ಹಿಂದೂ ಹಬ್ಬಗಳ ಮೇಲೆ ದಾಳಿ: ಆಘಾತಕಾರಿ ತಂತ್ರ ಮಹಾಕುಂಭ ಮೇಳ 2025ರ ವೇಳೆ ಬಹಿರಂಗ

ಹಿಂದೂ ಹಬ್ಬಗಳು ಮತ್ತು ಧಾರ್ಮಿಕ ಆಚರಣೆಗಳು ನೂರಾರು ವರ್ಷಗಳಿಂದ ಭಾರತದ ಶ್ರೀಮಂತಿಕೆಯ ಹೆಗ್ಗುರುತಾಗಿವೆ, ಇವುಗಳನ್ನು ಗುರಿಯಾಗಿಸುತ್ತಿರುವ ವಿಚಾರವೂ ಬೆಳಕಿಗೆ ಬರುತ್ತಿದೆ. ಜನವರಿ 12, 2025ರಂದು ಇಂತಹ ಒಂದು ಘಟನೆ ನಡೆಯಿತು. ಭಕ್ತರು ಪ್ರಯಾಗ್‌ರಾಜ್‌ನ ಮಹಾಕುಂಭ ಮೇಳಕ್ಕೆ ಹೋಗಲು ತಾಪ್ತಿ ಗಂಗಾ ಎಕ್ಸ್‌ಪ್ರೆಸ್ ರೈಲನ್ನು ಏರಿದ್ದರು, ಮಹಾರಾಷ್ಟ್ರದ ಜಳಗಾಂವ್ ಬಳಿ ರೈಲಿನ ಮೇಲೆ ಕಲ್ಲಿನಿಂದ ದಾಳಿ ನಡೆಸಲಾಯಿತು. ಈ ದಾಳಿ ಹಿಂದೂ ಹಬ್ಬಗಳ ವಿರುದ್ಧ ಹೆಚ್ಚುತ್ತಿರುವ ವೈಮನಸ್ಯದ ಘಟನಾವಳಿಗೆ ಸೇರಿದೆ, ಹೆಚ್ಚುತ್ತಿರುವ ಅಸಹಿಷ್ಣುತೆ ಮತ್ತು ನಿಗದಿತ ಗುರಿಯ ಹಿಂಸೆಯ ಕಳವಳಕಾರಿ ಚಿತ್ರವನ್ನು ತೆರೆದಿಟ್ಟಿದೆ.

Attacks On Hindu Festivals A Disturbing Trend Exposed During Mahakumbh 2025

ಭಕ್ತರ ಮೇಲೆ ದಾಳಿ: ತಾಪ್ತಿ ಗಂಗಾ ಎಕ್ಸ್‌ಪ್ರೆಸ್ ರೈಲಿನ ಘಟನೆ

ಒಬ್ಬ ಪ್ರಯಾಣಿಕರು ಘಟನೆ ಕುರಿತು ಮಾತನಾಡಿ, "ಮಹಾಕುಂಭ ಮೇಳಕ್ಕೆ ಭಕ್ತರನ್ನು ಕರೆದುಕೊಂಡು ಹೋಗುತ್ತಿರುವ ಮೊದಲ ರೈಲು ಇದಾಗಿದೆ. ನಮ್ಮ ಮೇಲೆ ಕಲ್ಲಿನಿಂದ ಏಕಾಏಕಿ ದಾಳಿ ನಡೆಯಿತು. ಗಾಜುಗಳು ಚೂರು ಚೂರಾಯಿತು, ಇದರಿಂದ ಹಲವರಿಗೆ ಗಾಯವಾಯಿತು. ನಾವು ತಕ್ಷಣದ ಸುರಕ್ಷಿತ ಕ್ರಮಕ್ಕೆ ಬೇಡಿಕೆ ಇಟ್ಟೆವು" ಎಂದು ಹೇಳಿದ್ದಾರೆ. ಇಂತಹದ್ದೇ ಘಟನೆ 2024ರಲ್ಲಿ ನಡೆದಿತ್ತು. ಅಯೋಧ್ಯೆ ಮತ್ತು ಇತರ ಯಾತ್ರಾ ಸ್ಥಳಗಳಿಗೆ ಭಕ್ತರನ್ನು ಕರೆದುಕೊಂಡು ಹೋಗುತ್ತಿದ್ದ ರೈಲನ್ನು ಸಮಾಜಘಾತುಕ ಶಕ್ತಿಗಳು ಗುರಿಯಾಗಿಸಿದ್ದವು.

ತಾಪ್ತಿ ಗಂಗಾ ಎಕ್ಸ್‌ಪ್ರೆಸ್ ರೈಲಿನ ಮೇಲಿನ ದಾಳಿ ತೊಂದರೆ ಕೊಡುವ ಪ್ರವೃತ್ತಿಯನ್ನು ಹೇಳಿದೆ. ಯಾತ್ರಿಕರು ವಿಶ್ವಮಟ್ಟದಲ್ಲಿಯೇ ಭಾರತವನ್ನು ಸಾಂಸ್ಕೃತಿಕ ವೈಭವಕ್ಕಾಗಿ ತಿರುಗಿ ನೋಡುವಂತೆ ಮಾಡುತ್ತಿರುವ ಮಹಾಕುಂಭ ಮೇಳಕ್ಕೆ ಹೋಗುತ್ತಿದ್ದರು, ಅವರನ್ನು ಗುರಿಯಾಗಿಸಿ ದಾಳಿ ನಡೆಸಲಾಯಿತು. ರೈಲಿನ ಪ್ರಯಾಣಿಕರು ಕೃತ್ಯದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದರು, ಅವುಗಳು ವೈರಲ್ ಆದವು. ಪ್ರಯಾಣಿಕರು ಪ್ರಧಾನಮಂತ್ರಿ, ರೈಲ್ವೆ ಸಚಿವರು ಮತ್ತು ರಾಜ್ಯದ ಆಡಳಿತಕ್ಕೆ ಭಕ್ತಾದಿಗಳಿಗೆ ಸೂಕ್ತ ರಕ್ಷಣೆ ಕೊಡಿ ಎಂದು ಒತ್ತಾಯಿಸಿದರು.

ನಿರ್ದಿಷ್ಟ ಗುರಿಯ ಹಿಂಸಾಚಾರ

ಮಹಾಕುಂಭ ಮೇಳದ ಯಾತ್ರಿಕರ ಮೇಲಿನ ದಾಳಿ 2002ರ ಗೋಧ್ರಾ ರೈಲಿಗೆ ಬೆಂಕಿ ಘಟನೆಯನ್ನು ನೆನಪಿಸುತ್ತದೆ, ಅಯೋಧ್ಯೆಯಿಂದ ವಾಪಸ್ ಆಗುತ್ತಿದ್ದ 59 ಕರ ಸೇವಕರನ್ನು ಹತ್ಯೆ ಮಾಡಲಾಯಿತು. ಇಂತಹ ಘಟನೆಗಳು ಹಿಂದೂಗಳನ್ನು ಗುರಿಯಾಗಿಸಿ ದಾಳಿ ಮಾಡಿ, ಹಿಂದೂ ಧಾರ್ಮಿಕ ಆಚರಣೆಗಳಿಗೆ ತೊಡಕು ಉಂಟು ಮಾಡುವ ಲೆಕ್ಕಾಚಾರದ ಪ್ರಯತ್ನದಂತೆ ಕಾಣುತ್ತದೆ.

ರಾಮ ನವಮಿ, ಹನುಮ ಜಯಂತಿ, ದುರ್ಗಾ ಪೂಜೆ ಮೆರವಣಿಗೆ ಮೇಲೆ ಕಲ್ಲು ತೂರುವುದು. ಹರ್ಯಾಣದ ನೂಹ್ ಜಿಲ್ಲೆಯ ಬಿರಾಝ್ ಮಂಡಲ್ ಯಾತ್ರೆ ಸಂದರ್ಭದ ಹಿಂಸಾಚಾರದ ಮೂಲಕ ಕೋಮು ದ್ವೇಷವನ್ನು ಉತ್ತೇಜಿಸುವುದು ಈ ಮಾದರಿಯ ದಾಳಿಯಲ್ಲಿ ಸೇರಿವೆ.

ಅಕ್ಟೋಬರ್ 2024ರಲ್ಲಿ ಉತ್ತರ ಪ್ರದೇಶದ ಬಿಹೆರಿಚ್‌ನಲ್ಲಿ ಹಿಂದೂ ಧಾರ್ಮಿಕ ಉತ್ಸವದಲ್ಲಿ ಪಾಲ್ಗೊಂಡ ಕಾರಣಕ್ಕೆ 22 ವರ್ಷದ ಯುವಕನನ್ನು ಹತ್ಯೆ ಮಾಡಲಾಯಿತು. ಆರೋಪಿಗಳು ಹತ್ಯೆಗೂ ಮುನ್ನ ಆತನನ್ನು ಹಿಡಿದು ಹಿಂಸಿಸಿದ್ದರು.

Attacks On Hindu Festivals A Disturbing Trend Exposed During Mahakumbh 2025

ರಾಜಕೀಯ ಪಾತ್ರ

ಇಂತಹ ಘಟನೆಗಳು ಹೆಚ್ಚಾಗುತ್ತಿರುವುದು ರಾಜಕೀಯ ಮತ್ತು ಆಡಳಿತದ ವೈಫಲ್ಯಗಳ ಕುರಿತು ಪ್ರಶ್ನಿಸುವಂತೆ ಮಾಡಿದೆ. ಹಲವು ರಾಜ್ಯ ಸರ್ಕಾರಗಳು ಹಿಂದೂ ಉತ್ಸವಗಳ ಮೇಲೆ ನಿಷೇಧ ಹೇರುವ ಮೂಲಕ ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿವೆ ಎಂದು ಆರೋಪಿಸಲಾಗಿದೆ. 2022ರಲ್ಲಿ ಪಶ್ಚಿಮ ಬಂಗಾಳದ ಆಡಳಿತ ದುರ್ಗಾ ಮಾತೆ ವಿಸರ್ಜನಾ ಮೆರವಣಿಯನ್ನು ಮೊಹರಂ ಮೆರವಣಿಗೆ ಜೊತೆ ಮಾಡದಂತೆ ನಿರ್ಬಂಧ ಹೇರಿತ್ತು, ಇದು ಟೀಕೆಗಳಿಗೆ ಕಾರಣವಾಗಿತ್ತು.

ರಾಷ್ಟ್ರದ ಭದ್ರತೆಗೆ ಬೆದರಿಕೆ

ರೈಲು ಮಾರ್ಗಗಳ ಬಳಿಯ ಅಕ್ರಮ ಅತಿಕ್ರಮಣಗಳು, ಸಾಮಾನ್ಯವಾಗಿ ನಿರ್ದಿಷ್ಟ ಸಮುದಾಯಗಳಿಗೆ ಸಂಬಂಧಿಸಿದವು, ಇದು ಮತ್ತೊಂದು ಹಂತದ ಚಿಂತೆಯಾಗಿ ಪರಿಣಮಿಸುತ್ತಿದೆ. ಈ ಪ್ರದೇಶಗಳು ಸಮಾಜ ವಿರೋಧಿ ಚಟುವಟಿಕೆಗಳಿಗೆ ಕೇಂದ್ರವಾಗಿದ್ದು, ರಾಷ್ಟ್ರೀಯ ಮೂಲಸೌಕರ್ಯ ಮತ್ತು ಸೌಹಾರ್ದತೆಗೆ ಅಪಾಯವನ್ನು ಉಂಟುಮಾಡುತ್ತವೆ. ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಯಲು ಇಂತಹ ಅತಿಕ್ರಮಣಗಳ ವಿರುದ್ಧ ತಕ್ಷಣದ ಕಾನೂನು ಕ್ರಮಗಳ ಅಗತ್ಯವಿದೆ.

ಭಾರತದ ಸಾಂಸ್ಕೃತಿಕ ಏಕತೆಯ ಸಂರಕ್ಷಣೆ

ಮಹಾಕುಂಭ ಮೇಳ ರಾಷ್ಟ್ರದ ಆಧ್ಯಾತ್ಮಿಕ ಏಕತೆಯ ಹೆಮ್ಮೆಯಾಗಿದೆ, ವಿಶ್ವದಾದ್ಯಂತದಿಂದ ಲಕ್ಷಾಂತರ ಜನರನ್ನು ಆಕರ್ಷಿಸುತ್ತದೆ. ಆದಾಗ್ಯೂ, ಭಕ್ತರ ಮೇಲಿನ ದಾಳಿಗಳು ಭಾರತದ ಸಾಂಸ್ಕೃತಿಕ ಮತ್ತು ಸಾಮಾಜಿಕ ಸೌಹಾರ್ದತೆಯನ್ನು ಹಾಳು ಮಾಡುವ ಆಳವಾದ ಉದ್ದೇಶವನ್ನು ಹೇಳುತ್ತವೆ. ಈ ಘಟನೆಗಳು ಕೇವಲ ವ್ಯಕ್ತಿಗಳ ಮೇಲೆ ದಾಳಿಗಳಲ್ಲ ಆದರೆ ರಾಷ್ಟ್ರದ ಏಕತೆಯ ಮೇಲಿನ ದಾಳಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+