Get Updates
Get notified of breaking news, exclusive insights, and must-see stories!

ಜಾಮೀನಿನ ಮೇಲಿರುವ ಸೋನಿಯಾ, ರಾಹುಲ್ ರಿಂದ ಆರೋಪ: ಗೇಲಿ ಮಾಡಿದ ಮೋದಿ

"ಕಾಂಗ್ರೆಸ್ ಪಕ್ಷದ ರಾಜಕಾರಣ ಆರಂಭವಾಗುವುದು ಹಾಗೂ ಕೊನೆಯಾಗುವುದು ಒಂದು ಕುಟುಂಬದಿಂದಲೇ" ಮತ್ತು ಆ ಪಕ್ಷ ಜನರಿಂದ ದೂರ ಇದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ವಿರುದ್ಧ ಸೋಮವಾರ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ನವೆಂಬರ್ 20ನೇ ತಾರೀಕು ಛತ್ತೀಸ್ ಗಢದಲ್ಲಿ ಎರಡನೇ ಹಂತದ ಮತದಾನ ನಡೆಯಲಿದ್ದು, ಸೋಮವಾರದಂದು ಬಿಲಾಸ್ ಪುರ್ ನಲ್ಲಿ ಚುನಾವಣೆ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಬಿಜೆಪಿ ಸರಕಾರದ ಅವಧಿಯಲ್ಲಿ ಆಗುತ್ತಿರುವ ಬೆಳವಣಿಗೆಯು ವೇಗವಾಗಿದೆ. ಆದರೆ ಕಾಂಗ್ರೆಸ್ ಆಡಳಿತಾವಧಿಯಲ್ಲಿ ರಾಜ್ಯವು ಬಹಳ ಹಿಂದುಳಿದಿತ್ತು ಎಂದಿದ್ದಾರೆ.

ಕಾಂಗ್ರೆಸ್ ರಾಜಕಾರಣವು ಒಂದು ಕುಟುಂಬದ ಮೇಲೆ ಕೇಂದ್ರೀಕೃತವಾಗಿದೆ. ಯಾವ ಬಡವರು ಅಡುಗೆ ಅನಿಲ ಸಂಪರ್ಕ ಅಥವಾ ಬ್ಯಾಂಕ್ ಬ್ಯಾಲನ್ಸ್ ಬಯಸುವುದಿಲ್ಲ? ಆದರೆ ಕಾಂಗ್ರೆಸ್ ನಲ್ಲಿನ ಕುಟುಂಬ ಜನರಿಂದ ದೂರವಾಗಿದೆ. ಬದಲಾವಣೆ ತರುವುದಕ್ಕೆ ಅವರಲ್ಲಿ ನಾಯಕತ್ವ ಇಲ್ಲ, ಮುಂದೆಯೂ ಇರುವುದಿಲ್ಲ ಎಂದು ಆರೋಪಿಸಿದ್ದಾರೆ.

ಅಪನಗದೀಕರಣದ ಕಾರಣಕ್ಕೆ ಜಾಮೀನು ಕೇಳುವ ಸ್ಥಿತಿ ಬಂತು

ಅಪನಗದೀಕರಣದ ಕಾರಣಕ್ಕೆ ಜಾಮೀನು ಕೇಳುವ ಸ್ಥಿತಿ ಬಂತು

ಅಪನಗದೀಕರಣದ ಬಗ್ಗೆ ಪ್ರಶ್ನೆ ಮಾಡಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ತಾಯಿ ಹಾಗೂ ಮಗ ಜಾಮೀನು ಪಡೆದು ಹೊರಗೆ ಇದ್ದಾರೆ ಎಂದು ಟೀಕಿಸಿದ್ದಾರೆ. ಅಪನಗದೀಕರಣದ ಕಾರಣಕ್ಕೆ ಜಾಮೀನು ಕೇಳುವ ಸ್ಥಿತಿ ಬಂದಿದೆ ಎಂಬುದನ್ನು ಅವರು ಮರೆತಿದ್ದಾರೆ. ಯಾರು ಜಾಮೀನು ನೀಡಿ ಎಂದು ಕೇಳುತ್ತಿದ್ದಾರೋ ಅವರು ಮೋದಿಗೆ ಸರ್ಟಿಫಿಕೇಟ್ ನೀಡುತ್ತಿದ್ದಾರೆ ಎಂದು ಗೇಲಿ ಮಾಡಿದ್ದಾರೆ.

