ಪಠಾಣ್ ಕೋಟ್ನಲ್ಲಿ ಉಗ್ರನನ್ನು ಕೊಂದ ಬಿಎಸ್ಎಫ್ ಯೋಧರು
ಬೆಂಗಳೂರು, ಜನವರಿ 21 : ಪಾಕಿಸ್ತಾನದಿಂದ ಗಡಿ ನುಸುಳಿ ಪಠಾಣ್ ಕೋಟ್ ಪ್ರವೇಶಿಸಲು ಯತ್ನಿಸಿದ ಉಗ್ರನನ್ನು ಯೋಧರು ಹತ್ಯೆ ಮಾಡಿದ್ದಾರೆ. ಒಟ್ಟು ಮೂವರು ಉಗ್ರರು ಒಳನುಸುಳಲು ಯತ್ನಿಸಿದ್ದು, ಗುಂಡಿನ ಶಬ್ದ ಕೇಳಿದ ಬಳಿಕ ಇಬ್ಬರು ಪರಾರಿಯಾಗಿದ್ದಾರೆ.
ಗುರುವಾರ
ಮುಂಜಾನೆ
ತಾಷ್
ಚೆಕ್ಪೋಸ್ಟ್
ಬಳಿ
ಈ
ಘಟನೆ
ನಡೆದಿದೆ.
ಮುಂಜು
ಮುಸುಕಿದ
ವಾತಾವರಣವಿದ್ದ
ವೇಳೆ
ಮೂವರು
ಗಡಿ
ನುಸುಳಲು
ಯತ್ನಿಸಿದ್ದರು.
ಇದನ್ನು
ಗಮನಿಸಿದ
ಬಿಎಸ್ಎಫ್
ಯೋಧರು
ಗುಂಡು
ಹಾರಿಸಿದ್ದು,
ಒಬ್ಬ
ಉಗ್ರ
ಸಾವನ್ನಪ್ಪಿದ್ದಾನೆ.
[ಪಠಾಣ್
ಕೋಟ್
ಉಗ್ರರ
ದಾಳಿ
:
ಟೈಮ್
ಲೈನ್]
ಗುಂಡು ಹಾರಿಸಿದ ತಕ್ಷಣ ಇಬ್ಬರು ಪಾಕಿಸ್ತಾನದ ಕಡೆ ಓಡಿ ಹೋಗಿದ್ದಾರೆ. ಮೂವರು ಅಕ್ರಮವಾಗಿ ಗಡಿ ನುಸುಳಲು ಯತ್ನಿಸುತ್ತಿದ್ದರು ಎಂದು ಬಿಎಸ್ಎಫ್ ಪಡೆಗಳು ಹೇಳಿವೆ. ಪಠಾಣ್ ಕೋಟ್ ವಾಯುನೆಲೆ ಮೇಲಿನ ದಾಳಿಯ ಬಳಿಕ ಭಾರತ-ಪಾಕ್ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಆದರೆ, ದಟ್ಟವಾದ ಮಂಜು ಕವಿದಿರುವಾಗ ಉಗ್ರರು ಒಳನುಗ್ಗಲು ಯತ್ನಿಸಿದ್ದಾರೆ. [ಪಾಕ್ ತನಿಖಾ ತಂಡ ಪಠಾಣ್ ಕೋಟ್ ಪ್ರವೇಶಿಸುವಂತಿಲ್ಲ]
ಪಠಾಣ್ ಕೋಟ್ ದಾಳಿಯ ಬಳಿಕ ಬಿಎಸ್ಎಫ್ ಯೋಧರು ಗಸ್ತು ಹೆಚ್ಚಿಸಿದ್ದಾರೆ. ಕೇಂದ್ರ ರಕ್ಷಣಾ ಇಲಾಖೆಯೂ ಅಕ್ರಮವಾಗಿ ಒಳನುಸುಳಿ ಉಗ್ರರು ಬಂದರೆ ಪಡೆಗಳೇ ಜಬಾಬ್ದಾರರಾಗುತ್ತಾರೆ ಎಂದು ಎಚ್ಚರಿಕೆ ನೀಡಿದೆ. ಮೃತಪಟ್ಟ ವ್ಯಕ್ತಿಯ ಮಾಹಿತಿಗಳನ್ನು ಸಂಗ್ರಹಣೆ ಮಾಡಲಾಗುತ್ತಿದೆ.
ಜನವರಿ 2ರಂದು ಪಠಾಣ್ ಕೋಟ್ ವಾಯುನೆಲೆಗೆ 6 ಉಗ್ರರು ನುಗ್ಗಿದ್ದರು. ಸುಮಾರು 60 ಗಂಟೆಗಳ ಕಾರ್ಯಾಚರಣೆ ಬಳಿಕ ವಾಯುನೆಲೆಯಲ್ಲಿ ಅಡಗಿದ್ದ ಎಲ್ಲಾ ಉಗ್ರರನ್ನು ಎನ್ಎಸ್ಜಿ ಕಮಾಂಡೋಗಳು ಹತ್ಯೆ ಮಾಡಿದ್ದರು. ಈ ದಾಳಿಯ ಬಳಿಕ ಪಠಾಣ್ ಕೋಟ್ನಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.