ಹಂತಕರ ಹೆಸರು ಉಲಿದು ಪ್ರಕರಣ ಬೇಧಿಸಿದ ಗಿಳಿರಾಯ

ವಿಜಯ್ ಶರ್ಮಾ ಎಂಬುವವರ ಪತ್ನಿ ನೀಲಂ ಮತ್ತು ಅವರ ಮುದ್ದಾದ ಸಾಕು ನಾಯಿ ಇತ್ತೀಚೆಗೆ ಹತ್ಯೆಗೀಡಾಗಿದ್ದರು. ಆದರೆ ಪೊಲೀಸರಿಗೆ ಮೊನ್ನೆ ಸೋಮವಾರದ ವರೆಗೂ ಹಂತಕರ ಬಗ್ಗೆ ಯಾವುದೇ ಸುಳಿವು ಸಹ ಲಭಿಸಿರಲಿಲ್ಲ. ( ಶಿವಾಜಿನಗರ: ಇಲ್ಲಿ ಇಲಿಯೇ ಶಾಸ್ತ್ರ ಹೇಳುತ್ತದೆ! )
ಆದರೆ ಪ್ರಾಣಿ ಪ್ರಿಯರಾಗಿದ್ದ ನೀಲಂ ಶರ್ಮಾ ಅವರು ಒಂದು ನಾಯಿ ಮತ್ತು ಒಂದು ಗಿಳಿಯನ್ನು ಅತ್ಯಂತ ಜತನದಿಂದ ಸಾಕಿದ್ದರು. ಮೂವರೂ ಹೀಗೆ ಅನ್ಯೋನ್ಯವಾಗಿರುವಾಗ ಇತ್ತೀಚೆಗೆ ನೀಲಂ ಮತ್ತು ಅವರ ಸಾಕು ನಾಯಿ ಸಾವಿಗೀಡಾಗಿದ್ದರು. ಇದು ಗಿಳಿಗೆ ಅರಗಿಸಿಕೊಳ್ಳಲಾಗಿಲ್ಲ. ಅದು ತಿನ್ನುವುದನ್ನೇ ಬಿಟ್ಟಿತ್ತು.
ಆದರೆ ವಿಜಯ್ ಶರ್ಮಾ ಅವರ ಸೋದರ ಸಂಬಂಧಿ ಯಾವಾಗಲೇ ಆಗಲಿ ಮನೆಯೊಳಕ್ಕೆ ಪ್ರವೇಶಿಸಿದರೆ ಈ ಗಿಳಿರಾಮ ಭಯಭೀತಿಗೊಂಡು ಪುರ್ರನೆ ಹಾರಿಹೋಗಿ ತನ್ನ ಪಂಜರವನ್ನು ಸೇರಿಕೊಂಡು ಬಿಡುತ್ತಿತ್ತು. ಇದು ವಿಜಯ್ ಅವರಿಗೆ ಅನುಮಾನಾಸ್ಪದವಾಗಿ ಕಂಡಿದೆ. ಈ ಹಿಂದೆ ಯಾವತ್ತೂ ಹೀಗೆ ಮಾಡದ ಗಿಳಿರಾಮನ ವರ್ತನೆಯಲ್ಲಿ ಇತ್ತೀಚೆಗೆ ಬದಲಾವಣೆ ಬಂದಿರುವುದನ್ನು ವಿಜಯ್ ಗುರುತಿಸಿದ್ದಾರೆ.
ಈ ಮಧ್ಯೆ, ಗಿಳಿ ಜತೆ ಮಾತನಾಡಿಸಲು ವಿಜಯ್ ಪ್ರಯತ್ನಿಸಿದ್ದಾರೆ. ಆದರೆ ಅದು ಮುಖ ತಿರುಗಿಸಿಕೊಂಡು, ಆತಂಕ ವ್ಯಕ್ತಪಡಿಸುತ್ತಿರುವುದು ವಿಜಯ್ ಕಣ್ಣಿಗೆ ಬಿದ್ದಿದೆ. ಆಗ ಗಿಳಿಯ ಜತೆ ಹೆಚ್ಚು ಸಮಯ ಕಳೆಯುತ್ತಾ, ಅದರ ಆತಂಕವನ್ನು ದೂರ ಮಾಡುತ್ತಾ, ಅದನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿದ್ದಾರೆ. ( ಅನಿತಾ, ರಮ್ಯಾ ಭವಿಷ್ಯ ಹೇಳಿದ ಶಿವಾಜಿನಗರದ ಇಲಿ! )
ಮಧ್ಯೆ, ನೀಲಂಳನ್ನು ಕೊಂದಿದ್ದು ಯಾರೋ ಎಂದು ಕೇಳುತ್ತಾ, ಒಂದಷ್ಟು ಹೆಸರುಗಳನ್ನು ಪಠಿಸಿದ್ದಾರೆ. ಶಾಂತವಾಗಿ ಅಷ್ಟೂ ಹೆಸರುಗಳನ್ನು ಕೇಳತೊಡಗಿದ ಬುದ್ಧಿವಂತ ಗಿಳಿರಾಮ ವಿಜಯ್, ತಮ್ಮ ಸಂಬಂಧಿ ಆಶು ಹೆಸರನ್ನು ಎತ್ತಿಕೊಂಡಾಗ 'ಅವರೇ ಸಾಯಿಸಿದ್ದು, ಅವರೇ ಸಾಯಿಸಿದ್ದು' ಎಂದು ಹಿಂದಿಯಲ್ಲಿ ಉಲಿಯತೊಡಗಿದೆ.
ಪೊಲೀಸರು ಸಹ ಈ ಹಿಂದೆ ಆಶು ಮೇಲೆಯೇ ಅನುಮಾನ ಪಟ್ಟಿದ್ದರು. ಆದರೆ ಈ ಬಾರಿ ತನ್ನ ಮುದ್ದಿನ ಗಿಳಿ ಹಂತಕನ ಬಗ್ಗೆ ಸುಳಿವು ಕೊಟ್ಟಾಗ ಒಂದು ಕ್ಷಣವೂ ತಡ ಮಾಡದೆ ಸೀದಾ ಪೊಲೀಸ್ ಠಾಣೆಗೆ ತೆರಳಿ, ಈ ಹಿಂದೆ ನೀವು ಅನುಮಾನಪಟ್ಟಿದ್ದೇ ಸರಿಯಾಗಿದೆ. ತನ್ನ ಪತ್ನಿಯನ್ನು ಹತ್ಯೆ ಮಾಡಿರುವುದು ಆಶು ಎಂದು ಖಚಿತ ಧ್ವನಿಯಲ್ಲಿ ಹೇಳಿದ್ದಾರೆ.
ಪೊಲೀಸರಿಗೆ ಅಷ್ಟು ಸಾಕಾಗಿತ್ತು. ಸೀದಾ ಆಶು ಬೆನ್ನತ್ತಿ ಏನ್ಸಮಾಚಾರ ಎಂದು ವಿಚಾರಿಸಿದ್ದಾರೆ. ಆಶು ಬೆಬ್ಬೆಬ್ಬೆ ಅಷ್ಟೇ! ನೀಲಂ ಒಬ್ಬರೇ ಮನೆಯಲ್ಲಿದ್ದಾಗ ಆಶು ತನ್ನ ಸಹಚರರ ಜತೆಗೂಡಿ ಮನೆ ಪ್ರವೇಶಿಸಿದ್ದಾನೆ. ನೀಲಂರನ್ನು ಹತ್ಯೆ ಮಾಡಲು ಅವರ ಮೇಲೆ ದಾಳಿ ನಡೆಸಿದಾಗ ಸಾಕು ನಾಯಿ ಅವರ ಮೇಲೆ ಎಗರಿಬಿದ್ದಿದೆ. ಆಶು ಬೆರಳನ್ನು ಸಹ ನಾಯಿ ಕಚ್ಚಿಬಿಟ್ಟಿದೆ. ಇದರಿಂದ ವ್ಯಘ್ರಗೊಂಡ ಆಶು ಮತ್ತು ಅವನ ಅನುಚರರು ನಾಯಿ ಮತ್ತು ನೀಲಂ ಅವರಿಬ್ಬರನ್ನೂ ಹತ್ಯೆ ಮಾಡಿ ಪರಾರಿಯಾಗಿದ್ದರು.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications