IRCTC: ಟಿಕೆಟ್ ಬುಕ್ ಮಾಡಿ ಲ್ಯಾಪ್ಟಾಪ್ ಗೆಲ್ಲಿ
ನವದೆಹಲಿ, ನ.3: ಯಾರಿಗುಂಟು ಯಾರಿಗಿಲ್ಲ, ರೈಲ್ವೆ ಟಿಕೆಟ್ ಬುಕ್ಕಿಂಗ್ ಮಾಡುವುದೇ ಕಷ್ಟ ಎನ್ನುವ ಕಾಲದಲ್ಲಿ ಟಿಕೆಟ್ ಬುಕ್ ಮಾಡಿದರೆ ಲ್ಯಾಪ್ ಟಾಪ್, ಮೊಬೈಲ್ ಫೋನ್ ನೀಡುತ್ತೇವೆ ಎಂದು ಐಆರ್ ಸಿಟಿಸಿ ಭರ್ಜರಿ ಆಫರ್ ಘೋಷಿಸಿದೆ.
ಇಂಡಿಯನ್ ಏರ್ ಲೈನ್ಸ್ ನಂತರ ಇಂಡಿಯನ್ ರೈಲ್ವೆಸ್ ಕೇಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್(IRCTC) ಹೀಗೊಂಡು ಲಕ್ಕಿ ಡ್ರಾ ಧಮಾಕ ನೀಡುತ್ತಿದೆ. ನಾಲ್ಕು ಅದೃಷ್ಟಶಾಲಿಗಳಿಗೆ ಲ್ಯಾಪ್ ಟಾಪ್, ಮೊಬೈಲ್ ಫೋನ್ ಗೆಲ್ಲುವ ಅವಕಾಶ ನೀಡುತ್ತಿದೆ.
ಆದರೆ, ಐಆರ್ ಸಿಟಿಸಿ ಈ ಹೊಸ ಲಕ್ಕಿ ಡ್ರಾ ಎಲ್ಲರಿಗೂ ಮುಕ್ತವಾಗಿಲ್ಲ. ಹೊಸದಾಗಿ ವೆಬ್ ತಾಣಕ್ಕೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳುವ ಪ್ರಯಾಣಿಕರು ಹಾಗೂ ಕನಿಷ್ಠ ಒಂದು ಟಿಕೆಟ್ ಬುಕ್ ಮಾಡುವವರು ಲಕ್ಕಿ ಡ್ರಾಗೆ ಅರ್ಹರಾಗುತ್ತಾರೆ. ಸೋಮವಾರದಿಂದ ಭಾನುವಾರದ ತನಕ ಈ ವ್ಯವಸ್ಥೆ ಜಾರಿಯಲ್ಲಿರುತ್ತದೆ. ಪ್ರತಿ ಸೋಮವಾರ ಐಆರ್ ಸಿಟಿಸಿ ನಾಲ್ಕು ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಿ ಪ್ರಕಟಿಸಲಾಗುತ್ತದೆ.

ಯಾವ ಯಾವ ಕೊಡುಗೆ ನೀಡಲಾಗುತ್ತಿದೆ?
* ಮೊದಲ ವಿಜೇತರಿಗೆ ಲ್ಯಾಪ್ ಟಾಪ್
* 2ನೇ ಹಾಗೂ 3ನೇ ವಿಜೇತರಿಗೆ ತಲಾ ಸ್ಮಾರ್ಟ್ ಫೋನ್.
* 4ನೇ ವಿಜೇತರಿಗೆ ನವದೆಹಲಿ-ಮಾತಾ ರಾಣಿ ಪ್ಯಾಕೇಜ್ (ಒಬ್ಬರಿಗೆ) NDR01(AC-3 Tier ರಿಟರ್ನ್ ಟಿಕೆಟ್ ಸಹಿತ)
ನಿಯಮಗಳು, ನಿಬಂಧನೆಗಳು:
* ಅದೃಷ್ಟಶಾಲಿ ವಿಜೇತರಾಗ ಬಯಸುವವರು IRCTC ವೆಬ್ ಸೈಟ್ ಗೆ ಹೊಸ ಬಳಕೆದಾರರಾಗಿರಬೇಕು. ಐಆರ್ ಸಿಟಿಸಿಯಲ್ಲಿ ಹೊಸ ಗ್ರಾಹಕರಾಗಿ ನೋಂದಾಯಿಸಿಕೊಂಡಿರಬೇಕು.
* ಗ್ರಾಹಕರು ವಾರದಲ್ಲಿ ಕನಿಷ್ಠ ಒಂದು ಟಿಕೆಟ್ ಅದರೂ ಬುಕ್ ಮಾಡಿರಬೇಕು. ಸೋಮವಾರ ದಿನ ಲಕ್ಕಿ ಡ್ರಾ ವಿಜೇತರ ಹೆಸರು ಪ್ರಕಟಿಸಲಾಗುತ್ತದೆ.
* ಒಂದು ವೇಳೆ ಸೋಮವಾರ ರಜಾ ದಿನವಾದರೆ, ಲಕ್ಕಿ ಡ್ರಾ ಮರುದಿನ ನಡೆಸಿ ಆಯ್ಕೆಯಾದವರ ವಿವರ ಪ್ರಕಟಿಸಲಾಗುತ್ತದೆ.
* ಗ್ರಾಹಕರು ಬೇನಾಮಿ ಹೆಸರನ್ನು ನೀಡುವಂತಿಲ್ಲ. ಸರಿಯಾದ ಹೆಸರು ವಿಳಾಸ ನೀಡಲುವುದು ಕಡ್ಡಾಯ. ವಿಳಾಸ ತಪ್ಪಾದರೆ ಗಿಫ್ಟ್ ಕೂಡಾ ಕೈತಪ್ಪಲಿದೆ.
* ವಿಜೇತರ ಹೆಸರನ್ನು ಐಆರ್ ಸಿಟಿಸಿ ವೆಬ್ ತಾಣದಲ್ಲಿ ಪ್ರಕಟಿಸಲಾಗುವುದು ಜೊತೆಗೆ ನೊಂದಾಯಿತ ಇಮೇಲ್ ಐಡಿ ಹಾಗೂ ಮೊಬೈಲ್ ಸಂಖ್ಯೆಗೆ ಸಂದೇಶ ಕಳಿಸಲಾಗುವುದು.
* ಲಕ್ಕಿ ಡ್ರಾ ಯೋಜನೆ ನಿಗದಿತ ಅವಧಿಗೆ ಮಾತ್ರ ಸೀಮಿತವಾಗಿದೆ. ಯೋಜನೆ ಅವಧಿ ಬಗ್ಗೆ ಗ್ರಾಹಕರಿಗೆ ತಿಳಿಸಲಾಗುವುದು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications