ಯುಪಿಎಗೆ ಮತ್ತಷ್ಟು ಸಂಕಷ್ಟ: ಇನ್ನಿಬ್ಬರು 'ಅಗಸ್ಟಾ' ಆರೋಪಿಗಳ ಗಡಿಪಾರು
ನವದೆಹಲಿ, ಜನವರಿ 31: ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಅತಿ ಗಣ್ಯರ ಐಷಾರಾಮಿ ಹೆಲಿಕಾಪ್ಟರ್ ಖರೀದಿ ಹಗರಣದ ತನಿಖೆಗೆ ಮಹತ್ವದ ಮುನ್ನಡೆ ದೊರಕಿದೆ.
ಹಗರಣದಲ್ಲಿ ಬೇಕಾಗಿರುವ ಆರೋಪಿ, ಉದ್ಯಮಿ ರಾಜೀವ್ ಸಕ್ಸೇನಾ ಮತ್ತು ಕಾರ್ಪೊರೇಟ್ ವಿಮಾನಯಾನ ಲಾಬಿಗಾರ ದೀಪಕ್ ತಲ್ವಾರ್ ಅವರನ್ನು ಭಾರತಕ್ಕೆ ಗಡಿಪಾರು ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಗಸ್ಟಾ ವೆಸ್ಟ್ಲ್ಯಾಂಡ್ನ 3,600 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಆರೋಪದಡಿ ರಾಜೀವ್ ಶಂಶೇರ್ ಬಹದ್ದೂರ್ ಸಕ್ಸೇನಾನನ್ನು ದುಬೈನಲ್ಲಿ ಬುಧವಾರ ಬೆಳಿಗ್ಗೆ ಅಲ್ಲಿನ ಅಧಿಕಾರಿಗಳು ಬಂಧಿಸಿದ್ದಾರೆ. ಆತನನ್ನು ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ಹಸ್ತಾಂತರ ಮಾಡುವ ನಿರೀಕ್ಷೆಯಿದೆ.
ಅಕೌಂಟೆಂಟ್ ಕೂಡ ಆಗಿರುವ ಸಕ್ಸೇನಾನನ್ನು, ಇ.ಡಿ.ಯ ಮನವಿಯಂತೆ ಕೋರ್ಟ್ ಹೊರಡಿಸಿದ ಜಾಮೀನುರಹಿತ ವಾರಂಟ್ ಅಧಾರದಲ್ಲಿ ದುಬೈ ಅಧಿಕಾರಿಗಳು ಗಡಿಪಾರು ಮಾಡಲು ಸಿದ್ಧತೆ ನಡೆಸಿದ್ದಾರೆ. ಅವರನ್ನು ಈಗಾಗಲೇ ಅಕ್ರಮವಾಗಿ ಗಡಿಪಾರು ಮಾಡಲಾಗಿದೆ ಎಂದೂ ಆರೋಪಿಸಲಾಗಿದೆ.

90 ಕೋಟಿ ರೂ. ವಿದೇಶಿ ನಿಧಿ ದುರ್ಬಳಕೆ
ಕಾರ್ಪೊರೇಟ್ ವಿಮಾನಯಾನ ಲಾಬಿಗಾರ ದೀಪಕ್ ತಲ್ವಾರ್ನನ್ನು ವಶಕ್ಕೆ ಪಡೆದುಕೊಳ್ಳಲು ಇಡಿ ಮತ್ತು ಸಿಬಿಐ ಎರಡೂ ಸಂಸ್ಥೆಗಳು ಪ್ರಯತ್ನ ನಡೆಸಿವೆ. ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ (ಸಿಎಸ್ಆರ್) ಭಾಗವಾಗಿ ಸಕ್ಸೇನಾ ವಿದೇಶಿ ನಿಧಿಯ ಮೂಲಕ 90 ಕೋಟಿ ರೂಪಾಯಿ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.
ದೀಪಕ್ನನ್ನು ಸಹ ಸಕ್ಸೇನಾ ಜೊತೆಗೆ ದುಬೈ ಅಧಿಕಾರಿಗಳು ಗಡಿಪಾರು ಮಾಡಲಿದ್ದಾರೆ.

ಇನ್ನೂ ಹಲವು ಪ್ರಕರಣ
ತಲ್ವಾರ್ ವಿರುದ್ಧ ಅಪರಾಧ ಸಂಚು, ನಕಲು ಮತ್ತು ಯುರೋಪ್ನ ಪ್ರಮುಖ ಕ್ಷಿಪಣಿ ತಯಾರಕಾ ಸಂಸ್ಥೆಯೊಂದು ಆತನ ಎನ್ಜಿಓಗೆ ಆಂಬುಲೆನ್ಸ್ ಹಾಗೂ ಇತರೆ ಸಾಧನಗಳ ಖರೀದಿಗಾಗಿ ನೀಡಿದ 90.72 ಕೋಟಿ ವಿದೇಶಿ ದೇಣಿಗೆಯನ್ನು ಬೇರೆಡೆಗೆ ವರ್ಗಾಯಿಸಿದ್ದಕ್ಕಾಗಿ ಎಫ್ಸಿಆರ್ಎ ಅಡಿ ವಿವಿಧ ಸೆಕ್ಷನ್ಗಳಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಅಲ್ಲದೆ, ಯುಪಿಎ ಸರ್ಕಾರದ ಅವಧಿಯಲ್ಲಿ ಈತನ ವಿವಿಧ ವಿಮಾನಯಾನ ಒಪ್ಪಂದ ವ್ಯವಹಾರಗಳನ್ನು ತನಿಖೆಗೆ ಒಳಪಡಿಸಲಾಗುತ್ತಿದೆ.
ತಲ್ವಾರ್ ವಿರುದ್ಧ ಇಡಿ ಮತ್ತು ಸಿಬಿಐ ಭ್ರಷ್ಟಾಚಾರದ ಅಪರಾಧ ಪ್ರಕರಣಗಳನ್ನು ದಾಖಲಿಸಿವೆ. ಅಲ್ಲದೆ, ಆದಾಯ ತೆರಿಗೆ ಇಲಾಖೆ ಕೂಡ ತೆರಿಗೆ ವಂಚನೆ ಪ್ರಕರಣ ದಾಖಲಿಸಿದೆ.

ಸಕ್ಸೇನಾ ವಕೀಲರ ಆರೋಪ
ದುಬೈನಲ್ಲಿ ಯಾವುದೇ ಗಡಿಪಾರು ಪ್ರಕ್ರಿಯೆ ಆರಂಭವಾಗಿರಲಿಲ್ಲ ಎಂದು ಸಕ್ಸೇನಾ ಪರ ವಕೀಲರು ಹೇಳಿದ್ದಾರೆ. ಭಾರತಕ್ಕೆ ಕಳುಹಿಸುವಾಗ ಆತನಿಗೆ ಕುಟುಂಬ ಮತ್ತು ವಕೀಲರನ್ನು ಭೇಟಿ ಮಾಡಲು ಅನುಮತಿ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ದುಬೈನ ಪಾಮ್ ಜುಮೀರಾದ ನಿವಾಸಿಯಾಗಿರುವ ರಾಜೀವ್ ಸಕ್ಸೇನಾಗೆ ಇಡಿ ಹಲವು ಬಾರಿ ಸಮನ್ಸ್ ಕಳುಹಿಸಿತ್ತು. ಅಲ್ಲದೆ, ಆತನ ಪತ್ನಿಯನ್ನು 2017ರ ಜುಲೈನಲ್ಲಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂಧಿಸಿತ್ತು. ಅವರೀಗ ಜಾಮೀನಿನ ಮೇಲೆ ಹೊರಗಿದ್ದಾರೆ.

58 ಮಿಲಿಯನ್ ಯುರೋ ಕಿಕ್ಬ್ಯಾಕ್
ಸಕ್ಸೇನಾ, ಆತನ ಪತ್ನಿ ಮತ್ತು ದುಬೈ ಮೂಲದ ಎರಡು ಸಂಸ್ಥೆಗಳಾದ ಯುಎಚ್ವೈ ಸಕ್ಸೇನಾ ಹಾಗೂ ಮ್ಯಾಟ್ರಿಕ್ಸ್ ಹೋಲ್ಡಿಂಗ್ಸ್, ಸ್ಥಿರಾಸ್ತಿಗಳನ್ನು ಖರೀದಿಸುವುದರಲ್ಲಿ ಮತ್ತು ಹಂಚಿಕೆಯಲ್ಲಿ ಅವ್ಯವಹಾರಗಳನ್ನು ನಡೆಸಿದ್ದಾರೆ ಎಂದು ಸಹ ಇಡಿ ಆರೋಪಿಸಿದೆ.
ಅಗಸ್ಟಾ ವೆಸ್ಟ್ಲ್ಯಾಂಡ್ ಇಂಟರ್ನ್ಯಾಷನಲ್ ಲಿಮಿಟೆಡ್ ಕಂಪೆನಿಯು ಟ್ಯುನಿಷಿಯಾದ ಗಾರ್ಡಿಯನ್ ಸರ್ವೀಸಸ್ ಸರ್ಲ್ ಮತ್ತು ಐಡಿಎಸ್ ಸರ್ಲ್ ಮೂಲಕ 58 ಮಿಲಿಯನ್ ಯುರೋ ಹಣವನ್ನು ಕಿಕ್ ಬ್ಯಾಕ್ ರೂಪದಲ್ಲಿ ನೀಡಿತ್ತು ಎಂದು ಇಡಿ ತಿಳಿಸಿದೆ.

ಜೈಲಿನಲ್ಲಿರುವ ಕ್ರಿಶ್ಚಿಯನ್
ಅತಿ ಗಣ್ಯರಿಗೆ ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಖರೀದಿಸುವ ಒಪ್ಪಂದದಲ್ಲಿ ಮಧ್ಯವರ್ತಿಯಾಗಿ ಹಣ ಪಡೆದುಕೊಂಡಿದ್ದ ಆರೋಪ ಎದುರಿಸುತ್ತಿರುವ ಕ್ರಿಶ್ಚಿಯನ್ ಮೈಕಲ್ನನ್ನು ಇತ್ತೀಚೆಗೆ ದುಬೈನಿಂದ ಗಡಿಪಾರು ಮಾಡಲಾಗಿತ್ತು. ಇ.ಡಿ. ಅಧಿಕಾರಿಗಳು ಡಿ.22ರಂದು ಆತನನ್ನು ಬಂಧಿಸಿದ್ದರು.
-
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು?












Click it and Unblock the Notifications