ಸುಕ್ಮಾ ಹತ್ಯಾಕಾಂಡದ ಹಿಂದೆ ಅನುಮಾನ ಹುಟ್ಟಿಸುವ ನಿಗೂಢ ನಡೆಗಳು!
ಸುಕ್ಮಾ(ಛತ್ತೀಸ್ ಗಢ), ಜುಲೈ 5: ಛತ್ತೀಸ್ ಗಢದ ಸುಕ್ಮಾದಲ್ಲಿ ಏಪ್ರಿಲ್ 24, 2017 ರಲ್ಲಿ ನಡೆದ 25 ಸಿಆರ್ ಪಿಎಫ್ ಯೋಧರ ಹತ್ಯಾಕಾಂಡ ಭಾರತೀಯ ಇತಿಹಾಸದಲ್ಲೇ ಕರಾಳ ದಿನ. ನಕ್ಸಲರು ಸುಕ್ಮಾದ ಬುರ್ಕಾಪಾಲ್ ನ ಸೇನಾ ಶಿಬಿರದಲ್ಲಿ ವಿಶ್ರಾಂತಿಯಲ್ಲಿದ್ದ ಸಿಆರ್ ಪಿಎಫ್ ಯೋಧರ ಮೇಲೆ ದಾಳಿ ನಡೆಸಿ 25 ಯೋಧರನ್ನು ಹತ್ಯೆಗೈದಿದ್ದರು. ಈ ಕುರಿತು ತನಿಖೆ ನಡೆಸುತ್ತಿದ್ದ ತನಿಖಾ ದಳವೊಂದಕ್ಕೆ ನಿಗೂಢ ವಿಷಯವೊಂದು ಗಮನಕ್ಕೆ ಬಂದಿದೆ.
ಈ ದಾಳಿ ನಡೆಯುವ ಒಂದು ಗಂಟೆ ಮೊದಲು ಈ ಭಾಗದ ಬಿಎಸ್ ಎನ್ ಎಲ್ ಟವರ್ ಗಳು ಸಂಪೂರ್ಣ ಸ್ಥಗಿತಗೊಂಡಿದ್ದವು ಎಂಬ ಅಚ್ಚರಿಯ ಅಂಶವೊಂದು ಹೊರಬಿದ್ದಿದ್ದು, ಟವರ್ ಸ್ಥಗಿತವಾಗಿದ್ದಕ್ಕೂ, ಈ ದಾಳಿಯಲ್ಲಿ ಪಾಲ್ಗೊಂಡವರಿಗೂ ಸಂಬಂಧವಿದೆ ಎಂಬ ಅನುಮಾನ ದಟ್ಟವಾಗಿದೆ. ದಾಳಿಗೂ ಮೊದಲು ಟವರ್ ಸ್ಥಗಿತವಾಗುತ್ತದೆ ಎಂದಾದರೆ, ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುವ ಯಾರದೋ ಬೆಂಬಲ ನಕ್ಸಲರಿಗಿತ್ತೇ ಎಂಬ ಸಂಶಯವೂ ಎದ್ದಿದೆ.

ಅಷ್ಟೇ ಅಲ್ಲ, ದಾಳಿ ನಡೆಯುವ ಕೆಲವು ಗಂಟೆ ಮೊದಲು ಈ ಊರಿಗೆ ಅಪರಿಚಿತಳಾದ ಮಹಿಳೆಯೊಬ್ಬರು ಕೆಂಪು ಸೀರೆ ಉಟ್ಟು ಸೇನೆಯ ಶಿಬಿರದ ಬಳಿ ಓಡಾಡುತ್ತಿದ್ದುದನ್ನೂ ಕಂಡವರಿದ್ದಾರೆ. ಇದೂ ಸಹ ದಾಳಿಯ ಸೂಚನೆಯೇ ಆಗಿತ್ತೆಂದು, ದಾಳಿಯ ನಂತರ ಅನುಮಾನಿಸಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಏನೇ ಆದರೂ, 25 ಸೈನಿಕರ ಮಾರಣ ಹೋಮವಂತೂ ಭಾರತಕ್ಕೆ ತುಂಬಲಾರದ ನಷ್ಟವೆನ್ನುವುದು ಸುಳ್ಳಲ್ಲ.
-
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ












Click it and Unblock the Notifications