ಭಾರತದಲ್ಲಿ 4ನೇ ಬಲಿ ಪಡೆದ ಕೊರನಾ ವೈರಸ್ ಎಂಬ ಕೀಚಕ!
ಚಂಡೀಘರ್, ಮಾರ್ಚ್.19: ಕೊರೊನಾ ವೈರಸ್ ಭಾರತಕ್ಕೆ ಕಾಲಿಟ್ಟಿದ್ದು ಆಗಿದೆ. ದೇಶದಲ್ಲಿ ಮೂರು ಮಂದಿ ಮಾರಕ ರೋಗಕ್ಕೆ ಬಲಿಯಾಗಿದ್ದು ಆಗಿದೆ. ಇದೀಗ ಭಾರತದಲ್ಲಿ ನಾಲ್ಕನೇ ವ್ಯಕ್ತಿ ಕೊವಿಡ್-19ಗೆ ಪ್ರಾಣ ಬಿಟ್ಟಿದ್ದಾರೆ.
ಪಂಜಾಬ್ ನಲ್ಲಿ ಕೊರೊನಾ ವೈರಸ್ ನಿಂದಾಗಿ ಮೊದಲ ಬಲಿಯಾಗಿದೆ. 70 ವರ್ಷದ ವ್ಯಕ್ತಿ ಮಾರಕ ರೋಗದಿಂದ ಪ್ರಾಣ ಬಿಟ್ಟಿದ್ದಾರೆ. ಇನ್ನು, ಈ ವ್ಯಕ್ತಿ ಇತ್ತೀಚಿಗಷ್ಟೇ ಜರ್ಮನಿ ಮತ್ತು ಇಟಲಿಯಿಂದ ಸ್ವದೇಶಕ್ಕೆ ವಾಪಸ್ ಆಗಿದ್ದರು ಎಂದು ತಿಳಿದು ಬಂದಿದೆ.
ಕೊರೊನಾ ವೈರಸ್: ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೂ ಮಾರ್ಗಸೂಚಿ ಅನ್ವಯ
ಕಲಬುರಗಿಯಲ್ಲಿ ಮಹ್ಮದ್ ಹುಸೇನ್ ಸಿದ್ದಿಕಿ ಕೊರೊನಾ ವೈರಸ್ ನಿಂದ ಮೊದಲಿಗೆ ಪ್ರಾಣ ಬಿಟ್ಟಿದ್ದರು. ನಂತರ ದೆಹಲಿಯಲ್ಲಿ ಎರಡನೇ ಮತ್ತು ಮುಂಬೈನಲ್ಲಿ ಮೂರನೇ ವ್ಯಕ್ತಿಯು ಕೊರೊನಾ ವೈರಸ್ ನಿಂದ ಮೃತಪಟ್ಟಿದ್ದರು ಎಂದು ಕೇಂದ್ರ ಆರೋಗ್ಯ ಸಚಿವಾಲಯವು ತಿಳಿಸಿದೆ.
ದೇಶದಲ್ಲಿ ಐದು ಹೊಸ ಸೋಂಕಿತ ಪ್ರಕರಣ:
ಭಾರತದಲ್ಲಿ ಗುರುವಾರ ಒಂದೇ ದಿನ 28 ಮಂದಿಗೆ ಕೊರೊನಾ ವೈರಸ್ ಸೋಂಕು ಇರುವುದು ದೃಢ ಪಟ್ಟಿದೆ. ಪಂಜಾಬ್ ನಲ್ಲಿ ಒಬ್ಬ ವ್ಯಕ್ತಿ ಕೊವಿಡ್ 19ಗೆ ಬಲಿಯಾಗಿದ್ದು, 197 ಮಂದಿ ಸೋಂಕು ಇರುವುದು ದೃಢಪಟ್ಟಿದೆ. ಇದುವರೆಗೂ 20 ಜನರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.