ಕೇವಲ 1 ಮತದಿಂದ ಚಂಡೀಗಢ ಮೇಯರ್ ಚುನಾವಣೆ ಗೆದ್ದ ಬಿಜೆಪಿ
ನವದೆಹಲಿ, ಜನವರಿ 17: ಚುನಾವಣೆಯಲ್ಲಿ ಒಂದೊಂದು ಮತವು ಎಷ್ಟೊಂದು ಮುಖ್ಯ ಎಂಬುದಕ್ಕೆ ತಾಜಾ ಉದಾಹರಣೆ ಈಗ ಸಿಕ್ಕಿದೆ. ಚಂಡೀಗಢದ ಮೇಯರ್ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಕೇವಲ 1 ಮತಗಳ ಅಂತರದಿಂದ ಜಯಗಳಿಸಿದೆ. ಬಿಜೆಪಿ ಒಟ್ಟು 15 ಮತಗಳನ್ನು ಪಡೆದರೆ, ಎಎಪಿ 14 ಮತಗಳನ್ನು ಗಳಿಸಿದೆ.
ಈಗ ಬಿಜೆಪಿ ಅಭ್ಯರ್ಥಿ ಅನುಪ್ ಗುಪ್ತಾ ಚಂಡೀಗಢದ ನೂತನ ಮೇಯರ್ ಆಗಲಿದ್ದಾರೆ. ಚಂಡೀಗಢದ ಮೇಯರ್ ಚುನಾವಣೆಗೆ ಮಂಗಳವಾರ ಬೆಳಗ್ಗೆ 11 ಗಂಟೆಗೆ ಮುನ್ಸಿಪಲ್ ಕಾರ್ಪೊರೇಷನ್ನ ಅಸೆಂಬ್ಲಿ ಹಾಲ್ನಲ್ಲಿ ಮತದಾನ ಆರಂಭಗೊಂಡಿದ್ದು, ಬಿಜೆಪಿ ಮತ್ತು ಎಎಪಿ ಪ್ರಮುಖ ಸ್ಥಾನಕ್ಕಾಗಿ ಸ್ಪರ್ಧೆ ನಡೆಸಿದ್ದವು.
ಇಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ತಲಾ 14 ಕೌನ್ಸಿಲರ್ಗಳನ್ನು ಹೊಂದಿದೆ. ಈ ಬಾರಿ ಬಿಜೆಪಿಯು ಅನುಪ್ ಗುಪ್ತಾ ಅವರನ್ನು ಮೇಯರ್ ಅಭ್ಯರ್ಥಿ ಎಂದು ಘೋಷಿಸಿದರೆ, ಆಮ್ ಆದ್ಮಿ ಪಕ್ಷವು ಜಸ್ವೀರ್ ಸಿಂಗ್ ಲಡ್ಡಿಯನ್ನು ತನ್ನ ಅಭ್ಯರ್ಥಿ ಎಂದು ಘೋಷಿಸಿತ್ತು. ಕಳೆದ ಬಾರಿಯೂ ಮೇಯರ್ ಆಯ್ಕೆಗೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ನಡುವೆ ಸಾಕಷ್ಟು ಚರ್ಚೆ ನಡೆದಿತ್ತು. ಆದರೆ ಬಿಜೆಪಿಯ ಸರಬ್ಜಿತ್ ಕೌರ್ ಒಂದು ಮತದ ಅಂತರದಿಂದ ಮೇಯರ್ ಆಗಿ ಆಯ್ಕೆಯಾಗಿದ್ದರು.

ಮಂಗಳವಾರ ನಡೆದ ಚಂಡೀಗಢದ ಮೇಯರ್ ಚುನಾವಣೆಯಲ್ಲಿ ಎಎಪಿ ವಿರುದ್ಧ ತೀವ್ರ ಪೈಪೋಟಿ ನಡೆಸಿ ಬಿಜೆಪಿಯ ಅನುಪ್ ಗುಪ್ತಾ ಗೆಲುವು ಸಾಧಿಸಿದ್ದಾರೆ. ಈ ಮೇಯರ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ಮುಖಾಮುಖಿಯಾಗಿ ಪೈಪೋಟಿ ನಡೆಸಿವೆ. ಮೇಯರ್ ಚುನಾವಣೆಯಲ್ಲಿ ಅನುಪ್ ಗುಪ್ತಾ 15 ಮತಗಳನ್ನು ಪಡೆದು ಆಮ್ ಆದ್ಮಿ ಪಕ್ಷದ ಜಸ್ಬೀರ್ ಸಿಂಗ್ ಅವರನ್ನು ಸೋಲಿಸಿದರೆ, ಎಎಪಿ ಅಭ್ಯರ್ಥಿ 14 ಪಡೆದರು.
ಆರು ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ಮತ್ತು ಒಬ್ಬ ಸದಸ್ಯರನ್ನು ಹೊಂದಿರುವ ಶಿರೋಮಣಿ ಅಕಾಲಿದಳ ಚುನಾವಣೆಯಿಂದ ಹಿಂದೆ ಸರಿಯಲು ನಿರ್ಧರಿಸಿದ ನಂತರ, ಬಿಜೆಪಿ ಮತ್ತು ಎಎಪಿ ನಡುವೆ ತೀವ್ರ ಪೈಪೋಟಿ ಏರ್ಪಡುವ ನಿರೀಕ್ಷೆಯಿದೆ. ಮಂಗಳವಾರದ ಮೇಯರ್ ಚುನಾವಣೆಯು ಬೆಳಗ್ಗೆ 11 ಗಂಟೆಗೆ ಪ್ರಾರಂಭವಾಯಿತು. ಎಎಪಿಯ ಜಸ್ಬೀರ್ ಸಿಂಗ್ ಒಟ್ಟು 29 ಮತಗಳಲ್ಲಿ 14 ಗಳಿಸಿದರೆ, ಗುಪ್ತಾ 15 ಪಡೆದರು.

ಮೇಯರ್ ಹುದ್ದೆಗೆ ಅಭ್ಯರ್ಥಿಗೆ ಕನಿಷ್ಠ 15 ಮತಗಳ ಅಗತ್ಯವಿದೆ. ಮೇಯರ್ಗೆ ಒಂದು ವರ್ಷದ ಅಧಿಕಾರಾವಧಿ ಇದೆ. ಬಿಜೆಪಿ 15 ಮತಗಳನ್ನು ಪಡೆದರೆ, ಎಎಪಿ 14. ಶಿರೋಮಣಿ ಅಕಾಲಿದಳ ಒಂದು ಮತ ಮತ್ತು ಕಾಂಗ್ರೆಸ್ ಆರು ಮತಗಳನ್ನು ಹೊಂದಿತ್ತು, ಆದರೆ ಇಬ್ಬರೂ ಮತ ಚಲಾಯಿಸಲಿಲ್ಲ. ಬಿಜೆಪಿ ಮತ್ತು ಎಎಪಿ ಎರಡನ್ನೂ ಸದನದಲ್ಲಿ ತಲಾ 14 ಕೌನ್ಸಿಲ್ ಸದಸ್ಯರು ಹೊಂದಿದೆ. ಚಂಡೀಗಢದ ಸಂಸತ್ ಸದಸ್ಯ, ಬಿಜೆಪಿಯ ಕಿರಣ್ ಖೇರ್ ಅವರು ಮುನ್ಸಿಪಲ್ ಕಾರ್ಪೊರೇಷನ್ ಹೌಸ್ನ ಪದನಿಮಿತ್ತ ಸದಸ್ಯರಾಗಿ ಮತವನ್ನು ಹೊಂದಿದ್ದಾರೆ. ಹಿರಿಯ ಉಪಮೇಯರ್ ಮತ್ತು ಉಪಮೇಯರ್ ಸ್ಥಾನಗಳಿಗೆ ಚುನಾವಣೆಯೂ ದಿನದ ನಂತರ ನಡೆಯಲಿದೆ.
-
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
ವೈಭವ್ ಸೂರ್ಯವಂಶಿ ಅದೃಷ್ಟದ ಮೇಲೆ ಸವಾರಿ ಮಾಡುತ್ತಿದ್ದಾರೆ: ಕೊಡಗಿನ ರಾಬಿನ್ ಉತ್ತಪ್ಪ ಎಚ್ಚರಿಕೆಯ ಸಲಹೆ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ












Click it and Unblock the Notifications