ಪಾಸ್ ಪೋರ್ಟ್ ಗೆ ಬರ್ತ್ ಸರ್ಟಿಫಿಕೇಟ್ ಕಡ್ಡಾಯವಲ್ಲ!
ಪಾಸ್ ಪೋರ್ಟ್ ಪಡೆಯಲು ಜನನ ಪ್ರಮಾಣ ಪತ್ರ ಕಡ್ಡಾಯ ನಿಯಮ ಬದಲು. ಸುಪ್ರೀಂಕೋರ್ಟ್ ಗೆ ಸಲ್ಲಿಸಿದ ವಿವರಣೆಯಲ್ಲಿ ಕೇಂದ್ರ ಸರ್ಕಾರದ ಹೇಳಿಕೆ.
ನವದೆಹಲಿ, ಜುಲೈ 24: ಪಾರ್ಸ್ ಪೋರ್ಟ್ ಮಾಡಿಸಲು ಅತ್ಯಗತ್ಯವಾಗಿದ್ದ ಜನನ ಪ್ರಮಾಣ ಪತ್ರದ ನಿಯಮವನ್ನು ಶೀಘ್ರವೇ ಕೈ ಬಿಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.
ಪಾಸ್ ಪೋರ್ಟ್ ನಿಯಮಗಳ ಸರಳೀಕರಣ ವಿಚಾರದಲ್ಲಿ ಸಂಸತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಿದೇಶಾಂಗ ಇಲಾಖೆಯ ರಾಜ್ಯ ಸಚಿವ ವಿ.ಕೆ. ಸಿಂಗ್, ಈ ಕುರಿತಂತೆ ವಿವರಣೆ ನೀಡಿದ್ದಾರೆ.
ಇನ್ನು, ಜನನ ಪ್ರಮಾಣ ಪತ್ರದ ಬದಲಿಗೆ, ಪಾರ್ಸ್ ಅರ್ಜಿಯ ಜತೆಗೆ ಅರ್ಜಿದಾರನು ಸಲ್ಲಿಸುವ ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ನಲ್ಲಿರುವ ಜನನ ದಿನಾಂಕವನ್ನೇ ಪರಿಗಣಿಸುವುದಾಗಿ ಸಿಂಗ್ ತಿಳಿಸಿದರು.
1980ರ ಪಾಸ್ ಪೋರ್ಟ್ ಅಧಿನಿಯಮಗಳ ಪ್ರಕಾರ, 1989ರ ಜನವರಿ 26ರ ನಂತರ ಹುಟ್ಟಿದವರು ಪಾಸ್ ಪೋರ್ಟ್ ಗಾಗಿ ಅರ್ಜಿ ಸಲ್ಲಿಸುವಾಗ ಕಡ್ಡಾಯವಾಗಿ ಜನನ ಪ್ರಮಾಣ ಪತ್ರ ಸಲ್ಲಿಸಬೇಕಿತ್ತು.

ಎಸ್ಎಸ್ಎಲ್ ಸಿ ಅಂಕಪಟ್ಟಿ ಸಾಕು
ಆದರೀಗ, ಹೊಸ ನಿಯಮದಂತೆ, ತಮ್ಮ ಜನನ ದಿನಾಂಕವನ್ನು ಖಾತ್ರಿಪಡಿಸಲು, ಶಾಲೆಗಳಲ್ಲಿ ನೀಡಲಾಗುವ ವರ್ಗಾವಣೆ ಪತ್ರ (ಟಿಸಿ) , ಎಸ್ಎಸ್ಎಲ್ ಸಿ ಅಂಕಪಟ್ಟಿ ನೀಡಬಹುದು ಎಂದು ವಿಕೆ ಸಿಂಗ್, ಸಂಸತ್ತಿಗೆ ಸ್ಪಷ್ಟಪಡಿಸಿದ್ದಾರೆ.

ವಿಮಾ ಪಾಲಿಸಿಯಾದರೂ ಸರಿ
ಪ್ಯಾನ್, ಆಧಾರ್, ಇ- ಆಧಾರ್, ಚಾಲನಾ ಪರವಾನಗಿ (ಡ್ರೈವಿಂಗ್ ಲೈಸನ್ಸ್), ಚುನಾವಣಾ ಗುರುತಿನ ಪತ್ರ (ವೋಟರ್ ಐಡಿ ಕಾರ್ಡ್) ಅಥವಾ ಎಲ್ ಐಸಿ ಪಾಲಿಸಿಯ ಯಾವುದೇ ದಾಖಲೆಗಳನ್ನು ನೀಡಬಹುದಾಗಿದೆ.

ನಿವೃತ್ತರು ಇಷ್ಟು ನೀಡಿದರೆ ಸಾಕು
ಇನ್ನು, ಸರ್ಕಾರಿ ಅಧಿಕಾರಿಗಳು ಹಾಗೂ ನಿವೃತ್ತ ಸರ್ಕಾರಿ ಉದ್ಯೋಗಿಗಳು ಕ್ರಮವಾಗಿ ತಮ್ಮ ಸೇವಾ ದಾಖಲೆಗಳು (ಸರ್ವೀಸ್ ರೆಕಾರ್ಡ್ಸ್) ಅಥವಾ ಪಿಂಚಣಿ ದಾಖಲೆಗಳನ್ನು ನೀಡಬಹುದಾಗಿದೆ ಎಂದು ವಿಕೆ ಸಿಂಗ್, ಸಂಸತ್ತಿಗೆ ತಿಳಿಸಿದ್ದಾರೆ.

ಇಂಥವರಿಗೆ ಅನಾಥಾಯಗಳ ಪ್ರಮಾಣ ಪತ್ರ ಬೇಕು
ಇನ್ನು, ಹೆತ್ತವರನ್ನು ಕಳೆದುಕೊಂಡ ಅಥವಾ ಹೆತ್ತವರಿಂದ ಪರಿತ್ಯಕ್ತಗೊಂಡು ಅನಾಥಾಲಯಗಳಲ್ಲಿ ಜೀವಿಸುತ್ತಿರುವ ಮಕ್ಕಳು ಪಾಸ್ ಪೋರ್ಟ್ ಗಾಗಿ ಅರ್ಜಿಗಳನ್ನು ಹಾಕುವಾಗ ತಂದೆ-ತಾಯಿಯ ಮರಣ ಪ್ರಮಾಣ ಪತ್ರ (ಹೆತ್ತವರು ಸಾವನ್ನಪ್ಪಿದ್ದರೆ) ಅಥವಾ ತಂದೆ-ತಾಯಿಯ ವಿಚ್ಛೇದನ ಅರ್ಜಿಗಳನ್ನು ಸಲ್ಲಿಸುವ ಅಗತ್ಯವಿಲ್ಲ ಎಂದು ಸಿಂಗ್, ಸಂಸತ್ತಿಗೆ ತಿಳಿಸಿದ್ದಾರೆ. ಅಂಥ ಮಕ್ಕಳು ತಮ್ಮ ಅನಾಥಾಲಯಗಳಿಂದ ಪ್ರಮಾಣ ಪತ್ರವನ್ನು ನೀಡಿದರೆ ಸಾಕೆಂದು ಸಿಂಗ್ ಹೇಳಿದ್ದಾರೆ.
-
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು? -
92,00,00,000 ರೂಪಾಯಿ ಬಹುಮಾನ, ಈತನ ಬಗ್ಗೆ ಸುಳಿವು ನೀಡಿದರೆ ನಿಮಗೂ ಸಿಗಲಿದೆ ಹಣ... Mojtaba Khamenei -
Shri Gandhada Gudi Serial: "ಶ್ರೀಗಂಧದಗುಡಿ" ಸೀರಿಯಲ್ಗೆ ಗುಡ್ಬೈ ಹೇಳಿದ ಸಂಜನಾ ಬುರ್ಲಿ, ಕಾರಣ ಇಲ್ಲಿದೆ












Click it and Unblock the Notifications