Tirumala Tirupati: ಇವರೇ ನೋಡಿ ತಿರುಪತಿ ತಿಮ್ಮಪ್ಪನ ಸಾವಿರಾರು ಕೋಟಿ ಸಂಪತ್ತನ್ನು ಕಾಯುತ್ತಿರುವವರು

ಭಕ್ತರು ಬೇಡಿದ್ದನ್ನು ನೀಡುವ ಏಳು ಬೆಟ್ಟಗಳ ಒಡೆಯ ತಿರುಪತಿ ತಿಮ್ಮಪ್ಪ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿರುವ ಅತ್ಯಂತ ಪ್ರಭಾವಶಾಲಿ ದೇವರು. ದಿನಕ್ಕೆ ಕಡಿಮೆ ಎಂದರೂ ಎರಡರಿಂದ ಮೂರು ಕೋಟಿ ದೇಣಿಗೆ ಪಡೆಯುವ ಅತ್ಯಂತ ಸಿರಿವಂತ ದೇವಾಲಯ. ಜಗತ್‌ಖ್ಯಾತಿ ಪಡೆದ ಈ ದೇವಾಲಯದಲ್ಲಿ ನಮಗೆ ತಿಳಿಯದೇ ಇರುವ ಅದೆಷ್ಟೋ ರಹಸ್ಯೆಗಳು ಅಡಗಿವೆ.

ಅದರಲ್ಲಿ ಪ್ರಮುಖವಾಗಿದ್ದೊಂದು ವಿಷಯ ಎಂದರೆ ತಿರುಪತಿ ತಿಮ್ಮಪ್ಪನ ಸಂಪತ್ತಿನ ಕಾವಲುಗಾರರ ಬಗ್ಗೆ. ಅಪಾರ ಸಂಪತ್ತಿನ ಖಜಾನೆ ಹೊಂದಿರುವ ತಿರುಮಲದಲ್ಲಿ ಕಾವಲುಗಾರರು ಇದ್ದಾರೆ. ಇವರಿಬ್ಬರು ಸಂಪತ್ತನ್ನು ನೂರಾರು ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದಾರೆ. ಅಷ್ಟಕ್ಕೂ ಅವರು ಯಾರು? ಎಲ್ಲಿದ್ದಾರೆ? ಎನ್ನುವ ಬಗ್ಗೆ ತಿಳಿಯೋಣ.

wealth-of-venkateswara-in-tirumala

ನಿತ್ಯ ಲಕ್ಷಾಂತರ ಭಕ್ತರು ಆಗಮಿಸುವ ಈ ದೇವಸ್ಥಾನಕ್ಕೆ ಕಾವಲುಗಾರರು ಇದ್ದಾರೆ. ಇವರಿಗೆ ತಿಮ್ಮಪ್ಪನಂತೆ ಭಕ್ತಿಯಿಂದ ಪೂಜೆ ಮಾಡಲಾಗುತ್ತದೆ. ಅಂದಹಾಗೆ ಸಂಪತ್ತಿನ ಒಡೆಯನನ್ನು ಕಾವಲು ಕಾಯುವುದು 2 ಪವಿತ್ರ ವಿಗ್ರಹಗಳು. ತಿರುಮಲದಲ್ಲಿರುವ ವೆಂಕಟೇಶ್ವರನ ಸಂಪತ್ತನ್ನು ನೂರಾರು ವರ್ಷಗಳಿಂದ 2 ಪವಿತ್ರ ವಿಗ್ರಹಗಳು ಕಾಪಾಡುತ್ತಿವೆ.

ತನ್ನ ಖಜಾನೆಯಲ್ಲಿ ಅಪಾರ ಸಂಪತ್ತು ಮಾತ್ರವಲ್ಲದೆ ಮೈತುಂಬಾ ಚಿನ್ನವನ್ನು ಧರಿಸಿರುವ ವೆಂಕಟೇಶ್ವರ ಸ್ವಾಮಿಗೆ ಶಂಖ ನಿಧಿ ಮತ್ತು ಪದ್ಮ ನಿಧಿ ಎಂಬ ಕಾವಲುಗಾರರು ಇದ್ದಾರೆ. ಐದು ಪವಿತ್ರ ಲೋಹಗಳಿಂದ ರಚಿಸಲಾದ ಈ ಎರಡು ಪವಿತ್ರ ವಿಗ್ರಹಗಳು ಕರ್ತವ್ಯದಿಂದ ಕಾವಲು ಕಾಯುತ್ತಿವೆ. ವಿಶೇಷವಾಗಿ ಪ್ರಧಾನ ದೇವರಿಗೆ ಸೇರಿದ ಸಂಪತ್ತಿನ ರಕ್ಷಣೆಯನ್ನು ಈ ಎರಡು ವಿಗ್ರಹಗಳು ಮಾಡುತ್ತವೆ.

ಆಗಮ ಶಾಸ್ತ್ರದಲ್ಲಿ ಬೇರೂರಿರುವ ಈ ದೇವತೆಗಳನ್ನು ದೈವಿಕ ಖಜಾನೆಯ ರಕ್ಷಕರೆಂದು ಕೊಂಡಾಡಲಾಗುತ್ತದೆ. ತಿರುಮಲ ತಿರುಪತಿ ದೇವಸ್ತಾನಮಂ (ಟಿಟಿಡಿ) ಟ್ರಸ್ಟ್ ಬೋರ್ಡ್ ಇತ್ತೀಚಿನ ದಿನಗಳಲ್ಲಿ ಭಗವಾನ್ ಬಾಲಾಜಿಯ ಸಂಪತ್ತನ್ನು ಭದ್ರಪಡಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಆದರೆ ಪುರಾತನ ಸಂಪ್ರದಾಯದ ಪ್ರಕಾರ ದೇವಾಲಯದ ಪ್ರಾರಂಭದಿಂದಲೂ ಶಂಖ ನಿಧಿ ಮತ್ತು ಪದ್ಮ ನಿಧಿ ಪವಿತ್ರ ವಿಗ್ರಹಗಳು ಈ ಸಂಪತ್ತಿನ ರಕ್ಷಕರಾಗಿ ಪಾಲಕರಾಗಿದ್ದಾರೆ ಎಂದು ಅರ್ಚಕರು ಹೇಳುತ್ತಾರೆ.

ಶಂಖ ನಿಧಿ ವೆಂಕಟೇಶ್ವರ ಸ್ವಾಮಿಯ ಖಜಾನೆಯ ರಕ್ಷಣೆ ಮಾಡಿದರೆ, ಪದ್ಮ ನಿಧಿ ಕುಬೇರನ ನವ ನಿಧಿಗಳ ಪಾಲಕನಾಗಿದೆ. ಹೀಗಾಗಿ ದೇವಸ್ಥಾನವನ್ನು ಪ್ರವೇಶಿಸುವ ಹಾಗೂ ನಿರ್ಗಮಿಸುವ ಮೊದಲು ಈ ವಿಗ್ರಹಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಭಕ್ತರಿಗೂ ಇವುಗಳಿಗೆ ಗೌರವ ಸಲ್ಲಿಸಲು ಸೂಚಿಸಲಾಗುತ್ತದೆ.

ಪೂರ್ವದಿಂದ ದೇವಸ್ಥಾನವನ್ನು ಪ್ರವೇಶಿಸುವಾಗ ಶಂಖ ನಿಧಿಯು ಭಕ್ತನ ಎಡಭಾಗದಲ್ಲಿದೆ. ಕೈಯಲ್ಲಿ ಕಮಲವನ್ನು ಹೊಂದಿರುವ ಪದ್ಮ ನಿಧಿ ಇನ್ನೊಂದು ಬದಿಯಲ್ಲಿ ಕಾವಲು ಕಾಯುತ್ತದೆ.

ತಿರುಮಲದಲ್ಲಿರುವ ವೆಂಕಟೇಶ್ವರನ ಸಂಪತ್ತು

ತಿರುಮಲ ದೇವಾಲಯವು ಸಮುದ್ರ ಮಟ್ಟದಿಂದ ಸುಮಾರು 3,200 ಅಡಿ ಎತ್ತರದ ಬೆಟ್ಟದ ಮೇಲಿದೆ. ತಿರುಮಲದಲ್ಲಿರುವ ವೆಂಕಟೇಶ್ವರನ ಸಂಪತ್ತು ಅಧಿಕ. ಟಿಟಿಡಿ ಇತ್ತೀಚಿನ ಹೇಳಿಕೆಯ ಪ್ರಕಾರ, 1.2 ಟನ್ ಚಿನ್ನಾಭರಣಗಳು, 10 ಟನ್ ಬೆಳ್ಳಿ ಮತ್ತು 17,000 ಕೋಟಿ ರೂಪಾಯಿ ನಗದು ಮತ್ತು 11,255.66 ಕೆಜಿ ಚಿನ್ನವನ್ನು ಒಳಗೊಂಡಿರುವ ಖಜಾನೆಯು ಭಕ್ತರನ್ನು ದಿಗ್ಭ್ರಮೆಗೊಳಿಸುತ್ತದೆ. ಮಾತ್ರವಲ್ಲದೆ 6,000 ಎಕರೆ ಅರಣ್ಯ ಭೂಮಿ ಮತ್ತು ಗುರುತಿಸಲಾದ ಹಲವಾರು ಆಸ್ತಿಗಳು ಸೇರಿದಂತೆ ಆಸ್ತಿಗಳು ಲಾರ್ಡ್ ಬಾಲಾಜಿ ಅವರ ಹಿಡುವಳಿಗಳ ಭಾಗವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+