Get Updates
Get notified of breaking news, exclusive insights, and must-see stories!

ಆಂಧ್ರಪ್ರದೇಶ: ಕುಡಿದು ವಾಹನ ಚಲಾಯಿಸುವವರಿಗೆ ಬೀಚ್ ಕ್ಲೀನ್ ಮಾಡುವಂತೆ ಕೋರ್ಟ್ ಆದೇಶ!

ಆಂಧ್ರಪ್ರದೇಶದಲ್ಲಿ ಕುಡಿದು ವಾಹನ ಚಲಾಯಿಸುವವರಿಗೆ ನ್ಯಾಯಾಲಯ ವಿಶಿಷ್ಟವಾದ ಶಿಕ್ಷೆ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದೆ.

ವಿಶಾಖಪಟ್ಟಣಂ ಫೆಬ್ರವರಿ 23: ಮೊಟ್ಟಮೊದಲ ಬಾರಿಗೆ ವಿಶಾಖಪಟ್ಟಣಂನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮಂಗಳವಾರ 52 ಕುಡುಕ ಚಾಲಕರ ತಂಡಕ್ಕೆ ಶಿಕ್ಷೆಯಾಗಿ ಆರ್‌ಕೆ ಬೀಚ್‌ ಕ್ಲೀನ್ ಮಾಡಲು ಆದೇಶಿಸಿದೆ. ನಾಲ್ಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿಗಳು ಕುಡಿದು ವಾಹನ ಚಲಾಯಿಸಿದಾಗ ಸಿಕ್ಕಿಬಿದ್ದಿದ್ದಾರೆ. ಈ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ನ್ಯಾಯಾಧೀಶರು ಬೀಚ್‌ನಿಂದ ತ್ಯಾಜ್ಯ ಸಂಗ್ರಹಿಸಲು ಆದೇಶಿಸಿದ್ದಾರೆ. ನ್ಯಾಯಾಲಯದ ನಿರ್ದೇಶನದಂತೆ ಪೊಲೀಸರು ಆರೋಪಿಗಳನ್ನು ಆರ್‌ಕೆ ಬೀಚ್‌ಗೆ ಸ್ವಚ್ಛತಾ ಅಭಿಯಾನಕ್ಕೆ ಕರೆದೊಯ್ದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್ಚುವರಿ ಡಿಸಿಪಿ (ಟ್ರಾಫಿಕ್) ಆರಿಫುಲ್ಲಾ, ಕಳೆದ ಮೂರು ದಿನಗಳಲ್ಲಿ ಕುಡಿದು ವಾಹನ ಚಲಾಯಿಸುವ ವಿರುದ್ಧ ವಿಶೇಷ ಅಭಿಯಾನ ನಡೆಸಿದ ಸಂದರ್ಭದಲ್ಲಿ ಅರಿಲೋವಾ, ಟು ಟೌನ್, ತ್ರೀ ಟೌನ್, ಫೋರ್ ಟೌನ್ ಮತ್ತು ಹಾರ್ಬರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಲವು ಅಪರಾಧಿಗಳು ಸಿಕ್ಕಿಬಿದ್ದಿದ್ದಾರೆ. ಇವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯ ಚಾಲಕರ ತಂಡಕ್ಕೆ ಶಿಕ್ಷೆಯಾಗಿ ಆರ್‌ಕೆ ಬೀಚ್‌ ಕ್ಲೀನ್ ಮಾಡಲು ಆದೇಶಿಸಿದೆ ಎಂದರು.

Andhra Pradesh: Court order to clean the beach for drunk drivers!

ಈ ವಿಶಿಷ್ಟ ಶಿಕ್ಷೆಯು ಆರೋಪಿಗಳಲ್ಲಿ ನಡವಳಿಕೆಯ ಬದಲಾವಣೆಯನ್ನು ತರುತ್ತದೆ. ಅವರ ಮನಸ್ಥಿತಿಯನ್ನು ಸ್ವಲ್ಪ ಮಟ್ಟಿಗೆ ಪರಿವರ್ತಿಸಲು ಸಹಾಯ ಮಾಡುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಐದು ದಿನಗಳ ಕಾಲ ಕಡಲತೀರವನ್ನು ಸ್ವಚ್ಛಗೊಳಿಸಲು ಅಪರಾಧಿಗಳಿಗೆ ನ್ಯಾಯಾಲಯ ಸೂಚಿಸಿದೆ. ನಾವು ಅವರನ್ನು RK ಬೀಚ್‌ಗೆ ಕರೆದೊಯ್ದೆವು. ಅಲ್ಲಿ ಅವರು ತ್ಯಾಜ್ಯವನ್ನು ಸಂಗ್ರಹಿಸಿದರು ಎಂದು ಆರಿಫುಲ್ಲಾ ಹೇಳಿದರು.

ಕುಡಿದು ವಾಹನ ಚಲಾಯಿಸುವವರಿಗೆ ಬೀಚ್ ಕ್ಲೀನಿಂಗ್ ಶಿಕ್ಷೆ

ನಗರದ ಪೆಂಡುರ್ತಿ, ಗಜುವಾಕ, ಪಿ.ಎಂ.ಪಾಲೆಂ, ತಾಟಿಚೆಟ್ಲಪಾಳ್ಯಂ, ಹನುಮತಾವಕ, ಅರಿಲೋವ, ಯೆಂಡಡ ಹಾಗೂ ಬೀಚ್ ರಸ್ತೆಯ ಎಲ್ಲ ಪ್ರಮುಖ ಸ್ಥಳಗಳಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಹೆಚ್ಚುವರಿ ಡಿಸಿಪಿ (ಸಂಚಾರ) ತಿಳಿಸಿದ್ದಾರೆ.

Andhra Pradesh: Court order to clean the beach for drunk drivers!

ನಗರದಲ್ಲಿ ಸರಾಸರಿ ಕನಿಷ್ಠ 60 ಕುಡಿದು ವಾಹನ ಚಾಲನೆ ಪ್ರಕರಣಗಳು ದಾಖಲಾಗಿವೆ. "ಕುಡಿತದ ಅಮಲಿನಲ್ಲಿ ವಾಹನ ಚಲಾಯಿಸುವುದು ಅವರ ಜೀವವನ್ನು ಅಪಾಯಕ್ಕೆ ತಳ್ಳುತ್ತದೆ. ಆದರೆ ಅವರ ಕುಟುಂಬಗಳಿಗೆ ಅಪಾರ ನಷ್ಟವನ್ನು ಉಂಟುಮಾಡುತ್ತದೆ. ಚಾಲಕರು ತಮ್ಮ ಸುರಕ್ಷತೆಗಾಗಿ ಮದ್ಯಪಾನ ಮಾಡುವುದನ್ನು ತಪ್ಪಿಸಬೇಕು ಮತ್ತು ಸಂಚಾರ ಮಾರ್ಗಸೂಚಿಗಳನ್ನು ಅನುಸರಿಸಬೇಕು"ಎಂದು ಡಿಸಿಪಿ (ಟ್ರಾಫಿಕ್) ಆರಿಫುಲ್ಲಾ ಅವರು ಹೇಳಿದರು.

ಈ ಹಿಂದೆ ಕುಡಿದು ವಾಹನ ಚಲಾಯಿಸಿ ಸಿಕ್ಕಿಬಿದ್ದವರಿಗೆ ಸಮಾಜ ಸೇವೆಯ ಭಾಗವಾಗಿ ಜನರಲ್ಲಿ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲು ಟ್ರಾಫಿಕ್ ಜಂಕ್ಷನ್‌ಗಳಲ್ಲಿ ಫಲಕಗಳನ್ನು ಹಿಡಿದುಕೊಳ್ಳಲು ತಿಳಿಸಲಾಯಿತು. ಭೀಮಿಲಿಯಲ್ಲಿ ಕುಡಿದು ವಾಹನ ಚಲಾಯಿಸಿದ ಪ್ರಕರಣಗಳಲ್ಲಿ ಸಿಕ್ಕಿಬಿದ್ದ ಸುಮಾರು 142 ಜನರಿಗೆ ದಂಡ ವಿಧಿಸಿ ಕಳುಹಿಸಲಾಯಿತು. ಕಳೆದ ವರ್ಷ ಅಕ್ಟೋಬರ್ 1 ರಂದು ಐದು ದಿನಗಳ ಜೈಲು ಶಿಕ್ಷೆ ನೀಡಲಾಗಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+