ಪುಲ್ವಾಮಾ ದಾಳಿಯ 3ನೇ ವರ್ಷ: ಐಪಿಎಸ್ ಅಧಿಕಾರಿ ಬರೆದಿರುವ ಪುಸ್ತಕ ಬಿಡುಗಡೆಗೆ ಸಿದ್ಧ
ನವದೆಹಲಿ, ಫೆಬ್ರವರಿ 14: ಪುಲ್ವಾಮಾದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗೆ ಇಂದಿಗೆ ಮೂರು ವರ್ಷ ಆಗಿದೆ. ಈ ಭೀಕರ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದರು. ಫೆಬ್ರವರಿ 14, 2019 ರಂದು ಪ್ರೇಮಿಗಳ ದಿನದ ಸಂಭ್ರಮದ ನಡುವೆಯೇ ನಮ್ಮ ಯೋಧರನ್ನು ಪಾಕಿಸ್ತಾನ ಹತ್ಯೆಗೈದಿತ್ತು. ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ (JeM) ನ 20 ವರ್ಷದ ಆತ್ಮಹತ್ಯಾ ಬಾಂಬರ್ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಬೆಂಗಾವಲು ಪಡೆಗೆ ಸ್ಫೋಟಕ ತುಂಬಿದ ವಾಹನವನ್ನು ಡಿಕ್ಕಿ ಹೊಡೆದು 40 ಯೋಧರನ್ನು ಹತ್ಯೆಗೈದಿದ್ದನು. ಈ ಘಟನೆಯ ಬಗ್ಗೆ ಪುಸ್ತಕವನ್ನು ಪ್ರಕಟಿಸಲು ಮುಂದಾಗಿದೆ.
ಮುಖ್ಯಪಾತ್ರಗಳೊಂದಿಗಿನ ವೈಯಕ್ತಿಕ ಸಂದರ್ಶನಗಳು, ಪೊಲೀಸ್ ಚಾರ್ಜ್ಶೀಟ್ಗಳು ಮತ್ತು ಇತರ ಪುರಾವೆಗಳ ಆಧಾರದ ಮೇಲೆ ಈ ಪುಸ್ತಕವನ್ನು ಬರೆಯಲಾಗಿದೆ. As Far as the Saffron Fields ಎಂಬ ಈ ಪುಸ್ತಕವು ಈ ವರ್ಷದ ಮಾರ್ಚ್ ಮೂರರಂದು ಬಿಡುಗಡೆ ಆಗುವ ಸಾಧ್ಯತೆ ಇದೆ. ಕಾಶ್ಮೀರ ಸಂಘರ್ಷದ ಬಗ್ಗೆ ಯಾವುದೇ ಪುಸ್ತಕವು ಹಿಂದೆಂದೂ ಪ್ರಕಟವಾಗಿಲ್ಲ.
ಫೆ.14ರಂದು ಹುತಾತ್ಮ ಯೋಧ ಗುರು ಸಮಾಧಿ ಉದ್ಘಾಟನೆ
ತಮ್ಮ ಹೊಸ ಪುಸ್ತಕದ ಪ್ರಕಟಣೆಯ ಕುರಿತು ಪ್ರತಿಕ್ರಿಯಿಸಿದ ಐಪಿಎಸ್ ಅಧಿಕಾರಿ ದಾನೇಶ್ ರಾಣಾ, "ಮಾರಣಾಂತಿಕ ಪುಲ್ವಾಮಾ ದಾಳಿಯ ಸುತ್ತ ನಿರ್ಮಿಸಲಾದ ಅನೇಕ ನಿರೂಪಣೆಗಳನ್ನು ನಿರಾಕರಿಸುವ ಒಂದು ಖಾತೆ ಇಲ್ಲಿದೆ. ಪುಸ್ತಕವು ಪಾಕಿಸ್ತಾನದಿಂದ ಪ್ರಾಯೋಜಿತ ನಿಷೇಧಿತ ಸಂಘಟನೆಗಳ ಪಾತ್ರವನ್ನು ಎತ್ತಿ ತೋರಿಸುತ್ತದೆ," ಎಂದು ತಿಳಿಸಿದ್ದಾರೆ.
ಪುಲ್ವಾಮಾ ದಾಳಿಯ 3ನೇ ವರ್ಷದಲ್ಲಿ ಈ ಪುಸ್ತಕವನ್ನು ಪ್ರಕಟಿಸುವ ಕುರಿತು ಮಾತನಾಡಿದ ಕಾರ್ಯನಿರ್ವಾಹಕ ಸಂಪಾದಕಿ ಸ್ವಾತಿ ಚೋಪ್ರಾ, "ಇದು ಪುಲ್ವಾಮಾ ಪಿತೂರಿಯ ಕುರಿತಾದ ನಿರ್ಣಾಯಕ ಪುಸ್ತಕವಾಗಿದ್ದು, ಪಿತೂರಿಯನ್ನು ಹೇಗೆ ರೂಪಿಸಲಾಯಿತು ಮತ್ತು ಹೇಗೆ ನಡೆಸಲಾಯಿತು ಎಂಬ ಸಂಪೂರ್ಣ ಚಿತ್ರಣವನ್ನು ನೀಡುತ್ತದೆ. ಪುಸ್ತಕವು ಕಾಶ್ಮೀರದಲ್ಲಿನ ಪ್ರಸ್ತುತ ಉಗ್ರಗಾಮಿತ್ವದ ನೈಜತೆಯ ಬಗ್ಗೆ ಮಾಹಿತಿ ನೀಡುತ್ತದೆ. ಇದನ್ನು ಸೇವೆಯಲ್ಲಿರುವ ಐಪಿಎಸ್ ಅಧಿಕಾರಿ ಬರೆದಿದ್ದಾರೆ ಎಂಬ ಅಂಶವು ಮತ್ತಷ್ಟು ವಿಶ್ವಾಸಾರ್ಹತೆಯನ್ನು ನೀಡುತ್ತದೆ," ಎಂದು ಹೇಳಿದ್ದಾರೆ.
