ಲೋಕಸಭೆಯಲ್ಲಿ ಮಲತಾಯಿ-ಮಗ ಒಟ್ಟಿಗೆ ಕೂರುವುದಿಲ್ಲ, ಯಾಕೆ?
ನವದೆಹಲಿ, ಮೇ 29: ಬಾಲಿವುಡ್ನಲ್ಲಿ ಮಿಂಚಿದ್ದ ಮಲತಾಯಿ-ಮಗ ಇಬ್ಬರೂ ಒಂದೇ ಪಕ್ಷದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸಂಸತ್ ಪ್ರವೇಶಿಸಿದ್ದಾರೆ. ಆದರೆ, ಲೋಕಸಭೆ ಕಲಾಪದ ವೇಳೆ ಅವರಿಬ್ಬರೂ ಒಟ್ಟಿಗೆ ಕುಳಿತುಕೊಳ್ಳುವುದಿಲ್ಲ. ಜೂನ್ 6ರಿಂದ ಆರಂಭವಾಗಲಿರುವ ಕಲಾಪದಲ್ಲಿ ಅವರು ಪ್ರತ್ಯೇಕವಾಗಿ ಕೂರಲಿದ್ದಾರೆ.
ಮೊದಲ ಬಾರಿಗೆ ಸಂಸತ್ ಪ್ರವೇಶಿಸಿರುವ ನಟ ಧರ್ಮೇಂದ್ರ ಅವರ ಹಿರಿಯ ಪತ್ನಿಯ ಮಗ ಸನ್ನಿ ಡಿಯೋಲ್ ಅವರಿಗೆ, ಎರಡನೆಯ ಬಾರಿ ಗೆದ್ದಿರುವ ಧರ್ಮೇಂದ್ರ ಅವರ ಪತ್ನಿ ಹೇಮಾಮಾಲಿನಿ ಅವರ ಸಾಥ್ ಲೋಕಸಭೆಯಲ್ಲಿ ದೊರಕುವುದಿಲ್ಲ.
17ನೇ ಲೋಕಸಭೆಗೆ ಸನ್ನಿ ಡಿಯೋಲ್ ಅಲ್ಲದೆ, 300 ಮಂದಿ ಮೊದಲ ಸಲ ಆಯ್ಕೆಯಾಗಿದ್ದಾರೆ. ಸಂಸತ್ಗೆ ಪಾದಾರ್ಪಣೆ ಮಾಡುತ್ತಿರುವವರಲ್ಲಿ ಜನಪ್ರಿಯ ವ್ಯಕ್ತಿಗಳೂ ಇದ್ದಾರೆ. ಗೌತಮ್ ಗಂಭೀರ್, ಹನ್ಸರಾಜ್ ಹನ್ಸ್, ರವಿ ಕಿಶನ್,ಸುಮಲತಾ ಅಂಬರೀಷ್, ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಇದರಲ್ಲಿ ಸೇರಿದ್ದಾರೆ.
ಆದರೆ, ಅವರ ಜನಪ್ರಿಯತೆ ಮತ್ತು ತಮ್ಮ ವೃತ್ತಿಯಲ್ಲಿನ ಹಿರಿತನವನ್ನು ಸಂಸತ್ನಲ್ಲಿ ಪರಿಗಣಿಸುವುದಿಲ್ಲ. ಹೀಗಾಗಿ ಹೊಸ ಮುಖಗಳು ಲೋಕಸಭೆಯಲ್ಲಿ ಹಿಂದಿನ ಸೀಟುಗಳಲ್ಲಿ ಕೂರಬೇಕಾಗುತ್ತದೆ. ಲೋಕಸಭೆಯ ಅಧಿಕೃತ ಆಸನ ವ್ಯವಸ್ಥೆಯ ಪದ್ಧತಿ ಪ್ರಕಾರ ಅನುಭವಿಗಳು ಮುಂದಿನ ಸಾಲುಗಳಲ್ಲಿ ಕೂರುತ್ತಾರೆ.

ಮಧ್ಯದ ಸಾಲಿನಲ್ಲಿ ಹೇಮಾ, ಕೊನೆ ಸಾಲಿನಲ್ಲಿ ಸನ್ನಿ
ಎರಡನೆಯ ಅವಧಿಗೆ ಆಯ್ಕೆಯಾಗಿರುವ ಹೇಮಾ ಮಾಲಿನಿ ಅವರು ಲೋಕಸಭೆಯ ಮಧ್ಯದಲ್ಲಿರುವ ಸೀಟುಗಳಲ್ಲಿ ಕೂರಲಿದ್ದಾರೆ. ಮೊದಲ ಪ್ರಯತ್ನದಲ್ಲಿಯೇ ಗುರುದಾಸಪುರದಿಂದ ಗೆದ್ದಿರುವ ಅವರ ಮಲಮಗ ಸನ್ನಿ ಡಿಯೋಲ್ ಹಿಂಬದಿ ಬೆಂಚಿನ ಸಂಸದರ ಸಾಲಿನಲ್ಲಿ ಕೂರುತ್ತಾರೆ.
ಇದೇ ರೀತಿ ತಮಗಿಂತ ಕಿರಿಯರಾದರೂ, ನಾಲ್ಕನೆಯ ಅವಧಿಗೆ ಸಂಸತ್ಗೆ ಅಯ್ಕೆಯಾದ ಅನುರಾಗ್ ಠಾಕೂರ್ ಅವರ ಹಿಂದಿನ ಸಾಲಿನಲ್ಲಿ ಪ್ರಗ್ಯಾ ಸಿಂಗ್ ಠಾಕೂರ್ ಕೂರಲಿದ್ದಾರೆ.

ಎಡಭಾಗದ ಸೀಟು ವಿರೋಧಪಕ್ಷಕ್ಕೆ
ಲೋಕಸಭೆಗೆ ಆಯ್ಕೆಯಾದ ಪ್ರತಿ ಸದಸ್ಯರಿಗೂ ನಿಗದಿತ ಸೀಟುಗಳನ್ನು ನಿಯೋಜಿಸಲಾಗುತ್ತದೆ. ಇದನ್ನು ನಿರ್ದಿಷ್ಟ ಫಾರ್ಮುಲಾದಡಿ ನಿರ್ಧರಿಸಲಾಗುತ್ತದೆ.
ಸದನದ ಸ್ಪೀಕರ್ ಅವರ ಬಲಬದಿಯಲ್ಲಿರುವ ಸೀಟುಗಳು ಆಡಳಿತ ಪಕ್ಷ ಅಥವಾ ಮೈತ್ರಿಕೂಟಕ್ಕೆ ಮೀಸಲು. ಎಡಭಾಗದ ಆಸನಗಳು ವಿರೋಧಪಕ್ಷದ ಸದಸ್ಯರಿಗೆ ಮೀಸಲಾಗಿರುತ್ತದೆ.

ಮೊದಲ ಸಾಲಿನಲ್ಲಿ ಸಂಪುಟ ಸಚಿವರು
ಮೊದಲ ಸಾಲುಗಳಲ್ಲಿ ಪ್ರಧಾನಿ, ಸಂಪುಟ ಸಚಿವರು ಮತ್ತು ಆಡಳಿತ ಪಕ್ಷದ ಇತರೆ ಹಿರಿಯ ನಾಯಕರು ಕೂರುತ್ತಾರೆ. ಎಡಬದಿಯ ಮೊದಲ ಸಾಲಿನಲ್ಲಿ ಆಡಳಿತೇತರ ಪಕ್ಷದ ನಾಯಕರು ಹಾಗೂ ವಿರೋಧಪಕ್ಷದ ಮುಖಂಡರು ಕೂರುತ್ತಾರೆ. ಸದನದ ಉಪಾಧ್ಯಕ್ಷರು ಕೂಡ ಇದೇ ಸಾಲಿನಲ್ಲಿ ಕೂರುತ್ತಾರೆ.

ಹಿರಿತನಕ್ಕೆ ಅನುಗುಣವಾಗಿ ಆಸನ
ಮಧ್ಯದ ಸಾಲುಗಳನ್ನು ಸಂಸದರ ಹಿರಿತನಕ್ಕೆ ಅನುಗುಣವಾಗಿ ನೀಡಲಾಗುತ್ತದೆ. ಕೊನೆಯ ಸಾಲುಗಳನ್ನು ಹೊಸದಾಗಿ ಆಯ್ಕೆಯಾದ ಸಂಸದರಿಗೆ ನೀಡಲಾಗುತ್ತದೆ. ಒಂದು ವೇಳೆ ಹೊಸಬರು ಸಂಪುಟದಲ್ಲಿ ಸೇರಿಕೊಂಡರೆ ಅವರಿಗೆ ಮುಂದಿನ ಸೀಟು ದೊರಕುತ್ತದೆ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications