರಂದು ಎಲ್ಲೆಲ್ಲಿ ಮಳೆ
ಮೇ 26 ರಂದು ಪಶ್ಚಿಮ ಬಂಗಾಳದ ಜಾರ್ಗ್ರಾಮ್, ಪುರ್ಬಾ ಮತ್ತು ಪಾಸ್ಚಿಮ್ ಮದಿನಿಪುರ, ಉತ್ತರ ಮತ್ತು ದಕ್ಷಿಣ 24 ಪರಗಣಗಳು, ಹೌರಾ, ಹೂಗ್ಲಿ ಮತ್ತು ಕೋಲ್ಕತ್ತಾದಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯೊಂದಿಗೆ ಮಳೆಯ ಹರಡುವಿಕೆ ಮತ್ತು ತೀವ್ರತೆಯು ಹೆಚ್ಚಾಗುತ್ತದೆ ಎಂದು ಎಂಇಟಿ ಇಲಾಖೆ ತಿಳಿಸಿದೆ.
-
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ












Click it and Unblock the Notifications