ರಾಹುಲ್ರಿಂದ ಸದನದಲ್ಲಿ 37 ನಿಮಿಷ ಭಾಷಣ: 14 ನಿಮಿಷ ತೋರಿಸಿದ ಸಂಸದ್ ಟಿವಿ- ಕಾಂಗ್ರೆಸ್ ಕೆಂಡಾಮಂಡಲ
ನವದೆಹಲಿ, ಆಗಸ್ಟ್ 09: ಲೋಕಸಭೆಯಲ್ಲಿ ರಾಹುಲ್ ಗಾಂಧಿಯವರು 37 ನಿಮಿಷಗಳ ಭಾಷಣ ಮಾಡಿದರು. ಆದರೆ, ಸಂಸದ್ ಟಿವಿಯಲ್ಲಿ ಕೇವಲ 14.37 ನಿಮಿಷಗಳ ಕಾಲ ಅವರನ್ನು ತೋರಿಸಲಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಬುಧವಾರ ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿಗೆ ನೀಡಲಾಗಿರುವ ಸ್ಕ್ರೀನ್ ಟೈಮ್ ವಿಚಾರವಾಗಿ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ಅವರನ್ನು ಜೈರಾಮ್ ರಮೇಶ್ ತರಾಟೆಗೆ ತೆಗೆದುಕೊಂಡರು.

'ಪ್ರಧಾನಿ ನರೇಂದ್ರ ಮೋದಿ ಅವರು ಯಾವ ಕಾರಣಕ್ಕಾಗಿ ಹೆದರುತ್ತಿದ್ದಾರೆ' ಎಂದು ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.
ಸಂಸದ್ ಟಿವಿಯಲ್ಲಿ ರಾಹುಲ್ ಭಾಷಣಕ್ಕೆ ನೀಡಲಾಗಿರುವ ಸ್ಕ್ರೀನ್ ಟೈಮ್ ಬಗ್ಗೆ ಟ್ವೀಟ್ ಮಾಡಿರುವ ಜೈರಾಮ್ ರಮೇಶ್, 'ಅನ್ಯಾಯದಿಂದಾಗಿ ಅನರ್ಹತೆಗೊಂಡಿದ್ದ ರಾಹುಲ್ ಗಾಂಧಿ ಲೋಕಸಭೆಯನ್ನು ಇಂದು ಭಾಷಣ ಮಾಡಿದರು. ರಾಹುಲ್ ಗಾಂಧಿ ಅವರು ಮಧ್ಯಾಹ್ನ 12:09 ರಿಂದ ಮಾತನಾಡಿದರು. ಅವರು ಭಾಷಣವು 12:46 ರ ವರೆಗೆ ಮುಂದುವರಿಯಿತು. ಅಂದರೆ, ಅವಿಶ್ವಾಸ ನಿರ್ಣಯದ ಒಟ್ಟು ಸಮಯದಲ್ಲಿ 37 ನಿಮಿಷಗಳ ಕಾಲ ಮಾತನಾಡಿದರು' ಎಂದು ಹೇಳಿದ್ದಾರೆ.
'37 ನಿಮಿಷಗಳಲ್ಲಿ ರಾಹುಲ್ ಗಾಂಧಿ ಅವರನ್ನು ಕೇವಲ 14 ನಿಮಿಷ ( ಸಂಸದ್ ಟಿವಿಯಲ್ಲಿ ) ತೋರಿಸಲಾಗಿದೆ. ಅದು ಶೇಕಡಾ 40 ಕ್ಕಿಂತ ಕಡಿಮೆ ಸ್ಕ್ರೀನ್ ಟೈಮ್. ರಾಹುಲ್ ಗಾಂಧಿ ಬಗ್ಗೆ ಮೋದಿಗೆ ಏನು ಭಯ?' ಎಂದು ರಾಜ್ಯಸಭಾ ಸಂಸದ ರಮೇಶ್ ಹೇಳಿದ್ದಾರೆ.

ಲೋಕಸಭೆಯಲ್ಲಿ ಮಾಡಿದ ಭಾಷಣದ ವೇಳೆ ರಾಹುಲ್ ಗಾಂಧಿ ಅವರು ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿಯ ರಾಜಕೀಯವು ಮಣಿಪುರದಲ್ಲಿ ಭಾರತವನ್ನು ಕೊಂದುಹಾಕಿದೆ ಎಂದು ಅವರು ಆರೋಪಿಸಿದರು. ಪ್ರಧಾನಿಯವರ ದುರಹಂಕಾರವು ಇಡೀ ದೇಶವನ್ನು ಸುಡುತ್ತಿದೆ ಎಂದು ಹೇಳಿದರು.
ನಾನು ದೇಶದ ಒಂದು ತುದಿಯಿಂದ ಇನ್ನೊಂದು ತುದಿಗೆ ಅಂದರೆ ಕರಾವಳಿಯಿಂದ ಕಾಶ್ಮೀರದ ಹಿಮಭರಿತ ಪರ್ವತಗಳವರೆಗೆ ನಡೆದಿದ್ದೇನೆ. ಯಾತ್ರೆ ಇನ್ನೂ ಮುಗಿದಿಲ್ಲ. ಅದು ಪ್ರಾರಂಭವಾದ ನಂತರ ಅನೇಕ ಜನರು ನನ್ನನ್ನು ಕೇಳಿದರು, 'ರಾಹುಲ್ ನೀವು ಏಕೆ ನಡೆದಿದ್ದೀರಿ, ನಿಮ್ಮ ಗುರಿ ಏನು?' ಎಂದು ಪ್ರಶ್ನಿಸಿದರು. ನಾನು ಈ ದೇಶದ ಜನರನ್ನು ಅರ್ಥೈಸಿಕೊಳ್ಳಲು ನಡೆದಿದ್ದೇನೆ ಎಂದು ಅವರು ಹೇಳಿದರು.
'ಬಿಜೆಪಿ ಮಣಿಪುರದಲ್ಲಿ ಭಾರತವನ್ನು ಕೊಂದಿದೆ ಮತ್ತು ಈಗ ಹರಿಯಾಣಕ್ಕೆ ಬೆಂಕಿ ಹಚ್ಚಲು ಪ್ರಯತ್ನಿಸುತ್ತಿದೆ. ನೀವು ಇಡೀ ದೇಶಕ್ಕೆ ಬೆಂಕಿ ಹಚ್ಚಿದ್ದೀರಿ. ಬಿಜೆಪಿಯವರು ದೇಶಾದ್ಯಂತ ಸೀಮೆಎಣ್ಣೆ ಸುರಿಯುತ್ತಿದ್ದಾರೆ ಎಂದು ರಾಹುಲ್ ಆರೋಪಿಸಿದರು.
'ಮೋದಿ ಹಿಂದೂಸ್ತಾನದ ಧ್ವನಿಯನ್ನು ಕೇಳದಿದ್ದರೆ, ಅವರು ಯಾರನ್ನು ಕೇಳುತ್ತಾರೆ? ಅವರು ಕೇವಲ ಇಬ್ಬರ ಮಾತುಗಳನ್ನು ಕೇಳುತ್ತಾರೆ. ರಾವಣ ಕೇವಲ ಇಬ್ಬರ ಮಾತನ್ನು ಕೇಳಿದನು. ಮೇಘನಾಥ ಮತ್ತು ಕುಂಬಕರ್ಣ ಅವರ ಮಾತುಗಳನ್ನು ಆಲಿಸಿದನು. ಅದೇ ರೀತಿ ಮೋದಿ ಕೂಡ ಅಮಿತ್ ಶಾ ಮತ್ತು ಅದಾನಿ ಮಾತುಗಳನ್ನು ಮಾತ್ರ ಕೇಳುತ್ತಾರೆ' ಎಂದು ವಾಗ್ದಾಳಿ ನಡೆಸಿದರು.
-
IPL Tickets: ನಾವು ವಿಐಪಿಗಳು; 5 ಫ್ರೀ ಟಿಕೆಟ್ ಕೊಡಲಿ: ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್












Click it and Unblock the Notifications