Get Updates
Get notified of breaking news, exclusive insights, and must-see stories!

ಟಿಎಂಸಿ, ಎಸ್‌ಪಿ ಬಳಿಕ ಶರದ್ ಪವಾರ್ ಸಹ ಕಾಂಗ್ರೆಸ್‌ನಿಂದ ದೂರ ದೂರ

ನವದೆಹಲಿ, ಡಿಸೆಂಬರ್ 15: ಸಂಸತ್ ಚಳಿಗಾಲದ ಅಧಿವೇಶನ ಡಿಸೆಂಬರ್ 20ಕ್ಕೆ ಮುಕ್ತಾಯಗೊಳ್ಳಲಿದೆ. ಅಧಿವೇಶನದಲ್ಲಿ ಅದಾನಿ ಹಗರಣದ ಚರ್ಚೆಗೆ ಪಟ್ಟು ಹಿಡಿದು ಕಲಾಪಕ್ಕೆ ಅಡ್ಡಿ ಪಡಿಸುತ್ತಿರುವ ಕಾಂಗ್ರೆಸ್‌ನಿಂದ 'ಇಂಡಿಯಾ' ಮೈತ್ರಿಕೂಟದ ಪಕ್ಷಗಳು ಅಂತರವನ್ನು ಕಾಯ್ದುಕೊಳ್ಳುತ್ತಿವೆ. ಟಿಎಂಸಿ ಮತ್ತು ಸಮಾಜವಾದಿ ಪಕ್ಷದ ಬಳಿಕ ಈಗ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಸಹ ಕಾಂಗ್ರೆಸ್‌ನಿಂದ ಈ ವಿಚಾರದಲ್ಲಿ ದೂರ ಸರಿಯುತ್ತಿದೆ.

ಲೋಕಸಭೆ ಕಲಾಪದಲ್ಲಿ ಪ್ರಮುಖ ವಿಷಯಗಳ ಕುರಿತು ಚರ್ಚೆಗೆ ಅವಕಾಶ ಕಲ್ಪಿಸದೇ ಅದಾನಿ ಹಗರಣ ಮುಂದಿಟ್ಟುಕೊಂಡು ಕಾಂಗ್ರೆಸ್ ಕಲಾಪಕ್ಕೆ ಅಡ್ಡಿಪಡಿಸುತ್ತಿದೆ ಎಂದು ಟಿಎಂಸಿ ಆಕ್ರೋಶ ವ್ಯಕ್ತಪಡಿಸಿತ್ತು. ಆದ್ದರಿಂದ ಕಾಂಗ್ರೆಸ್ ನೇತೃತ್ವದಲ್ಲಿ ನಡೆದ ವಿಪಕ್ಷಗಳ ಸಭೆಗೆ ಟಿಎಂಸಿ ಸಂಸದರು ಹಾಜರಾಗಿರಲಿಲ್ಲ.

Adani Issue After SP And TMC Now NCP Also Distanced Itself From Congress

ಈಗ ಕಲಾಪಕ್ಕೆ ಅಡ್ಡಿಗೊಳಿಸುವ ಕಾಂಗ್ರೆಸ್‌ನಿಂದ ಎನ್‌ಸಿಪಿ (ಶರದ್ ಪವಾರ್ ಬಣ) ಸಹ ದೂರವಾಗುತ್ತಿದೆ. ಈ ಮೂಲಕ 'ಇಂಡಿಯಾ' ಮೈತ್ರಿಕೂಟದಲ್ಲಿನ ಒಂದೊಂದೇ ಪಕ್ಷಗಳು ಕಾಂಗ್ರೆಸ್‌ನ ನಿರ್ಧಾರದಿಂದ ಅಸಮಾಧಾನಗೊಂಡು ಪಕ್ಷವನ್ನು ಏಕಾಂಗಿಯಾಗಿ ಮಾಡುತ್ತಿವೆ. ಲೋಕಸಭೆ ಚಳಿಗಾಲದ ಅಧಿವೇಶನ ಡಿಸೆಂಬರ್ 20ರಂದು ಮುಕ್ತಾಯಗೊಳ್ಳಲಿದೆ.

ಕಲಾಪದಲ್ಲಿ ಕಾಂಗ್ರೆಸ್ ಏಕಾಂಗಿ: ಲೋಕಸಭೆ ಕಲಾಪದಲ್ಲಿ ಮಾತನಾಡಿದ ಎನ್‌ಸಿಪಿ (ಶರದ್ ಪವಾರ್ ಬಣ)ದ ಸಂಸದ ಅಮೋಲ್ ಕೋಲ್ಹೆ, "ಒಬ್ಬ ಉದ್ಯಮಿ ಮತ್ತು ರಾಜಕೀಯ ನಾಯಕರ ನಡುವಿನ ಸಂಬಂಧಗಳ ಬಗ್ಗೆಯೇ ಚರ್ಚಿಸುತ್ತಾ ಉಳಿದುಕೊಳ್ಳಬೇಕಾದ ಅಗತ್ಯವಿಲ್ಲ. ಕಾಂಗ್ರೆಸ್‌ನಿಂದ ದೂರವಿರಲು ಪಕ್ಷ ಪ್ರಯತ್ನಗಳನ್ನು ಮಾಡುತ್ತಿದೆ" ಎಂದು ಹೇಳಿದ್ದಾರೆ.

"ಕಲಾಪದಲ್ಲಿ ಇತರ ಪ್ರಮುಖ ವಿಚಾರಗಳ ಕುರಿತು ಸಹ ಧ್ವನಿಯನ್ನು ಎತ್ತಬೇಕಾಗಿದೆ. ರೈತರು, ಯುವಕರು, ಸಾಮಾನ್ಯ ಜನರ ವಿಷಯಗಳ ಕುರಿತು ಚರ್ಚಿಸಬೇಕಿದೆ. ಅದಕ್ಕಾಗಿ ಈ ವಿಚಾರವನ್ನು ಬಗೆಹರಿಸಬೇಕಿದೆ" ಎಂದು ಅಮೋಲ್ ಕೋಲ್ಹೆ ತಿಳಿಸಿದ್ದಾರೆ.

"ಅವರು ಮೂಲ ವಿಚಾರಗಳನ್ನು ಬಿಟ್ಟು ರಾಜಕೀಯದ ವಿಚಾರಗಳನ್ನು ಮುಂದಿಟ್ಟುಕೊಂಡು ಘೋಷಣೆಗಳನ್ನು ಕೂಗುತ್ತಿದ್ದಾರೆ. ಇದನ್ನು ಆಡಳಿತ ಮತ್ತು ವಿರೋಧ ಪಕ್ಷಗಳು ಖಚಿತಪಡಿಸಿಕೊಳ್ಳಬೇಕು. ಕಲಾಪ ನಡೆಯಲು ಅವಕಾಶ ಮಾಡಿಕೊಡಬೇಕು" ಎಂದು ಹೇಳಿದ್ದಾರೆ.

ಲೋಕಸಭೆಯಲ್ಲಿ ಅಮೋಲ್ ಕೋಲ್ಹೆ ಪಕ್ಕದಲ್ಲಿಯೇ ಕುಳಿತುಕೊಳ್ಳುವ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಪುತ್ರಿ, ಬಾರಾಮತಿ ಕ್ಷೇತ್ರದ ಸಂಸದೆ ಸುಪ್ರಿಯಾ ಸುಳೆ ಸಹ ಅಮೋಲ್ ಕೋಲ್ಹೆ ಹೇಳಿಕೆಯನ್ನು ಬೆಂಬಲಿಸಿದ್ದಾರೆ. ಈ ಮೂಲಕ ಕಾಂಗ್ರೆಸ್‌ನಿಂದ ದೂರ ಉಳಿಯುವ ಸಂದೇಶವನ್ನು ನೀಡಿದ್ದಾರೆ.

ಟಿಎಂಸಿ ಮತ್ತು ಸಮಾಜವಾದಿ ಪಕ್ಷಗಳು ಈಗಾಗಲೇ ಅದಾನಿ ಹಗರಣ ಮುಂದಿಟ್ಟುಕೊಂಡು ಚರ್ಚೆಗಳಿಗೆ ಅಡ್ಡಿಪಡಿಸುವ ಕಾಂಗ್ರೆಸ್‌ನ ಹಠಮಾರಿತನದ ವಿರುದ್ಧ ಧ್ವನಿ ಎತ್ತಿವೆ. ಸಂಭಾಲ್‌ನ ಗಲಭೆ, ಬಾಂಗ್ಲಾದೇಶದ ವಿಚಾರ ಸೇರಿದಂತೆ ಇತರ ಪ್ರಮುಖ ವಿಚಾರಗಳ ಕುರಿತು ಚರ್ಚೆಗೆ ಕಾಂಗ್ರೆಸ್ ಅನ್ನು ತಡೆದವರು ಯಾರು? ಎಂದು ಎರಡೂ ಪಕ್ಷಗಳು ಕೇಳಿವೆ.

ಸಂಸತ್ ಚಳಿಗಾಲದ ಅಧಿವೇಶನ ಆರಂಭವಾದ ದಿನದಿಂದಲೂ ಕಾಂಗ್ರೆಸ್ ಪಕ್ಷ ಲೋಕಸಭೆಯ ಒಳಗೆ ಮತ್ತು ಹೊರಗೆ ಅದಾನಿ ಹಗರಣ ಮುಂದಿಟ್ಟುಕೊಂಡು ಪ್ರತಿಭಟನೆಯನ್ನು ನಡೆಸುತ್ತಿದೆ. ಆದರೆ ಸಂಸತ್ ಹೊರಗೆ ಪ್ರತಿಭಟನೆ ಮಾಡಲಿ ಒಳಗೆ ಕಲಾಪ ನಡೆಸಲು ಬಿಡಬೇಕು ಎಂಬುದು ಕಾಂಗ್ರೆಸ್‌ನ ಮಿತ್ರಪಕ್ಷಗಳ ಅಭಿಪ್ರಾಯವಾಗಿದೆ.

ಶನಿವಾರ ಲೋಕಸಭೆಯಲ್ಲಿ ಭಾರತದ ಸಂವಿಧಾನದ 75 ವರ್ಷಗಳ ಪಯಣದ ಕುರಿತು ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, "ನೀವು ಧಾರವಿಯನ್ನು ಅದಾನಿಗೆ ನೀಡುವ ಮೂಲಕ ಅಲ್ಲಿನ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಬೆರಳು ಕತ್ತರಿಸಿದ್ದೀರಿ. ದೆಹಲಿಯ ಹೊರವಲಯದಲ್ಲಿ ರೈತರ ಮೇಲೆ ಅಶ್ರುವಾಯು ಪ್ರಯೋಗಿಸಿದ್ದೀರಿ. ನ್ಯಾಯಯುತ ಬೆಲೆ ಕೇಳುತ್ತಿರುವ ರೈತರ ಬೆರಳನ್ನು ನೀವು ಕತ್ತರಿಸಿದ್ದೀರಿ" ಎಂದು ಸರ್ಕಾರದ ವಿರುದ್ಧ ಟೀಕೆಗಳನ್ನು ಮಾಡಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+