ಉತ್ತಮ ಆರೋಗ್ಯಕ್ಕಾಗಿ ಹಿಡಿಗಟ್ಟಲೆ ಮರಳು ತಿನ್ನುವ ಮುದುಕಿ!
ವಾರಣಾಸಿ, ಜ. 10: ಏನಾದರೂ ತಪ್ಪು ಮಾಡಿದಾಗ ದೊಡ್ಡವರು ಹೊಟ್ಟೆಗೇನ್ ಅನ್ನ ತಿಂತಿಯೋ, ಮಣ್ಣು ತಿಂತಿಯೋ ಅಂತ ಕೇಳುವುದು ರೂಢಿ.
ಆದ್ರೆ, ನಂಬಿ, ಇಲ್ಲೊಬ್ಬ ಮಾರಾಯ್ತಿ ಅಕ್ಷರಶಃ ಮರಳು ತಿನ್ನುತ್ತಾರೆ. ಅಷ್ಟೇ ಅಲ್ಲ, ದಿನಾ ಮರಳು ತಿಂದರೂ ಇನ್ನೂ ಗಟ್ಟಿಯಾಗೇ ಇದ್ದಾರೆ. ಇವರನ್ನು ಯಾವುದೇ ರೋಗ, ರುಜಿನೆ, ಸೋಂಕು ಕಾಡಿಲ್ಲ. ಅವರ ಕುಟುಂಬದ ಕೆಲವರ ವಿರೋಧದ ನಡುವೆಯೂ ಇವರ ಈ ಮರಳು ಕಳ್ಳಸಾಗಣೆ ನಿರಾತಂಕವಾಗಿ ಸಾಗುತ್ತಿದೆ !!
ಹೀಗೆ, ಮನಸಾರೆ ಮರಳು ತಿನ್ನುವ ಈಕೆಯ ಹೆಸರು ಕುಸ್ಮಾವತಿ. ವಾರಣಾಸಿಯವರೇ. ಇವರಿಗೀಗ 78 ವರ್ಷ. ಈ ಇಳಿವಯಸ್ಸಿನಲ್ಲೂ ತಾನೊಂದಿಷ್ಟು ಲವಲವಿಕೆಯಿಂದಿದ್ದರೆ ಅದಕ್ಕೆ ಕಾರಣ ಮರಳು ಎನ್ನುತ್ತಾರೆ.

"ಅಯ್ಯೋ ಅಜ್ಜಿ, ಈ ಅರಳು, ಮರಳು ವಯಸ್ಸಲ್ಲಿ ನಿನಗ್ಯಾಕೆ ಮರಳು ತಿನ್ನೋ ಚಟ?" ಅಂತ ಕೇಳಿದರೆ, ರೀ, ನಾನು ಮರಳು ತಿಂತಿರೋದು ಈಗಲ್ಲ. ಸುಮಾರು 60 ವರ್ಷಗಳಿಂದ ತಿಂತಾ ಇದೀನಿ. ಏನಾದ್ರೂ ಆಗಿದ್ದರೆ ಇಷ್ಟು ವರ್ಷಗಳಲ್ಲಿ ಆಗಬೇಕಿತ್ತಲ್ವಾ? ಈವರೆಗೆ ಯಾವುದೇ ಬಾಯಿ, ಹಲ್ಲು, ವಸಡು ಅಥವಾ ಉದರ ಸಂಬಂಧಿ ಸಮಸ್ಯೆ, ರೋಗಗಳು ಕಾಣಿಸಿಕೊಂಡಿಲ್ಲ" ಎಂದು ಹೇಳಿ ದಂಗು ಬಡಿಸುತ್ತಾರೆ ಇವರು !
"ಈ ಬಗ್ಗೆ ವೈದ್ಯರ ಬಳಿ ಏನಾದರೂ ಕೇಳಿದ್ದೀರಾ" ಎಂಬ ಪ್ರಶ್ನೆಗೆ ಅವರ ಕುಟುಂಬದವರು, "ಏನಾದ್ರೂ ಸಮಸ್ಯೆ ಬಂದ್ರೆ ತಾನೇ ವೈದ್ಯರ ಬಳಿಗೆ ಹೋಗೋದು? ದಿನ ನಿತ್ಯ ಈ ವಯಸ್ಸಿನವರು ಹೇಗೆ ಊಟ ಮಾಡ್ತಾರೋ ಅದೇ ರೀತಿ ಊಟ ಮಾಡ್ತಾರೆ. ಆದರೆ, ಆಗಾಗ ಹಿಡಿ ಮರಳು ತಿಂತಾರೆ. ಆದರೂ ಆರೋಗ್ಯವಾಗೇ ಇದ್ದಾರೆ" ಎಂದು ಹೇಳುತ್ತಾರೆ.
"ಮರಳು ತಿನ್ನಬೇಡ ಅಂತ ಹೇಳಿದರೂ ಕೇಳಲ್ಲ. ನಮಗೆ ಮುಂದೇನಾದರೂ ತೊಂದರೆ ಆಗುವುದೇನೋ ಅಂತ ಭಯ. ಆದರೆ, ಅವರಿಗೆ ಆ ಭಯವಿಲ್ಲ. ನಾವು ಬಲವಂತ ಪಡಿಸಿದರೂ ನಮಗೆ ಗೊತ್ತಿಲ್ಲದೇ ಮರಳು ತಿಂದುಬಿಡುತ್ತಾರೆ " ಎಂದು ಹೇಳುತ್ತಾರೆ.
ನಮ್ಮ ಕನ್ನಡ ನಾಣ್ಣುಡಿಯಾದ ಮಣ್ಣಿಂದಲೇ ಅನ್ನ, ಮಣ್ಣಿಂದಲೇ ಕಾಯ ಎಂಬ ಮಾತು ಈ ವೃದ್ಧೆಯ ಪಾಲಿಗೆ ಅಕ್ಷರಶಃ ಒಪ್ಪಿದೆ. ನಾಣ್ಣುಡಿ ಮಾರ್ಮಿಕವಾಗಿದ್ದರೂ ಆಕೆಯ ಪಾಲಿಗೆ ಪ್ರಾಕ್ಟಿಕಲ್ ಆಗಿದೆ !
ಮೂಲ, ಚಿತ್ರ ಕೃಪೆ: ದ ಕ್ವಿಂಟ್
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications