ಮೋದಿ ಹೇಳಿದ್ದೇನು, ಜನ ಮಾಡಿದ್ದೇನು? ವಿದ್ಯಾವಂತ ನಾಗರೀಕರಿಗೆ ಬುದ್ಧಿ ಬೇಡ್ವಾ?
ಜಾಗತಿಕವಾಗಿ ಆತಂಕ ಸೃಷ್ಟಿಸಿರುವ ಕೊರೊನಾ ವೈರಸ್ ಸೋಂಕನ್ನು ಭಾರತದಲ್ಲಿ ತಡೆಗಟ್ಟಲು ಪ್ರಧಾನಿ ಮೋದಿ ನಿನ್ನೆ (ಮಾರ್ಚ್ 22) ಜನತಾ ಕರ್ಫ್ಯೂಗೆ ಕರೆ ನೀಡಿದ್ದರು. ಜೊತೆಗೆ ಸಂಜೆ 5 ಗಂಟೆಗೆ ಮನೆಯಲ್ಲೇ ಚಪ್ಪಾಳೆ ತಟ್ಟಿ ಆರೋಗ್ಯ ಇಲಾಖೆಯವರಿಗೆ ಗೌರವ ಸಲ್ಲಿಸಿ ಎಂದು ಹೇಳಿದ್ದರು.
ಪ್ರಧಾನಿ ನರೇಂದ್ರ ಮೋದಿ ಕರೆಗೆ ಓಗೊಟ್ಟು, ನಿನ್ನೆ ಭಾರತದ ಮೂಲೆ ಮೂಲೆಯಲ್ಲೂ ಜನತಾ ಕರ್ಫ್ಯೂ ಆಚರಣೆ ಮಾಡಲಾಯಿತು. ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದು, ಎಲ್ಲಾ ರಸ್ತೆಗಳು ಖಾಲಿ ಹೊಡೆಯುತ್ತಿದ್ದವು. ಜನತಾ ಕರ್ಫ್ಯೂ ಪ್ರಯುಕ್ತ ಬಹುತೇಕರು ಮನೆಯಿಂದ ಹೊರಗೆ ಕಾಲಿಡಲಿಲ್ಲ.
ಆದ್ರೆ, ಅದ್ಯಾವಾಗ 5 ಗಂಟೆ ಆಯ್ತೋ... ಸಂಪೂರ್ಣ ಚಿತ್ರಣವೇ ಬದಲಾಗಿ ಹೋಯ್ತು. ಬೆಳಗ್ಗೆಯಿಂದ ಮನೆಯೊಳಗೆ ಕೂತಿದ್ದ ಜನ, ಚಪ್ಪಾಳೆ ತಟ್ಟಲು, ಗಂಟೆ ಬಾರಿಸುವ ನೆಪದಲ್ಲಿ ಬೀದಿಗಿಳಿದರು. ತಟ್ಟೆ, ಜಾಗಟೆ, ಗಂಟೆಯನ್ನ ಬಾರಿಸುತ್ತಾ ರಸ್ತೆಯಲ್ಲಿ ಮೆರವಣಿಗೆ ಮಾಡಿದರು.
ಅಸಲಿಗೆ, ಕೊರೊನಾ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಕಾರಣ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮತ್ತು ಎಲ್ಲರೂ ಮನೆಯಲ್ಲೇ ಇರಲು 'ಜನತಾ ಕರ್ಫ್ಯೂ' ಆಚರಿಸಲಾಗಿತ್ತು. ಆದ್ರೆ, ಚಪ್ಪಾಳೆ ಹೊಡೆಯುವ ನೆಪದಲ್ಲಿ ವಿದ್ಯಾವಂತ ನಾಗರೀಕರು 'ಜನತಾ ಕರ್ಫ್ಯೂ'ದ ಮೂಲ ಉದ್ದೇಶವನ್ನೇ ಮರೆತಿದ್ದು ಮಾತ್ರ ನಾಚಿಕೆಗೇಡು.
|
ಇಂತಹ ಪೆದ್ದುತನಕ್ಕೆ ಮದ್ದು ಎಲ್ಲಿಂದ ತರೋದು.?
ಚಪ್ಪಾಳೆ ತಟ್ಟುತ್ತ ಮೆರವಣಿಗೆ ಮಾಡಿದ ಜನರ ವಿಡಿಯೋವನ್ನು ಶೇರ್ ಮಾಡಿಕೊಂಡು ''ಮುಟ್ಟುವುದರಿಂದ ಕೊರೊನಾ ವೈರಸ್ ಹಬ್ಬುತ್ತದೆ ಎಂಬುದನ್ನು ದಯವಿಟ್ಟು ಅರ್ಥ ಮಾಡಿಕೊಳ್ಳಿ. ಇಂಥಾ ಪೆದ್ದುತನಕ್ಕೆ ಮದ್ದು ಎಲ್ಲಿಂದ ತರೋದು'' ಎಂದು ಬೇಸರ ವ್ಯಕ್ತಪಡಿಸಿ ನಟ ರವಿಶಂಕರ್ ಗೌಡ ಟ್ವೀಟ್ ಮಾಡಿದ್ದಾರೆ.
|
ನೀರಿನಲ್ಲಿ ಹೋಮ ಮಾಡಿದ ಹಾಗಾಯ್ತು!
''ವೈದ್ಯರು, ನರ್ಸ್ ಮತ್ತು ಪೊಲೀಸರ ಶ್ರಮವನ್ನು ಇವರೆಲ್ಲ ಸೇರಿ ನೀರಿನಲ್ಲಿ ಹೋಮ ಮಾಡಿದ ಹಾಗೆ ಮಾಡಿಬಿಟ್ಟರು'' ಎಂದು ನೆಟ್ಟಿಗರೊಬ್ಬರು ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
|
ಮರೆತು ಹೋಯ್ತಾ ಮುನ್ನೆಚ್ಚರಿಕೆ ಕ್ರಮಗಳು?
ವೈದ್ಯಕೀಯ ಸಿಬ್ಬಂದಿಯ ಶ್ರಮವನ್ನು ಶ್ಲಾಘಿಸಲು ಗುಂಪು ಕಟ್ಟಿಕೊಂಡು ಚಪ್ಪಾಳೆ ತಟ್ಟಿಬಿಟ್ಟರೆ ಸಾಲದು.. ಅವರೆಲ್ಲರಿಗೂ ಗೌರವ ಕೊಡಬೇಕು ಅಂದ್ರೆ ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
|
ಇಂಥವರಿಗೆ ಏನು ಹೇಳೋಣ?
ನಾವೇನು ಮಾಡ್ತಿದ್ದೇವೆ ಎಂಬ ಜ್ಞಾನ ಇವರೆಲ್ಲರಿಗೂ ಇದ್ಯೋ, ಇಲ್ವೋ ಎಂಬ ಡೌಟ್ ಹಲವರಿಗೆ ಕಾಡುತ್ತಿದೆ. ಕೊರೊನಾ ನ 'ಸಂಭ್ರಮ' ಮಾಡಿಕೊಂಡಿರುವ ಇವರಿಗೆ ಏನ್ನನ್ನಬೇಕು ನೀವೇ ಹೇಳಿ..
|
ಬೆಳಗ್ಗೆ ಕರ್ಫ್ಯೂ, ಸಂಜೆ ಸಂಭ್ರಮಾಚರಣೆ
5 ಗಂಟೆಗೆ 5 ನಿಮಿಷ ಚಪ್ಪಾಳೆ ತಟ್ಟಿ ಅಂದ್ರೆ, ಇವರೆಲ್ಲ ಸೇರಿಕೊಂಡು ಏನು ಮಾಡ್ತಿದ್ದಾರೆ ಅಂತ ನೀವೇ ನೋಡಿ.. ಬೆಳಗ್ಗೆಯಿಂದ ಜನತಾ ಕರ್ಫ್ಯೂ ಆಚರಿಸಿದ ಜನ ಸಂಜೆ ಸಂಭ್ರಮಾಚರಣೆ ಮಾಡಿಬಿಟ್ಟಿದ್ದರು.
|
ಮನಮಿಡಿಯುವ ವಿಡಿಯೋ
ಮೇಲಿನ ಎಲ್ಲಾ ವಿಡಿಯೋಗಳ ಮಧ್ಯೆ ಸಿಕ್ಕಾಪಟ್ಟೆ ವೈರಲ್ ಆಗಿರುವ ಮನಮಿಡಿಯುವ ವಿಡಿಯೋ ಅಂದ್ರೆ ಇದೇ ನೋಡಿ... ಸೀರಿಯಸ್ ವಿಚಾರದಲ್ಲೂ ಸಂಭ್ರಮ ಮೆರೆಯುವ ವಿದ್ಯಾವಂತ ನಾಗರೀಕರಿಗೆ ಮಾದರಿಯಾಗುವಂತೆ ನಡೆದುಕೊಂಡಿದ್ದಾನೆ ಈ ನಿರ್ಗತಿಕ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications