ಮುಸ್ಲಿಂ ಹಾಡುಗಾರ್ತಿಗೆ ಫತ್ವಾ ಹೊರಡಿಸಿಯೇ ಇರಲಿಲ್ಲ!
ಮುಸ್ಲಿಂ ಸಮುದಾಯ 16 ವರ್ಷದ ಹಾಡುಗಾರ್ತಿಯ ಮೇಲೆ ಫತ್ವಾ ಹೊರಡಿಸಲಾಗಿದೆ ಎಂಬ ವಿಚಾರ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಫತ್ವಾ ಹೊರಡಿಸಿರಲಿಲ್ಲ ಎನ್ನುತ್ತಿವೆ ತಳಮಟ್ಟದ ಮಾಹಿತಿಗಳು.
ಬೆಂಗಳೂರು, ಮಾರ್ಚ್ 16: ಮುಸ್ಲಿಂ ಸಮುದಾಯ 16 ವರ್ಷದ ಹಾಡುಗಾರ್ತಿಯ ಮೇಲೆ ಫತ್ವಾ ಹೊರಡಿಸಲಾಗಿದೆ ಎಂಬ ವಿಚಾರ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಆಕೆಯ ವಿರುದ್ಧ ಫತ್ವಾ ಹೊರಡಿಸಿಯೇ ಇರಲಿಲ್ಲ ಎನ್ನುತ್ತಿವೆ ತಳಮಟ್ಟದ ಮಾಹಿತಿಗಳು. [ಮುಸ್ಲಿಂ ಹಾಡುಗಾರ್ತಿಗೆ ಫತ್ವಾ ಹೊರಡಿಸಿಯೇ ಇರಲಿಲ್ಲ!]
'ಕೆಲವು ಮುಸ್ಲಿಂ ಧರ್ಮಗುರುಗಳು ಮನವಿ ಮಾಡಿಕೊಂಡಿದ್ದರಷ್ಟೆ. ಇದು ಫತ್ವಾ ಅಲ್ಲ,' ಎಂದು ಅಸ್ಸಾಂ ರಾಜ್ಯದ ಜಮೀಯತ್ ಉಲೇಮಾ ಮುಹಮ್ಮದ್ ಅಬ್ದುಲ್ ರಶೀದ್ ಕಾಶಿಮಿ ಹೇಳಿದ್ದಾರೆ. ಇದನ್ನು ಬೇಕೆಂದೇ ಫತ್ವಾ ಎಂದು ಬಿಂಬಿಸಲಾಯಿತು ಎಂದು ಅವರು ದೂರಿದ್ದಾರೆ.[ಮುಸ್ಲಿಂ ಯುವತಿಯ ಬಹಿರಂಗ ಹಾಡುಗಾರಿಕೆ ವಿರುದ್ಧ ಫತ್ವಾ]

"ನಾವು ಹಾಡುಗಾರ್ತಿಗೆ ಯಾವುದೇ ಬೆದರಿಕೆ ಹಾಕಿಲ್ಲ. ಮಸೀದಿ, ಮದ್ರಸಾ ಮತ್ತು ಸ್ಮಶಾನಗಳು ಇರುವ ಮುಸ್ಲಿಂ ಪ್ರದೇಶದಲ್ಲಿ ಈ ರೀತಿಯ (ಗಾಯನ) ಕಾರ್ಯಕ್ರಮ ಆಯೋಜಿಸುವುದು ಶರಿಯಾ ಸಂಪ್ರದಾಯಕ್ಕೆ ವಿರುದ್ಧ ಎಂದಷ್ಟೇ ನಮ್ಮ ಕರಪತ್ರದಲ್ಲಿ ಹೇಳಲಾಗಿತ್ತು" ಎನ್ನುತ್ತಾರೆ ಕಾಶಿಮಿ.
"ಶಾಂತಿಯುತ ವಾತಾವರಣಕ್ಕೆ ಇದು ಧಕ್ಕೆ ತರುತ್ತದೆ ಎಂಬ ಕಾರಣಕ್ಕಷ್ಟೆ ನಾವು ಮನವಿ ಮಾಡಿದೆವು. ಆದರೆ ಇದಕ್ಕೆ ಬೇರೆಯದೇ ಬಣ್ಣ ನೀಡಲಾಯಿತು," ಎಂದು ಅವರು ಹೇಳಿದ್ದಾರೆ. ನಾವು ಕರಪತ್ರದಲ್ಲಿ ಯಾವುದೇ ಕಾರಣಕ್ಕೂ ಹಾಡುಗಾರ್ತಿಯ ಹೆಸರು ಹಾಕಿಯೇ ಇರಲಿಲ್ಲ ಎಂದು ಅವರು ಹೇಳಿದ್ದಾರೆ.

ನಹೀದ್ ಅಫ್ರಿನ್ ಎಂಬ 16 ವರ್ಷದ ಗಾಯಕಿ ಮೇಲೆ ಫತ್ವಾ ಹೊರಡಿಸಲಾಗಿದೆ ಎಂಬುದು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. ವಿಶೇಷ ಏನೆಂದರೆ ಆಕೆಯ ಮೇಲೆ ಫತ್ವಾ ಹೊರಡಿಸಲಾಗಿದೆ ಎಂದೂ ಮಾಧ್ಯಮಗಳ ಮೂಲಕವೇ ಅವರ ತಂದೆಗೆ ಗೊತ್ತಾಗಿತ್ತು. ಅಲ್ಲವರೆಗೆ ಮಗಳ ಮೇಲೆ ಫತ್ವಾ ಹೊರಡಿಸಿದ್ದಾರೆ ಎಂದು ಅವರಿಗೆ ಗೊತ್ತೇ ಇರಲಿಲ್ಲವಂತೆ.
ಈಗಾಗಲೇ ಎನ್.ಡಿ.ಟಿ.ವಿ ಮಾಹಿತಿ ಖಚಿತ ಪಡಿಸದೇ ಸುದ್ದಿ ಪ್ರಸಾರ ಮಾಡಿದ್ದಕ್ಕೆ ವೀಕ್ಷಕರ ಬಳಿ ಕ್ಷಮೆ ಕೋರಿದೆ. ['ಸರಿಗಮಪ' ಸುಹಾನಳಿಗೆ ಬೇಕಿರುವುದು ಪ್ರೋತ್ಸಾಹವೇ ಹೊರತು, ಪ್ರಚಾರವಲ್ಲ!]
ಗಾಯಕಿ ಮೇಲೆ ಫತ್ವಾ ಹೊರಡಿಸಲಾಗಿದೆ ಎಂಬ ಮಾಹಿತಿಗಳು ಮಾಧ್ಯಮಗಳ ಮೂಲಕ ಹೊರ ಬೀಳುತ್ತಿದ್ದಂತೆ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನಾವಾಲ್ ಹಾಗೂ ಗಾಯಕ ವಿಶಾಲ ದದ್ಲಾನಿ ಮೊದಲಾದ ಖ್ಯಾತನಾಮರು ಗಾಯಕಿ ಬೆಂಬಲಕ್ಕೆ ಧಾವಿಸಿದ್ದರು. ಆದರೆ ಇದೀಗ ನಾವು ಫತ್ವಾ ಹೊರಡಿಸಿಯೇ ಇಲ್ಲ ಎಂದು ಮುಸ್ಲಿಂ ಧರ್ಮಗುರುಗಳು ಸ್ಪಷ್ಟಪಡಿಸಿದ್ದಾರೆ. (ಒನ್ ಇಂಡಿಯಾ ಸುದ್ದಿ)
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications