ಉತ್ತರಪ್ರದೇಶವನ್ನು ಕೇಸರೀಕರಣ ಮಾಡೋಕೆ ಹೊರಟ್ರಾ ಸಿಎಂ ಯೋಗಿ?
ಉತ್ತರಪ್ರದೇಶಕ್ಕೆ ಪ್ರಮುಖವಾಗಿ ಬೇಕಾಗಿರುವ ಕಾನೂನು, ಸುವ್ಯವಸ್ಥೆ ವಿಚಾರದಲ್ಲಿ ಕಠಿಣ ಕ್ರಮಗಳನ್ನು ಯೋಗಿ ಸರಕಾರ ಕೈಗೊಂಡಿದ್ದರೂ, ಇಡೀ ಸರಕಾರೀ ಯಂತ್ರ ಕೇಸರೀಕರಣದತ್ತ ಸಾಗುತ್ತಿರುವುದು ಸ್ಪಷ್ಟವಾಗುತ್ತಿದೆ.
ಈ ಹಿಂದಿನ ಮಾಯಾವತಿ, ಅಖಿಲೇಶ್ ಸರಕಾರ ಮಾಡಲಿಲ್ಲವೇ, ಬಿಜೆಪಿ ಮಾಡಿದರೆ ತಪ್ಪೇನು ಎನ್ನುವ ಪ್ರಶ್ನೆಗೆ ಬಹುಷ: ಉತ್ತರ ಹುಡುಕುವುದು ಕಷ್ಟ. ಆದರೆ, ಅವರಿಬ್ಬರಿಗಿಂತ, ನನ್ನ ಕಾರ್ಯವೈಖರಿ ಡಿಫರೆಂಟ್ ಎನ್ನುವುದನ್ನು ತೋರಿಸುವುದಕ್ಕೆ ಹಾಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸುವರ್ಣಾವಕಾಶವಿದೆ.
ಅಭೂತಪೂರ್ವ ಜನಾದೇಶದೊಂದಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರದ ಮೇಲೆ, ಮತದಾರರ ನಿರೀಕ್ಷೆ ಬೆಟ್ಟದಷ್ಟಿದೆ. ಆದರೆ, ಇತ್ತೀಚಿನ ಯೋಗಿ ಸರಕಾರದ ಕೆಲವು ನಿರ್ಧಾರಗಳು, ಅಭಿವೃದ್ದಿಗೆ ಹಾತೊರೆಯುತ್ತಿರುವ ಉತ್ತರಪ್ರದೇಶಕ್ಕೆ ಒಳ್ಳೆ ಬೆಳವಣಿಗೆಗಳಂತೆ ಕಾಣಿಸುತ್ತಿಲ್ಲ.
ಉತ್ತರಪ್ರದೇಶಕ್ಕೆ ಪ್ರಮುಖವಾಗಿ ಬೇಕಾಗಿರುವ ಕಾನೂನು, ಸುವ್ಯವಸ್ಥೆ ವಿಚಾರದಲ್ಲಿ ಕಠಿಣ ಕ್ರಮಗಳನ್ನು ಯೋಗಿ ಸರಕಾರ ಕೈಗೊಂಡಿದ್ದರೂ, ಇಡೀ ಸರಕಾರೀ ಯಂತ್ರ ಕೇಸರೀಕರಣದತ್ತ ಸಾಗುತ್ತಿರುವುದು ಸ್ಪಷ್ಟವಾಗುತ್ತಿದೆ. ಅದಕ್ಕೆ ತಾಜಾ ಉದಾಹರಣೆ, ರಾಜ್ಯ ಸರಕಾರೀ ಸಾರಿಗೆ ಸಂಸ್ಥೆ ಬಸ್ಸುಗಳು.
ಕೆಲವು ದಿನಗಳ ಹಿಂದೆ ಸರಯೂ ನದಿಯ ತಟದಲ್ಲಿ ಬೃಹತ್ ಶ್ರೀರಾಮಚಂದ್ರನ ವಿಗ್ರಹವನ್ನು ನೂರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸುವ ವಿಚಾರ ಪ್ರಕಟಿಸಿದ್ದ ಯೋಗಿ ಆದಿತ್ಯನಾಥ್ ಸರಕಾರದ ನಿರ್ಧಾರ ಬಹುಚರ್ಚಿತ ವಿಷಯವಾಗಿತ್ತು.
'ಸಬ್ ಕಾ ವಿಕಾಸ್' ಎಂದು ಹೇಳುತ್ತಲೇ ಇರುವ ಯೋಗಿ ಸರಕಾರ ಮಾಡಬೇಕಾಗಿರುವುದು ಬಗೆದಷ್ಟು ಇದ್ದಾಗ, ರಾಮನ ವಿಗ್ರಹ ಪ್ರತಿಷ್ಠಾಪನೆಯೇ ಆಗಿರಲಿ, ರಹೀಮನ ಕೆಲಸಕ್ಕಾಗಿಯೇ ಇರಲಿ ನೂರು ಕೋಟಿ ಖರ್ಚುಮಾಡುವುದು ತರವಲ್ಲ ಎನ್ನುವ ಮಾತು ಕೇಳಿಬರುತ್ತಿದೆ. ಮುಂದೆ ಓದಿ..

ಶಾಲಾ ಬ್ಯಾಗನ್ನು ಕೇಸರೀಕರಣಗೊಳಿಸಿದ ಸಿಎಂ ಯೋಗಿ
ಅಧಿಕಾರಕ್ಕೆ ಬಂದ ಹೊಸದರಲ್ಲಿ ಆಗಲೇ ಮುದ್ರಣವಾಗಿದ್ದ ಅಖಿಲೇಶ್ ಯಾದವ್ ಭಾವಚಿತ್ರವಿರುವ ಸ್ಕೂಲ್ ಬ್ಯಾಗ್ ಅನ್ನು ಬದಲಾಯಿಸುವುದು ಬೇಡ, ತೆರಿಗೆದಾರರ ಹಣ ಪೋಲಾಗುವುದು ಬೇಡ ಎನ್ನುವ ನಿರ್ಧಾರ ತೆಗೆದುಕೊಂಡು ಸೈಎನಿಸಿ ಕೊಂಡಿದ್ದ ಸಿಎಂ ಯೋಗಿ, ತದನಂತರ ಶಾಲಾ ಬ್ಯಾಗನ್ನು ಕೇಸರೀಕರಣಗೊಳಿಸಿದ್ದರು.

ಲಕ್ಷಣ್ ಮತ್ತು ರಾಣಿಲಕ್ಷ್ಮೀಬಾಯಿ ಪ್ರಶಸ್ತಿ ಸಮಾರಂಭ
ಇದಾದ ನಂತರ, ಜೂನ್ ತಿಂಗಳಲ್ಲಿ ಕ್ರೀಡಾಳುಗಳಿಗಾಗಿ ಕೊಡಮಾಡುವ 'ಲಕ್ಷಣ್ ಮತ್ತು ರಾಣಿಲಕ್ಷ್ಮೀಬಾಯಿ' ಪ್ರಶಸ್ತಿ ಸಮಾರಂಭವನ್ನು ಸಂಪೂರ್ಣ ಕೇಸರೀಕರಣಗೊಳಿಸಿದ್ದ ಯೋಗಿ ಸರಕಾರ, ಈ ಪ್ರಶಸ್ತಿಗಾಗಿ ನೀಡುವ ಪ್ರಶಸ್ತಿ ಪತ್ರ, ಬುಕ್ಲೆಟ್, ಪ್ರಶಸ್ತಿ ವಿಜೇತ ಸಮಾರಂಭದ ಉಸ್ತುವಾರಿಗಳ ಉಡುಗೆತೊಡುಗೆಯನ್ನೂ ಕೇಸರಿಮಯಗೊಳಿಸಿತ್ತು.

ಬುಕ್ಲೆಟ್, ವಾರ್ತಾ ಇಲಾಖೆಯ ಡೈರಿ, ಸಚಿವರ ಮಾಹಿತಿ ಎಲ್ಲವೂ ಕೇಸರಿಮಯ
ಯೋಗಿ ಸರಕಾರ ನೂರು ದಿನ ಪೂರೈಸಿದ ಹಿನ್ನಲೆಯಲ್ಲಿ ಬಿಡುಗಡೆಗೊಳಿಸಿದ್ದ ಬುಕ್ಲೆಟ್, ವಾರ್ತಾ ಇಲಾಖೆಯ ಡೈರಿ, ಸಚಿವರ ಮಾಹಿತಿಯಿರುವ ವಿವರ ಎಲ್ಲವೂ ಕೇಸರಿಮಯವಾಗಿದೆ. ಕೇಸರಿ ಬ್ಯಾಕ್ ಗ್ರೌಂಡ್ ನಲ್ಲಿ ದೀನ್ ದಯಾಳ್ ಉಪಾಧ್ಯಾಯ, ಪ್ರಧಾನಿ ಮೋದಿ, ಯೋಗಿ ಆದಿತ್ಯನಾಥ್ ಅವರ ಭಾವಚಿತ್ರದೊಂದಿಗೆ ಬುಕ್ಲೆಟ್ ಮುದ್ರಿಸಲಾಗಿದೆ.

ಮಾಯಾವತಿ ಸರಕಾರ ನೀಲಿ ಬಣ್ಣ, ಅಖಿಲೇಶ್ ಸರಕಾರ ಕೆಂಪು ಮತ್ತು ಹಸಿರು ಬಣ್ಣ
ಈ ಹಿಂದಿನ ಮಾಯಾವತಿ ಸರಕಾರ ನೀಲಿ ಬಣ್ಣ, ಅಖಿಲೇಶ್ ಸರಕಾರ ಕೆಂಪು ಮತ್ತು ಹಸಿರು ಬಣ್ಣವನ್ನು ಎಲ್ಲಾ ಕಡೆ ಬಳಸಿಕೊಂಡಿದ್ದರೆ, ಯೋಗಿ ಸರಕಾರ ನಿಧಾನವಾಗಿ ಎಲ್ಲಾ ಕಡೆಯೂ ಕೇಸರಿ ಬಣ್ಣವನ್ನು ಬಳಸಲು ಆರಂಭಿಸಿದೆ. ಸಿಎಂ ಯೋಗಿ ತನ್ನ ಕಚೇರಿಯಲ್ಲಿನ ಮತ್ತು ಕಾರಿನ ಸೀಟನ್ನು ಈಗಾಗಲೇ ಕೇಸರಿ ಬಣ್ಣಕ್ಕೆ ತಿರುಗಿಸಿದ್ದಾಗಿದೆ. ಸರಕಾರದ ಕೇಸರೀಕರಣಕ್ಕೆ ತಾಜಾ ಉದಾಹರಣೆಯಾಗಿ ಮತ್ತೊಂದು ಸೇರ್ಪಡೆಯಾಗಿದೆ.

ರಾಜ್ಯ ರಸ್ತೆಸಾರಿಗೆ ಸಂಸ್ಥೆಯ ಐವತ್ತು ಬಸ್ಸುಗಳಿಗೆ ಹಸಿರು (ಕೇಸರಿ) ನಿಶಾನೆ
ಬುಧವಾರ (ಅ 11) ರಾಜ್ಯ ರಸ್ತೆಸಾರಿಗೆ ಸಂಸ್ಥೆಯ ಐವತ್ತು ಬಸ್ಸುಗಳಿಗೆ ಹಸಿರು (ಕೇಸರಿ) ನಿಶಾನೆ ಸಿಎಂ ಯೋಗಿ ಆದಿತ್ಯನಾಥ್ ತೋರಿದ್ದಾರೆ. ಬಸ್ಸು ಮತ್ತು ಕರ್ಟನ್ ಸಂಪೂರ್ಣ ಕೇಸರಿ ಕಲರ್ ನಲ್ಲಿದೆ. ಈ ಬಸ್ಸುಗಳಿಗೆ 'ಸಂಕಲ್ಪ ಸೇವಾ' ಎಂದು ಹೆಸರಿಡಲಾಗಿದ್ದು, ಗ್ರಾಮೀಣ ಭಾಗದಲ್ಲಿ ಈ ಬಸ್ಸುಗಳ ಓಡಾಟವಿರಲಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications