ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿದ ಜೇಟ್ಲಿ ಸುದ್ದಿಗೋಷ್ಠಿಯ ಪೂರ್ಣ ವಿವರ
ನವದೆಹಲಿ, ಅಕ್ಟೋಬರ್ 04: ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 1.50 ರೂಪಾಯಿ ಕಡಿಮೆ ಗೊಳಿಸಿದೆ ಜೊತೆಗೆ ಆಯಿಲ್ ಮಾರ್ಕೆಟಿಂಗ್ ಸಂಸ್ಥೆಗಳು ಒಂದು ರೂಪಾಯಿ ಕಡಿಮೆ ಮಾಡುತ್ತಿವೆ ಒಟ್ಟು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 2.50 ರೂಪಾಯಿ ಕಡಿಮೆ ಆಗಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರವು 2.50 ಕಡಿಮೆ ಮಾಡಿದ್ದು, ರಾಜ್ಯಗಳು ಇಂಧನದ ಮೇಲೆ ಹೇರುತ್ತಿರುವ ವ್ಯಾಟ್ ಅನ್ನು ಕಡಿಮೆ ಮಾಡಿ ಒಟ್ಟು ಇಂಧನದ ಮೇಲೆ 5 ರೂಪಾಯಿ ಕಡಿಮೆ ಮಾಡಬೇಕೆಂದು ಕೇಂದ್ರವು ರಾಜ್ಯಗಳಿಗೆ ಪತ್ರ ಬರೆಯಲಿದೆ ಎಂದು ಜೇಟ್ಲಿ ಹೇಳಿದರು.
ಕಚ್ಚಾ ತೈಲ ಬೆಲೆಯು ಕಳೆದ ನಾಲ್ಕು ವರ್ಷದಲ್ಲೇ ಅತಿ ಹೆಚ್ಚಾಗಿರುವುದು ಹಾಗೂ ಅಮೆರಿಕದ ಆಂತರಿಕ ನೀತಿಗಳಲ್ಲಿ ಬದಲಾವಣೆ ಹಾಗೂ, ಅಮೆರಿಕ ಹೆಚ್ಚಿಸಿರುವ ಬಡ್ಡಿ ದರದ ಪ್ರಭಾವವು ಹಣಕಾಸು ಮಾರುಕಟ್ಟೆ ಹಾಗೂ ಷೇರುಮಾರುಕಟ್ಟೆಯ ಮೇಲೆಯೂ ಪ್ರಭಾವ ಬೀರಿದೆ ಎಂದು ಜೇಟ್ಲಿ ಮಾಹಿತಿ ನೀಡಿದರು.

ವರ್ಷಕ್ಕೆ 21,000 ಕೋಟಿ ನಷ್ಟ
ಅಬಕಾರಿ ಸುಂಕ ಕಡಿಮೆ ಮಾಡಿರುವ ಕಾರಣ ಕೇಂದ್ರ ಸರ್ಕಾರಕ್ಕೆ ಒಂದು ವರ್ಷಕ್ಕೆ 21,೦೦೦ ಕೋಟಿ ನಷ್ಟವಾಗಲಿದೆ, ಅರ್ಧ ವರ್ಷಕ್ಕೆ 10,500 ಕೋಟಿ ನಷ್ಟವಾಗಲಿದೆ ಈ ನಷ್ಟ ಭಾರತದ ಹಣಕಾಸಿನ ಸ್ಥಿತಿಯ ಮೇಲೆ ತೀರಾ ಕಡಿಮೆ ಪ್ರಭಾವ ಬೀರಲಿದೆ ಎಂದು ಅವರು ಲೆಕ್ಕ ಒಪ್ಪಿಸಿದರು.

ಓಎಂಸಿಗಳಿಗೆ 10 ಮಿಲಿಯನ್ ಡಾಲರ್ ಬಾಂಡ್ ಸೃಷ್ಟಿ
ಅರ್ಥವ್ಯವಸ್ಥೆಯನ್ನು ಸರಿದಾರಿಗೆ ತರಲು ಸಾಕಷ್ಟು ದೂರಗಾಮಿ ಕ್ರಮಗಳನ್ನು ಕೇಂದ್ರವು ಈಗಾಗಲೇ ಕೈಗೊಂಡಿದ್ದು, ಇಂಧನ ಮಾರಾಟ ಸಂಸ್ಥೆಗಳಿಗೆ 10 ಮಿಲಿಯನ್ ಮೌಲ್ಯದ ಡಾಲರ್ ಬಾಂಡ್ಗಳನ್ನು ವಿದೇಶದಿಂದ ಸೃಷ್ಟಿಮಾಡಿಕೊಳ್ಳುವಂತೆ ಹೇಳಲಾಗಿದೆ. ಈಗಾಗಲೇ ಆಮದು ಸುಂಕ ಏರಿಸಲಾಗಿದೆ, ಹಾಗೂ ಸಾಲಕ್ಕೆ ಕಡಿವಾಣ ಹಾಕಲಾಗಿದೆ ಇದರಿಂದ 70000 ಕೋಟಿ ಉಳಿಯಲಿದೆ ಎಂದು ಜೇಟ್ಲಿ ಹೇಳಿದರು.

ಇಂಧನದಿಂದ ರಾಜ್ಯಗಳಿಗೆ ಲಾಭ ಹೆಚ್ಚು
ಕೇಂದ್ರ ಸರ್ಕಾರವು ಇಂಧನದ ಮೇಲೆ ಅಬಕಾರಿ ಸುಂಕ ವಿಧಿಸುತ್ತದೆ ಕೇಂದ್ರ ವಿಧಿಸುವ ಸುಂಕ ನಿಗದಿತವಾಗಿರುತ್ತದೆ, ಬೆಲೆ ಏರಿಕೆ ಅಥವಾ ಇಳಿಕೆಯಿಂದ ಅದು ವ್ಯತ್ಯಾಸವಾಗದು, ಆದರೆ ರಾಜ್ಯಗಳು ಇಂಧನದ ಮೇಲೆ ವ್ಯಾಟ್ ವಿಧಿಸುತ್ತವೆ ಇಂಧನ ಬೆಲೆ ಹೆಚ್ಚಾದರೆ ರಾಜ್ಯಗಳಿಗೆ ಲಾಭವೂ ಹೆಚ್ಚು ಹಾಗಾಗಿ ಕೂಡಲೇ ರಾಜ್ಯಗಳು 2.50 ರೂಪಾಯಿ ವ್ಯಾಟ್ ಇಳಿಸಿ, ಕೇಂದ್ರದ 2.50 ಜೊತೆ ಒಟ್ಟು 5 ರೂಪಾಯಿ ಲಾಭವನ್ನು ಜನರಿಗೆ ತಲುಪುವಂತೆ ಮಾಡಬೇಕು ಎಂದು ಜೇಟ್ಲಿ ಹೇಳಿದರು.

ರಾಜ್ಯಗಳಿಗೆ ಇಂದೇ ಪತ್ರ ಬರೆಯುತ್ತೇವೆ
ರಾಜ್ಯಗಳಿಗೆ ಇಂದೇ ಪತ್ರ ಬರೆಯಲಾಗುವುದು ಹಾಗೂ ಮುಖ್ಯಮಂತ್ರಿಗಳ ಜೊತೆ ಸಹ ಮಾತನಾಡಲಾಗುವುದು ಎಂದ ಜೇಟ್ಲಿ. ಕೆಲವು ಟ್ವೀಟ್ ಮಾಡಿ ಬಾಯ್ಮಾತಿನ ಸಿಂಪತಿ ವ್ಯಕ್ತಪಡಿಸುತ್ತಿದ್ದರು ಈಗ ಗೊತ್ತಾಗುತ್ತದೆ ಯಾರಿಗೆ ನಿಜವಾಗಿಯೂ ಜನಗಳ ಬಗ್ಗೆ ಪ್ರೀತಿ ಇದೆ, ಯಾರು ಮೊಸಳೆ ಕಣ್ಣೀರು ಸುರಿಸುತ್ತಿದ್ದರೂ ಎಂದು ಜೇಟ್ಲಿ ಹೇಳಿದರು.

ಮಸಾಲಾ ಬಾಂಡ್ಗಳ ಮೇಲೆ ತೆರಿಗೆ ವಿನಾಯಿತಿ
ಕೆಲವು ಬಾಂಡ್ಗಳ ಮೇಲೆ ತೆರಿಗೆ ವಿನಾಯಿತಿ ನೀಡಿ ನಮ್ಮ ಹಣಕಾಸಿನ ಹರಿವು ಹೆಚ್ಚಳ ಮಾಡುವಂತೆ ಮಾಡಲಾಗುತ್ತಿದೆ. ಈಗಾಗಲೇ ಮಸಾಲಾ ಬಾಂಡ್ ಮೇಲೆ ತೆರಿಗೆ ವಿನಾಯಿತಿ ನೀಡಲಾಗಿದೆ. ಆಮದು ಸುಂಕ ಹೆಚ್ಚಳ ಮಾಡಲಾಗಿದೆ. ಇವುಗಳಿಂದ ಹಣಕಾಸಿನ ಹರಿವು ಹೆಚ್ಚಲಿದೆ ಎಂದು ಅರುಣ್ ಜೇಟ್ಲಿ ಹೇಳಿದರು.
-
ಇರಾನ್ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಮಾತುಕತೆ: ಜಾಗತಿಕ ಪೂರೈಕೆ ವ್ಯತ್ಯಯದ ಬಗ್ಗೆ ಆತಂಕ -
MT Aqua Titan: ಮಂಗಳೂರು ಕರಾವಳಿಗೆ ಆಗಮಿಸಿದ ರಷ್ಯಾದ ಕಚ್ಚಾ ತೈಲ ಹೊತ್ತ ಬೃಹತ್ ನೌಕೆ -
ಭಾರತದಲ್ಲಿ ಇಂಧನ ಭದ್ರತೆಗೆ ಒತ್ತು, ನಾಗರಿಕರ ಹಿತರಕ್ಷಣೆ ಮೊದಲ ಆದ್ಯತೆ: ಮೋದಿ ನೇತೃತ್ವದಲ್ಲಿ ಸಭೆ, ಹಲವು ಮಹತ್ವದ ತೀರ್ಮಾನ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ












Click it and Unblock the Notifications