ಏನಿದು 'CBSE ಅಂಕ ನಿಯಮ' ? ನೀವು ತಿಳಿಯಬೇಕಾದ 5 ವಿಚಾರ
ಪ್ರಶ್ನೆ ಪತ್ರಿಕೆಗಳಲ್ಲಿನ ಪ್ರಶ್ನೆಗಳಲ್ಲಿ ತಪ್ಪಿದ್ದರೆ, ಪಠ್ಯೇತರ ಪ್ರಶ್ನೆಗಳು ಕಾಣಿಸಿಕೊಂಡಿದ್ದರೆ ಅಂಥ ಪ್ರಶ್ನೆಗಳಿಗೆ ನಿಗದಿಗೊಳಿಸಲಾಗಿದ್ದ ಅಂಕಗಳನ್ನು ಕೃಪಾಂಕ ಮಾದರಿಯಲ್ಲಿ ನೀಡುತ್ತಿದ್ದುದೇ ಸಿಬಿಎಸ್ ಇ ಅಂಕ ಮಿತಿ ನಿಯಮ.
ನವದಹೆಲಿ, ಮೇ 25: ಕೇಂದ್ರೀಯ ಪ್ರೌಢ ಶಿಕ್ಷಣಾ ಮಂಡಳಿ (ಸಿಬಿಎಸ್ ಇ) ಹಾಗೂ ದೆಹಲಿ ಹೈಕೋರ್ಟ್ ಜಟಾಪಟಿಯಿಂದಾಗಿ ಸಿಬಿಎಸ್ ಇ 12ನೇ ತರಗತಿಯ ಫಲಿತಾಂಶಗಳು ಹೊರಬೀಳುವುದು ಸದ್ಯದ ಮಟ್ಟಿಗೆ ಮುಂದೂಡಲ್ಪಟ್ಟಿದೆ.
ಸಿಬಿಎಸ್ ಇ ಈವರೆಗೆ ತಾನು ಹೊಂದಿದ್ದ ಅಂಕ ಮಿತಿ ನಿಯಮಗಳನ್ನು ಕೈಬಿಟ್ಟಿರುವುದೇ ಈ ಎಲ್ಲಾ ಬೆಳವಣಿಗೆಗಳಿಗೆ ಮೂಲ ಕಾರಣ. ಕಳೆದ ವರ್ಷದ ಫಲಿತಾಂಶ ಪ್ರಕಟಗೊಳ್ಳುವಾಗುವವರೆಗೆ ಇದ್ದ ನಿಯಮವನ್ನು ಈ ಬಾರಿ ಕೈಬಿಟ್ಟಿರುವುದರಿಂದ ಕೆಲವು ಮಕ್ಕಳ ಪೋಷಕರು ನ್ಯಾಯಾಲಯದ ಮೆಟ್ಟಿಲೇರಿದ್ದರು.[ಸುಪ್ರೀಂ ಮೆಟ್ಟಿಲೇರದಿರಲು ಸಿಬಿಎಸ್ ಇ ನಿರ್ಧಾರ?]
ಈ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಮಂಗಳವಾರ ಆದೇಶ ನೀಡಿ, ಅಂಕ ಮಿತಿ ನಿಯಮವನ್ನು ಈ ಬಾರಿಯೂ ಮುಂದುವರಿಸಿಕೊಂಡು ಹೋಗುವಂತೆ ಸಿಬಿಎಸ್ ಇಗೆ ಸೂಚನೆ ನೀಡಿತು.
ಆದರೆ, ಇದಕ್ಕೆ ಸಮ್ಮತಿಸದ ಸಿಬಿಎಸ್ ಇ, ದೆಹಲಿ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದೆ.[ಸಿಬಿಎಸ್ ಇ ಫಲಿತಾಂಶ ಮತ್ತಷ್ಟು ತಡ: ಆತಂಕದಲ್ಲಿ ವಿದ್ಯಾರ್ಥಿಗಳು]
ಈ ಎಲ್ಲಾ ಗೊಂದಲಗಳಿಗೆ ಮೂಲ ಕಾರಣವಾಗಿರುವ ಆ ಅಂಕ ಮಿತಿ ನಿಯಮ ಏನು? ಅದನ್ನು ಸಿಬಿಎಸ್ ಇ ಕೈ ಬಿಟ್ಟಿದ್ದೇಕೆ ? ಆ ನಿಯಮವನ್ನು ಮುಂದುವರಿಸಿ ಎಂದು ಹೈಕೋರ್ಟ್ ಹೇಳಿದ್ದೇಕೆ? ಆ ನಿಯಮಗಳಿಂದ ವಿದ್ಯಾರ್ಥಿಗಳಿಗೆ ಆಗುತ್ತಿದ್ದ ಲಾಭವೇನು ? ಇವೇ ಮುಂತಾದ ವಿಚಾರಗಳಿಗೆ ಸಂಬಂಧಪಟ್ಟ ಐದು ಮಾಹಿತಿ ಇಲ್ಲಿ ಕೊಡಲಾಗಿದೆ.

ಕೃಪಾಂಕಗಳ ನೀಡುವ ನಿಯಮವಿದು
ಸಾಮಾನ್ಯವಾಗಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುವಾಗ ಕೆಲವಾರು ತಪ್ಪುಗಳು ಆಗುತ್ತವೆ. ಉದ್ದೇಶಪೂರ್ವಕವಾಗಿ ಅಲ್ಲದಿದ್ದರೂ ಕೆಲವೊಮ್ಮೆ ಇಂಥ ಪ್ರಶ್ನೆಗಳು ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಗಳ ತಲೆ ತಿನ್ನುವುದು ಸಹಜ. ಸಿಬಿಎಸ್ ಇ ಸಿದ್ಧಪಡಿಸುವ ಪ್ರಶ್ನೆ ಪತ್ರಿಕೆಗಳಲ್ಲಿ ಆಗಾಗ ಇಂಥ ತಪ್ಪುಗಳು ಕಾಣಿಸಿಕೊಳ್ಳುತ್ತಿದ್ದವು. ಅಂದರೆ, ಪಠ್ಯೇತರ ಪ್ರಶ್ನೆಗಳು ಕಾಣಿಸಿಕೊಳ್ಳುವುದು ಅಥವಾ ತಾಂತ್ರಿಕವಾಗಿ ಪ್ರಶ್ನೆಗಳಲ್ಲಿ ತಪ್ಪು ಇಣುಕುವುದು ಆಗಾಗ ಮರುಕಳಿಸುತ್ತಿದ್ದವು. ಇದರಿಂದಾಗುವ ತೊಂದರೆಗಳನ್ನು ಮನಗಂಡ ಮಂಡಳಿ, ಇಂಥ ಪ್ರಶ್ನೆಗಳು ಬಂದರೆ ಆ ಪ್ರಶ್ನೆಗಳಿಗೆ ನಿಗದಿಪಡಿಸಿರುವ ಅಂಕಗಳನ್ನು ಕೃಪಾಂಕ ಮಾದರಿಯಲ್ಲಿ ನೀಡುವ ನಿಯಮವನ್ನು ಜಾರಿಗೆ ತಂದಿತ್ತು. ಇದೇ ಅಂಕ ಮಿತಿ ನಿಯಮ.

ಹೆಚ್ಚುವರಿ ಅಂಕಗಳ ಲಾಭ
ಪಠ್ಯೇತರ ಪ್ರಶ್ನೆಗಳಿದ್ದರೆ ಮಾತ್ರ ಕೃಪಾಂಕ ಸಿಗುವುದಲ್ಲ. ಬದಲಿಗೆ, ಪ್ರಶ್ನೆಗಳಲ್ಲೇ
ತಪ್ಪಿದ್ದರೂ ಅವುಗಳಿಗೂ ಕೃಪಾಂಕ ನೀಡುವ ನಿಯಮವನ್ನು ಅಳವಡಿಸಿಕೊಳ್ಳಲಾಯಿತು. ಅಂದರೆ,
ನಿರ್ದಿಷ್ಟ ವಿಷಯದ ಪ್ರಶ್ನೆ ಪತ್ರಿಕೆಗಳಲ್ಲಿ ಒಂದೆರಡು ಇಂಥ ಪ್ರಶ್ನೆಗಳು ಬಂದರೂ, ಆ
ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಉತ್ತರ ಬರೆಯಲಿ, ಬಿಡಲಿ, ಆ ಪ್ರಶ್ನೆಗಳಿಗೆ
ನಿಗದಿಪಡಿಸಿದ್ದ ಅಂಕಗಳನ್ನು ವಿದ್ಯಾರ್ಥಿಯು ಆ ವಿಷಯದಲ್ಲಿ ಗಳಿಸುವ ಅಂಕಗಳಿಗೆ
ಹೆಚ್ಚುವರಿಯಾಗಿ ಸೇರಿಸಿ ಪ್ರಕಟಿಸಲಾಗುತ್ತಿತ್ತು.

ಕೃಪಾಂಕದಿಂದ ಫಲಿತಾಂಶದ ಮೇಲೆ ಪರಿಣಾಮ
ಶೇ. 90ರಷ್ಟು ಅಂಕ ಪಡೆದ ವಿದ್ಯಾರ್ಥಿಗಳು ಶೇ. 95ರ ಗಡಿ ದಾಟಿಬಿಡುತ್ತಿದ್ದರು. ಇನ್ನು, ಉತ್ತಮವಾಗಿ
ಪರೀಕ್ಷೆ ಬರೆಯದೇ ಫೇಲ್ ಆಗುವ ಭೀತಿ ಎದುರಿಸುತ್ತಿದ್ದ ವಿದ್ಯಾರ್ಥಿಗಳು
ತೇರ್ಗಡೆಯಾಗಿಬಿಡುತ್ತಿದ್ದರು. ಇದನ್ನು ತಪ್ಪಿಸಲು ಮಂಡಳಿ ಈ ಕ್ರಮ ಕೈಗೊಂಡಿದೆ.

ವಿವಾದಕ್ಕೆ ಕಾರಣವಾಯ್ತು
ಮಂಡಳಿಯು ಆ ಕೃಪಾಂಕ ನಿಯಮವನ್ನು ಕೈಬಿಟ್ಟಿದೆ. ಆದರೆ, ಮಂಡಳಿಯಿಂದ ಇಲ್ಲೊಂದು ತಾಂತ್ರಿಕ ತಪ್ಪು ಆಗಿದೆ. 2017ನೇ ಸಾಲಿನ 12ನೇ ತರಗತಿಯ ಪರೀಕ್ಷೆಗಳು ಮುಗಿದ ನಂತರ ಅಂಕ ಮಿತಿ ನಿಯಮ ಕೈಬಿಟ್ಟಿರುವುದಾಗಿ ಮಂಡಳಿ ಘೋಷಿಸಿದೆ. ಇದೇ ವಿವಾದಕ್ಕೆ ಮೂಲ ಕಾರಣ. ಹೀಗೆ, ಏಕಾಏಕಿ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ ಎಂಬುದು ಪೋಷಕರ ವಾದ. ಇದೇ ಕಾರಣಕ್ಕಾಗಿ,
ಕೆಲವು ಪೋಷಕರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ವರ್ಷದ ಫಲಿತಾಂಶ ಕೊಟ್ಟುಬಿಡಿ ಎಂದಿದೆ ಹೈಕೋರ್ಟ್
ಮೇಲ್ಮನವಿಯ ವಿಚಾರ ನಡೆಸಿರುವ ದೆಹಲಿ ಹೈಕೋರ್ಟ್, ನಿಯಮಗಳನ್ನು ನಿಮಗಿಷ್ಟ (ಸಿಬಿಎಸ್ ಇ) ಬಂದಂತೆ ಕೈಬಿಡುವುದು ಅಥವಾ ಮಾರ್ಪಾಟು ಮಾಡುವುದು ಸಲ್ಲದು. ವಿದ್ಯಾರ್ಥಿಗಳು 2017ನೇ ವರ್ಷದ ಪರೀಕ್ಷೆಗಳಿಗೆ ಅರ್ಜಿಗಳನ್ನು ತುಂಬುವಾಗ ಅಂಕ ಮಿತಿ ನಿಯಮ ಜಾರಿಯಲ್ಲಿತ್ತು.
ಆದರೆ, ಫಲಿತಾಂಶ ಬರುವಾಗ ಆ ನಿಯಮವನ್ನು ಕೈಬಿಟ್ಟರೆ ಹೇಗೆ? ಎಂದು ಪ್ರಶ್ನೆ ಮಾಡಿದೆ.
ನೀವು (ಸಿಬಿಎಸ್ ಇ) ಏನೇ ನಿಯಮ ಬದಲಾಯಿಸಿಕೊಳ್ಳಿ. ಆದರೆ, ಹೀಗೆ ಏಕಾಏಕಿ ಬದಲಾವಣೆ
ತರಬೇಡಿ. ಹಾಗಾಗಿ, ಅಂಕ ಮಿತಿ ನಿಯಮದ ಆಧಾರದಲ್ಲೇ ಈ ವರ್ಷದ ಫಲಿತಾಂಶ ಕೊಟ್ಟುಬಿಡಿ
ಎಂದು ಹೇಳಿದೆ. ಈಗಾಗಲೇ ಅಂಕ ಮಿತಿ ನಿಯಮ ರದ್ದುಗೊಳಿಸಿದ ಆಧಾರದ ಮೇಲೆ ಫಲಿತಾಂಶ
ಸಿದ್ಧಪಡಿಸಿರುವ ಮಂಡಳಿಯು ದೆಹಲಿ ಹೈಕೋರ್ಟ್ ಆದೇಶದಿಂದಾಗಿ ಇಕ್ಕಟ್ಟಿಗೆ ಸಿಲುಕಿದೆ.
ಆದರೆ, ಕೆಳಗೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬಂತೆ ಸುಪ್ರೀಂ ಕೋರ್ಟ್ ನಲ್ಲಿ ದೆಹಲಿ
ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಲು ಮುಂದಾಗಿದೆ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications