ಜಲಾಶಯದಲ್ಲಿ ದೋಣಿ ದುರಂತ: ಮೃತರ ಸಂಖ್ಯೆ 24ಕ್ಕೆ
ಸಂಬಾಲಪುರ (ಒಡಿಶಾ), ಫೆ.10: ಸಾಮರ್ಥ್ಯಕ್ಕಿಂತ ಹೆಚ್ಚು ಜನರಿಂದ ತುಂಬಿದ್ದ ದೋಣಿ ಜಲಾಶಯದ ಮಧ್ಯೆ ಆಯತಪ್ಪಿ ಮುಳುಗಿ 24 ಮಂದಿ ಸಾವನ್ನು ಕಂಡಿದ್ದಾರೆ. ಒಡಿಶಾ ರಾಜ್ಯದ ಸಂಬಾಲಪುರ ಜಿಲ್ಲೆಯ ಬುರ್ಲಾದಲ್ಲಿರುವ ಹಿರಾಕುಡ್ ಜಲಾಶಯದಲ್ಲಿ ಈ ದುರಂತ ಸಂಭವಿಸಿದೆ.

ದೋಣಿಯಲ್ಲಿ 100ಕ್ಕೂ ಹೆಚ್ಚು ಮಂದಿ ವಿಹಾರಾರ್ಥ ಪ್ರಯಾಣಿಸುತ್ತಿದ್ದರು. ಮೃತಪಟ್ಟವರಲ್ಲಿ 5 ಮಂದಿ ಮಹಿಳೆಯರು ಮತ್ತು ಇಬ್ಬರು ಮಕ್ಕಳು ಇದ್ದಾರೆ. 11 ಮಂದಿ ಕಾಣೆಯಾಗಿದ್ದು, ರಾತ್ರಿಯೇ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಸ್ಥಳೀಯರ ಪ್ರಕಾರ ಮೃತಪಟ್ಟವರ ಸಂಖ್ಯೆ ಇನ್ನೂ ಹೆಚ್ಚು ಎಂದು ತಿಳಿದುಬಂದಿದೆ.
ಸುಮಾರು 90 ಮಂದಿಯನ್ನು ನೀರಿನಿಂದ ಪಾರುಮಾಡಲಾಗಿದೆ. ಮಹಾನದಿಗೆ ಅಡ್ಡಲಾಗಿ ಕಟ್ಟಿರುವ ಹಿರಾಕುಡ್ ಜಲಾಶಯದಲ್ಲಿ ದೋಣಿ ಮಧ್ಯ ಭಾಗಕ್ಕೆ ಹೋದಾಗ ಈ ದುರಂತ ಸಂಭವಿಸಿದೆ.
ಹೇಗಾಯಿತು ಅನಾಹುತ:

ವಾರದ ರಜಾ ದಿನದಂದು ಪಿಕ್ನಿಕ್ ಹೋಗಿದ್ದವರು ಜಲಾಶಯ ಮತ್ತೊಂದು ಬದಿಯಿಂದ ವಾಪಸಾಗುವಾಗ ಭಾನುವಾರ ಸಂಜೆ 5 ಗಂಟೆಯಲ್ಲಿ ಈ ಅನಾಹುತ ನಡೆದಿದೆ. ದೋಣಿಯಲ್ಲಿ 60 ಮಂದಿಯಷ್ಟೇ ಪ್ರಯಾನಿಸಬಹುದಾಗಿತ್ತು.
ಆದರೆ ನೂರಕ್ಕೂ ಹೆಚ್ಚು ಮಂದಿಯ ದೋಣಿಯಲ್ಲಿದ್ದರು. ದೋಣಿಯಲ್ಲಿ ಜೀವರಕ್ಷಕ ಸಾಧನಗಳು ಯಾವುವೂ ಇರಲಿಲ್ಲ. ಜಲಾಶಯದ ಮಧ್ಯ ಭಾಗಕ್ಕೆ ವಾಪಸಾದಾಗ ದೋಣಿಯಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಅದಾಗುತ್ತಿದ್ದಂತೆ ದೋಣಿಯಲ್ಲಿ ನೀರು ತುಂಬತೊಡಗಿದೆ. ಹಾಗಾಗಿ ದೋಣಿ ಪೂರ್ತಿ ಮುಳುಗಿದೆ.
ದೊಡ್ಡ ಪಿಕ್ನಿಕ್ ಸ್ಪಾಟ್: Hirakud reservoir ಒಡಿಶಾ ರಾಜ್ಯದ ಹೆಚ್ಚು ವಿಶಾಲ ಜಲಾಶಯ. ಇದರ ಮಧ್ಯೆ ಅನೇಕ ಸಣ್ಣ ಸಣ್ಣ ದ್ವೀಪಗಳಿವೆ. ಜನ ಪ್ರವಾಸಕ್ಕೆಂದು ಇಲ್ಲಿಗೆ ಹೆಚ್ಚಾಗಿ ಬರುತ್ತಿರುತ್ತಾರೆ. ಜಲಾಶಯದ ಮತ್ತೊಂದು ಬದಿಗೆ ವನ್ಯಜೀವಿ ಧಾಮವೂ ಇದೆ. ಜನ ದೋಣಿಯಲ್ಲಿ ತೆರಳಿ ವನ್ಯಜೀವಿಗಳನ್ನು ನೋಡಿಕೊಂಡು ಬರುತ್ತಾರೆ.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications