ನವದೆಹಲಿ, ಜನವರಿ 31: ಕೇಂದ್ರ ಸರ್ಕಾರದ 2022ನೇ ವರ್ಷದ ಬಜೆಟ್ನ ಅಧಿವೇಶನವು ಜನವರಿ 31ರಿಂದ ಆರಂಭವಾಗಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರವು ಈ ಬಜೆಟ್ ಬಹಳ ದೊಡ್ಡ ಸವಾಲು ಕೂಡಾ ಹೌದು. ಮೋದಿ ಸರ್ಕಾರಕ್ಕೆ, ಉದ್ಯೋಗಗಳನ್ನು ಸೃಷ್ಟಿಸುವುದು ಈ ಸಮಯದ ದೊಡ್ಡ ಸವಾಲಾಗಿದೆ. ಈ ಬಜೆಟ್ನಲ್ಲಿ ಉದ್ಯೋಗ ಸೃಷ್ಟಿ ಪ್ರಮುಖ ಆದ್ಯತೆ ಆಗಿರುವ ಸಾಧ್ಯತೆ ಇದೆ. ಕೊರೊನಾ ಸೋಂಕು ಹೆಚ್ಚಳ ಆಗುತ್ತಿರುವುದು ಆರ್ಥಿಕತೆಗೆ ಮತ್ತೆ ಹೊಡೆತ ನೀಡಿದೆ.
ಈಗ, ಭಾರತದ ಮಧ್ಯಮ ವರ್ಗವು ಸೀತಾರಾಮನ್ರ ನಾಲ್ಕನೇ ಬಜೆಟ್ನಲ್ಲಿ ಉದ್ಯೋಗಗಳು, ಆರೋಗ್ಯ ರಕ್ಷಣೆ ಮತ್ತು ಶಿಕ್ಷಣದ ಮೇಲಿನ ರಿಯಾಯಿತಿಗಳು, ತೆರಿಗೆ ವಿನಾಯಿತಿಗಳು ಮತ್ತು ಗಗನಕ್ಕೇರುತ್ತಿರುವ ಹಣದುಬ್ಬರವನ್ನು ನಿಭಾಯಿಸುವ ಕ್ರಮಗಳ ಭರವಸೆಯನ್ನು ಹೊಂದಿದ್ದಾರೆ. ಇನ್ನು ಜನವರಿ 31 ಮತ್ತು ಫೆಬ್ರವರಿ 1 ರಂದು 'ಶೂನ್ಯ ವೇಳೆ' ಇರುವುದಿಲ್ಲ. ಓಮಿಕ್ರಾನ್ ಆತಂಕದ ಹಿನ್ನೆಲೆ ಈ ಬಾರಿ ಹಲ್ವಾ ಸಮಾರಂಭವನ್ನು ಕೂಡಾ ನಡೆಸಿಲ್ಲ.
ಅಧಿವೇಶನವು ಎರಡು ಭಾಗಗಳಲ್ಲಿ ನಡೆಯಲಿದೆ ಅಧಿವೇಶನದ ಮೊದಲ ಭಾಗವು ಫೆಬ್ರವರಿ 11, 2022 ರಂದು ಮುಕ್ತಾಯಗೊಳ್ಳುತ್ತದೆ. ಒಂದು ತಿಂಗಳ ಅವಧಿಯ ವಿರಾಮದ ನಂತರ, ಅಧಿವೇಶನದ ಭಾಗ ಎರಡು ಮಾರ್ಚ್ 14, 2022 ರಂದು ಪ್ರಾರಂಭವಾಗುತ್ತದೆ ಮತ್ತು ಏಪ್ರಿಲ್ 8, 2022 ರಂದು ಮುಕ್ತಾಯಗೊಳ್ಳುತ್ತದೆ.
ಸೋಮವಾರ ರಾಷ್ಟ್ರಪತಿ ಕೋವಿಂದ್ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಿದ ಬಳಿಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆ ಮಂಡಿಸಲಿದ್ದಾರೆ. ಆರ್ಥಿಕ ಸಮೀಕ್ಷೆಯನ್ನು ಪ್ರತಿ ಬಾರಿಯು ಕೇಂದ್ರ ಬಜೆಟ್ ಮಂಡನೆಯ ಒಂದು ದಿನಕ್ಕೂ ಮುನ್ನ ಮಂಡನೆ ಮಾಡಲಾಗುತ್ತದೆ. ಇದು ಕಳೆದ ಒಂದು ವರ್ಷದಲ್ಲಿ ಆರ್ಥಿಕತೆಯ ಸ್ಥಿತಿ, ಆರ್ಥಿಕತೆಗೆ ಇರುವ ಪ್ರಮುಖ ಸವಾಲುಗಳು ಮತ್ತು ಅವುಗಳ ಪರಿಹಾರದ ಬಗ್ಗೆ ವಿವರಣೆಯನ್ನು ಹೊಂದಿರುತ್ತದೆ.
Jan 31, 2022, 5:11 pm IST
2022-23ರಲ್ಲಿ ವ್ಯಾಕ್ಸಿನೇಷನ್ಗಳು, ಪೂರೈಕೆ-ಬದಿಯ ಸುಧಾರಣೆಗಳಿಂದ ಲಾಭ, ನಿಯಂತ್ರಣ ಸರಾಗಗೊಳಿಸುವಿಕೆ, ದೃಢವಾದ ರಫ್ತು ಬೆಳವಣಿಗೆ ಮತ್ತು ಬಂಡವಾಳದ ವೆಚ್ಚ ಹೆಚ್ಚಿಸಲು ಹಣಕಾಸಿನ ಸ್ಥಳಾವಕಾಶದ ಲಭ್ಯತೆಯಲ್ಲಿ ಬೆಳವಣಿಗೆಯು ವ್ಯಾಪಕವಾಗಿದೆ: ಪ್ರಧಾನ ಆರ್ಥಿಕ ಸಲಹೆಗಾರ ಸಂಜೀವ್ ಸನ್ಯಾಲ್
Jan 31, 2022, 4:24 pm IST
ಪ್ರವಾಸೋದ್ಯಮ, ಪ್ರಯಾಣ ಮತ್ತು ಹೋಟೆಲ್ಗಳನ್ನು ಒಳಗೊಂಡಿರುವ ಸೇವಾ ವಲಯದ ವಿಭಾಗವು ಸಾಂಕ್ರಾಮಿಕ ರೋಗದ ಮೊದಲಿದ್ದ ಸ್ಥಳಕ್ಕಿಂತ ಇನ್ನೂ ಶೇ.8.5%ರಷ್ಟು ಇಳಿಕೆಯಾಗಿದೆ: ಪ್ರಧಾನ ಆರ್ಥಿಕ ಸಲಹೆಗಾರ ಸಂಜೀವ್ ಸನ್ಯಾಲ್
Jan 31, 2022, 4:23 pm IST
ಆರ್ಥಿಕ ಸಮೀಕ್ಷೆ 2021-2022 ಅನ್ನು ಪ್ರಧಾನ ಆರ್ಥಿಕ ಸಲಹೆಗಾರ ಸಂಜೀವ್ ಸನ್ಯಾಲ್ ಮತ್ತು ಅವರ ಸಲಹೆಗಾರರ ತಂಡ ಸಂಗ್ರಹಿಸಿದೆ: ಸಿಇಎ ಡಾ ವಿ ಅನಂತ ನಾಗೇಶ್ವರನ್.
Jan 31, 2022, 4:22 pm IST
ಹಿಂದಿನ ವರ್ಷದಲ್ಲಿ ಶೇ.7.3%ರಷ್ಟು ಸಂಕೋಚನದ ನಂತರ ಆರ್ಥಿಕತೆಯು ಈ ವರ್ಷ ಶೇ.9.2%ರಷ್ಟು ಬೆಳವಣಿಗೆಯಾಗಿದೆ ಎಂದು ಅಂದಾಜಿಸಲಾಗಿದೆ: ಪ್ರಧಾನ ಆರ್ಥಿಕ ಸಲಹೆಗಾರ ಸಂಜೀವ್ ಸನ್ಯಾಲ್
Jan 31, 2022, 4:21 pm IST
2021-22ರಲ್ಲಿ ಸಾಂಕ್ರಾಮಿಕ ಪೂರ್ವದ ಮಟ್ಟಕ್ಕೆ ಆರ್ಥಿಕ ಚಟುವಟಿಕೆಗಳಲ್ಲಿ ಪುನಶ್ಚೇತನ ಕಂಡುಬಂದಿದೆ. ಎರಡನೇ ಕೋವಿಡ್ ಅಲೆಯಲ್ಲಿ ಆರೋಗ್ಯದ ವೆಚ್ಚವು ಹೆಚ್ಚು ತೀವ್ರವಾಗಿದ್ದರೂ, ಅದರ ಆರ್ಥಿಕ ವೆಚ್ಚವು ತುಂಬಾ ಸೌಮ್ಯವಾಗಿತ್ತು: ಪ್ರಧಾನ ಆರ್ಥಿಕ ಸಲಹೆಗಾರ ಸಂಜೀವ್ ಸನ್ಯಾಲ್
Jan 31, 2022, 3:24 pm IST
ರಾಜ್ಯಸಭೆ ಕಲಾಪವನ್ನು ಫೆಬ್ರವರಿ 1, 2022ಕ್ಕೆ ಮುಂದೂಡಲಾಗಿದೆ. "ಫೆ.1ರಂದು ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಮಂಡನೆ ಮುಗಿದ ಒಂದು ಗಂಟೆಯ ನಂತರ ರಾಜ್ಯಸಭೆಯ ಅಧಿವೇಶನ ಪ್ರಾರಂಭವಾಗುತ್ತದೆ," ಎಂದು ರಾಜ್ಯಸಭಾ ಅಧ್ಯಕ್ಷ ಎಂ ವೆಂಕಯ್ಯ ನಾಯ್ಡು ಹೇಳಿದ್ದಾರೆ.
Jan 31, 2022, 2:56 pm IST
ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಷಣದಲ್ಲಿ 2014 ರಿಂದ ಸರ್ಕಾರದ ಸಾಧನೆಗಳನ್ನು ಮಾತ್ರ ಎತ್ತಿ ತೋರಿಸಿದ್ದಾರೆ. ಚೀನಾದ ಆಕ್ರಮಣ (ಎಲ್ಎಸಿಯಲ್ಲಿ), ಹಣದುಬ್ಬರ, ನಿರುದ್ಯೋಗ, ರೈಲ್ವೆ ನೇಮಕಾತಿಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಮೋದಿ ಭಾಷಣದಲ್ಲಿ ಗಣನೀಯ ವಿಚಾರ ಏನೂ ಇರಲಿಲ್ಲ. ಇದು ಸರ್ಕಾರದ ವೈಫಲ್ಯವನ್ನು ಪ್ರತಿಬಿಂಬಿಸುತ್ತದೆ: ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ
Jan 31, 2022, 2:28 pm IST
ಮಧ್ಯಾಹ್ನ 3.30ಕ್ಕೆ ಆರ್ಥಿಕ ಸಮೀಕ್ಷೆಯನ್ನು ಪ್ರಕಟಿಸಲಾಗುತ್ತದೆ.
Jan 31, 2022, 2:17 pm IST
2022ನೇ ಸಾಲಿನಲ್ಲಿ ದೇಶದಲ್ಲಿ ಕೃಷಿ ಕ್ಷೇತ್ರದ ಬೆಳವಣಿಗೆ ದರ ಶೇಕಡ 3.9 ಹಾಗೂ ಕೈಗಾರಿಕಾ ಕ್ಷೇತ್ರದ ಬೆಳವಣಿಗೆ ದರ ಶೇಕಡ 11.8 ಆಗಿರಲಿದೆ ಎಂದು ಆರ್ಥಿಕ ಸಮೀಕ್ಷೆಯು ಅಂದಾಜು ಮಾಡಿದೆ.
Jan 31, 2022, 1:40 pm IST
ಇಂದು ಸಂಜೆ 5 ಗಂಟೆಗೆ ಸಂಸತ್ತಿನ ಕಾಂಗ್ರೆಸ್ ಸಂಸದೀಯ ಪಕ್ಷದ (ಸಿಪಿಪಿ) ಕಚೇರಿಯಲ್ಲಿ ಕಾಂಗ್ರೆಸ್ ಲೋಕಸಭಾ ಸಂಸದರ ಸಭೆ ನಡೆಯಲಿದೆ.
Jan 31, 2022, 1:21 pm IST
ಆರ್ಥಿಕ ಸಮೀಕ್ಷೆಯು ಮುಂದಿನ ಹಣಕಾಸು ವರ್ಷ 2022-23 ಜಿಡಿಪಿ ಬೆಳವಣಿಗೆ ದರವನ್ನು ಶೇಕಡ 8-8.5ರಲ್ಲಿ ಇರಿಸಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕತೆಯು ಶೇ.9.2 ರಷ್ಟು ಬೆಳವಣಿಗೆಯಾಗಲಿದೆ ಎಂದು ಅಂದಾಜಿಸಲಾಗಿದೆ.
Jan 31, 2022, 1:19 pm IST
ಲೋಕಸಭೆಯನ್ನು ನಾಳೆ ಫೆಬ್ರವರಿ 1, 2022 ಕ್ಕೆ ಮುಂದೂಡಲಾಗಿದೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.
Jan 31, 2022, 12:07 pm IST
ನಾವು ಅಫ್ಘಾನಿಸ್ತಾನದಲ್ಲಿ ಅಲ್ಪಸಂಖ್ಯಾತರಿಗೆ ಸಹಾಯ ಮಾಡಿದ್ದೇವೆ: ರಾಮನಾಥ್ ಕೋವಿಂದ್
Jan 31, 2022, 12:07 pm IST
ಸರ್ಕಾರವು 21 ಗ್ರೀನ್ಫೀಲ್ಡ್ ವಿಮಾನ ನಿಲ್ದಾಣಗಳಿಗೆ ಅಧಿಕಾರ ನೀಡಿದೆ: ರಾಷ್ಟ್ರಪತಿ
Jan 31, 2022, 12:06 pm IST
ಭಾರತವು ಈಗ ವಿಶ್ವದ ಅಗ್ರ ಮೊಬೈಲ್ ಉತ್ಪಾದನಾ ಕೇಂದ್ರಗಳಲ್ಲಿ ಒಂದಾಗಿದೆ: ರಾಷ್ಟ್ರಪತಿ
Jan 31, 2022, 12:00 pm IST
ತ್ರಿವಳಿ ತಲಾಖ್ ಅನ್ನು ಅಪರಾಧ ಎಂದು ಪರಿಗಣಿಸುವ ಮೂಲಕ ಸರ್ಕಾರವು ಮುಸ್ಲಿಂ ಮಹಿಳೆಯರ ಜೊತೆ ನಿಂತಿದೆ. ಮುಸ್ಲಿಮ್ ಮಹಿಳೆಯರು ಮೆಹ್ರಾಮ್ (ಪುರುಷರು) ಜೊತೆ ಹಜ್ಗೆ ತೆರಳುವ ನಿಷೇಧವನ್ನು ಸರ್ಕಾರ ತೆಗೆದುಹಾಕಿದೆ: ರಾಷ್ಟ್ರಪತಿ ರಾಮನಾಥ್ ಕೋವಿಂದ್
Jan 31, 2022, 11:49 am IST
ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತದ ಯುವ ಶಕ್ತಿಯ ಸಾಮರ್ಥ್ಯವನ್ನು ನಾವು ನೋಡಿದ್ದೇವೆ. ಭಾರತ ಅತ್ಯುತ್ತಮ ಪ್ರದರ್ಶನ ನೀಡಿ 7 ಪದಕಗಳನ್ನು ಗೆದ್ದಿದೆ. ಟೋಕಿಯೋ ಪ್ಯಾರಾಲಿಂಪಿಕ್ಸ್ನಲ್ಲೂ ಭಾರತ 19 ಪದಕ ಗೆದ್ದು ದಾಖಲೆ ನಿರ್ಮಿಸಿದೆ: ರಾಷ್ಟ್ರಪತಿ
Jan 31, 2022, 11:47 am IST
ನಮ್ಮ ರೈತರು ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವನ್ನು ಹೊಂದಿದ್ದಾರೆ. ಸರ್ಕಾರ ಎಂದಿಗೂ ಸಣ್ಣ ಪ್ರಮಾಣದ ರೈತರಿಗೆ ಅಧಿಕ ಆದ್ಯತೆ ನೀಡಿದೆ. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಮೂಲಕ 11 ಕೋಟಿ ರೈತರ ಕುಟುಂಬಗಳು ಪ್ರಯೋಜನ ಪಡೆದಿವೆ: ರಾಷ್ಟ್ರಪತಿ ರಾಮನಾಥ್ ಕೋವಿಂದ್
Jan 31, 2022, 11:44 am IST
ಎಲ್ಲಾ 33 ಸೈನಿಕ ಶಾಲೆಗಳು ಈಗ ಹೆಣ್ಣುಮಕ್ಕಳಿಗೂ ಪ್ರವೇಶ ನೀಡಲು ಪ್ರಾರಂಭಿಸಿರುವುದು ಸಂತೋಷದ ವಿಷಯ. ಜೂನ್ 2022 ರಲ್ಲಿ ಮಹಿಳಾ ಕೆಡೆಟ್ಗಳ ಮೊದಲ ಬ್ಯಾಚ್ ಎನ್ಡಿಎಗೆ ಬರಲಿದೆ: ರಾಷ್ಟ್ರಪತಿ ಕೋವಿಂದ್
Jan 31, 2022, 11:43 am IST
ಗಂಡು-ಹೆಣ್ಣು ಮಕ್ಕಳಿಗೆ ಸಮಾನ ಸ್ಥಾನಮಾನ ಕಲ್ಪಿಸಿ ಸರ್ಕಾರವು ಹೆಣ್ಣು ಮಕ್ಕಳಿಗೆ ವಿವಾಹವಾಗಲು ಕನಿಷ್ಠ 18 ವರ್ಷವನ್ನು ಹೆಚ್ಚಿಸಿ 21 ವರ್ಷಕ್ಕೆ ತರುವ ಮಸೂದೆಯನ್ನು ಮಂಡಿಸಿದೆ: ರಾಷ್ಟ್ರಪತಿ ರಾಮನಾಥ್ ಕೋವಿಂದ್
Jan 31, 2022, 11:40 am IST
ರಾಷ್ಟ್ರೀಯ ಶಿಕ್ಷಣ ನೀತಿಯ ಭಾಗವಾಗಿ ಸ್ಥಳೀಯ ಭಾಷೆಗಳನ್ನು ಉತ್ತೇಜಿಸಲಾಗುತ್ತಿದೆ. ಪ್ರಮುಖ ಪರೀಕ್ಷೆಗಳಲ್ಲೂ ಭಾರತೀಯ ಭಾಷೆಗಳಲ್ಲಿ ನಡೆಸಲು ಒತ್ತು ನೀಡಲಾಗುತ್ತಿದೆ. ಈ ವರ್ಷ 10 ರಾಜ್ಯಗಳಲ್ಲಿ 19 ಎಂಜಿನಿಯರಿಂಗ್ ಕಾಲೇಜುಗಳು 6 ಭಾರತೀಯ ಭಾಷೆಗಳಲ್ಲಿ ಇರಲಿದೆ: ರಾಷ್ಟ್ರಪತಿ ರಾಮನಾಥ್ ಕೋವಿಂದ್
Jan 31, 2022, 11:38 am IST
ಮಹಿಳಾ ಸಬಲೀಕರಣವು ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಉಜ್ವಲ ಯೋಜನೆಯ ಯಶಸ್ಸಿಗೆ ನಾವೇ ಸಾಕ್ಷಿಯಾಗಿದ್ದೇವೆ. ಮುದ್ರಾ ಯೋಜನೆಯ ಮೂಲಕ, ಮಹಿಳೆಯರ ಉದ್ಯಮಶೀಲತೆ ಮತ್ತು ಕೌಶಲ್ಯಕ್ಕೆ ಉತ್ತೇಜನ ನೀಡಲಾಗಿದೆ. 'ಬೇಟಿ ಬಚಾವೋ, ಬೇಟಿ ಪಢಾವೋ' ಮೂಲಕ ಮಹಿಳೆಯರಿಗೆ ಉತ್ತೇಜನ ನೀಡಲಾಗಿದೆ: ರಾಷ್ಟ್ರಪತಿ
Jan 31, 2022, 11:34 am IST
ಮಹಿಳೆಯರು ಈಗ ಎನ್ಡಿಎಗೆ ಪ್ರವೇಶ ಪಡೆಯುತ್ತಿದ್ದಾರೆ. ಮಹಿಳಾ ಸಬಲೀಕರಣವು ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ: ರಾಷ್ಟ್ರಪತಿ
Jan 31, 2022, 11:33 am IST
ಬೀದಿಬದಿ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಪ್ರಧಾನಮಂತ್ರಿ ಸ್ವಾನಿಧಿ ಯೋಜನೆಯನ್ನೂ ನಡೆಸಲಾಗುತ್ತಿದೆ. ಇಲ್ಲಿಯವರೆಗೆ 28 ಲಕ್ಷ ಬೀದಿಬದಿ ವ್ಯಾಪಾರಿಗಳು 2900 ಕೋಟಿ ರೂ.ಗಳನ್ನು ಪಡೆದಿದ್ದಾರೆ. ಸರ್ಕಾರ ಈಗ ಈ ಮಾರಾಟಗಾರರನ್ನು ಆನ್ಲೈನ್ ಕಂಪನಿಗಳೊಂದಿಗೆ ಸಂಪರ್ಕಿಸುತ್ತಿದೆ: ರಾಷ್ಟ್ರಪತಿ ರಾಮನಾಥ್ ಕೋವಿಂದ್
Jan 31, 2022, 11:31 am IST
ನಮ್ಮ ಸರ್ಕಾರ ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ 44 ಕೋಟಿ ಬಡ ನಾಗರಿಕರನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಪರಿಚಯಿಸಿದೆ. ಈ ಮೂಲಕ ಕೋಟಿಗಟ್ಟಲೆ ಫಲಾನುಭವಿಗಳು ನೇರ ನಗದು ವರ್ಗಾವಣೆಯ ಪ್ರಯೋಜನವನ್ನು ಕಲ್ಪಿಸಿದೆ: ರಾಮನಾಥ್ ಕೋವಿಂದ್
Jan 31, 2022, 11:28 am IST
ವಿಶ್ವದ ಅತೀ ದೊಡ್ಡ ಪಡಿತರ ವಿತರಣಾ ಕಾರ್ಯಕ್ರಮ: ರಾಷ್ಟ್ರಪತಿ
ಯಾರೂ ಹಸಿವಿನಿಂದ ಇರಬಾರದು ಎಂಬ ನಿಟ್ಟಿನಲ್ಲಿ ಸರ್ಕಾರವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ಭಾಗವಾಗಿ ಪ್ರತಿ ತಿಂಗಳು ಬಡವರಿಗೆ ಉಚಿತ ಪಡಿತರವನ್ನು ವಿತರಿಸುತ್ತಿದೆ. ಇಂದು ಭಾರತವು ವಿಶ್ವದ ಅತಿದೊಡ್ಡ ಆಹಾರ ವಿತರಣಾ ಕಾರ್ಯಕ್ರಮವಾಗಿದೆ. ಪಡಿತರ ವಿತರಣೆಯನ್ನು ಮಾರ್ಚ್ 2022 ರವರೆಗೆ ವಿಸ್ತರಿಸಲಾಗಿದೆ: ರಾಷ್ಟ್ರಪತಿ ರಾಮನಾಥ್ ಕೋವಿಂದ್
READ MORE
7:44 AM, 31 Jan
ಇಂದಿನಿಂದ ಕೇಂದ್ರ ಬಜೆಟ್ ಅಧಿವೇಶನ ಪ್ರಾರಂಭವಾಗಲಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡುವ ಮೂಲಕ ಬಜೆಟ್ ಅಧಿವೇಶನ ಪ್ರಾರಂಭವಾಗಲಿದೆ.
7:48 AM, 31 Jan
ನಿರ್ಮಲಾ ಸೀತಾರಾಮನ್ ನಾಳೆ (ಫೆಬ್ರವರಿ 1, 2022 ರಂದು) ಬೆಳಿಗ್ಗೆ 11 ಗಂಟೆಗೆ ಬಜೆಟ್ ಮಂಡನೆ ಮಾಡಲಿದ್ದಾರೆ.
7:52 AM, 31 Jan
ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆ ಮಂಡಿಸಲಿದ್ದಾರೆ.
7:57 AM, 31 Jan
ಆರ್ಥಿಕ ಸಮೀಕ್ಷೆಯನ್ನು ಸಾಂಪ್ರದಾಯಿಕವಾಗಿ ಮುಖ್ಯ ಆರ್ಥಿಕ ಸಲಹೆಗಾರರು ರಚನೆ ಮಾಡುತ್ತಾರೆ. ಆದರೆ ಈ ವರ್ಷ ಪ್ರಧಾನ ಆರ್ಥಿಕ ಸಲಹೆಗಾರರು ಮತ್ತು ಇತರ ಹಿರಿಯ ಅಧಿಕಾರಿಗಳು ಈ ವರದಿ ಸಿದ್ಧಪಡಿಸಿದ್ದಾರೆ.
8:01 AM, 31 Jan
ಡಿಸೆಂಬರ್ನಲ್ಲಿ ಕೊನೆಗೊಂಡ ಕೃಷ್ಣಮೂರ್ತಿ ಸುಬ್ರಮಣಿಯನ್ ಅವಧಿಯ ನಂತರ ಮುಖ್ಯ ಆರ್ಥಿಕ ಸಲಹೆಗಾರ ಹುದ್ದೆಯು ಖಾಲಿಯಿರುವುದರಿಂದ ಈ ವರ್ಷದ ಆರ್ಥಿಕ ಸಮೀಕ್ಷೆಯನ್ನು ಪ್ರಧಾನ ಆರ್ಥಿಕ ಸಲಹೆಗಾರರು ಮತ್ತು ಇತರ ಅಧಿಕಾರಿಗಳು ಸಿದ್ಧಪಡಿಸಿದ್ದಾರೆ.
8:08 AM, 31 Jan
2021-22 ರ ಆರ್ಥಿಕ ಸಮೀಕ್ಷೆಯು ಮುಂದಿನ ಹಣಕಾಸು ವರ್ಷದಲ್ಲಿ ಸುಮಾರು ಶೇಕಡ 9ರಷ್ಟು ಬೆಳವಣಿಗೆಯನ್ನು ನಿರೀಕ್ಷಿಸುತ್ತದೆ.
8:17 AM, 31 Jan
ಈ ಬಾರಿಯ ಆರ್ಥಿಕ ಸಮೀಕ್ಷೆಯು ರಿಸರ್ವ್ ಬ್ಯಾಂಕ್ ಯೋಜಿತ 9.5 ಶೇಕಡ ಜಿಡಿಪಿ ಬೆಳವಣಿಗೆಗಿಂತ ಕಡಿಮೆ ಅಂದಾಜು ಮಾಡುವ ಸಾಧ್ಯತೆಯಿದೆ.
8:36 AM, 31 Jan
ಸೋಮವಾರದಿಂದ ಆರಂಭವಾಗಲಿರುವ ಬಜೆಟ್ ಅಧಿವೇಶನದ ಸಿದ್ಧತೆಗಳ ಕುರಿತು ಚರ್ಚಿಸಲು ರಾಜ್ಯಸಭಾ ಅಧ್ಯಕ್ಷ ಎಂ ವೆಂಕಯ್ಯ ನಾಯ್ಡು ಮತ್ತು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಭಾನುವಾರ ಭೇಟಿಯಾಗಿದ್ದಾರೆ.
8:48 AM, 31 Jan
ಎಲ್ಲಾ ಸಮೀಕ್ಷೆಗಳು ಒಂದು ಥೀಮ್ ಅನ್ನು ಹೊಂದಿರುತ್ತದೆ. ಕಳೆದ ವರ್ಷ, ಥೀಮ್ ಜೀವನ ಮತ್ತು ಜೀವನೋಪಾಯವನ್ನು ಉಳಿಸುವುದು ಆಗಿತ್ತು. 2017-18ರಲ್ಲಿ ಮಹಿಳಾ ಸಬಲೀಕರಣದ ವಿಷಯವಾಗಿ ಆರ್ಥಿಕ ಸಮೀಕ್ಷೆ ನಡೆಸಿತ್ತು.
9:10 AM, 31 Jan
ಸ್ಟಾಕ್ ಮಾರುಕಟ್ಟೆಯು ಬಜೆಟ್ನಲ್ಲಿ ನಿರೀಕ್ಷೆಯನ್ನು ಹೊಂದಿದೆ. ಆರ್ಥಿಕ ಸಮೀಕ್ಷೆಗೆ ಮುನ್ನವೇ ಸೆನ್ಸೆಕ್ಸ್ ಮಾರುಕಟ್ಟೆ ಪೂರ್ವ ಆರಂಭಿಕ ಹಂತದಲ್ಲಿ ಸುಮಾರು 600 ಪಾಯಿಂಟ್ಗಳ ಏರಿಕೆ ಕಂಡಿದೆ.
9:14 AM, 31 Jan
ಮುಖ್ಯ ಆರ್ಥಿಕ ಸಲಹೆಗಾರ ಡಿ. ವಿ.ಅನಂತ ನಾಗೇಶ್ವರನ್ ಇಂದು ಮಧ್ಯಾಹ್ನ 3:45ಕ್ಕೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
9:21 AM, 31 Jan
ನಿಫ್ಟಿ 202 ಪಾಯಿಂಟ್ಗಳ ಏರಿಕೆಯೊಂದಿಗೆ ವಹಿವಾಟು ನಡೆಸಿದರೆ, ಸೆನ್ಸೆಕ್ಸ್ 650 ಪಾಯಿಂಟ್ನಷ್ಟಿದೆ.
9:38 AM, 31 Jan
ಆರ್ಥಿಕ ಸಮೀಕ್ಷೆಯು 2022-23ರ ಜಿಡಿಪಿಯನ್ನು ಸುಮಾರು ಶೇಕಡ 9ಕ್ಕೆ ನಿಗದಿ ಮಾಡುವ ಸಾಧ್ಯತೆ ಇದೆ. ವಿಶ್ವಬ್ಯಾಂಕ್ ಪ್ರಕಾರ ಭಾರತವು ಸುಮಾರು ಶೇಕಡ 8.7ರಷ್ಟು ಜಿಡಿಪಿ ಬೆಳವಣಿಗೆ ಹೊಂದುವ ನಿರೀಕ್ಷೆಯಿದೆ.
10:03 AM, 31 Jan
ಆರ್ಥಿಕ ಸಮೀಕ್ಷೆಗೂ ಮುನ್ನ ಸೆನ್ಸೆಕ್ಸ್ 800 ಅಂಕಗಳಿಗಿಂತ ಹೆಚ್ಚು ಏರಿಕೆ ಕಂಡಿದೆ. ಆದರೆ ಫೆಬ್ರವರಿ 1 ರಂದು ಬಜೆಟ್ ಹೆಚ್ಚು ನಿರ್ಣಾಯಕ ಘಟ್ಟವಾಗಿದೆ.
10:19 AM, 31 Jan
ಆರ್ಥಿಕ ಸಮೀಕ್ಷೆ 2022 ಎಲ್ಲಾ ವಲಯಗಳ ವಿಶ್ಲೇಷಣೆಯೊಂದಿಗೆ ಕೇವಲ ಒಂದು ಸಂಪುಟವನ್ನು ಹೊಂದಿರುವ ಸಾಧ್ಯತೆಯಿದೆ. ವರದಿಗಳ ಪ್ರಕಾರ ಮುಖ್ಯ ಆರ್ಥಿಕ ಸಲಹೆಗಾರರ ನೀತಿ ಸಲಹೆಗಳನ್ನು ಒಳಗೊಂಡಿರುವ ಮೊದಲ ಸಂಪುಟವು ಈ ವರ್ಷ ಇರುವುದಿಲ್ಲ.
10:36 AM, 31 Jan
ಆರ್ಥಿಕ ಸಮೀಕ್ಷೆ ವರದಿ ಪ್ರಕಟಕ್ಕೂ ಮುನ್ನ ಸೆನ್ಸೆಕ್ಸ್ 826 ಅಂಕ ಅಧಿಕವಾಗಿದೆ. 58,000 ಅಂಕಗಳನ್ನು ದಾಟಿದೆ.
10:38 AM, 31 Jan
ಸಿಇಎ ಡಾ. ವಿ. ಅನಂತ ನಾಗೇಶ್ವರನ್ ಪತ್ರಿಕಾಗೋಷ್ಠಿ
ಆರ್ಥಿಕ ಸಮೀಕ್ಷೆ 2021-22: ಸಿಇಎ ಡಾ. ವಿ. ಅನಂತ ನಾಗೇಶ್ವರನ್ ಇಂದು ಮಧ್ಯಾಹ್ನ 3:45 ಗಂಟೆಗೆ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.
CEA Dr V. Anantha Nageswaran to address a press conference TODAY at 3:45 PM in New Delhi after presentation of #EconomicSurvey 2021-22 by FM in Parliament
ಬಜೆಟ್ಗೂ ಮುನ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಎಲ್ಲಾ ವಿಷಯಗಳ ಬಗ್ಗೆ ಮುಕ್ತ ಚರ್ಚೆಯನ್ನು ನಡೆಸುವ ನಿರೀಕ್ಷೆಯನ್ನು ಪ್ರಧಾನಿ ಹೊಂದಿರುವುದಾಗಿ ಹೇಳಿದ್ದಾರೆ. ಸರ್ಕಾರವು ಈ ಬಜೆಟ್ ಅನ್ನು ಫಲಪ್ರದಗೊಳಿಸಲು ಎಲ್ಲಾ ಪ್ರಯತ್ನವನ್ನು ಮಾಡುತ್ತದೆ ಎಂದು ಪ್ರಧಾನಿ ತಿಳಿಸಿದ್ದಾರೆ.
10:56 AM, 31 Jan
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಂಸತ್ತಿಗೆ ಆಗಮಿಸಿದ್ದಾರೆ. ಪ್ರಧಾನಿ, ಸ್ಪೀಕರ್ ಸ್ವಾಗತಿಸಿದ್ದಾರೆ.
11:02 AM, 31 Jan
ಸಂಸತ್ತಿನ ಜಂಟಿ ಅಧಿವೇಶನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ ಆರಂಭವಾಗಿದೆ.
11:05 AM, 31 Jan
ಕೊರೊನಾ ನಿರ್ವಹಣೆ ವಿಚಾರದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಎಲ್ಲಾ ಜನರಿಗೆ ಧನ್ಯವಾದ ತಿಳಿಸಿದ ರಾಷ್ಟ್ರಪತಿ
11:07 AM, 31 Jan
ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರಿಗೆ ನಾನು ತಲೆಬಾಗುತ್ತೇನೆ. ಸ್ವಾತಂತ್ರ್ಯದ 75 ವರ್ಷಗಳಲ್ಲಿ ಭಾರತದ ಅಭಿವೃದ್ಧಿ ಪಯಣಕ್ಕೆ ಕೊಡುಗೆ ನೀಡಿದ ವ್ಯಕ್ತಿಗಳನ್ನು ನಾನು ಗೌರವದಿಂದ ಸ್ಮರಿಸುತ್ತೇನೆ: ರಾಷ್ಟ್ರಪತಿ ರಾಮನಾಥ್ ಕೋವಿಂದ್
11:08 AM, 31 Jan
ಈ ವರ್ಷದಿಂದ ಸರ್ಕಾರವು ನೇತಾಜಿಯವರ ಜನ್ಮದಿನವಾದ ಜನವರಿ 23 ರಿಂದ ಗಣರಾಜ್ಯೋತ್ಸವವನ್ನು ಪ್ರಾರಂಭಿಸಿದೆ. ದೇಶದ ಸುರಕ್ಷಿತ ಭವಿಷ್ಯಕ್ಕಾಗಿ ನಾವು ಈ ಹಿಂದಿನ ಘಟನೆಗಳಿಂದ ಕಲಿಯುವುದು ಬಹಳ ಮುಖ್ಯ ಎಂದು ನನ್ನ ಸರ್ಕಾರ ನಂಬುತ್ತದೆ: ರಾಷ್ಟ್ರಪತಿ ರಾಮನಾಥ್ ಕೋವಿಂದ್
11:09 AM, 31 Jan
ಶೇಕಡ 90ಕ್ಕಿಂತ ಹೆಚ್ಚು ಹಿರಿಯ ನಾಗರಿಕರು ಕನಿಷ್ಠ ಒಂದು ಡೋಸ್ ಕೋವಿಡ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ ಎಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಹೇಳಿದ್ದಾರೆ.
