ಆಗಸ್ಟ್ 15; ಭಾರತವಲ್ಲದೆ ಇನ್ನೂ ನಾಲ್ಕು ದೇಶಗಳಿಗೆ ಸ್ವಾತಂತ್ರ್ಯ ದೊರೆತ ದಿನ
ಬೆಂಗಳೂರು, ಆಗಸ್ಟ್ 14: ಪ್ರತಿ ವರ್ಷ ಸ್ವಾತಂತ್ರ್ಯ ದಿನಾಚರಣೆ ಸಮೀಪಿಸಿದಾಗಲೂ ವಿಚಿತ್ರ ಸಂದೇಶವೊಂದು ಮೊಬೈಲ್, ಇ-ಮೇಲ್ಗಳಲ್ಲಿ ಹರಿದಾಡುತ್ತಿರುತ್ತದೆ.
72ನೇ ಸ್ವಾತಂತ್ರ್ಯ ದಿನಾಚರಣೆ 2018
ಅದನ್ನು ಹಂಚಿಕೊಂಡವರು ಅದು ಸತ್ಯವೇ ಅಥವಾ ಸುಳ್ಳೇ ಎಂದು ಯೋಚಿಸುವ ಗೋಚಿಗೆ ಹೋಗುವುದಿಲ್ಲ. ಆ ಸಂದೇಶವನ್ನು ನೀವೂ ನೋಡಿರಬಹುದು. ತಮಾಷೆ ಎನಿಸಿ ಕೆಲವರು ನಕ್ಕು ಸುಮ್ಮನಾದರೆ, ಇನ್ನು ಕೆಲವರು ಅದು ನಿಜ ಎಂದುಕೊಂಡು ಉಳಿದವರಿಗೂ ಫಾರ್ವರ್ಡ್ ಮಾಡುತ್ತಾರೆ.
ಭೂತಾನಕ್ಕೆ ಇಂಗ್ಲಿಷ್ನಲ್ಲಿ Bhutan ಎನ್ನುವರು. ಶ್ರೀಲಂಕಾಕ್ಕೆ ಇಂಗ್ಲಿಷ್ನಲ್ಲಿ Srilanka ಎನ್ನುವರು. ನೇಪಾಳಕ್ಕೆ ಇಂಗ್ಲಿಷ್ನಲ್ಲಿ Nepal ಎನ್ನುವರು. ಇಷ್ಟೇ ಅಲ್ಲ, ನಮ್ಮ ಸಮೀಪವಿರುವ ಪಾಕಿಸ್ತಾನಕ್ಕೆ ಇಂಗ್ಲಿಷ್ನಲ್ಲಿ Pakistan ಎನ್ನುವರು. ಆದರೆ ಭಾರತಕ್ಕೆ ಮಾತ್ರ ಇಂಗ್ಲಿಷ್ನಲ್ಲಿ India ಎನ್ನುವರು.
ಆಕ್ಸ್ಫರ್ಡ್ ಡಿಕ್ಷನರಿ ಅನುಸಾರ India ಎಂಬ ಶಬ್ಧಕ್ಕೆ 99% ಜನರಿಗೆ ಮಾಹಿತಿ ಇಲ್ಲದೆ ಇರಬಹುದು.
I- Independent
N- Nation
D- Declared
I- In
A- August. ಆದ್ದರಿಂದ India ಎಂದು ಕರೆಯುತ್ತಾರೆ ಎಂಬಂತಹ ಸಂದೇಶಗಳನ್ನು ಇಂದಿಗೂ ಜನ ನಂಬುತ್ತಾರೆ.

ಪಾಕಿಸ್ತಾನವೂ ಇಂಡಿಯಾ ಆಗಬೇಕಿತ್ತಲ್ಲವೇ?
ದೇಶಕ್ಕೆ ಸ್ವಾತಂತ್ರ್ಯ ಬರುವ ಮುನ್ನವೇ ಇಂಡಿಯಾ ಎಂದು ಭಾರತವನ್ನು ಕರೆಯಲಾಗುತ್ತಿತ್ತು ಎಂಬುದನ್ನು ಇತಿಹಾಸದಲ್ಲಿ ಓದಿದವರೂ ಅದನ್ನು ಜ್ಞಾಪಿಸಿಕೊಳ್ಳುವುದಿಲ್ಲ.
India ಎಂಬ ಪದದ ಹುಟ್ಟಿನ ಬಗ್ಗೆ ಇಂದಿಗೂ ಸಾಕಷ್ಟು ಚರ್ಚೆಗಳಾಗುತ್ತಿವೆ. ಅದು ಸಿಂಧೂ ನಾಗರಿಕತೆಯ ಕಾರಣದಿಂದ ಹುಟ್ಟಿದ್ದು ಎಂದರೆ ಇನ್ನು ಅನೇಕರು ಹಿಂದೂ ಧರ್ಮದ ಕಾರಣದಿಂದ ಇಂಡಿಯಾ ಎಂಬ ಪದವನ್ನು ಬ್ರಿಟಿಷರು ಸೃಷ್ಟಿಸಿದರು ಎಂದು ವಾದಿಸುತ್ತಾರೆ.
ಈ ವಾದ ಒಂದು ಮಗ್ಗುಲಾದರೆ, ಭಾರತಕ್ಕಿಂತ ಒಂದು ದಿನ ಮೊದಲು ಸ್ವಾತಂತ್ರ್ಯ ಪಡೆದ ಪಾಕಿಸ್ತಾನವೂ ಆಗಸ್ಟ್ನಲ್ಲಿಯೇ ಹುಟ್ಟಿದ್ದಲ್ಲವೇ? ಹಾಗಾದರೆ ಅದರ ಹೆಸರು ಕೂಡ India ಎಂದಾಗಬೇಕಿತ್ತಲ್ಲವೇ? ಮಾತ್ರವಲ್ಲ, ಜಗತ್ತಿನ ಸುಮಾರು 29 ದೇಶಗಳು ಆಗಸ್ಟ್ನಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತವೆ. ಇವುಗಳೆಲ್ಲವೂ ಇಂಡಿಯಾ ಎಂದೇ ಹೆಸರಾಗಬೇಕಿತ್ತಲ್ಲವೇ?
ಅಂದಹಾಗೆ, ಆಗಸ್ಟ್ 15 ಭಾರತಕ್ಕೆ ಮಾತ್ರವಲ್ಲ, ಇನ್ನೂ ನಾಲ್ಕು ದೇಶಗಳಿಗೆ ಸ್ವಾತಂತ್ರ್ಯ ದೊರೆತ ದಿನ.

ಭಾರತ
1947ರ ಆಗಸ್ಟ್ 15 ಭಾರತಕ್ಕೆ ಸ್ವಾತಂತ್ರ್ಯ ಬಂದ ದಿನ. ಒಂದು ದಿನ ಮುಂಚೆ ಅಖಂಡ ಭಾರತವನ್ನು ವಿಭಜಿಸಿ ಪಾಕಿಸ್ತಾನ ಎಂಬ ದೇಶ ಸೃಷ್ಟಿಸಿ ಅದಕ್ಕೆ ಸ್ವಾತಂತ್ರ್ಯ ನೀಡಿದ ಬ್ರಿಟಿಷರು, ಮರು ದಿನ ಮಧ್ಯರಾತ್ರಿ ಭಾರತದಿಂದಲೂ ನಿರ್ಗಮಿಸಿದರು. ಹೀಗಾಗಿ ಪ್ರತಿ ವರ್ಷ ಆಗಸ್ಟ್ 15ಅನ್ನು ಸ್ವಾತಂತ್ರ್ಯ ದಿನವನ್ನಾಗಿ ಆಚರಿಸಲಾಗುತ್ತಿದೆ.
ವ್ಯಾಪಾರಕ್ಕೆಂದು ಬಂದ ಯುರೋಪಿಯನ್ನರು ಭಾರತವನ್ನು ವಸಾಹತುವನ್ನಾಗಿಸಿಕೊಂಡು ಇಲ್ಲಿನ ಜನರನ್ನೇ ಶತಮಾನಗಳವರೆಗೆ ಆಳಿದರು. ಅದರ ವಿರುದ್ಧ ನಡೆದ ಹೋರಾಟಗಳು, ಚಳವಳಿಗಳ ಕಥೆ ಇಂದಿಗೂ ಮೈನವಿರೇಳಿಸುತ್ತವೆ.

