ಎನ್ಐಎಯಿಂದ 7 ಹುರಿಯತ್ ನಾಯಕರ ಬಂಧನ
ಜಮ್ಮು ಮತ್ತು ಕಾಶ್ಮೀರ, ಜುಲೈ 24: ರಾಷ್ಟ್ರೀಯ ತನಿಖಾ ದಳ (ಎನ್ಐಎ) 7 ಹುರಿಯತ್ ನಾಯಕರನ್ನು ಬಂಧಿಸಿದೆ. ಲೇವಾದೇವಿ ಕಾಯ್ದೆ ಅಡಿಯಲ್ಲಿ ಈ ಏಳು ಜನರನ್ನು ತನಿಖಾ ಸಂಸ್ಥೆ ಬಂಧಿಸಿದೆ.
ನಯೀಮ್ ಖಾನ್, ಬಿಟ್ಟಾ ಕರಾಟೆ, ಅಲ್ತಾಫ್ ಫಂಟೋಸ್ ಬಂಧಿತರಲ್ಲಿ ಸೇರಿದ್ದಾರೆ. ಈಗಾಗಲೇ ಈ ವ್ಯಕ್ತಿಗಳು ವಶದಲ್ಲಿದ್ದರು. ಆದರೆ ವಿಚಾರಣೆ ಮಾಡಲು ಅವಕಾಶ ಇಲ್ಲದ ಕಾರಣ ಔಪಚಾರಿಕವಾಗಿ ವಿನಂತಿಸಿಕೊಂಡು ಎನ್ಐಎ ಈ ನಾಯಕರನ್ನು ಬಂಧಿಸಿದೆ.

ಬೆನಾಮಿ ಖಾತೆಗಳಿಂದ ಹುರಿಯತ್ ನಾಯಕರಿಗೆ ಕಾಶ್ಮೀರದಲ್ಲಿ ಸಂಘರ್ಷ ಉಂಟು ಮಾಡಲು ಹಣ ಹರಿದು ಬರುತ್ತಿತ್ತು ಎಂಬ ಅನುಮಾನದ ಮೇಲೆ ಎನ್ಐಎ ತನಿಖೆ ನಡೆಸುತ್ತಿದೆ.












Click it and Unblock the Notifications