ಶರದ್ ಪವಾರ್ಗೆ ಹಿನ್ನಡೆ: ಎನ್ಸಿಪಿಯ 53 ಶಾಸಕರಲ್ಲಿ 35 ಮಂದಿ ಅಜಿತ್ ಪವಾರ್ ಕಡೆಗೆ
ಮುಂಬೈ, ಜುಲೈ 5: ಹಿಂದಿನ ಶಿವಸೇನೆಯ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯ ಎದ್ದು ಏಕನಾಥ್ ಶಿಂಧೆ ಬಣದಲ್ಲಿ ಗುರುತಿಸಿಕೊಂಡು ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದಂತೆ ಈಗ ಎನ್ಸಿಪಿಯ ಶರದ್ ಪವಾರ್ ಜೊತೆ ಅವರ ತಮ್ಮ ಮಗ ಅಜಿತ್ ಪವಾರ್ ಬಂಡಾಯ ಎದ್ದು ಮಹರಾಷ್ಟ್ರ ಸರ್ಕಾರದೊಂದಿಗೆ ಸೇರಿ ಡಿಸಿಎಂ ಆಗಿದ್ದು, ಈಗ ಅವರ ಬಣದಲ್ಲಿ 35 ಜನ ಶಾಸಕರು ಇದ್ದಾರೆ.
ಮಹರಾಷ್ಟ್ರದಲ್ಲಿ ಎನ್ಸಿಪಿಯಲ್ಲಿ ಒಟ್ಟು 53 ಶಾಸಕರಿದ್ದು ಅಜಿತ್ ಪವಾರ್ ಜೊತೆ ಈಗ 35 ಜನ ಶಾಸಕರು ಅಜಿತ್ ಕರೆದಿದ್ದ ಸಭೆಗೆ ಹಾಜರಾಗಿದ್ದಾರೆ. ಬುಧವಾರ ಮುಂಬೈನಲ್ಲಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ಕರೆದಿದ್ದ ಪಕ್ಷದ ಸಭೆಯಲ್ಲಿ 53 ಎನ್ಸಿಪಿ ಶಾಸಕರ ಪೈಕಿ 35 ಮಂದಿ ಹಾಜರಿದ್ದರು. ಈ ಸಂಖ್ಯೆ ಇನ್ನೂ ಹೆಚ್ಚಾಗಲಿದೆ ಎಂದು ಮೂಲಗಳು ತಿಳಿಸಿವೆ.

ಉಪನಗರ ಬಾಂದ್ರಾದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಎಂಟು ಎನ್ಸಿಪಿ ಎಂಎಲ್ಸಿಗಳಲ್ಲಿ ಐವರು ಸಹ ಭಾಗವಹಿಸುತ್ತಿದ್ದಾರೆ. ಮಹಾರಾಷ್ಟ್ರ ವಿಧಾನಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಅನಂತ್ ಕಲ್ಸೆ ಪ್ರಕಾರ, ಅಜಿತ್ ಪವಾರ್ ಅನರ್ಹತೆಯನ್ನು ತಪ್ಪಿಸಲು ಕನಿಷ್ಠ 36 ಶಾಸಕರ ಬೆಂಬಲ ಅಗತ್ಯವಿದೆ.
ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಉಪಮುಖ್ಯಮಂತ್ರಿಯಾಗಲು ಪಕ್ಷದಿಂದ ದೂರಾಗಿದ್ದ ಅಜಿತ್ ಪವಾರ್ ಅವರು ಕರೆದಿದ್ದ ಶಕ್ತಿ ಸಭೆಗೆ ಗಂಟೆಗಳ ಮೊದಲು, ಬುಧವಾರ ದಕ್ಷಿಣ ಮುಂಬೈನಲ್ಲಿರುವ ಅವರ ನಿವಾಸಕ್ಕೆ ಅವರ ಬೆಂಬಲಿಗರು ನೆರೆದಿದ್ದರು. ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಶರದ್ ಪವಾರ್ ಮತ್ತು ಅಜಿತ್ ಪವಾರ್ ಬಣಗಳು ಕ್ರಮವಾಗಿ ದಕ್ಷಿಣ ಮುಂಬೈನ ಯಶವಂತರಾವ್ ಚವಾಣ್ ಸೆಂಟರ್ ಮತ್ತು ಬಾಂದ್ರಾದ ಉಪನಗರದ ಭುಜಬಲ್ ನಾಲೆಡ್ಜ್ ಸಿಟಿಯಲ್ಲಿ ತಮ್ಮ ಸಭೆಗಳನ್ನು ನಡೆಸುತ್ತಿವೆ.

ದಕ್ಷಿಣ ಮುಂಬೈನಲ್ಲಿರುವ ಹಿರಿಯ ಪವಾರ್ ಅವರ ನಿವಾಸವಾದ ಸಿಲ್ವರ್ ಓಕ್ನ ಹೊರಗೆ, ಪಕ್ಷದ ಕಾರ್ಯಕರ್ತರೊಬ್ಬರು ಬ್ಯಾನರ್ ಅನ್ನು ಹಿಡಿದಿರುವುದು ಕಂಡುಬಂದಿದೆ. 83 ವರ್ಷದ ಯೋಧ ಏಕಾಂಗಿಯಾಗಿ ಹೋರಾಟ ನಡೆಸುತ್ತಿದ್ದಾರೆ ಎಂದು ಸಂಸದೆ ಸುಪ್ರಿಯಾ ಸುಳೆ ಹೇಳಿದ್ದು,. ಅಜಿತ್ ಪವಾರ್ ಅವರು ಬಾಂದ್ರಾದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಳ್ಳಲು ಹೊರಡುವ ಮೊದಲು ದಕ್ಷಿಣ ಮುಂಬೈನಲ್ಲಿರುವ ಅವರ ದೇವಗಿರಿ ಅಧಿಕೃತ ನಿವಾಸದ ಹೊರಗೆ ಕೂಡ ಅಜಿತ್ ಪವಾರ್ ಅವರ ಬೆಂಬಲಿಗರು ಜಮಾಯಿಸಿದ್ದರು.
"ನಾವು ಹಾರ್ಡ್ ಕೋರ್ ದಾದಾ (ಅಜಿತ್ ಪವಾರ್ ಎಂದು ಕರೆಯುತ್ತಾರೆ) ಬೆಂಬಲಿಗರು. ನಾವು ಬಾರಾಮತಿಯಿಂದ ಬಂದಿದ್ದೇವೆ ಎಂದು ಎನ್ಸಿಪಿ ಕಾರ್ಯಕರ್ತರೊಬ್ಬರು ದೇವಗಿರಿಯ ಹೊರಗೆ ಮಾಧ್ಯಮಗಳಿಗೆ ತಿಳಿಸಿದರು. ಪಕ್ಷದ 53 ಶಾಸಕರ ಪೈಕಿ 40 ಶಾಸಕರು ಅಜಿತ್ ಪವಾರ್ ಜೊತೆಗಿದ್ದಾರೆ ಎಂದು ಶಾಸಕ ಅನಿಲ್ ಪಾಟೀಲ್ ಹೇಳಿದ್ದಾರೆ.
ಅಜಿತ್ ಪವಾರ್ ಮತ್ತು ಛಗನ್ ಭುಜಬಲ್, ದಿಲೀಪ್ ವಾಲ್ಸೆ ಪಾಟೀಲ್ ಮತ್ತು ಹಸನ್ ಮುಶ್ರೀಫ್ ಸೇರಿದಂತೆ ಎಂಟು ಶಾಸಕರು ಭಾನುವಾರ ಏಕನಾಥ್ ಶಿಂಧೆ ಸರ್ಕಾರಕ್ಕೆ ಸೇರ್ಪಡೆಗೊಂಡ ನಂತರ ಎರಡೂ ಬಣಗಳಿಗೆ ಪಕ್ಷದ ಪದಾಧಿಕಾರಿಗಳನ್ನು ಒಳಗೊಂಡ ಮೊದಲ ಸಭೆ ಇದಾಗಿದೆ. ತಮ್ಮೊಂದಿಗೆ ಹೆಚ್ಚಿನ ಶಾಸಕರಿದ್ದಾರೆ ಎಂದು ಎರಡೂ ಬಣಗಳು ಹೇಳಿಕೊಂಡಿವೆ.












Click it and Unblock the Notifications