ಜಮ್ಮುಕಾಶ್ಮೀರದಲ್ಲಿ ಪುಲ್ವಾಮಾ ದಾಳಿಯ ಕರಾಳ ದಿನವೇ ಸುಧಾರಿತ ಸ್ಫೋಟಕ ಪತ್ತೆ
ಪುಸ್ತಕದ ಬಗ್ಗೆ ಮಾಹಿತಿ
ಮಾರ್ಚ್ 2019 ರಲ್ಲಿ, ಶ್ರೀನಗರದ ಹೊರವಲಯದಲ್ಲಿರುವ ನೌಗಾಮ್ನಲ್ಲಿರುವ ಮನೆಯೊಂದರಲ್ಲಿ ನಡೆದ ಮುತ್ತಿಗೆಯ ಸಂದರ್ಭದಲ್ಲಿ ಇಬ್ಬರು ಉಗ್ರಗಾಮಿಗಳನ್ನು ಹತ್ಯೆ ಮಾಡಲಾಯಿತು. ಅವರಲ್ಲಿ ಒಬ್ಬರನ್ನು ಸರಳವಾಗಿ 'ಇದ್ರೀಸ್ ಭಾಯಿ' ಎಂದು ಕರೆಯಲಾಗುತ್ತಿತ್ತು. ತನಿಖಾಧಿಕಾರಿಗಳು ಇದ್ರೀಸ್ ಭಾಯ್ ನಾಶಪಡಿಸಿದ ಮ್ಯಾಂಗಲ್ಡ್ ಫೋನ್ ಬಗ್ಗೆ ತನಿಖೆ ನಡೆಸಲು ಮುಂದಾದರು. ಈ ಬಳಿಕ ದೊರೆತ ಮಾಹಿತಿಯೇ ಇದ್ರೀಸ್ ಭಾಯಿ ಬೇರೆ ಯಾರೂ ಅಲ್ಲ, 2019 ರ ಫೆಬ್ರವರಿಯ ಪುಲ್ವಾಮಾ ಆತ್ಮಾಹುತಿ ದಾಳಿಯ ಮಾಸ್ಟರ್ ಮೈಂಡ್ ಉಮರ್ ಫಾರೂಕ್ ಅಲ್ವಿ ಎಂಬುವುದ ಆಗಿದೆ. ಇದೀಗ, ಮೊದಲ ಬಾರಿಗೆ, ಸೇವೆ ಸಲ್ಲಿಸುತ್ತಿರುವ ಐಪಿಎಸ್ ಅಧಿಕಾರಿ, ದಾನೇಶ್ ರಾಣಾ ದಾಳಿಯ ಹಿಂದಿನ ಪಿತೂರಿಯನ್ನು ಸೂಕ್ಷ್ಮವಾಗಿ ಪ್ರಕಟ ಮಾಡುತ್ತಿದ್ದಾರೆ.
ಲೇಖಕರ ಬಗ್ಗೆ ಮಾಹಿತಿ
Recommended Video
ದಾನೇಶ್ ರಾಣಾ ಅವರು ಜಮ್ಮು ಮತ್ತು ಕಾಶ್ಮೀರ ಕೇಡರ್ನ ಭಾರತೀಯ ಪೊಲೀಸ್ ಸೇವೆ (IPS) ಅಧಿಕಾರಿಯಾಗಿದ್ದಾರೆ. ಅವರು ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದಲ್ಲಿ ಎಡಿಜಿಪಿಯಾಗಿದ್ದಾರೆ. Red Maize (2015) ಎಂಬ ಪುಸ್ತಕವನ್ನು ಈ ಹಿಂದೆ ಬರೆದಿದ್ದಾರೆ. ಈ ಪುಸ್ತಕಕ್ಕೆ ಟಾಟಾ ಲಿಟರೇಚರ್ ಲೈವ್ ಫಸ್ಟ್ ಬುಕ್ ಅವಾರ್ಡ್ ಲಭಿಸಿದೆ. ಹಾರ್ಪರ್ಕಾಲಿನ್ಸ್ ಪಬ್ಲಿಷರ್ಸ್ ಇಂಡಿಯಾ ಹಾರ್ಪರ್ಕಾಲಿನ್ಸ್ ಪಬ್ಲಿಷರ್ಸ್ನ ಅಂಗಸಂಸ್ಥೆಯಾಗಿದ್ದು, ಈ ಪುಸ್ತಕದ ಪ್ರಕಟಣೆ ಮಾಡಲಿದೆ. (ಒನ್ಇಂಡಿಯಾ ಸುದ್ದಿ)