ಅಭಿವೃದ್ಧಿಯಿಂದ ಭೇದ ಹೋಗಲಾಡಿಸಲು ಸಾಧ್ಯ್

ಅಭಿವೃದ್ಧಿಯಿಂದ ಭೇದ ಹೋಗಲಾಡಿಸಲು ಸಾಧ್ಯ್

ಬಡವ-ಶ್ರೀಮಂತ, ಹಳ್ಳಿ-ನಗರ ಈ ರೀತಿ ಭೇದ ಸೃಷ್ಟಿಸಲು ಕೆಲವರು ಬಯಸುತ್ತಾರೆ. ಭೇದವನ್ನು ಹೋಗಲಾಡಿಸಿದರೆ ಭಾರತದ ಅಭಿವೃದ್ಧಿ ಆಗುತ್ತದೆ ಎಂದು ಬಿಜೆಪಿ ನಂಬುತ್ತದೆ. ಅಭಿವೃದ್ಧಿಯಿಂದ ಮಾತ್ರ ಅದು ಸಾಧ್ಯ. ಅದಕ್ಕಾಗಿ ಬಿಜೆಪಿ ಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ.

150 ಸಲ 'ಸರ್' ಎಂದು ಸಂಬೋಧನೆ

150 ಸಲ 'ಸರ್' ಎಂದು ಸಂಬೋಧನೆ

ಕಾಂಗ್ರೆಸ್ ಅಧ್ಯಕ್ಷರನ್ನು ಗುರಿ ಮಾಡಿಕೊಂಡ ನರೇಂದ್ರ ಮೋದಿ, ದೇಶದ ಹಳೆಯ ಪಕ್ಷವು 36 ಅಂಶವನ್ನು ಒಳಗೊಂಡ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಅದರಲ್ಲಿ ರಾಹುಲ್ ಗಾಂಧಿ ಅವರನ್ನು 150 ಸಲ 'ಸರ್' ಎಂದು ಸಂಬೋಧಿಸಲಾಗಿದೆ. ಕಾಂಗ್ರೆಸ್ ನವರಿಗೆ ಛತ್ತೀಸ್ ಗಢಕ್ಕಿಂತ ರಾಹುಲ್ ಗಾಂಧಿ ಎಷ್ಟು ಮುಖ್ಯ ಎಂಬುದು ಇದರಲ್ಲೇ ಗೊತ್ತಾಗುತ್ತದೆ ಎಂದು ಲೇವಡಿ ಮಾಡಿದ್ದಾರೆ.

90 ವಿಧಾನಸಭಾ ಸ್ಥಾನಗಳಿರುವ ಛತ್ತೀಸ್ ಗಢ

90 ವಿಧಾನಸಭಾ ಸ್ಥಾನಗಳಿರುವ ಛತ್ತೀಸ್ ಗಢ

ಛತ್ತೀಸ್ ಗಢದಲ್ಲಿ ಒಟ್ಟು 90 ವಿಧಾನಸಭಾ ಸ್ಥಾನಗಳಿದ್ದು, ನವೆಂಬರ್ 11ರಂದು ಮೊದಲ ಹಂತವಾಗಿ 18 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಉಳಿದ 72 ಸ್ಥಾನಗಳಿಗೆ ನವೆಂಬರ್ 20ರಂದು ಮತದಾನ ನಡೆಯಲಿದೆ. ಬಿಜೆಪಿಯ ರಮಣ್ ಸಿಂಗ್ ರಾಜ್ಯದಲ್ಲಿ ನಾಲ್ಕನೇ ಬಾರಿಗೆ ಅಧಿಕಾರ ಚುಕ್ಕಾಣಿ ಹಿಡಿಯುವ ನಂಬಿಕೆಯಲ್ಲಿದ್ದಾರೆ. ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಅವರು ತಮ್ಮ ಹೊಸ ಪಕ್ಷವನ್ನು ಮಾಯಾವತಿಯವರ ಬಿಎಸ್ ಪಿ ಜತೆ ಮೈತ್ರಿ ಮಾಡಿಕೊಂಡಿದ್ದಾರೆ. ದಲಿತರ ಮತಗಳನ್ನು ಸೆಳೆಯಲು ಮಾಯಾವತಿ ಪಕ್ಷದ ಜತೆಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಗೆ ಸಾಧ್ಯವಾಗಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+