ಮೋದಿ ಇನ್ನೊಬ್ಬರ 'ಬಾಳು ಬೆಳಗಬೇಕಾದವರು', ಅವರಿಂದಲೇ 'ಕತ್ತಲೆಯಾದರೆ'!
Recommended Video
ನರ್ಮದಾ ಬಚಾವ್ ಆಂದೋಲನದ ನೇತೃತ್ವವನ್ನು ವಹಿಸಿಕೊಂಡಿರುವ ಮೇಧಾ ಪಾಟ್ಕರ್, ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. "ಸಾವಿರಾರು ಜನರ ಬಾಳು ಹಾಳಾಗಿದೆ' ಎಂದು ಕಾಂಗ್ರೆಸ್ ಕೂಡಾ ಗುರುತರ ಆರೋಪ ಮಾಡುತ್ತಿದೆ.
" ಗುಜರಾತ್ ಸರಕಾರ ಸರ್ದಾರ್ ಸರೋವರ್ ಅಣೆಕಟ್ಟಿನ ನೀರಿನ ಮಟ್ಟವನ್ನು 138.68 ಮೀಟರ್ಗೆ ಏರಿಸಿದೆ. ಇದರಿಂದ, ಮಧ್ಯಪ್ರದೇಶದ ಮೂರು ಜಿಲ್ಲೆಗಳಾದ, ಧಾರ್, ಬರ್ವಾನಿ ಮತ್ತು ಅಲಿರಾಜ್ಪುರದ 192 ಗ್ರಾಮಗಳ ಜನರು ನಿರಾಶ್ರಿತರಾಗಿದ್ದಾರೆ" ಎಂದು ಮೇಧಾ ಪಾಟ್ಕರ್ ಆರೋಪಿಸಿದ್ದಾರೆ.
" ನೀವು ಮಾನವೀಯತೆಗೆ ಮೊದಲು ಆದ್ಯತೆ ನೀಡಿದ್ದರೆ, ಇಂದು ನಿರಾಶ್ರಿತರು ಕಣ್ಣೀರು ಹಾಕುತ್ತಿರಲಿಲ್ಲ" ಎಂದು ಕಾಂಗ್ರೆಸ್ , ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ದ ಕಿಡಿಕಾರಿದೆ. ಪ್ರಧಾನಿ "ನಮ್ಮ ಬಾಳಿಗೆ ಬೆಳಕಾಗಬೇಕು, ಅವರಿಂದ ಕತ್ತಲಾಗಬಾರದು" ಎಂದು ನಿರಾಶ್ರಿತರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
" ಈ ವಿಚಾರದಲ್ಲಿ, ಬಿಜೆಪಿಯನ್ನು ದೂಷಿಸುವ ಯಾವುದೇ ಹಕ್ಕು ಕಾಂಗ್ರೆಸ್ಸಿಗೆ ಇಲ್ಲ. ಗಾಂಧಿ ಸಾಗರದ ನೀರನ್ನು ಹೊರಬಿಟ್ಟಿದ್ದರೆ, ಈ ಪರಿಸ್ಥಿತಿ ಎದುರಾಗುತ್ತಿಲ್ಲ. ಮಧ್ಯಪ್ರದೇಶ ಸರಕಾರ ನಿದ್ರಾವಸ್ಥೆಯಲ್ಲಿ ಇರುವುದರಿಂದ, ಈ ಸಮಸ್ಯೆ ಎದುರಾಗಿದೆ" ಎಂದು ಮಧ್ಯಪ್ರದೇಶದ ಮಾಜಿ ಸಿಎಂ, ಶಿವರಾಜ್ ಸಿಂಗ್ ಚೌಹಾಣ್ ತಿರುಗೇಟು ನೀಡಿದ್ದಾರೆ. ಏನಿದು, ಮೋದಿ ಮೇಲಿನ ಆರೋಪ?

ಪ್ರಧಾನಿ ಮೋದಿಯವರ 69ನೇ ಹುಟ್ಟುಹಬ್ಬ
ಪ್ರಧಾನಿ ಮೋದಿಯವರ 69ನೇ ಹುಟ್ಟುಹಬ್ಬವನ್ನು (ಸೆ 17) ಸರ್ದಾರ್ ಸರೋವರ ಅಣೆಕಟ್ಟಿನ ತಟದಲ್ಲಿರುವ ಕೇವಡಿಯಾದಲ್ಲಿ ಆಚರಿಸಲಾಗಿತ್ತು. ಮೋದಿಯವರ ಹುಟ್ಟುಹಬ್ಬಕ್ಕೆಂದೇ, ಅಣೆಕಟ್ಟಿಗೆ ನೀರು ಹರಿಸಲಾಗಿತ್ತು. ಇದರ ಹಿನ್ನೀರಿನಿಂದ ಹಲವು ಗ್ರಾಮಗಳಿಗೆ ಜಲಾವೃತಗೊಂಡಿದ್ದವು. ಇದರಿಂದ, ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ ಎನ್ನುವುದು ವಾಸ್ತವತೆ ಎಂದು ಹೇಳಲಾಗುತ್ತಿದೆ.

ಗುಜರಾತ್ ಸರ್ಕಾರ ಅಣೆಕಟ್ಟಿನ ನೀರಿನ ಮಟ್ಟವನ್ನು ಏರಿಸಿತ್ತು
" ಪ್ರಧಾನಿಯವರ ಜನ್ಮದಿನ ಆಚರಿಸುವ ಸಲುವಾಗಿಯೇ ಗುಜರಾತ್ ಸರಕಾರ ಅಣೆಕಟ್ಟಿನ ನೀರಿನ ಮಟ್ಟವನ್ನು ಏರಿಸಿತ್ತು. ಅವರ, ಈ ಹುಟ್ಟುಹಬ್ಬದ ಆಚರಣೆಯನ್ನು ನಾವು ಹಾಳು ಮಾಡುತ್ತೇವೆ. ಅವರಿಗೆ ದೇವರು ಸುದೀರ್ಘ ಜೀವನವನ್ನು ನೀಡಲಿ. ದೇಶದ ಪ್ರಧಾನಮಂತ್ರಿಯಗಿ, ಇದರಿಂದಾಗುವ ತೊಂದರೆಯನ್ನು ಅವರು ಅರ್ಥಮಾಡಿಕೊಳ್ಳಬೇಕಿತ್ತು "ಎಂದು ಮೇಧಾ ಪಾಟ್ಕರ್ ಟೀಕಿಸಿದ್ದಾರೆ. (ಚಿತ್ರದಲ್ಲಿ: ಗುಜರಾತ್ ಸಿಎಂ ವಿಜಯ್ ರೂಪಾನಿ)

ಅಣೆಕಟ್ಟಿನ ಹಿನ್ನೀರು
" ಅಣೆಕಟ್ಟಿನ ಹಿನ್ನೀರು ಭಾಗಶಃ ಅಥವಾ ಸಂಪೂರ್ಣವಾಗಿ ಮಧ್ಯಪ್ರದೇಶದ ಬರ್ವಾನಿ, ಧಾರ್, ಅಲಿರಾಜ್ಪುರ ಮತ್ತು ಖಾರ್ಗೋನ್ ಜಿಲ್ಲೆಗಳ 192 ಗ್ರಾಮಗಳನ್ನು ಆವರಿಸಿಕೊಂಡಿದೆ. ಈ ಪ್ರದೇಶಗಳಲ್ಲಿ ವಾಸಿಸುವವರ ಸಂಪೂರ್ಣ ಪುನರ್ವಸತಿ ಕಲ್ಪಿಸಿದ ನಂತರವೇ ದ್ವಾರಗಳನ್ನು ಮುಚ್ಚಬೇಕೆನ್ನುವುದು ನಮ್ಮ ಕೋರಿಕೆ" ಎಂದು ಚಳವಳಿಯ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.

ಇದೇ ಮೊದಲ ಬಾರಿಗೆ ಸರ್ದಾರ್ ಸರೋವರ್ ಅಣೆಕಟ್ಟು ತುಂಬಿರುವುದನ್ನು ನೋಡುತ್ತಿದ್ದೇವೆ
ಹುಟ್ಟುಹಬ್ಬದ ವೇಳೆ ಮಾತನಾಡುತ್ತಾ ಮೋದಿ, "ನಾವು ಇದೇ ಮೊದಲ ಬಾರಿಗೆ ಸರ್ದಾರ್ ಸರೋವರ್ ಅಣೆಕಟ್ಟು ತುಂಬಿರುವುದನ್ನು ನೋಡುತ್ತಿದ್ದೇವೆ. 122 ಮೀಟರ್ ತಲುಪುವುದೇ ಒಂದು ದೊಡ್ಡ ವಿಷಯವಾಗಿತ್ತು. ಆದರೆ, ಈ ಕಳೆದ 5 ವರ್ಷಗಳಲ್ಲಿ, ಸರ್ದಾರ್ ಸರೋವರ್ 138 ಮೀಟರ್ ರವರೆಗೆ ತುಂಬಿರುವುದನ್ನು ನೋಡುವುದು ಆಶ್ಚರ್ಯಕರ ಮತ್ತು ಮರೆಯಲಾಗದ ಸಂಗತಿ" ಎಂದು ಪ್ರಧಾನಿಗಳು ಹೇಳಿದ್ದರು.

ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ ಆರೋಪ
ಒಟ್ಟಾರೆಯಾಗಿ, ಮೋದಿಯವರ ಹುಟ್ಟುಹಬ್ಬದ ಆಚರಣೆಗಾಗಿ ಅಣೆಕಟ್ಟಿಗೆ ಹೆಚ್ಚಿನ ನೀರು ಬಿಡಲಾಗಿತ್ತು. ಹಿನ್ನೀರಿನ ಭಾಗದ ಜನರಿಗೆ ಪುನರ್ವಸತಿ ಕಲ್ಪಿಸದ ನಂತರವಷ್ಟೇ ಅಣೆಕಟ್ಟಿಗೆ ನೀರು ಬಿಡಬೇಕು ಎನ್ನುವ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ ಆರೋಪವೂ ಗುಜರಾತ್ ಸರಕಾರದ ವಿರುದ್ದ ಕೇಳಿಬರುತ್ತಿದೆ.

ಪ್ರಧಾನಮಂತ್ರಿ ಕಾರ್ಯಾಲಯವೇ ಇದರ ಉಸ್ತುವಾರಿಯನ್ನು ನೋಡಲಿ
ಸರಕಾರದ ತಪ್ಪು ನಿರ್ಧಾರದಿಂದ, ಸಾವಿರಾರು ಜನರ ಬಾಳು ಬೀದಿಗೆ ಬಂದಿದೆ. ತಪ್ಪು ಮಾಡಿಯಾಗಿದೆ, ಇನ್ನಾದರೂ, ರಾಜಕೀಯ ಕೆಸೆರೆರೆಚಾಟ ಮಾಡುವುದನ್ನು ನಿರಾಶ್ರಿತರಿಗೆ ದಾರಿದೀಪವಾಗುವ ಕೆಲಸವನ್ನು ಸರಕಾರ ಮಾಡಬೇಕಿದೆ. ಪ್ರಧಾನಮಂತ್ರಿ ಕಾರ್ಯಾಲಯವೇ ಇದರ ಉಸ್ತುವಾರಿಯನ್ನು ನೋಡಿಕೊಂಡರೆ, ಹುದ್ದೆಯ ಘನತೆ ಇನ್ನಷ್ಟು ಹೆಚ್ಚುತ್ತದೆ, ಎನ್ನುವುದು ಚಳುವಳಿಕಾರರ ಮತ್ತು ಮೇಧಾ ಪಾಟ್ಕರ್ ಅವರ ಅಭಿಪ್ರಾಯ. (ಚಿತ್ರ: ಎಎನ್ಐ)
-
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ












Click it and Unblock the Notifications