CBSE ಕಠಿಣ ಪ್ರಶ್ನೆಪತ್ರಿಕೆ ವಿರುದ್ಧ ಕಾನೂನು ಸಮರ: ಸಿಬಿಎಸ್ಇ ವಿರುದ್ಧ PIL ದಾಖಲು
ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ನಡೆಸುತ್ತಿರುವ 2026ರ ಬೋರ್ಡ್ ಪರೀಕ್ಷೆಗಳು ಇದೀಗ ಹೊಸದೊಂದು ಕಾನೂನು ಸಮರಕ್ಕೆ ಸಾಕ್ಷಿಯಾಗುತ್ತಿವೆ. ವಿವಿಧ ಸೆಟ್ಗಳ ಪ್ರಶ್ನೆಪತ್ರಿಕೆಗಳಲ್ಲಿನ (Question paper sets) ಕಠಿಣತೆಯ ಮಟ್ಟದಲ್ಲಿ ಭಾರಿ ವ್ಯತ್ಯಾಸವಿರುವುದನ್ನು ಪ್ರಶ್ನಿಸಿ ಶಿಕ್ಷಣ ತಜ್ಞ ಪ್ರಶಾಂತ್ ಕಿರಾಡ್ (Prashant Kirad) ಅವರು ಸಿಬಿಎಸ್ಇ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ದಾಖಲಿಸಲು ಮುಂದಾಗಿದ್ದಾರೆ.
ಏನಿದು ವಿವಾದ?
ಸಾಮಾನ್ಯವಾಗಿ ಪರೀಕ್ಷಾ ಅಕ್ರಮ ಮತ್ತು ನಕಲು ಮಾಡುವುದನ್ನು ತಡೆಯಲು ಸಿಬಿಎಸ್ಇ ಒಂದೇ ವಿಷಯಕ್ಕೆ ಹಲವು ಸೆಟ್ಗಳ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸುತ್ತದೆ. ಆದರೆ, ಈ ವರ್ಷದ 10ನೇ ತರಗತಿಯ ಗಣಿತ ಮತ್ತು 12ನೇ ತರಗತಿಯ ಭೌತಶಾಸ್ತ್ರ (Physics) ಪರೀಕ್ಷೆಗಳಲ್ಲಿ ನೀಡಲಾದ ವಿವಿಧ ಸೆಟ್ಗಳ ಪ್ರಶ್ನೆಪತ್ರಿಕೆಗಳಲ್ಲಿನ ಕಠಿಣತೆಯ ಮಟ್ಟದಲ್ಲಿ ಅಜಗಜಾಂತರ ವ್ಯತ್ಯಾಸವಿತ್ತು ಎಂಬುದು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಪ್ರಮುಖ ಆರೋಪ.

"ಕೆಲವು ವಿದ್ಯಾರ್ಥಿಗಳಿಗೆ ತೀರಾ ಸುಲಭವಾದ ಪ್ರಶ್ನೆಪತ್ರಿಕೆ ನೀಡಲಾಗಿತ್ತು. ಆದರೆ ಇನ್ನು ಕೆಲವು ಸೆಟ್ಗಳಲ್ಲಿ ಜೆಇಇ ಮೇನ್ ಮತ್ತು ಜೆಇಇ ಅಡ್ವಾನ್ಸ್ಡ್ ಮಟ್ಟದ ಕಠಿಣ ಪ್ರಶ್ನೆಗಳನ್ನು ಕೇಳಲಾಗಿತ್ತು. ಇದು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಿದಂತೆ. ವರ್ಷಪೂರ್ತಿ ಕಷ್ಟಪಟ್ಟು ಓದಿದ ವಿದ್ಯಾರ್ಥಿಗೆ ಕಠಿಣ ಪತ್ರಿಕೆ ಸಿಕ್ಕಿ, ಕಡಿಮೆ ಓದಿದವನಿಗೆ ಸುಲಭದ ಪತ್ರಿಕೆ ಸಿಕ್ಕರೆ ಅದರಲ್ಲಿ ಸಮಾನತೆ ಎಲ್ಲಿದೆ? ಇದೊಂದು ಶೈಕ್ಷಣಿಕ ತಾರತಮ್ಯ," ಎಂದು 'ಎಕ್ಸ್ಪ್ಹಬ್' (ExpHub) ಸ್ಥಾಪಕ ಪ್ರಶಾಂತ್ ಕಿರಾಡ್ ತಮ್ಮ ವೈರಲ್ ವಿಡಿಯೋದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಿಐಎಲ್ ಮತ್ತು ಪ್ರಮುಖ ಬೇಡಿಕೆಗಳು
ಸಿಬಿಎಸ್ಇಯ ಈ 'ಅವೈಜ್ಞಾನಿಕ' ಪ್ರಶ್ನೆಪತ್ರಿಕೆ ವಿನ್ಯಾಸವನ್ನು ಪ್ರಶ್ನಿಸಿ ತಾವು ಪಿಐಎಲ್ ದಾಖಲಿಸುತ್ತಿರುವುದಾಗಿ ಕಿರಾಡ್ ಘೋಷಿಸಿದ್ದಾರೆ. ಕೇವಲ ವಿವಿಧ ಸೆಟ್ಗಳನ್ನು ಸಿದ್ಧಪಡಿಸಿದರೆ ಸಾಲದು, ಬದಲಾಗಿ ಅವುಗಳ ಕಠಿಣತೆಯ ಮಟ್ಟವನ್ನು ಸಮಾನವಾಗಿರಿಸುವುದು (Standardized testing) ಅತಿ ಮುಖ್ಯ. ಪರೀಕ್ಷೆಯ ಕಠಿಣತೆಯು ವಿದ್ಯಾರ್ಥಿಯ ತಯಾರಿಯ ಬದಲು ಆತನ ಅದೃಷ್ಟವನ್ನು ಅವಲಂಬಿಸುವಂತಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ಸಿಬಿಎಸ್ಇ ಮುಂದಿಟ್ಟಿರುವ ಪ್ರಮುಖ ಬೇಡಿಕೆಗಳು
1. ಕಠಿಣ ಪ್ರಶ್ನೆಪತ್ರಿಕೆ ಪಡೆದ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಗ್ರೇಸ್ ಮಾರ್ಕ್ಸ್ ನೀಡಬೇಕು.
2. ಕಠಿಣ ಸೆಟ್ಗಳ ಉತ್ತರಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವಾಗ ಉದಾರವಾಗಿ (Lenient checking) ಅಂಕಗಳನ್ನು ನೀಡುವಂತೆ ಮೌಲ್ಯಮಾಪಕರಿಗೆ ಅಧಿಕೃತ ಸೂಚನೆ ಹೊರಡಿಸಬೇಕು.
3. ಭವಿಷ್ಯದಲ್ಲಿ ಪ್ರಶ್ನೆಪತ್ರಿಕೆಗಳ ಕಠಿಣತೆಯನ್ನು ಸಮಾನವಾಗಿರಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮಂಡಳಿಯು ಅಧಿಕೃತ ಸ್ಪಷ್ಟನೆ ನೀಡಬೇಕು.
ವಿದ್ಯಾರ್ಥಿಗಳು ಮತ್ತು ಪೋಷಕರ ಆಕ್ರೋಶ
ಪ್ರಶಾಂತ್ ಕಿರಾಡ್ ಅವರ ಈ ಹೋರಾಟಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಒಂದೇ ಒಂದು ಅಂಕವು ಕಾಲೇಜು ಪ್ರವೇಶಾತಿ, ವಿದ್ಯಾರ್ಥಿವೇತನ ಮತ್ತು ಭವಿಷ್ಯವನ್ನು ನಿರ್ಧರಿಸುವ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ, ಸಿಬಿಎಸ್ಇಯ ಈ ನಿರ್ಲಕ್ಷ್ಯವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರೀಕ್ಷೆಯ ನಂತರ ಪ್ರತಿಯೊಂದು ಸೆಟ್ನ ಕಠಿಣತೆಯ ಮ್ಯಾಪಿಂಗ್ ಅನ್ನು (Difficulty mapping) ಪಾರದರ್ಶಕವಾಗಿ ಪ್ರಕಟಿಸಬೇಕು ಎಂಬ ಒತ್ತಾಯವೂ ಕೇಳಿಬರುತ್ತಿದೆ.
ಸಿಬಿಎಸ್ಇ ಮಂಡಳಿಯು ಇದುವರೆಗೂ ಈ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಪಿಐಎಲ್ ದಾಖಲಾದ ಬಳಿಕ ನ್ಯಾಯಾಲಯವು ಯಾವ ರೀತಿಯ ನಿರ್ದೇಶನ ನೀಡಲಿದೆ ಮತ್ತು ಮಂಡಳಿಯು ಗ್ರೇಸ್ ಮಾರ್ಕ್ಸ್ ನೀಡಲಿದೆಯೇ ಕಾದು ನೋಡಬೇಕಿದೆ.
-
ಸರ್ಕಾರಿ PU ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿಗೆ ಬರೋಬ್ಬರಿ 9,383 ರೂ. ಲಕ್ಷ ಅನುದಾನ ಮಂಜೂರು -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
ಶಾಲಾ ಮಕ್ಕಳ ಮೊಬೈಲ್ ಬಳಕೆ ನಿರ್ಬಂಧ: 'ಡಿಜಿಟಲ್ ಕರಡು ನೀತಿ' ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರ -
UPSC ಪೂರ್ವಭಾವಿ ಪರೀಕ್ಷೆ ಮುಗಿದ ತಕ್ಷಣವೇ ಕೀ ಉತ್ತರಗಳ ಬಿಡುಗಡೆಗೆ ಕೇಂದ್ರ ಸರ್ಕಾರದ ನಿರ್ಧಾರ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು











Click it and Unblock the Notifications