BMC Results 2026: ಠಾಕ್ರೆ ಆಡಳಿತಕ್ಕೆ ಬ್ರೇಕ್, ಬಿಜೆಪಿ ಮೈತ್ರಿಕೂಟದ ವಿಜಯೋತ್ಸವ, ಕಾಂಗ್ರೆಸ್ಗೆ ತೀವ್ರ ಹಿನ್ನಡೆ
ಮುಂಬೈ: ಮಹಾರಾಷ್ಟ್ರದ ರಾಜಕೀಯ ಪಕ್ಷಗಳಿಗೆ ಬಹುಮುಖ್ಯವಾಗಿದ್ದ ಬಿಎಂಸಿ ಚುನಾವಣೆ ಫಲಿತಾಂಶ 2026 (BMC Elections Results 2026) ಇಂದು ಶುಕ್ರವಾರ ಪ್ರಕಟವಾಗಿತು. ಬಿಜೆಪಿ ನೇತೃತ್ವದ ಎನ್ಡಿಗೆ ಮೈತ್ರಿಕೂಟಕ್ಕೆ ಜನಾರ್ಶಿರ್ವಾದ ದೊರಕಿದೆ. ಎನ್ಡಿಎ 227 ಸ್ಥಾನಗಳ ಪೈಕಿ 112 ರಲ್ಲಿ ಗೆದ್ದು ಸ್ಥಳೀಯ ಅಧಿಕಾರ ಗದ್ದುಗೆ ಏರಿದೆ. ಉದ್ಧವ್ ಠಾಕ್ರೆ ಸಹೋದರ ಮೈತ್ರಿಕೂಟವು (SS+UBT) 77 ಸ್ಥಾನ ಗಳಿಸಿ ಪರಾಭವಗೊಂಡಿತು. ಇನ್ನೂ ಕಾಂಗ್ರೆಸ್ಗೆ ಈ ಚುನಾವಣೆಯಲ್ಲಿ ತೀವ್ರ ಹಿನ್ನಡೆ ಉಂಟಾಗಿದೆ.
ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟವು ಒಟ್ಟು 13 ಸ್ಥಾನಗಳಿಗಷ್ಟೇ ತೃಪ್ತಿ ಪಟ್ಟುಕೊಂಡಿತು. ಇನ್ನು 25 ಸೀಟುಗಳು ಇತರೆ ಪಕ್ಷಗಳ ಪಾಲಾಗಿವೆ. ಭಾರತದ ಶ್ರೀಮಂತ ಪುರಸಭೆ ಎಂದು ಪರಿಗಣಿಸಲ್ಪಡುವ ಮಹಾರಾಷ್ಟ್ರ ಸ್ಥಳೀಯ ಚುನಾವಣೆ ಫಲಿತಾಂಶವು ದೇಶಾದ್ಯಂತ ಗಮನ ಸೆಳೆದಿತ್ತು. ಇಂದಿನ ಫಲಿತಾಂಶದಲ್ಲಿ ಗೆದ್ದ ಬಿಜೆಪಿ ಮೈತ್ರಿಕೂಟವು 25 ವರ್ಷಗಳಿಂದ ಸ್ಥಳೀಯ ನಾಗರಿಕ ಸಂಸ್ಥೆಗಳಲ್ಲಿ ಆಡಳಿತ ನಡೆಸಿದ್ದ ಉದ್ಧವ್ ಠಾಕ್ರೆ ಆಡಳಿತಕ್ಕೆ ಪೂರ್ಣ ವಿರಾಮ ನೀಡಿತು.

ಚುನಾವಣೆ ಆಯೋಗದ ಪ್ರಕಾರ, 2869 ವಾರ್ಡ್ಗಳ ಪೈಕಿ 1281ಗೂ ಅಧಿಕ ವಾರ್ಡ್ಗಳಲ್ಲಿ ಬಿಜೆಪಿ ಮೈತ್ರಿಕೂಟ ಮುನ್ನಡೆ ಕಾಯ್ದುಕೊಂಡಿತು. ಒಟ್ಟು 29 ಮಹಾನಗರ ಪಾಲಿಕೆಗಳ ಪೈಕಿ 21ರಲ್ಲಿ ಅಧಿಕಾರ ಹಿಡಿದು ಕೇಸರಿ ಪಡೆ ಬೀಗಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 360 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿತು. ಉದ್ಧವ್ ಠಾಕ್ರೆ ಬಣದ ಶಿವಸೇನೆಯು 147 ಸ್ಥಾನಗಳಿಗೆ ಮಾತ್ರವೇ ಸಿಮೀತವಾಯಿತು. ಇನ್ನೂ ಅಜಿತ್ ಪವಾರ್ ನೇತೃತ್ವದ ಎನ್ಸಿಪಿ 122 ಸ್ಥಾನ ಗಳಿಸಿ ಕೊನೆ ಸ್ಥಾನದಲ್ಲಿ ಉಳಿಯಿತು.
ಕಣದಲ್ಲಿದ್ದದ್ದು 1700 ಅಭ್ಯರ್ಥಿಗಳು
ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ನಾಲ್ಕು ವರ್ಷ ವಿಳಂಬವಾಗಿದ್ದ ಹಾಗೂ ಒಂಬತ್ತು ವರ್ಷಗಳ ನಂತರ ನಡೆದ ಮಹಾರಾಷ್ಟ್ರ ಬಿಎಂಸಿ ಚುನಾವಣೆಯ 227 ಸ್ಥಾನಗಳಿಗೆ 1700 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಬಿಎಂಸಿಯ ವಾರ್ಷಿಕ ಬಜೆಟ್ 74,400 ಕೋಟಿ ರೂಪಾಯಿ ಆಗಿದೆ. ಹೀಗಾಗಿ ಇದನ್ನು ದೇಶದ ಶ್ರೀಮಂತ ಪುರಸಭೆಗಳೆಂದು ಪರಿಗಣಿಸಲಾಗಿದೆ.
ಗುರುವಾರ ಜನವರಿ 15ರಂದು ಬೆಳಗ್ಗೆ 7.30ರಿಂದ ಸಂಜೆ 5ಗಂಟೆವರೆಗೆ ಮತದಾನ ನಡೆಯಿತು. 2017ರಲ್ಲಿ ಇದೇ ಬಿಎಂಸಿ ಚುನಾವಣೆಯಲ್ಲಿ ಒಟ್ಟು ಶೇ. 55.53ರಷ್ಟು ಮತದಾನವಾಗಿತ್ತು. 2026ರಲ್ಲಿ ಶೇಕಡಾ 52.94ರಷ್ಟು ಮಾತ್ರವೇ ಮತದಾನ ನಡೆದಿದೆ. ಈ ಮೂಲಕ ನಿರೀಕ್ಷೆಗಿಂತ ಕಡಿಮೆ ಮತದಾನ ದಾಖಲಾಯಿತು. ಇಂದು ಶುಕ್ರವಾರ (ಜನವರಿ 16) ರಂದು ಬಿಎಂಸಿ ಚುನಾವಣೆ ಫಲಿತಾಂಶ ಪ್ರಕಟವಾಯಿತು.
(ಈ ಸುದ್ದಿ ಪ್ರಕಟವಾಗುವ ಹೊತ್ತಿಗೆ ಪೂರ್ಣ ಫಲಿತಾಂಶ ಪ್ರಕಟವಾಗಿರಲಿಲ್ಲ. ಚುನಾವಣೆ ಫಲಿತಾಂಶ ಅಧಿಕೃತ ಮಾಹಿತಿ ಹೊರಡಿಸಿದ ನಂತರ ಈ ಸುದ್ದಿಯಲ್ಲಿ ಅಂಕಿ ಸಂಖ್ಯೆಗಳು ಅಪ್ಡೇಟ್ ಆಗಲಿವೆ)
-
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ












Click it and Unblock the Notifications