ವಾಜಪೇಯಿ, ಮಾಳವೀಯರಿಗೆ 'ಭಾರತರತ್ನ' ಘೋಷಣೆ
ನವದೆಹಲಿ, ಡಿ.24: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಶಿಕ್ಷಣ ತಜ್ಞ ಮದನ್ ಮೋಹನ್ ಮಾಳವೀಯ ಅವರಿಗೆ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಭಾರತ ರತ್ನ ಪ್ರಶಸ್ತಿಯನ್ನು ಘೋಷಿಸಿದೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಕಚೇರಿಯಿಂದ ಅಧಿಕೃತವಾಗಿ ಈ ಬಗ್ಗೆ ಟ್ವೀಟ್ ಮಾಡಲಾಗಿದೆ.
ವಾಜಪೇಯಿ ಅವರ 90ನೇ ಹುಟ್ಟು ಹಬ್ಬ(ಡಿ.25ರಂದು)ಕ್ಕೆ ನರೇಂದ್ರ ಮೋದಿ ಅವರು ಭಾರಿ ಉಡುಗೊರೆಯನ್ನು ಈ ಮೂಲಕ ನೀಡಿದ್ದಾರೆ. ವಾಜಪೇಯಿ ಅವರ ಹುಟ್ಟುಹಬ್ಬ ದಿನವನ್ನು 'ಉತ್ತಮ ಆಡಳಿತ ದಿನ' ಎಂದು ಮೋದಿ ಘೋಷಿಸಿದ್ದಾರೆ. [ಅಟಲ್ ಬಿಹಾರಿ ವಾಜಪೇಯಿ ಪರಿಚಯ]
ಸಜ್ಜನ
ರಾಜಕಾರಣಿ,
ಅಜಾತಶತ್ರು
ವಾಜಪೇಯಿ
ಅವರಿಗೆ
ದೇಶದ
ಅತ್ಯುನ್ನತ
ನಾಗರೀಕ
ಪ್ರಶಸ್ತಿ
ನೀಡಬೇಕು
ಎಂಬುದು
ಮೋದಿ
ಅವರ
ಬಹು
ದಿನಗಳ
ಕನಸಾಗಿದೆ.
[ಸಿಎನ್
ಆರ್
ರಾವ್,
ಸಚಿನ್
ಈಗ
'ಭಾರತ
ರತ್ನ'
]
ನವದೆಹಲಿಯಲ್ಲಿ
ಬುಧವಾರ
ನಡೆದ
ಬಿಜೆಪಿ
ಸಂಸದೀಯ
ಸಮಿತಿ
ಸಭೆಯಲ್ಲಿ
ಈ
ಬಗ್ಗೆ
ಚರ್ಚೆ
ನಡೆಸಲಾಗಿದೆ.
1996ರಲ್ಲಿ
ವಾಜಪೇಯಿ
ನೇತೃತ್ವದ
ಎನ್
ಡಿಎ
ಸರ್ಕಾರ
13
ದಿನಗಳ
ಅಧಿಕಾರ
ನಡೆಸಿತ್ತು.
ವಾಜಪೇಯಿ
ಅವರು
ದೇಶದ
11ನೇ
ಪ್ರಧಾನಿಯಾದರು.
ನಂತರ
1998
ರಿಂದ
2004ರ
ತನಕ
ವಾಜಪೇಯಿ
ಅವರು
ಪೂರ್ಣ
ಅಧಿಕಾರ
ಅವಧಿ
ಕಂಡ
ಕಾಂಗ್ರೆಸ್ಸೇತರ
ಪ್ರಥಮ
ಪ್ರಧಾನಿ
ಎನಿಸಿದರು.
['ಸಚಿನ್
ಗೆ
ಭಾರತ
ರತ್ನ
ದೊಡ್ಡ
ಜೋಕು']
ದೇಶದ
ಅತ್ಯುನ್ನತ
ಪ್ರಶಸ್ತಿ
ಘೋಷಿಸಿದ
ರಾಷ್ಟ್ರಪತಿ
ಪ್ರಣಬ್
ಮುಖರ್ಜಿ
#PresidentMukherjee
has
been
pleased
to
award
Bharat
Ratna
to
Pandit
Madan
Mohan
Malaviya
(posthumously)
and
to
Shri
Atal
Bihari
Vajpayee.
—
President
of
India
(@RashtrapatiBhvn)
December
24,
2014
ಜನವರಿ 26ರ ಗಣರಾಜ್ಯೋತ್ಸವ ದಿನದಂದು ಪ್ರಶಸ್ತಿ ಪ್ರದಾನ ಮಾಡುವ ಸಾಧ್ಯತೆಯಿದೆ. ಈ ಹಿಂದೆ ಯುಪಿಎ ಸರ್ಕಾರದ ಅವಧಿಯಲ್ಲೂ ವಾಜಪೇಯಿಗೆ ಭಾರತ ರತ್ನ ನೀಡಬೇಕೆಂದು ಬಿಜೆಪಿ ಆಗ್ರಹಿಸಿತ್ತು. [ಮದನ್ ಮೋಹನ್ ಮಾಳವೀಯ ಜೀವನ ಅವಲೋಕನ]
ಎನ್
ಡಿಎ
ಅಧಿಕಾರ
ಅವಧಿಯಲ್ಲಿ
ಗಾಯಕಿ
ಲತಾ
ಮಂಗೇಷ್ಕರ್,
ಉಸ್ತಾದ್
ಬಿಸ್ಮಿಲ್ಲಾ
ಖಾನ್,
ಅಮಾರ್ತ್ಯ
ಸೇನ್,
ಪಂಡಿತ್
ರವಿಶಂಕರ್,
ಗೋಪಿನಾಥ್
ಬೊರ್ಡೊಲಾಯಿ,
ಜಯಪ್ರಕಾಶ್
ನಾರಾಯಣ್
ಅವರಿಗೆ
ದೇಶದ
ಅತ್ಯುನ್ನತ
ನಾಗರಿಕ
ಗೌರವ
ನೀಡಿತ್ತು.
#BharatRatna
to
Pandit
Madan
Mohan
#Malaviya
(posthumously)&to
Shri
Atal
Bihari
#Vajpayee,
#PresidentMukherjee
tweets
pic.twitter.com/BIvISB82fo
—
Doordarshan
News
(@DDNewsLive)
December
24,
2014
ಯುಪಿಎ 2 ಸರ್ಕಾರ ತನ್ನ ಅವಧಿಯಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹಾಗೂ ವಿಜ್ಞಾನಿ, ಕನ್ನಡಿಗ ಪ್ರೊ.ಸಿ.ಎನ್ ಆರ್ ರಾವ್ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದನ್ನು ಇಲ್ಲಿ ಸ್ಮರಿಸಬಹುದು.