ಶಿಮ್ಲಾ ಜನ ಖುಷಿಯಿಂದ ಹಬ್ಬ ಮಾಡ್ತಾರೆ, ಮರುದಿನವೇ ಕಲ್ಲಿನಿಂದ ಹೊಡ್ಕೊತಾರೆ
ಶಿಮ್ಲಾ, ನವೆಂಬರ್ 9: ಶಿಮ್ಲಾದ ಜನರು ಖುಷಿಯಿಂದ ದೀಪಾವಳಿ ಆಚರಣೆ ಮಾಡ್ತಾರೆ ಮರುದಿನ ಒಬ್ಬರ ಮೇಲೊಬ್ಬರು ಕಲ್ಲು ಎಸೆದುಕೊಳ್ಳುತ್ತಾರೆ, ಹಾಗಾದರೆ ಇವರ ಮಧ್ಯೆ ಏನಾದರೂ ದ್ವೇಷ ಇದೆಯಾ ಎಂದುಕೊಳ್ಳಬೇಡಿ ಹಾಗೇನೂ ಇಲ್ಲ.
ಇದು ಶಿಮ್ಲಾದ ಒಂದು ಆಚರಣೆಯಷ್ಟೇ ಶಿಮ್ಲಾದಿಂದ ಸುಮಾರು 40 ಕಿ.ಮೀ ದೂರದಲ್ಲಿ ಧಾಮಿ ಎನ್ನುವ ಹಳ್ಳಿ ಇದೆ. ಅಲ್ಲಿ ದೀಪಾವಳಿ ಮರುದಿನ ಕಲ್ಲು ತೂರುವ ವಿಶೇಷ ಆಚರಣೆಯನ್ನು ನಡೆಸಲಾಗುತ್ತದೆ.

ಪ್ರತಿ ವರ್ಷವು ಸುತ್ತಮುತ್ತಲಿನಲ್ಲಿರುವ ಹಳ್ಳಿಗಳಿಂದ ಸಾವಿರಾರು ಮಂದಿ ಧಾಮಿ ಹಳ್ಳಿಗೆ ಬರುತ್ತಾರೆ. ಇದರಲ್ಲಿ ಧಾಮಿಯ ಶ್ರೀಮಂತ ಕುಟುಂಬದ ಯುವಕರು ಈ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ ಇದು ನೂರಾರು ವರ್ಷಗಳ ಸಂಪ್ರದಾಯವನ್ನು ಪ್ರದರ್ಶಿಸುವ ಹಬ್ಬವಾಗಿದೆ.
#WATCH Shimla: Locals in Dhami Village today observed the traditional ritual of stone pelting, to appease Goddess Kali #HimachalPradesh pic.twitter.com/uVoCPQ22y6
— ANI (@ANI) November 8, 2018
ಒಬ್ಬರಿಗೊಬ್ಬರು ಕಲ್ಲು ಹೊಡೆಯುವಂತೆ ಪ್ರೇರೇಪಿಸಲಾಗುತ್ತದೆ. ಇದನ್ನು ಒಳ್ಳೆಯ ಉದ್ದೇಶಕ್ಕೆಂದೇ ಹೇಳುತ್ತಾರೆ. ಧಾಮಿಯ ರಾಜ ಕಟ್ಟಿರುವಂತಹ ದೇವಸ್ಥಾನದ ಮೂಲಕ ಮೆರವಣಿಗೆ ಆರಂಭವಾಗುತ್ತದೆ.
ಎರಡು ಹಳ್ಳಿಗಳ ಜನರು ಎದುರು ಬದುರು ನಿಂತುಕೊಂಡು ಕಲ್ಲಿನಿಂದ ಹೊಡೆದುಕೊಳ್ಳಲು ಆರಂಭಿಸುತ್ತಾರೆ.ಈ ಸಂಪ್ರದಾಯ 400 ವರ್ಷಗಳಿಗಿಂತಲೂ ಹಳೆಯದು, ಮನುಷ್ಯರನ್ನು ಬಲಿಕೊಡುವ ಪದ್ಧತಿಯನ್ನು ನಿಷೇಧ ಮಾಡಲು ಈ ಪದ್ಧತಿಯನ್ನು ಜಾರಿ ಮಾಡಲಾಗಿತ್ತು.ಮನುಷ್ಯರ ಬಲಿಯನ್ನು ತಡೆಯಲು ಧಾಮಿಯ ರಾಣಿ ತನ್ನನ್ನು ತಾನೆ ಬಲಿಪಡೆದಿದ್ದಳು ಅಲ್ಲಿಂದ ಈ ಪದ್ಧತಿ ಹುಟ್ಟಿಕೊಂಡಿತು.
ಒಬ್ಬರಿಗೆ ಕಲ್ಲು ತಗುಲಿ ಗಾಯವಾಗಿ ರಕ್ತ ಬರುವವರೆಗೂ ಆಕಾಶದ ಕಡೆಗೆ ಕಲ್ಲುಗಳನ್ನು ಎಸೆಯುತ್ತಲೇ ಇರುತ್ತಾರೆ, ಒಬ್ಬರಿಗೆ ಕಲ್ಲು ತಗುಲಿ ಗಾಯವಾಗಿ ರಕ್ತ ಬಂದ ಬಳಿಕ ಆ ರಕ್ತವನ್ನು ಕಾಳಿ ದೇವಿಗೆ ನೈವೇದ್ಯವಾಗಿ ಅರ್ಪಿಸುತ್ತಾರೆ. ಅಲ್ಲಿಗೆ ಆ ವರ್ಷದ ಆಚರಣೆ ಮುಕ್ತಾಯಗೊಳ್ಳುತ್ತೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications