ಗೋರಖ್ಪುರದಲ್ಲಿ ರೈಲು ಅಪಘಾತ 12 ಸಾವು
ಲಕ್ನೋ, ಅ.1 : ಉತ್ತರ ಪ್ರದೇಶದ ಗೋರಖ್ಪುರದಲ್ಲಿ ಎರಡು ಎಕ್ಸ್ಪ್ರೆಸ್ ರೈಲುಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಅಪಘಾತದಲ್ಲಿ 12 ಪ್ರಯಾಣಿಕರು ಮೃತಪಟ್ಟಿದ್ದು, 40 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅಪಘಾತದ ನಂತರ ಈ ಮಾರ್ಗದಲ್ಲಿ ಸಾಗುವ 7 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.
ಮಂಗಳವಾರ
ತಡರಾತ್ರಿ
ವಾರಣಾಸಿಯಿಂದ
ಗೋರಖ್ಪುರಕ್ಕೆ
ತೆರಳುತ್ತಿದ್ದ
ಕ್ರಿಷಿಕ್
ಎಕ್ಸ್ಪ್ರೆಸ್
ಮತ್ತು
ಲಕ್ನೋಗೆ
ತೆರಳುತ್ತಿದ್ದ
ಬಾರೌನಿ
ಎಕ್ಸ್ಪ್ರೆಸ್
ರೈಲುಗಳ
ನಡುವೆ
ಅಪಘಾತ
ಸಂಭವಿಸಿದೆ.
ಅಪಘಾತದಿಂದ
ಬಾರೌನಿ
ಎಕ್ಸ್ಪ್ರೆಸ್
ರೈಲಿನ
ಮೂರು
ಬೋಗಿಗಳು
ಹಳಿ
ತಪ್ಪಿವೆ.
ಅಪಘಾತದಲ್ಲಿ
12
ಜನರು
ಸಾವನ್ನಪ್ಪಿದ್ದು,
40ಕ್ಕೂ
ಅಧಿಕ
ಜನರು
ಗಾಯಗೊಂಡಿದ್ದಾರೆ.
ಬಾರೌನಿ ಎಕ್ಸ್ಪ್ರೆಸ್ ರೈಲು ಮಂಗಳವಾರ ರಾತ್ರಿ 11 ಗಂಟೆಗೆ ಗೋರಖ್ಪುರ ರೈಲು ನಿಲ್ದಾಣದಿಂದ ಹೊರಟಿತ್ತು. ಬಾರೌನಿ ಎಕ್ಸ್ಪ್ರೆಸ್ ರೈಲು ಸಾಗುತ್ತಿದ್ದ ಮಾರ್ಗದಲ್ಲಿಯೇ ಮತ್ತೊಂದು ರೈಲು ಆಗಮಿಸಿದ್ದರಿಂದ ಅಪಘಾತ ಸಂಭವಿಸಿದೆ. [ರೈಲ್ವೆ ಸಚಿವ ಸದಾನಂದ ಗೌಡ ಅಪಘಾತದಿಂದ ಪಾರು]
ಅಪಘಾತದಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ರಕ್ಷಣಾ ಕಾರ್ಯ ಮುಂದುವರೆದಿದೆ. ರೈಲ್ವೆ ಇಲಾಖೆ ಮೃತರ ಕುಟುಂಬಗಳಿಗೆ ತಲಾ 50 ಸಾವಿರ ರೂಪಾಯಿ ಹಾಗೂ ಗಾಯಾಳುಗಳಿಗೆ ತಲಾ 25 ಸಾವಿರ ಪರಿಹಾರ ಘೋಷಣೆ ಮಾಡಿದೆ.