2017ರ ಎಸ್ಎಸ್ಸಿ ಪರೀಕ್ಷೆ ರದ್ದಿಗೆ ಸುಪ್ರಿಂ ಚಿಂತನೆ: ಮರು ಪರೀಕ್ಷೆ ಸಾಧ್ಯತೆ
ನವದೆಹಲಿ, ಅಕ್ಟೋಬರ್ 30: 2017ರಲ್ಲಿ ನಡೆದಿದ್ದ ಎಸ್ಎಸ್ಸಿ (ಸ್ಟಾಫ್ ಸೆಲೆಕ್ಷನ್ ಕಮಿಷನ್ ) ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಕಾರಣ ಪರೀಕ್ಷೆಯನ್ನು ರದ್ದುಗೊಳಿಸುವ ಬಗ್ಗೆ ಸುಪ್ರಿಂಕೋರ್ಟ್ ಒಲವು ತೋರಿದ್ದು ಕೇಂದ್ರದ ಅಭಿಪ್ರಾಯವನ್ನು ಕೇಳಿದೆ.
2017ರಲ್ಲಿ ನಡೆದಿದ್ದ ಈ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿತ್ತು. ಇದರ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದವು. ಹಾಗಾಗಿ ಸುಪ್ರಿಂಕೋರ್ಟ್ ಎಸ್ಎಸ್ಸಿ ಪರೀಕ್ಷೆಯ ಫಲಿತಾಂಶವನ್ನು ಆಗಸ್ಟ್ನಲ್ಲಿ ತಡೆ ಹಿಡಿದಿತ್ತು.
ಎಸ್ಎಸ್ಎಲ್ಸಿ ಅಂತಿಮ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ
ಪದವಿದರರಿಗಾಗಿ ನಡೆಸಿದ್ದ ಈ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕಾರಣ ಕಷ್ಟ ಪಟ್ಟು ನೌಕರಿ ಪಡೆಯಲೆಂದು ಓದಿದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆಂದು ಹೇಳಿರುವ ಸುಪ್ರಿಂಕೋರ್ಟ್ ಪರೀಕ್ಷೆ ರದ್ದು ಮಾಡಲು ಚಿಂತಿಸಿದ್ದು ಕೇಂದ್ರ ಸರ್ಕಾರವು ಈ ವಿಷಯಕ್ಕೆ ಸಂಬಂಧಿಸಿದಂತೆ ತನ್ನ ಅಭಿಪ್ರಾಯ ತಿಳಿಸಲು ಕೋರಿದೆ.
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ
ನ್ಯಾಯಾಧೀಶರಾದ ಎಸ್.ಎ.ಬೊಬ್ಡೆ ಹಾಗೂ ಎಲ್.ನಾಗೇಶ್ವರರಾವ್ ಅವರಿದ್ದ ದ್ವಿಸದಸ್ಯ ಪೀಠ, ಕೇಂದ್ರಸರ್ಕಾರದಿಂದ ವರದಿ ಕೇಳಿದ್ದು, ನವೆಂಬರ್ 13 ರೊಳಗೆ ಪ್ರತಿಕ್ರಿಯಿಸುವಂತೆ ತಿಳಿಸಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇಡೀ ಪರೀಕ್ಷಾ ಪ್ರಕ್ರಿಯೆಯನ್ನು ರದ್ದುಗೊಳಿಸಿ ಹೊಸದಾಗಿ ಮರು ಪರೀಕ್ಷೆ ನಡೆಸುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟಿದೆ.