ಪೌರತ್ವ ತಿದ್ದುಪಡಿ ಮಸೂದೆ: ಮೋದಿಗೆ 'ಜೈ' ಎಂದ ಸಮೀಕ್ಷಾ ಫಲಿತಾಂಶ
ದೇಶಾದ್ಯಂತ ಸದ್ಯ ಭಾರೀ ಅಶಾಂತಿಗೆ ಕಾರಣವಾಗಿರುವ ಪೌರತ್ವ ತಿದ್ದುಪಡಿ ಮಸೂದೆಯ ವಿಚಾರದಲ್ಲಿ ಸಿ-ವೋಟರ್ ಜನಾಭಿಪ್ರಾಯ ಸಂಗ್ರಹಿಸಿದೆ.
ಪ್ರಮುಖವಾಗಿ ಉತ್ತರ ಮತ್ತು ಈಶಾನ್ಯ ಭಾರತದ ಭಾಗಗಳಲ್ಲಿ, ಹಿಂಸಾಚಾರ ಮುಂದುವರಿದಿದೆ. ಎನ್ಡಿಎ ಮೈತ್ರಿಕೂಟದ ರಾಜ್ಯಗಳಲ್ಲೂ ಈ ಮಸೂದೆ ಜಾರಿಗೆ ಬರುವ ವಿಚಾರದಲ್ಲಿ ಗೊಂದಲ ಮುಂದುವರಿದಿದೆ.
ಮಸೂದೆಯ ವಿಚಾರದಲ್ಲಿ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬಿಜೆಪಿ ದೇಶಾದ್ಯಂತ ಬೃಹತ್ ಅಭಿಯಾನ ಹಮ್ಮಿಕೊಂಡಿದೆ. ಬೆಂಗಳೂರಿನಲ್ಲೂ ಭಾನುವಾರ (ಡಿ 22) ಮಸೂದೆ ಬೆಂಬಲಿಸಿ ಬೃಹತ್ ಜಾಥಾ ನಡೆಯಲಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಸಾವಿರಕ್ಕೂ ಹೆಚ್ಚು ಚಿಂತಕರು, ಮೋದಿ ಸರಕಾರವನ್ನು ಬೆಂಬಲಿಸಿದ್ದಾರೆ. ಈ ನಡುವೆ, ಸಿ-ವೋಟರ್ ಜಂಟಿಯಾಗಿ ನಡೆಸಿದ ಜನಾಭಿಪ್ರಾಯವೂ ಮೋದಿ ಸರಕಾರದ ಪರವಾಗಿದೆ.

ಪೌರತ್ವ ತಿದ್ದುಪಡಿ ಕಾಯ್ದೆ
ಸಿವೋಟರ್ ಮತ್ತು ಐಎಎನ್ಎಸ್ ಜಂಟಿಯಾಗಿ ಸಮೀಕ್ಷೆ ನಡೆಸಲಾಗಿದ್ದು, ತಿದ್ದುಪಡಿ ಮಸೂದೆ ಸರಿಯೋ ತಪ್ಪೋ, ಮಸೂದೆಯ ವಿಚಾರದಲ್ಲಿ ಗೊಂದಲ ಮೂಡಲು ಕಾರಣವಾದ ಅಂಶಗಳು ಯಾವುದು.. ಹೀಗೆ ಹಲವು ವಿಚಾರಗಳಲ್ಲಿ ಜನಾಭಿಪ್ರಾಯ ಸಂಗ್ರಹಿಸಲಾಗಿದೆ.

ಜನರನ್ನು ಕನ್ಫ್ಯೂಸ್ ಮಾಡಿದ್ದು ಯಾರು
ಪೌರತ್ವ ತಿದ್ದುಪಡಿ ಮಸೂದೆಯಲ್ಲಿ ಜನರನ್ನು ಕನ್ಫ್ಯೂಸ್ ಮಾಡಿದ್ದು ಯಾರು ಎನ್ನುವ ಪ್ರಶ್ನೆಗೆ, ಜನಾಭಿಪ್ರಾಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದ ಫಲಿತಾಂಶ ಹೀಗಿದೆ:
ವಿರೋಧ ಪಕ್ಷಗಳು: ಶೇ. 29
ಮಾಧ್ಯಮಗಳು: ಶೇ.20
ಸರಕಾರ: ಶೇ. 37
ಯಾರೂ ಅಲ್ಲ: ಶೇ. 1
ಹೇಳಲು ಕಷ್ಟ: ಶೇ. 10
ಎಲ್ಲರೂ: ಶೇ.3

ಈಶಾನ್ಯ ರಾಜ್ಯಗಳು ಮತ್ತು ಮುಸ್ಲಿಂ ಸಮುದಾಯದ ತಲಾ ಐನೂರು ಜನ
ಡಿಸೆಂಬರ್ 17-19ರ ಅವಧಿಯಲ್ಲಿ, ಸುಮಾರು ಮೂರು ಸಾವಿರ ಜನರ ಅಭಿಪ್ರಾಯವನ್ನು ಕ್ರೋಢಿಕರಿಸಿ ಈ ಸರ್ವೇಯನ್ನು ಸಿದ್ದಪಡಿಸಲಾಗಿದೆ. ಅಸ್ಸಾಂ. ಈಶಾನ್ಯ ರಾಜ್ಯಗಳು ಮತ್ತು ಮುಸ್ಲಿಂ ಸಮುದಾಯದ ತಲಾ ಐನೂರು ಜನ ಅಭಿಪ್ರಾಯವನ್ನೂ ಈ ಸಮೀಕ್ಷೆಯಲ್ಲಿ ಸೇರಿಸಲಾಗಿದೆ (ಇದೇ ಅವಧಿಯಲ್ಲಿ ತೆಗೆದುಕೊಂಡ ಅಭಿಪ್ರಾಯ).

ಮಸೂದೆ, ಮುಸ್ಲಿಂ ಸಮುದಾಯದ ವಿರುದ್ದವೇ ಎನ್ನುವ ಪ್ರಶ್ನೆ
ಸಮೀಕ್ಷೆಯ ಪ್ರಕಾರ ಹೊರಬಿದ್ದ ಇನ್ನೊಂದು ಫಲಿತಾಂಶದ ಪ್ರಕಾರ, ಈ ತಿದ್ದುಪಡಿ ಮಸೂದೆ, ಮುಸ್ಲಿಂ ಸಮುದಾಯದ ವಿರುದ್ದವೇ ಎನ್ನುವ ಪ್ರಶ್ನೆಗೆ ಒಟ್ಟಾರೆಯಾಗಿ ಇಲ್ಲ ಎನ್ನುವ ಉತ್ತರ ಬಂದಿದೆ. ಈ ಸಮೀಕ್ಷೆಗೆ ಬಂದ ಉತ್ತರ ಹೀಗಿದೆ:
ಮುಸ್ಲಿಂ ವಿರುದ್ದವಾಗಿ ಅಲ್ಲ: ಶೇ. 56
ಮುಸ್ಲಿಮರ ವಿರುದ್ದ: ಶೇ. 32
ಮಾಹಿತಿಯಿಲ್ಲ: ಶೇ. 8
ಎಲ್ಲರ ವಿರುದ್ದ: ಶೇ. 4

ಮೋದಿ ಸರಕಾರ
ಮೋದಿ ಸರಕಾರದ ಈ ತಿದ್ದುಪಡಿ ಮಸೂದೆಯಕ್ಕೆ ನಿಮ್ಮ ಬೆಂಬಲವಿದೆಯೇ ಎನ್ನುವ ಪ್ರಶ್ನೆಗೆ ಬಂದ ಉತ್ತರ ಹೀಗಿದೆ:
ಸರಕಾರದ ನಿರ್ಧಾರಕ್ಕೆ ಬೆಂಬಲವಿದೆಯೇ, ಹೌದು: ಶೇ. 65
ಸರಕಾರದ ನಿರ್ಧಾರಕ್ಕೆ ಬೆಂಬಲವಿದೆಯೇ, ಹೌದು: ಶೇ. 28
ಸರಕಾರದ ನಿರ್ಧಾರಕ್ಕೆ ಬೆಂಬಲವಿದೆಯೇ, ಪ್ರತಿಕ್ರಿಯಿಸುವುದಿಲ್ಲ: ಶೇ. 7
-
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು












Click it and Unblock the Notifications