ಐವರು ಬುಡಕಟ್ಟು ಮಹಿಳೆಯರ ಮೇಲೆ ಚಿತ್ರಹಿಂಸೆ, ಲೈಂಗಿಕ ದೌರ್ಜನ್ಯ: ಆಂಧ್ರಪ್ರದೇಶ ಪೊಲೀಸರ ವರ್ಗಾವಣೆ

ಅಮರಾವತಿ, ಜೂನ್. 21: ತಮಿಳುನಾಡಿನ ಐವರು ಮಹಿಳೆಯರಿಗೆ ಚಿತ್ರಹಿಂಸೆ ಮತ್ತು ಲೈಂಗಿಕ ಕಿರುಕುಳ ನೀಡಿದ ಅಪರಾಧಗಳಿಗೆ ಸಂಬಂಧಿಸಿಂತೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲಾ ಪೊಲೀಸ್‌ ಠಾಣೆಯ ಆರು ಪೊಲೀಸರನ್ನು ವರ್ಗಾವಣೆ ಮಾಡಿದ್ದಾರೆ. ಈ ಮಹಿಳೆಯರು ಆಸ್ತಿ ಅಪರಾಧಗಳಿಗೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ಎಂಟು ಜನರ ಗ್ಯಾಂಗ್‌ನ ಭಾಗವಾಗಿದ್ದರು ಎಂದು ಪೊಲೀಸರು ಬುಧವಾರ ಹೇಳಿದ್ದಾರೆ.

ಜೂನ್ 15 ರಂದು, ಪೊಲೀಸರು ಎಂಟು ಆರೋಪಿಗಳನ್ನು ಬಂಧಿಸಿದರು. ಆದರೆ ಮಾನವೀಯ ಆಧಾರದ ಮೇಲೆ ಐದು ಮಹಿಳೆಯರು ಸೇರಿದಂತೆ ಅವರಲ್ಲಿ ಆರು ಮಂದಿಯನ್ನು ಬಿಡುಗಡೆ ಮಾಡಿದರು. ಏಕೆಂದರೆ ಅವರು ಈ ಹಿಂದೆ 41 A CrPc ಒಂದೇ ಒಂದು ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾಗಿದೆ. ಆಸ್ತಿ ಅಪರಾಧಗಳಲ್ಲಿ ಕಳ್ಳತನ, ಸುಲಿಗೆ, ದರೋಡೆ ಮತ್ತು ಡಕಾಯಿತಿ, ಆಸ್ತಿಯ ಕ್ರಿಮಿನಲ್ ದುರುಪಯೋಗ, ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ, ಕದ್ದ ಆಸ್ತಿಯನ್ನು ಸ್ವೀಕರಿಸುವುದು, ವಂಚನೆ ಮತ್ತು ಮೋಸದ ಪತ್ರ ಮತ್ತು ಆಸ್ತಿಯ ವಿಲೇವಾರಿ ಒಳಗೊಂಡಿದೆ.

6 Andhra Pradesh police transferred for torture, sexual abuse of five tribal women

ಚಿತ್ತೂರು ಒನ್‌ ಟೌನ್‌ ಪುತಲಪಟ್ಟು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಮೂರು ಭಾರಿ ಆಸ್ತಿ ಅಪರಾಧಗಳಲ್ಲಿ ಪುನರಾವರ್ತಿತ ಅಪರಾಧಿಗಳಾಗಿದ್ದು, ಅವರಲ್ಲಿ ಒಬ್ಬನ ವಿರುದ್ಧ 30ಕ್ಕೂ ಹೆಚ್ಚು ಪ್ರಕರಣಗಳಿದ್ದು, ಅವರನ್ನು ಬಂಧಿಸಲಾಗಿದೆ ಎಂದು ಚಿತ್ತೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವೈ. ರಿಶಾಂತ್ ರೆಡ್ಡಿ ಬುಧವಾರ ಪಿಟಿಐಗೆ ತಿಳಿಸಿದ್ದಾರೆ.

ವೈ. ರಿಶಾಂತ್ ರೆಡ್ಡಿ ಪ್ರಕಾರ, ಅವರ ವಕೀಲರ ಸಮ್ಮುಖದಲ್ಲಿ ಬಿಡುಗಡೆಯಾದ ಆರು ವ್ಯಕ್ತಿಗಳು ಪೊಲೀಸರ ವಿರುದ್ಧ ಯಾವುದೇ ಚಿತ್ರಹಿಂಸೆ ಅಥವಾ ಲೈಂಗಿಕ ಕಿರುಕುಳದ ಆರೋಪಗಳನ್ನು ಮಾಡಿಲ್ಲ ಮತ್ತು ಅವರ ಹೇಳಿಕೆಗಳನ್ನು ಸಹ ವೀಡಿಯೊಗ್ರಾಫ್ ಮಾಡಲಾಗಿದೆ. ಆದರೆ, ಅವರನ್ನು ಎಪಿ ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದ ಸಮಯದಲ್ಲಿ, ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಈ ಮಹಿಳೆಯರು ಕಾಣೆಯಾಗಿದ್ದಾರೆ ಎಂದು ಪ್ರಕರಣ ದಾಖಲಿಸಲಾಗಿದೆ.

ಈ ಕಾಣೆಯಾದ ಪ್ರಕರಣವನ್ನು ಸ್ಪಷ್ಟಪಡಿಸಲು, ಐವರು ಮಹಿಳೆಯರು ಆ ಮಹಿಳಾ ಪೊಲೀಸ್ ಠಾಣೆಗೆ ಹಾಜರಾಗಿದ್ದರು ಮತ್ತು 41 ಎ ಸಿಆರ್‌ಪಿಸಿ ನೋಟಿಸ್ ನೀಡಿದ ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದು, ಆ ಸಮಯದಲ್ಲಿ ಅವರು ಯಾವುದೇ ಚಿತ್ರಹಿಂಸೆ ಅಥವಾ ಲೈಂಗಿಕ ದೌರ್ಜನ್ಯದ ಬಗ್ಗೆ ದೂರು ನೀಡಿರಲಿಲ್ಲ ಎಂದು ವೈ. ರಿಶಾಂತ್ ರೆಡ್ಡಿ ಹೇಳಿದ್ದಾರೆ.

ಅವರು ಜೂನ್ 16 ರಂದು ಕೃಷ್ಣಗಿರಿ ಜಿಲ್ಲೆಯ ಪೊಲೀಸ್ ಮತ್ತು ಕಂದಾಯ ಅಧಿಕಾರಿಗಳ ಮುಂದೆ ಹಾಜರಾಗಿ ತಮ್ಮ ಹೇಳಿಕೆಗಳನ್ನು ನೀಡಿ, ಜಿಲ್ಲೆಯ ಮತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಪುಲಿಯಾಂಡಿಪಟ್ಟಿಗೆ ಮನೆಗೆ ಮರಳಿದ್ದಾರೆ. ಆದರೆ, ಜೂನ್ 17 ರಂದು, ಐವರು ಮಹಿಳೆಯರು ಕೃಷ್ಣಗಿರಿ ಜಿಲ್ಲಾ ಕೇಂದ್ರಕ್ಕೆ ಹೋಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜೊತೆಗೆ ತಮಗೆ ಚಿತ್ರಹಿಂಸೆ ಮತ್ತು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಆರೋಪಗಳ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ನಿಷ್ಪಕ್ಷಪಾತ ತನಿಖೆಗೆ ಅನುವು ಮಾಡಿಕೊಡಲು ಆರು ಆರೋಪಿ ಪೊಲೀಸರನ್ನು ವರ್ಗಾವಣೆ ಮಾಡಲಾಗಿದೆ ಎಂದು ಚಿತ್ತೂರು ಎಸ್ಪಿ ತಿಳಿಸಿದ್ದಾರೆ.

ಆರೋಪಗಳ ತನಿಖೆಗಾಗಿ ಐಪಿಸಿ ಸೆಕ್ಷನ್ 376 (ಲೈಂಗಿಕ ದೌರ್ಜನ್ಯಕ್ಕೆ ಶಿಕ್ಷೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ, ಇದನ್ನು ಹೆಚ್ಚುವರಿ ಎಸ್ಪಿ (ಎಎಸ್ಪಿ) ಶ್ರೇಣಿಯ ಅಧಿಕಾರಿಯು ಮೇಲ್ವಿಚಾರಣೆ ಮಾಡುತ್ತಾರೆ ಎಂದು ತಿಳಿಸಿದ್ದಾರೆ. ಎಂಟು ವ್ಯಕ್ತಿಗಳು ಕುರುಬ ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿರುವುದರಿಂದ ಪೊಲೀಸರು ಎಸ್‌ಸಿ/ಎಸ್‌ಟಿ ದೌರ್ಜನ್ಯ ಕಾಯ್ದೆಯನ್ನು ಸಹ ದಾಖಲಿಸಿದ್ದಾರೆ.

ಬಂಧಿತ ಇಬ್ಬರಲ್ಲಿ ಒಬ್ಬರ ಕುರಿತು ಮಾತನಾಡಿದ ವೈ. ರಿಶಾಂತ್ ರೆಡ್ಡಿ ಅವರು ಕಳೆದ ನಾಲ್ಕು ವರ್ಷಗಳಿಂದ ತಮಿಳುನಾಡು ಪೊಲೀಸರಿಂದ ತಲೆಮರೆಸಿಕೊಂಡಿದ್ದಾರೆ ಮತ್ತು ಅವರ ವಿರುದ್ಧ ಒಂಬತ್ತು ಜಾಮೀನು ರಹಿತ ವಾರಂಟ್‌ಗಳು ಮತ್ತು ಹಲವಾರು ಆಸ್ತಿ ಅಪರಾಧ ಪ್ರಕರಣಗಳಿವೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+