ರಿಪಬ್ಲಿಕ್ ಆಫ್ ಕಾಂಗೊ
ಆಫ್ರಿಕಾದ ಕೇಂದ್ರ ಭಾಗದಲ್ಲಿರುವ ರಿಪಬ್ಲಿಕ್ ಆಫ್ ಕಾಂಗೊ 1960ರ ಆಗಸ್ಟ್ 15ರಂದು ಫ್ರಾನ್ಸ್ ವಸಾಹತುವಿನಿಂದ ಮುಕ್ತಗೊಂಡಿತು.
15ನೇ ಶತಮಾನದಲ್ಲಿ ಯುರೋಪಿನ ವ್ಯಾಪಾರಿಗಳು ಬಂಟು ಬುಡಕಟ್ಟು ಸಮುದಾಯ ಮತ್ತು ಪೋರ್ಚುಗೀಸ್ ನಡುವೆ ವ್ಯಾಪಾರ ಸಂಬಂಧಕ್ಕಾಗಿ ಕಾಂಗೊ ನದಿಯನ್ನು ಬಳಸಿಕೊಳ್ಳಲು ಆರಂಭಿಸಿದರು. ಬಳಿಕ ಪೋರ್ಚುಗೀಸರು ಕಾಂಗೊದಿಂದ ಗುಲಾಮರನ್ನು ಬ್ರೆಜಿಲ್ನ ಕಾಫಿ ಫ್ಲಾಂಟೇಷನ್ಗಳಿಗೆ ಸಾಗಿಸಿದರು. ಈ ಗುಲಾಮ ವ್ಯಾಪಾರ ಭಾರಿ ಪ್ರಮಾಣದ ದಂಗೆ, ಗಲಭೆಗಳಿಗೆ ಕಾರಣವಾಗಿ ಕೊನೆಗೂ ಸ್ವಾತಂತ್ರ್ಯ ತಂದುಕೊಟ್ಟಿತು.

ಕೊರಿಯಾ
ಆಗಸ್ಟ್ 15ರಂದು ರಾಷ್ಟ್ರೀಯ ವಿಮೋಚನಾ ದಿನವನ್ನು ದಕ್ಷಿಣ ಮತ್ತು ಉತ್ತರ ಕೊರಿಯಾಗಳೆರಡು ದೇಶಗಳಲ್ಲಿಯೂ ಆಚರಿಸಲಾಗುತ್ತದೆ. ಎರಡನೆಯ ಮಹಾಯುದ್ಧದ ಸಂದರ್ಭದವರೆಗೆ ಜಪಾನ್ ಹಿಡಿತದಲ್ಲಿದ್ದ ಕೊರಿಯಾವನ್ನು ಅಮೆರಿಕ ಮತ್ತು ಸೋವಿಯತ್ ಪಡೆಗಳು ವಿಮೋಚನೆಗೊಳಿಸಿದವು. ಇದನ್ನು ಜಪಾನ್ ವಿರುದ್ಧದ ಜಯದ ದಿನ ಎಂದೂ ಕರೆಯಲಾಗುತ್ತದೆ. ವಿಶೇಷವೆಂದರೆ ದಕ್ಷಿಣ ಮತ್ತು ಉತ್ತರ ಕೊರಿಯಾಗಳಲ್ಲಿ ಇರುವ ಏಕೈಕ ಸಾರ್ವಜನಿಕ ರಜಾ ದಿನ ಇದು.
1945ರಲ್ಲಿ ಕೊರಿಯಾದ ಪೆನಿನ್ಸುಲಾ ಸ್ವತಂತ್ರಗೊಂಡಿತು. ಮೂರು ವರ್ಷಗಳ ಬಳಿಕ 1948ರ ಆಗಸ್ಟ್ 15ರಂದು ಸ್ವತಂತ್ರ ಕೊರಿಯನ್ ಸರ್ಕಾರಗಳು ಸೃಷ್ಟಿಯಾದವು. ಇದನ್ನು ದಕ್ಷಿಣ ಕೊರಿಯಾದಲ್ಲಿ 'ಬೆಳಕು ಮರುಕಳಿಸಿದ ದಿನ' ಎಂದು ಕರೆಯಲಾಗುತ್ತದೆ. ಉತ್ತರ ಕೊರಿಯಾದಲ್ಲಿ 'ಪಿತೃಭೂಮಿಯ ವಿಮೋಚನಾ ದಿನ' ಎಂದು ಆಚರಿಸಲಾಗುತ್ತದೆ.

ಲೀಚೆಂಸ್ಟೀನ್
ಆಸ್ಟ್ರಿಯಾ ಮತ್ತು ಸ್ವಿಟ್ಜರ್ಲೆಂಡ್ ದೇಶಗಳ ನಡುವೆ ಕೇವಲ 160 ಚದರ ಕಿ.ಮೀ. ವ್ಯಾಪ್ತಿ ಹಿಂದಿರುವ ಪುಟ್ಟ ದೇಶ ಲೀಚೆಂಸ್ಟೀನ್. ಇಲ್ಲಿರುವುದು ಜರ್ಮನ್ ಭಾಷೆ ಮಾತನಾಡುವ ಜನರು. 1940ರಲ್ಲಿ ಈ ದೇಶ ಸ್ವತಂತ್ರವಾಯಿತು.
77 ವರ್ಷಗಳಿಂದ ಆಗಸ್ಟ್ 15ಅನ್ನು ರಾಷ್ಟ್ರೀಯ ದಿನವನ್ನಾಗಿ ಇಲ್ಲಿ ಆಚರಿಸಲಾಗುತ್ತಿದೆ. ಆಗಸ್ಟ್ 16 ಇಲ್ಲಿನ ರಾಜಕುಮಾರ ಫ್ರಾನ್ಸ್ ಜೋಸೆಫ್ 2 ಜನ್ಮದಿನ. ಬ್ಯಾಂಕ್ ರಜಾ ದಿನವನ್ನಾಗಿ ಮೊದಲಿನಿಂದಲೂ ಆಚರಿಸಲಾಗುತ್ತಿದ್ದರಿಂದ ಮತ್ತು ಮರುದಿನವೇ ರಾಜಕುಮಾರನ ಜನಿಸಿದ್ದರಿಂದ ರಾಷ್ಟ್ರೀಯ ದಿನವನ್ನಾಗಿ ಆಗಸ್ಟ್ 15ರಂದು ಆಚರಣೆ ಮಾಡಲಾಗುತ್ತದೆ.

ಬಹ್ರೇನ್
1971ರ ಆಗಸ್ಟ್ 15ರಂದು ಬಹ್ರೇನ್ ಸ್ವತಂತ್ರವಾಯಿತು. ಸುಮಾರು 40 ವರ್ಷಗಳವರೆಗೆ ಬಹ್ರೇನ್, ಬ್ರಿಟಿಷರ ಆಡಳಿತದಲ್ಲಿತ್ತು. 1960ರ ದಶಕದಲ್ಲಿ ಸೂಯೆಜ್ನ ಪೂರ್ವ ಭಾಗದಿಂದ ತಮ್ಮ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವುದಾಗಿ ಬ್ರಿಟಿಷರು ಘೋಷಿಸಿದ್ದರು.
1971ರ ಆಗಸ್ಟ್ 15ರಂದು ಬ್ರಿಟಿಷರೊಂದಿಗಿದ್ದ ಹಳೆಯ ಒಪ್ಪಂದಗಳನ್ನು ರದ್ದುಗೊಳಿಸಿ ಹೊಸ ಸ್ನೇಹದ ಒಪ್ಪಂದವನ್ನು ಪ್ರಕಟಿಸುವುದರೊಂದಿಗೆ ಬಹ್ರೇನ್ ತನ್ನ ಸ್ವಾತಂತ್ರ್ಯವನ್ನು ಘೋಷಿಸಿತು.
ಆದರೆ ಆಗಸ್ಟ್ 15 ಅದರ ಸ್ವಾತಂತ್ರ್ಯದ ದಿನವಾದರೂ ಆ ದಿನವನ್ನು ಬಹ್ರೇನ್ ಆಚರಿಸುತ್ತಿಲ್ಲ. ಬದಲಾಗಿ ಮಾಜಿ ರಾಜ ಇಸಾ ಬಿನ್ ಸಲ್ಮಾನ್ ಅಲ್ ಖಲಿಫಾ ಸಿಂಹಾಸನಕ್ಕೇರಿದ ದಿನವಾದ ಡಿಸೆಂಬರ್ 16ರಂದು ರಾಷ್ಟ್ರೀಯ ದಿನವನ್ನಾಗಿ ಆಚರಿಸಲಾಗುತ್ತಿದೆ.
-
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್












Click it and Unblock the Notifications