Get Updates
Get notified of breaking news, exclusive insights, and must-see stories!

ನೀರು ಕೊಡದಿದ್ದಕ್ಕೆ ಪಂಚಾಯಿತಿಗೆ ಬೀಗ ಹಾಕಿ ಬಂದೂಕು ಹಿಡಿದು ನಿಂತ ವ್ಯಕ್ತಿ

ಕೇರಳದಲ್ಲಿ ತೀವ್ರವಾದ ನೀರಿನ ಕೊರತೆ ಉಂಟಾಗಿರುವ ಸಮಯದಲ್ಲಿ ಈ ಘಟನೆ ನಡೆದಿದೆ. ಕೇರಳದಲ್ಲಿ ಕೆಲವು ಪ್ರದೇಶಗಳಲ್ಲಿ ತೊರೆಗಳು ಮತ್ತು ನದಿಗಳು ಮತ್ತು ಕುಡಿಯುವ ನೀರಿನ ಕೊರತೆ ಎದುರಿಸುತ್ತಿವೆ.

ತಿರುವನಂತಪುರಂ, ಫೆಬ್ರವರಿ 21: ಕುಡಿಯುವ ನೀರಿನ ವ್ಯವಸ್ಥೆ ಮಾಡದ ಕಾರಣ ಮಂಗಳವಾರ ಕೇರಳದ ವೇಗನ್ನೂರಿನ ವ್ಯಕ್ತಿಯೋರ್ವ ಪಂಚಾಯತ್ ಕಚೇರಿಯೊಂದರ ಗೇಟ್‌ಗೆ ಬೀಗ ಜಡಿದು ಸಿಬ್ಬಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡು ಸೊಂಟಕ್ಕೆ ಬಂದೂಕು ಕಟ್ಟಿಕೊಂಡು ಹೊರಗೆ ನಿಂತಿದ್ದ ಘಟನೆ ನಡೆದಿದೆ.

ಕೇರಳದಲ್ಲಿ ತೀವ್ರವಾದ ನೀರಿನ ಕೊರತೆ ಉಂಟಾಗಿರುವ ಸಮಯದಲ್ಲಿ ಈ ಘಟನೆ ನಡೆದಿದೆ. ಕೇರಳದಲ್ಲಿ ಕೆಲವು ಪ್ರದೇಶಗಳಲ್ಲಿ ತೊರೆಗಳು ಮತ್ತು ನದಿಗಳು ಮತ್ತು ಕುಡಿಯುವ ನೀರಿನ ಕೊರತೆ ಎದುರಿಸುತ್ತಿವೆ.

ಹಲವಾರು ದೂರುಗಳ ಹೊರತಾಗಿಯೂ ಪಂಚಾಯಿತಿಯವರು ಸ್ಪಂದಿಸದಿದ್ದಕ್ಕೆ ಕ್ರೀಡಾ ಸನ್‌ಗ್ಲಾಸ್ ಮತ್ತು ತನ್ನ ಸೊಂಟಕ್ಕೆ ಏರ್ ಗನ್ ಕಟ್ಟಿಕೊಂಡು 33 ವರ್ಷದ ಮುರುಗನ್ ಪಂಚಾಯತ್ ಕಚೇರಿಯ ಮುಖ್ಯ ಗೇಟ್‌ಗೆ ಬೀಗ ಹಾಕಿ ಅದರ ಹೊರಗೆ ನಿಂತು ಪ್ರತಿಭಟಿಸಿದರು. ಈ ಘಟನೆಯ ದೃಶ್ಯಾವಳಿಗಳನ್ನು ಟಿವಿ ಚಾನೆಲ್‌ಗಳಲ್ಲಿ ಪ್ರಸಾರ ಮಾಡಲಾಗಿದ್ದು, ಅವುಗಳಲ್ಲಿ ಕುಡಿಯುವ ನೀರನ್ನೂ ಪಡೆಯಲು ಸಾಧ್ಯವಾಗದಿದ್ದರೆ ಇಲ್ಲಿ ಪಂಚಾಯಿತಿ ಏಕೆ? ಅಂತಹ ಪಂಚಾಯಿತಿ ಏಕೆ ಬೇಕು?" ಎಂದು ಅವರು ಪ್ರಶ್ನಿಸಿದ್ದಾರೆ.

A man with a gun locked the panchayat for not providing water

ಈತನ ಕೃತ್ಯದಿಂದಾಗಿ ಪಂಚಾಯತ್ ಕಚೇರಿಯ ನೌಕರರು ಮಾತ್ರವಲ್ಲ, ಕೆಲವು ಸಾರ್ವಜನಿಕರೂ ಸಹ ಆವರಣದೊಳಗೆ ಸಿಲುಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು. ಸದ್ಯ 33 ವರ್ಷದ ಮುರುಗನ್ ಅವರನ್ನು ಪೊಲೀಸರು ವಶಕ್ಕೆ ಪಡೆದು ಪಂಚಾಯತ್ ಗೇಟ್‌ಗೆ ಬೀಗ ಹಾಕಲಾಗಿದೆ ಎಂದು ಬಲರಾಮಪುರಂ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆದರೆ, ಆತನ ವಿರುದ್ಧ ಎಫ್‌ಐಆರ್‌ ಇನ್ನೂ ದಾಖಲಾಗಿಲ್ಲ. ಪಂಚಾಯಿತಿಗೆ ಹಲವು ಬಾರಿ ದೂರು ನೀಡಿದರೂ ಕುಡಿಯುವ ನೀರು ಸಿಗದಿರುವುದನ್ನು ವಿರೋಧಿಸಿ ಮುರುಗನ್‌ ಪ್ರತಿಭಟನೆ ನಡೆಸುತ್ತಿದ್ದಾಗ ಅವರಿಗೆ ಮಾನಸಿಕ ಸಮಸ್ಯೆಯೂ ಇದ್ದಂತಿದೆ. ಅಲ್ಲದೆ ಆತನ ಬಳಿಯಿದ್ದ ಆಯುಧ ಏರ್ ಗನ್ ಎಂದು ಪೊಲೀಸರು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+