900 ವರ್ಷದ ನಟರಾಜ ಮೂರ್ತಿ ಸೇರಿ 157 ಪುರಾತನ ವಸ್ತುಗಳನ್ನು ಭಾರತಕ್ಕೆ ಹಿಂದಿರುಗಿಸಿದ ಅಮೆರಿಕ
ನವದೆಹಲಿ, ಸೆಪ್ಟೆಂಬರ್ 26: ಡ್ಯಾನ್ಸಿಂಗ್ ಗಣೇಶ ಹಾಗೂ 900 ವರ್ಷದ ನಟರಾಜ ಮೂರ್ತಿ ಸೇರಿದಂತೆ ಕಳ್ಳ ಸಾಗಣೆ ಮಾಡಲಾಗಿದ್ದ ಸುಮಾರು 157 ಪುರಾತನ ವಸ್ತುಗಳನ್ನು ಯುಎಸ್, ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಹಸ್ತಾರಿಸಿದೆ. ಈ ಮೂಲಕ ನರೇಂದ್ರ ಮೋದಿ ಅಮೆರಿಕ ಪ್ರವಾಸವು ಅಂತ್ಯವಾಗಿದೆ.
ಅಮೆರಿಕವು ಭಾರತಕ್ಕೆ ಸೇರಿದ ಪುರಾತನ ವಸ್ತುಗಳನ್ನು ಭಾರತಕ್ಕೆ ವಾಪಸ್ ನೀಡಿರುವ ಈ ಮಾಹಿತಿಯನ್ನು ಪ್ರಧಾನ ಮಂತ್ರಿ ಕಚೇರಿ ಹಾಗೂ ವಿದೇಶಾಂಗ ಸಚಿವಾಲಯದ ವಕ್ತಾರ ಅರೀಂದಾಮ್ ಬಾಗ್ಚಿ ಟ್ವೀಟ್ ಮೂಲಕ ನೀಡಿದ್ದಾರೆ.
"ಈ 157 ಪುರಾತನ ವಸ್ತುಗಳನ್ನು ಭಾರತದಿಂದ ಕಳ್ಳ ಸಾಗಣೆ ಮಾಡಲಾಗಿತ್ತು. ಇದೀಗ ಅಮೆರಿಕವು ಅವುಗಳನ್ನು ಭಾರತಕ್ಕೆ ವಾಪಸ್ ನೀಡಿದೆ. ಈ ಪುರಾತನ ವಸ್ತುಗಳಲ್ಲಿ ತಾಮ್ರ ಮಾನವರೂಪವು ಇದೆ. ಇದು ಸುಮಾರು ಕ್ರಿಸ್ತಪೂರ್ವ 2000 ದಷ್ಟು ಹಳೆಯದ್ದಾಗಿದೆ ಎನ್ನಲಾಗಿದೆ. ಇನ್ನು ಟೆರಾಕೋಟಾ ಹೂದಾನಿಯೂ ಇದ್ದು ಇದು 2 ನೇ ಶತಮಾನದಷ್ಟು ಹಳೆಯದ್ದು ಎನ್ನಲಾಗಿದೆ. ಈ ಪೈಕಿ ಸುಮಾರು 45 ರಷ್ಟು ಪುರಾತನ ವಸ್ತುಗಳು ಕ್ರಿಸ್ತಪೂರ್ವ ಯುಗಕ್ಕೆ ಸೇರಿದ್ದು," ಎಂದು ಸರ್ಕಾರ ಹೇಳಿದೆ.

ಜೋ ಬೈಡೆನ್ ಜನವರಿಯಲ್ಲಿ ಅಮೆರಿಕದ 46 ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಮೊದಲ ಬಾರಿಗೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ರನ್ನು ಭೇಟಿಯಾಗಿದ್ದಾರೆ. ಕ್ವಾಡ್ ಸಭೆಗಳಲ್ಲಿ ನರೇಂದ್ರ ಮೋದಿ ಭಾಗಿಯಾಗಿದ್ದಾರೆ.
ಇನ್ನು ಜೋ ಬೈಡೆನ್ರನ್ನು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿಯಾದ ಬಳಿಕ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಪ್ರಧಾನ ಮಂತ್ರಿ ಕಚೇರಿ, "ಉಭಯ ನಾಯಕರು ಕಳ್ಳತನ, ಅಕ್ರಮ ವ್ಯಾಪಾರ ಮತ್ತು ಸಾಂಸ್ಕೃತಿಕ ವಸ್ತುಗಳ ಸಾಗಾಣಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮವನ್ನು ಕೈಗೊಳ್ಳಲುವ ಬಗ್ಗೆ ಮಾತನಾಡಿದ್ದಾರೆ," ಎಂದು ತಿಳಿಸಿದೆ.
"ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಅಮೆರಿಕವು ಪುರಾತನ ವಸ್ತುಗಳನ್ನು ವಾಪಾಸ್ ನೀಡಿರುವುದು ನಮ್ಮ ದೇಶಕ್ಕೆ ಸೇರಿದ ಪುರಾತನ ವಸ್ತುಗಳನ್ನು ಹಾಗೂ ಪುರಾತನ ಕಲಾಕೃತಿಗಳನ್ನು ಮರಳಿ ದೇಶಕ್ಕೆ ತರುವಲ್ಲಿ ಮೋದಿ ಸರ್ಕಾರ ಮಾಡಿದ ನಿರಂತರ ಪ್ರಯತ್ನದ ಫಲವಾಗಿದೆ," ಎಂದು ಹೇಳಿದೆ.
ಇನ್ನು ಯುಎಸ್ ಭಾರತಕ್ಕೆ ವಾಪಾಸ್ ನೀಡಿರುವ ಪುರಾತನ ವಸ್ತುಗಳ ಪೈಕಿ 1.5 ಮೀಟರ್ ಉದ್ದದ ಮರಳುಗಲ್ಲಿನಲ್ಲಿರುವ ರೇವಂತನ ಮೂರ್ತಿ (ಹಿಂದೂ ದೇವತೆ) ಇದೆ. 8.5 ಸೆಂಟಿ ಮೀಟರ್ನ ನಟರಾಜ ವಿಗ್ರಹವಿದೆ. ಇದು 12 ಶತಮಾನದ್ದು ಆಗಿದೆ. ಹಾಗೆಯೇ 56 ಟೆರಾಕೋಟಾ ವಿಗ್ರಹ, ವಸ್ತುಗಳು ಇದೆ. ಇನ್ನು 18 ನೇ ಶತಮಾನದ ಖಡ್ಗವೂ ಇದೆ, ಅದರ ಕವಚದಲ್ಲಿ ಪರ್ಷಿಯನ್ ಶಾಸನವು ಗುರು ಹರಗೋಬಿಂದ್ ಸಿಂಗ್ ಉಲ್ಲೇಖ ಮಾಡುತ್ತಾರೆ. ಇದಲ್ಲದೇ ಲಕ್ಷ್ಮಿ ನಾರಾಯಣ್, ಬುದ್ಧ, ವಿಷ್ಣು, ಶಿವ ಪಾರ್ವತಿ ಮತ್ತು 24 ಜೈನ ತೀರ್ಥಂಕರರು ಮತ್ತು ಇತರ ದೇವತೆಗಳ ಪ್ರತಿಮೆಗಳನ್ನು ಕೂಡಾ ಅಮೆರಿಕದಿಂದ ಭಾರತಕ್ಕೆ ಹಿಂದಿರುಗಿಸಲಾಗಿದೆ.
ಇನ್ನು "ಈ ಪೈಕಿ ಅರ್ಧದಷ್ಟು ಪುರಾತನ ವಸ್ತುಗಳು ಸಾಂಸ್ಕೃತಿಕವಾಗಿದ್ದರೆ, ಅರ್ಧದಷ್ಟು ಧಾರ್ಮಿಕ ಪುರಾತನ ವಸ್ತುಗಳಾಗಿದೆ. 60 ಹಿಂದೂ ಪುರಾತನ ವಸ್ತುಗಳಾದರೆ. 16 ಬೌದ್ಧ ಹಾಗೂ ಜೈನ ಪರಂಪರೆಗೆ ಸೇರಿದ್ದು ಆಗಿದೆ," ಎಂದು ಪ್ರಧಾನ ಮಂತ್ರಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ಹಿಂದೂ ಕಲಾಕೃತಿಗಳಲ್ಲಿ ಮೂರು ಬ್ರಹ್ಮನದ್ದು, ರಥವನ್ನು ಚಲಾಯಿಸುವ ಸೂರ್ಯ, ವಿಷ್ಣು ಹಾಗೂ ಆತನ ಸಹಚರರು, ದಕ್ಷಿಣ ಮೂರ್ತಿಯಾಗಿ ಶಿವ, ಡ್ಯಾನ್ಸಿಂಗ್ ಗಣೇಶ ಇದರಲ್ಲಿ ಸೇರಿದೆ. ಸ್ಟಾಂಡಿಂಗ್ ಬುದ್ದನ ಮೂರ್ತಿ, ಬೋದಿಸತ್ವ ಮಂಜುಶ್ರೀ ಹಾಗೂ ತಾರಾ ವಿಗ್ರಹ ವೂ ಸೇರಿದೆ. ಜೈನ ತೀರ್ಥಾಂಕರನ ಮೂರ್ತಿ, ಪದ್ಮಾಸನ ತೀರ್ಥಕರ ಹಾಗೂ ಜೈನ ಚೌಬಿಸಿ ಜೈನ ಕಲಾಕೃತಿ ಕೂಡಾ ಇದೆ.
(ಒನ್ಇಂಡಿಯಾ ಸುದ್ದಿ)
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications