Get Updates
Get notified of breaking news, exclusive insights, and must-see stories!

ಚಿರತೆಯ ಸಾವುಗಳು ಈ ಯೋಜನೆಯ ಬಗ್ಗೆ ಉತ್ತಮ ಚಿತ್ರಣ ನೀಡುವುದಿಲ್ಲ: ಸುಪ್ರೀಂ ಕೋರ್ಟ್

ನವದೆಹಲಿ, ಜುಲೈ. 20: ಆಫ್ರಿಕಾದಿಂದ ದೊಡ್ಡ ಬೆಕ್ಕುಗಳು (ಚಿರತೆಗಳು) ಸ್ಥಳಾಂತರಿಸಿದ ಒಂದು ವರ್ಷದೊಳಗೆ ಎಂಟು ಚಿರತೆಗಳ ಸಾವುಗಳು ಪ್ರಾಜೆಕ್ಟ್ ಚೀತಾದ ಉತ್ತಮ ಚಿತ್ರಣವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ. ಈ ಚಿರತೆಗಳ ಸಾವಿಗೆನ ಕಾರಣಗಳು ಮತ್ತು ಅವುಗಳ ಸಂಖ್ಯೆಯಲ್ಲಿ ಕುಸಿತವನ್ನು ತಡೆಯಲು ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಸರ್ಕಾರದಿಂದ ಪ್ರತಿಕ್ರಿಯೆಯನ್ನು ಕೋರಿದೆ.

ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ, ಜೆಬಿ ಪರ್ದಿವಾಲಾ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರ ಪೀಠವು ಇದನ್ನು ಸರ್ಕಾರವು ಪ್ರತಿಷ್ಠೆಯ ವಿಷಯವಾಗಿ ಏಕೆ ತೆಗೆದುಕೊಳ್ಳಬೇಕು ಎಂದು ಪ್ರಶ್ನಿಸಿದೆ. "ಅವುಗಳನ್ನು (ಚಿರತೆಗಳು) ಒಂದೇ ಸ್ಥಳದಲ್ಲಿ ಇರಿಸುವ ಬದಲು, ಅವು ಯಾವುದೇ ರಾಜ್ಯ ಅಥವಾ ಯಾವುದೇ ಸರ್ಕಾರದ ಅಡಿಯಲ್ಲಿರಲಿ. ಅವುಗಳಿಗೆ ಒಂದು ಅಥವಾ ಹೆಚ್ಚಿನ ಆವಾಸಸ್ಥಾನಗಳನ್ನು ಏಕೆ ನಿರ್ಮಿಸಲು ಸಾಧ್ಯವಿಲ್ಲ" ಎಂದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ವಿಚಾರಣೆ ನಡೆಸುತ್ತಿರುವಾಗ ಪೀಠ ಹೇಳಿದೆ.

Eight cheetah deaths

"ಒಂದು ವರ್ಷದಲ್ಲಿ ಸಂಭವಿಸುವ 40% ಸಾವುಗಳು ಈ ಯೋಜನೆಯ ಉತ್ತಮ ಚಿತ್ರವನ್ನು ಪ್ರತಿಬಿಂಬಿಸುವುದಿಲ್ಲ" ಎಂದು ಹೇಳಿವೆ. 1952 ರಲ್ಲಿ ದೇಶದಿಂದ ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ಘೋಷಿಸಿದ ದಶಕಗಳ ನಂತರ ಪ್ರಾಜೆಕ್ಟ್ ಚೀತಾ ಯೋಜನೆಯಡಿಯಲ್ಲಿ ಕಳೆದ ವರ್ಷ ಸೆಪ್ಟೆಂಬರ್ ಮತ್ತು ಫೆಬ್ರವರಿ 2023 ರಲ್ಲಿ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಎರಡು ಬ್ಯಾಚ್‌ಗಳಲ್ಲಿ ಇಪ್ಪತ್ತು ಚಿರತೆಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಸ್ಥಳಾಂತರಿಸಲಾಗಿದೆ.

ಕಾಡಿಗೆ ಬಿಡುಗಡೆ ಮಾಡಲಾದ 10 ರಲ್ಲಿ ಮೂರು, ಉಳಿದ ಬಂಧಿತ ತಳಿಗಳಲ್ಲಿ ಎರಡು ಮತ್ತು ಭಾರತದಲ್ಲಿ ಜನಿಸಿದ ನಾಲ್ಕು ಮರಿಗಳಲ್ಲಿ ಮೂರು ಸಾವನ್ನಪ್ಪಿವೆ. ಕುನೊ ರಾಷ್ಟ್ರೀಯ ಉದ್ಯಾನವನ ಈಗ ಒಂದು ಮರಿ ಸೇರಿದಂತೆ 16 ಚಿರತೆಗಳನ್ನು ಹೊಂದಿದೆ.

Eight cheetah deaths

ನ್ಯಾಯಾಲಯಕ್ಕೆ ನೆರವು ನೀಡುತ್ತಿರುವ ವನ್ಯಜೀವಿ ತಜ್ಞ ಎಂ.ಕೆ.ರಂಜಿತ್‌ಸಿನ್ಹ ನೇತೃತ್ವದ ಸಮಿತಿಯು ಸರ್ಕಾರ ನೇಮಿಸಿರುವ ಕಾರ್ಯಪಡೆಯ ಯಾವೊಬ್ಬ ಸದಸ್ಯನೂ ಚಿರತೆ ತಜ್ಞರನ್ನು ಹೊಂದಿಲ್ಲ ಎಂದು ಬೆಟ್ಟು ಮಾಡಿ ತೋರಿಸಿದೆ. ಕಳೆದ ವಾರ ಎರಡು ಚಿರತೆಗಳ ಸಾವಿನ ನಂತರ ಸಮಿತಿಯು ತುರ್ತು ವಿಚಾರಣೆಗಾಗಿ ನ್ಯಾಯಾಲಯಕ್ಕೆ ಮನವಿ ಮಾಡಿತ್ತು.

ಸರ್ಕಾರದ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಟ್ಟಿ, ಈ ಸಾವುಗಳ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳು ಗಮನಹರಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. "ಇವೆಲ್ಲದರ ನಂತರ, ಇದು ದೇಶಕ್ಕೆ ಪ್ರತಿಷ್ಠಿತ ಯೋಜನೆಯಾಗಿದೆ. ಸಾವುಗಳು ಆತಂಕಕಾರಿಯಾಗಿಲ್ಲ. ಯೋಜನೆಯ ಮೊದಲ ವರ್ಷದಲ್ಲಿ 50% ರಷ್ಟು ಸಾವುಗಳನ್ನು ನಿರೀಕ್ಷಿಸಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ.

Eight cheetah deaths

"ಮೇಲ್ನೋಟಕ್ಕೆ ನಮ್ಮ ಪರಿಸರದ ಪರಿಸ್ಥಿತಿಗಳು ಅಲ್ಲಿನ ಚಿರತೆಗಳಿಗೆ ಸರಿಹೊಂದುವುದಿಲ್ಲ ಎಂದು ತೋರುತ್ತದೆ. ಅವುಗಳು ಉಸಿರಾಟದ ತೊಂದರೆಯಿಂದ ಬಳಲುತ್ತಿವೆ ಎಂದು ವರದಿಯಾಗಿದೆ. ಒಂದು ಚಿರತೆ ಮಾತ್ರ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿತ್ತು" ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ಈ ವೇಳೆ ವಕೀಲರಾದ ಐಶ್ವರ್ಯಾ ಭಟ್ಟಿ, ಅವುಗಳ ಸಾವಿಗೆ ಹಲವು ಅಂಶಗಳು ಕಾರಣವಾಗಿವೆ ಎಂಸಿದ್ದಾರೆ.

ಮುಂದುವರೆದು, ಇದು ರಾಜಕೀಯದ ಬಗ್ಗೆ ಅಲ್ಲ, ಆದರೆ ಇತರ ರಾಜ್ಯಗಳಲ್ಲಿ ಅವುಗಳನ್ನು ಇರುಸಲು ವ್ಯವಸ್ಥೆ ಮಾಡುವಲ್ಲಿ ಸಮಸ್ಯೆಗಳಿವೆ. ರಾಜಸ್ಥಾನದ ರಾಷ್ಟ್ರೀಯ ಉದ್ಯಾನವನಕ್ಕೆ ಸ್ಥಳಾಂತರಗೊಂಡ ನಂತರ ಆರು ಹುಲಿಗಳು ಸಾವನ್ನಪ್ಪಿವೆ ಎಂದು ಮಾಹಿತಿ ನೀಡಿವೆ. ರಂಜಿತ್‌ಸಿನ್ಹ್ ನೇತೃತ್ವದ ಸಮಿತಿಯ ಪರವಾಗಿ ಹಾಜರಾದ ಹಿರಿಯ ವಕೀಲ ಪ್ರಶಾಂತೋ ಚಂದ್ರ ಸೇನ್, ಚೀತಾಗಳ ಮೇಲಿನ ಸರ್ಕಾರದ ಸಮಿತಿಯ ಭಾಗವಾಗಿರುವ ದಕ್ಷಿಣ ಆಫ್ರಿಕಾದ ತಜ್ಞರ ಪತ್ರಗಳನ್ನು ತೋರಿಸಿ, ತಜ್ಞರು ತಕ್ಷಣದ ಕ್ರಮಗಳಿಗೆ ಕರೆ ನೀಡಿದ್ದಾರೆ ಎಂದು ಪ್ರಶಾಂತೋ ಚಂದ್ರ ಸೇನ್ ಹೇಳಿದರು.

ಮೇ 18 ರಂದು, ನ್ಯಾಯಾಲಯವು ಚಿರತೆಯ ಸಾವುಗಳು ಕಳವಳಕ್ಕೆ ಕಾರಣವೆಂದು ಕರೆದಿತು ಮತ್ತು ಜುಲೈ ವೇಳೆಗೆ ಸಾವುಗಳನ್ನು ಕಡಿಮೆ ಮಾಡಲು ಕ್ರಮಗಳನ್ನು ಪ್ರಸ್ತಾಪಿಸಲು ಕೇಂದ್ರ ಸರ್ಕಾರಕ್ಕೆ ಸಮಯ ನೀಡಿತ್ತು. ಗುರುವಾರ ಸುಪ್ರೀಂಕೋರ್ಟ್ ಹೆಚ್ಚಿನ ಸಮಯವನ್ನು ನೀಡಿ, ಆಗಸ್ಟ್ 1 ರಂದು ವಿಚಾರಣೆಯನ್ನು ಮುಂದೂಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+