ನಾನು ಸುರಕ್ಷಿತವಾಗಿದ್ದೇನೆ ವದಂತಿಗಳನ್ನು ನಂಬಬೇಡಿ: ರಾಮ್ ದೇವ್
ನವದೆಹಲಿ, ಏಪ್ರಿಲ್ 25 : ಯೋಗ ಗುರು ಪತಾಂಜಲಿ ಸಂಸ್ಥೆಯ ಮುಖ್ಯಸ್ಥ ಬಾಬಾ ರಾಮ್ ದೇವ್ ಅಪಘಾತದಲ್ಲಿ ಮರಣ ಹೊಂದಿದ್ದಾರೆ ಎಂಬ ವದಂತಿಗೆ ಖುದ್ದು ರಾಮ್ ದೇವ್ ಟ್ವೀಟ್ ಮಾಡುವ ಮೂಲಕ ಉಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
"ನಾನು ಇವತ್ತು ಹರಿದ್ವಾರದಲ್ಲಿ ಸಾವಿರಾರೂ ಯೋಗಿಗಳ ಮಧ್ಯೆ ಸುರಕ್ಷಿತ ಹಾಗೂ ಆರೋಗ್ಯವಾಗಿದ್ದೇನೆ. ಯವುದೇ ವದಂತಿಗಳನ್ನು ನಂಬಬೇಡಿ" ಎಂದು ತಮ್ಮ ಅನುಯಾಯಿಗಳಿಗೆ ಟ್ವಿಟ್ಟರ್ ಮೂಲಕ ಕರೆ ನೀಡಿದ್ದಾರೆ.

ಯೋಗ ಗುರು ಪತಾಂಜಲಿ ಸಂಸ್ಥೆಯ ಮುಖ್ಯಸ್ಥ ಬಾಬಾ ರಾಮ್ ದೇವ್ ಅವರು ಪುಣೆಯಿಂದ ಮುಂಬೈಗೆ ಪ್ರಯಾಣ ಮಾಡುವಾಗ ಮುಂಬೈ-ಪುಣೆ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆಂದು ಎಲ್ಲೆಡೆ ಸುಳ್ಳು ಸುದ್ದಿ ಹಬ್ಬಿತ್ತು.
Took yog shivir of thousands of yogis in Haridwar today. I am safe and healthy. Don't believe on any rumours pic.twitter.com/6P2KlUXw8l
— Swami Ramdev (@yogrishiramdev) April 25, 2017
ಇನ್ನು ಈ ಬಗ್ಗೆ ಪುಣೆ - ಮುಂಬೈ ಹೆದ್ದಾರಿಯಲ್ಲಿ ಯಾವುದೇ ಅಪಘಾತವಾಗಿಲ್ಲ ಎಂದು ಹೆದ್ದಾರಿ ನಿಯಂತ್ರಣ ಅಧಿಕಾರಿಗಳ ಸಹ ಸ್ಪಷ್ಟಪಡಿಸಿದ್ದಾರೆ.
2011 ರಲ್ಲಿ ನಡೆದ ಅಪಘಾತವೊಂದರಲ್ಲಿ ಗಾಯಗೊಂಡಿದ್ದ ರಾಮ್ ದೇವ್ ಅವರನ್ನು ಆಸ್ಪತ್ರೆಗೆ ಸಾಗಿಸುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟು ಸುದ್ದಿ ಹಬ್ಬಿಸಲಾಗಿತ್ತು.












Click it and Unblock the Notifications