‘ಆಜಾದಿ ಕಾ ಅಮೃತ್ ಮಹೋತ್ಸವ’ ನವ ಭಾರತದ ದೃಷ್ಟಿಯನ್ನು ತೋರಿಸಿದೆ: ಸಿಎಂ ಯೋಗಿ ಆದಿತ್ಯನಾಥ್‌

ಲಕ್ನೋ, ಆಗಸ್ಟ್‌ 9: ಕಾಕೋರಿ ರೈಲು ಕಾರ್ಯಾಚರಣೆಯ 98 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶಿಲಾಫಲಕವನ್ನು (ಶಿಲಾಪಟ್ಟ) ಅನಾವರಣಗೊಳಿಸುವ ಮೂಲಕ "ಮೇರಿ ಮತಿ, ಮೇರಾ ದೇಶ್" ಅಭಿಯಾನಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಸಿಎಂ ಯೋಗಿ, 'ಆಜಾದಿ ಕಾ ಅಮೃತ್ ಮಹೋತ್ಸವ'ವು ಯಾವುದೇ ನಾಗರಿಕರ ವಿರುದ್ಧ ಜಾತಿ, ಮತ ಮತ್ತು ಧರ್ಮದ ಆಧಾರದ ಮೇಲೆ ಯಾವುದೇ ತಾರತಮ್ಯವಿಲ್ಲದ ನವ ಭಾರತದ ದೃಷ್ಟಿಕೋನವನ್ನು ತೋರಿಸಿದೆ ಎಂದು ಹೇಳಿದರು.

Azadi Ka Amrit Mahotsav Shows Vision of New India: CM Yogi Adityanath

ಮಹಾನ್ ಕ್ರಾಂತಿಕಾರಿಗಳು, ಹುತಾತ್ಮರು, ಭಾರತದ ಗಡಿ ಕಾಯುವ ವೀರ ಯೋಧರು ಮತ್ತು ಆಂತರಿಕ ಭದ್ರತೆಯ ಸುಧಾರಣೆಗೆ ಕೊಡುಗೆ ನೀಡಿದ ಸೈನಿಕರಿಗೆ ಅವರು ನಮ್ರ ಶ್ರದ್ಧಾಂಜಲಿ ಸಲ್ಲಿಸಿದರು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಹುತಾತ್ಮರ ಸ್ಮಾರಕಗಳಲ್ಲಿ ತೆಗೆದ ಸೆಲ್ಫಿಗಳನ್ನು ಅಪ್‌ಲೋಡ್ ಮಾಡುವಂತೆ ಜನರನ್ನು ಒತ್ತಾಯಿಸಿದ ಮುಖ್ಯಮಂತ್ರಿ, "ತ್ರಿವರ್ಣ ಧ್ವಜವು ನಮ್ಮ ಹೆಮ್ಮೆಯ ಸಂಕೇತವಾಗಿದೆ, ಪ್ರತಿ ನಿವಾಸದಲ್ಲಿ ತಿರಂಗ ಹಾರಿಸಬೇಕು. ಆಗಸ್ಟ್ 13 ರಿಂದ 15 ರವರೆಗೆ ಜನರು ತಮ್ಮ ಸ್ಥಳದಲ್ಲಿ ನಿಂತು ಮಣ್ಣನ್ನು ಪೂಜಿಸಿ ವೀರರಿಗೆ ನಮಸ್ಕರಿಸುವಂತೆ ಸಿಎಂ ಯೋಗಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

1947ರ ಆಗಸ್ಟ್ 14 ಭಾರತ ವಿಭಜನೆಯ ದುರಂತದ ದಿನವಾಗಿದ್ದು, ಯಾವುದೇ ಬೆಲೆ ತೆತ್ತಾದರೂ ದೇಶದ ಮತ್ತೊಂದು ವಿಭಜನೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು. ಪ್ರತಿಯೊಬ್ಬ ನಾಗರಿಕರು 'ಏಕ್ ಭಾರತ್ ಶ್ರೇಷ್ಠ ಭಾರತ್' ಸಂಕಲ್ಪವನ್ನು ತೆಗೆದುಕೊಳ್ಳಬೇಕು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ನಾಗರಿಕ ಕರ್ತವ್ಯಗಳಿಗೆ ಒತ್ತು ನೀಡಿದ ಮುಖ್ಯಮಂತ್ರಿಗಳು, "ಶಿಕ್ಷಕರು ಬೋಧನೆ ಮಾಡಬೇಕು, ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕು, ಸಮಾಜ ಸೇವಕರು ಸಮಾಜವನ್ನು ಉನ್ನತೀಕರಿಸಬೇಕು ಮತ್ತು ಆಡಳಿತಾತ್ಮಕ ಕೆಲಸದಲ್ಲಿ ತೊಡಗಿರುವ ಜನರು ತಮ್ಮ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ತಮ್ಮ ನಾಗರಿಕ ಕರ್ತವ್ಯಗಳನ್ನು ನಿರ್ವಹಿಸದವರು ದೇಶಕ್ಕೆ ಮೋಸ ಮಾಡುತ್ತಿದ್ದಾರೆ.

ಇಂದಿನ ಪೀಳಿಗೆಯವರು ಸ್ವಾತಂತ್ರ್ಯೋತ್ಸವವನ್ನು ವೀಕ್ಷಿಸಲು ಸಾಧ್ಯವಾಗದಿದ್ದರೂ, ಭಾರತದ 75 ನೇ ಸ್ವಾತಂತ್ರ್ಯೋತ್ಸವದ ಆಚರಣೆಯಲ್ಲಿ ಭಾಗವಹಿಸುವ ಭಾಗ್ಯವಿದೆ. ಇನ್ನೂರು ವರ್ಷಗಳ ಕಾಲ ನಮ್ಮನ್ನು ಆಳಿದ ಬ್ರಿಟನ್ ಬದಲಿಗೆ ನಾವು ಐದನೇ ಅತಿದೊಡ್ಡ ಆರ್ಥಿಕತೆಯಾಗಿದ್ದೇವೆ. ಭಾರತವು ಜಿ-20 ಅಧ್ಯಕ್ಷರಾಗಿ ಸ್ವಾವಲಂಬನೆಯತ್ತ ಸಾಗುತ್ತಿದೆ. ಜಗತ್ತಿನಲ್ಲಿ ಮಾನವೀಯತೆಯ ಕಲ್ಯಾಣಕ್ಕೆ ರಾಷ್ಟ್ರವು ದಾರಿ ಮಾಡಿಕೊಡುತ್ತಿದೆ ಎಂದು ಹೇಳಿದರು.

98 ವರ್ಷಗಳ ಹಿಂದೆ, ಭಾರತದಲ್ಲಿ ಪರಕೀಯರ ಆಳ್ವಿಕೆಯ ದಿನಗಳು ಮುಗಿದಿವೆ ಎಂದು ಜನರು ಅರಿತುಕೊಂಡಾಗ ಅದು ಕ್ರಾಂತಿಯ ಸಮಯವಾಗಿರಬೇಕು ಎಂದು ಸಿಎಂ ಯೋಗಿ ಹೇಳಿದರು ಮತ್ತು ಪಂಡಿತ್ ರಾಮ್ ಪ್ರಸಾದ್ ಬಿಸ್ಮಿಲ್ ಅವರಂತಹ ಕ್ರಾಂತಿಕಾರಿಗಳು ತಮ್ಮ ಪ್ರತಿರೋಧ ಚಳವಳಿಯನ್ನು ಮುಂದುವರೆಸಿದರು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+