11:12 AM, 31 Jan
ಕೋವಿಡ್ನಿಂದಾಗಿ ಅನೇಕ ಜೀವಗಳು ಬಲಿಯಾದವು. ಅಂತಹ ಸಂದರ್ಭಗಳಲ್ಲಿಯೂ ನಮ್ಮ ಕೇಂದ್ರ, ರಾಜ್ಯಗಳು, ವೈದ್ಯರು, ದಾದಿಯರು, ವಿಜ್ಞಾನಿಗಳು, ನಮ್ಮ ಆರೋಗ್ಯ ಕಾರ್ಯಕರ್ತರು ತಂಡವಾಗಿ ಕೆಲಸ ಮಾಡಿದರು. ನಮ್ಮ ಆರೋಗ್ಯ ಮತ್ತು ಮುಂಚೂಣಿಯ ಕಾರ್ಯಕರ್ತರಿಗೆ ನಾನು ಕೃತಜ್ಞನಾಗಿದ್ದೇನೆ: ರಾಷ್ಟ್ರಪತಿ ರಾಮನಾಥ್ ಕೋವಿಂದ್
11:18 AM, 31 Jan
ಆಯುಷ್ಮಾನ್ ಭಾರತ್ ಕಾರ್ಡ್ ಬಡವರಿಗೆ ಅನುಕೂಲವಾಗಿದೆ. ಜನೌಷದಿ ಕೇಂದ್ರದಲ್ಲಿ ಕಡಿಮೆ ಬೆಲೆಯಲ್ಲಿ ಔಷಧಿ ಲಭ್ಯತೆಯೂ ಉತ್ತಮ ಕ್ರಮ: ರಾಷ್ಟ್ರಪತಿ ರಾಮನಾಥ್ ಕೋವಿಂದ್
11:20 AM, 31 Jan
ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾರತದ ಸಾಮರ್ಥ್ಯವು ಲಸಿಕೆ ಕಾರ್ಯಕ್ರಮದ ಮೂಲಕ ಸ್ಪಷ್ಟವಾಗಿದೆ. ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ, ನಾವು 150 ಕೋಟಿ ಡೋಸ್ಗಳ ಲಸಿಕೆಯನ್ನು ನೀಡಿದ ದಾಖಲೆಯನ್ನು ಮಾಡಿದ್ದೇವೆ. ಕೋವಿಡ್ ಲಸಿಕಾಕರಣ ವಿಚಾರದಲ್ಲಿ ನಾವು ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದ್ದೇವೆ: ರಾಷ್ಟ್ರಪತಿ
11:24 AM, 31 Jan
ಡಾ.ಬಿ.ಆರ್.ಅಂಬೇಡ್ಕರ್ ಆದರ್ಶ ಸಮಾಜವು ಸ್ವಾತಂತ್ರ್ಯ, ಸಮಾನತೆ ಮತ್ತು ಸೌಹಾರ್ದತೆಯನ್ನು ಆಧರಿಸಿದ ಸಮಾಜವಾಗಿದೆ ಎಂದು ಹೇಳಿದ್ದರು. ಪ್ರಜಾಪ್ರಭುತ್ವವು ಕೇವಲ ಸರ್ಕಾರದ ಒಂದು ರೂಪವಲ್ಲ, ಪ್ರಜಾಪ್ರಭುತ್ವದ ಮೂಲವು ಜನರನ್ನು ಗೌರವಿಸುವುದು ಆಗಿದೆ. ನನ್ನ ಸರ್ಕಾರ ಬಾಬಾಸಾಹೇಬರ ಆದರ್ಶಗಳನ್ನು ತನ್ನ ಮಾರ್ಗದರ್ಶಿ ತತ್ವವೆಂದು ಪರಿಗಣಿಸುತ್ತದೆ: ರಾಷ್ಟ್ರಪತಿ ಕೋವಿಂದ್
11:28 AM, 31 Jan
ವಿಶ್ವದ ಅತೀ ದೊಡ್ಡ ಪಡಿತರ ವಿತರಣಾ ಕಾರ್ಯಕ್ರಮ: ರಾಷ್ಟ್ರಪತಿ
ಯಾರೂ ಹಸಿವಿನಿಂದ ಇರಬಾರದು ಎಂಬ ನಿಟ್ಟಿನಲ್ಲಿ ಸರ್ಕಾರವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ಭಾಗವಾಗಿ ಪ್ರತಿ ತಿಂಗಳು ಬಡವರಿಗೆ ಉಚಿತ ಪಡಿತರವನ್ನು ವಿತರಿಸುತ್ತಿದೆ. ಇಂದು ಭಾರತವು ವಿಶ್ವದ ಅತಿದೊಡ್ಡ ಆಹಾರ ವಿತರಣಾ ಕಾರ್ಯಕ್ರಮವಾಗಿದೆ. ಪಡಿತರ ವಿತರಣೆಯನ್ನು ಮಾರ್ಚ್ 2022 ರವರೆಗೆ ವಿಸ್ತರಿಸಲಾಗಿದೆ: ರಾಷ್ಟ್ರಪತಿ ರಾಮನಾಥ್ ಕೋವಿಂದ್
11:31 AM, 31 Jan
ನಮ್ಮ ಸರ್ಕಾರ ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ 44 ಕೋಟಿ ಬಡ ನಾಗರಿಕರನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಪರಿಚಯಿಸಿದೆ. ಈ ಮೂಲಕ ಕೋಟಿಗಟ್ಟಲೆ ಫಲಾನುಭವಿಗಳು ನೇರ ನಗದು ವರ್ಗಾವಣೆಯ ಪ್ರಯೋಜನವನ್ನು ಕಲ್ಪಿಸಿದೆ: ರಾಮನಾಥ್ ಕೋವಿಂದ್
Economic Survey of India 2022 Live Updates in Kannada: Finance Minister Nirmala Sitharaman has tabled the Economic Survey 2020-21 in the Lok Sabha. Check Live Updates and Highlights in Kannada.